ETV Bharat / sports

ಇಲ್ಲಿಗೆ ಬಂದಿರುವುದು ಮೋಜು-ಮಸ್ತಿಗಲ್ಲ.. ಆರ್​ಸಿಬಿ ಆಟಗಾರರಿಗೆ ಕೊಹ್ಲಿ ಎಚ್ಚರಿಕೆ - RCB captain Virat Kohli

ಕೋವಿಡ್-19 ಪರಿಸ್ಥಿತಿಯ ವಿಚಾರವಾಗಿ ನಾನು ಹೇಳಿರುವ ವಿಚಾರಗಳು ಯಾರಿಗೂ ಒತ್ತಡದ ವಿಷಯವಾಗಬಾರದು. ನಾವೆಲ್ಲರೂ ಕ್ರಿಕೆಟ್​ ಆಡಲು ಮತ್ತು ಈ ಟೂರ್ನಿ ಯಶಸ್ವಿಗೊಳಿಸಲು ಇಲ್ಲಿದ್ದೇವೆ. ಟೂರ್ನಾಮೆಂಟ್​ಗಾಗಿ ಎಲ್ಲರೂ ಬಯೋ ಸೆಕ್ಯೂರ್​ ನಿಯಮಗಳನ್ನು ಗೌರವಿಸಬೇಕು..

ಆರ್​ಸಿಬಿ ಆಟಗಾರರಿಗೆ ಕೊಹ್ಲಿ ಎಚ್ಚರಿಕೆ
ಆರ್​ಸಿಬಿ ಆಟಗಾರರಿಗೆ ಕೊಹ್ಲಿ ಎಚ್ಚರಿಕೆ
author img

By

Published : Sep 1, 2020, 6:27 PM IST

ದುಬೈ : 13ನೇ ಐಪಿಎಲ್​ಗೆ ಇನ್ನೂ ಕೆಲವೇ ದಿನಗಳಿವೆ. ಈ ಹಿಂದಿನ ಆವೃತ್ತಿಗಳಿಗಿಂತ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಈ ಆವೃತ್ತಿ ವಿಭಿನ್ನವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇ ತಲುಪಿದ್ದು ಬಯೋ ಸೆಕ್ಯೂರ್​ ವಲಯದಲ್ಲಿ ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೋಟೋಕಾಲ್​ಗಳನ್ನು ಮೀರದಂತೆ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಎಚ್ಚರಿಸಿದ್ದಾರೆ.

ಕೊರೊನಾ ಭೀತಿಯಿರುವುದರಿಂದ ಮೊದಲ ಕೆಲವು ಪಂದ್ಯಗಳು ಅಭಿಮಾನಿಗಳಿಲ್ಲದೆ ಜೀವ ಸುರಕ್ಷತಾ ವಲಯದಲ್ಲಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಸಂದರ್ಭದಲ್ಲಿ ತಮ್ಮ ತಂಡದ ಆಟಗಾರರೂ ಮುನ್ನೆಚ್ಚರಿಕಾ ಕ್ರಮ ಅನುಸರಿಸುವಂತೆ ಕೊಹ್ಲಿ ತಿಳಿಸಿದ್ದಾರೆ.

  • " class="align-text-top noRightClick twitterSection" data="">

ಕೋವಿಡ್-19 ಪರಿಸ್ಥಿತಿಯ ವಿಚಾರವಾಗಿ ನಾನು ಹೇಳಿರುವ ವಿಚಾರಗಳು ಯಾರಿಗೂ ಒತ್ತಡದ ವಿಷಯವಾಗಬಾರದು. ನಾವೆಲ್ಲರೂ ಕ್ರಿಕೆಟ್​ ಆಡಲು ಮತ್ತು ಈ ಟೂರ್ನಿ ಯಶಸ್ವಿಗೊಳಿಸಲು ಇಲ್ಲಿದ್ದೇವೆ. ಟೂರ್ನಾಮೆಂಟ್​ಗಾಗಿ ಎಲ್ಲರೂ ಬಯೋ ಸೆಕ್ಯೂರ್​ ನಿಯಮಗಳನ್ನು ಗೌರವಿಸಬೇಕು ಎಂದು ಆರ್​ಸಿಬಿ ಅಧಿಕೃತ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ನಾವಿಲ್ಲಿದ್ದೇವೆ ಅಂದರೆ ಅದು ಕ್ರಿಕೆಟ್​ ಆಡುವ ಅವಕಾಶ ಸಿಕ್ಕಿರುವುದರಿಂದ. ನಾವಿಲ್ಲಿ ಬಂದಿರುವುದು ಮೋಜು-ಮಸ್ತಿ ಮಾಡಿ ದುಬೈ ಸುತ್ತಾಡೋದಕ್ಕಲ್ಲ. ಅದಕ್ಕೆ ಇದು ಸಮಯವೂ ಅಲ್ಲ. ನಾವೆಲ್ಲರೂ ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಬೇಕು. ಮತ್ತು ಪ್ರತಿಯೊಬ್ಬರು ಅದನ್ನು ಒಪ್ಪಿಕೊಳ್ಳಬೇಕು. ಮತ್ತು ಪರಿಸ್ಥಿತಿಗೆ ವಿರುದ್ಧವಾಗಿ ಯಾವುದೇ ಕೆಲಸಗಳನ್ನು, ಆಸೆಗಳನ್ನು ಹೊಂದಿರಬಾರದು"ಎಂದು ಕೊಹ್ಲಿ ಆರ್​ಸಿಬಿ ಆಟಗಾರರಿಗೆ ಎಚ್ಚಿರಿಕೆ ನೀಡಿದ್ದಾರೆ.

ದುಬೈ : 13ನೇ ಐಪಿಎಲ್​ಗೆ ಇನ್ನೂ ಕೆಲವೇ ದಿನಗಳಿವೆ. ಈ ಹಿಂದಿನ ಆವೃತ್ತಿಗಳಿಗಿಂತ ಆಟಗಾರರಿಗೆ ಮತ್ತು ಅಭಿಮಾನಿಗಳಿಗೆ ಈ ಆವೃತ್ತಿ ವಿಭಿನ್ನವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇ ತಲುಪಿದ್ದು ಬಯೋ ಸೆಕ್ಯೂರ್​ ವಲಯದಲ್ಲಿ ಸೇರಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೋಟೋಕಾಲ್​ಗಳನ್ನು ಮೀರದಂತೆ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಎಚ್ಚರಿಸಿದ್ದಾರೆ.

ಕೊರೊನಾ ಭೀತಿಯಿರುವುದರಿಂದ ಮೊದಲ ಕೆಲವು ಪಂದ್ಯಗಳು ಅಭಿಮಾನಿಗಳಿಲ್ಲದೆ ಜೀವ ಸುರಕ್ಷತಾ ವಲಯದಲ್ಲಿ ನಡೆಸಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಸಂದರ್ಭದಲ್ಲಿ ತಮ್ಮ ತಂಡದ ಆಟಗಾರರೂ ಮುನ್ನೆಚ್ಚರಿಕಾ ಕ್ರಮ ಅನುಸರಿಸುವಂತೆ ಕೊಹ್ಲಿ ತಿಳಿಸಿದ್ದಾರೆ.

  • " class="align-text-top noRightClick twitterSection" data="">

ಕೋವಿಡ್-19 ಪರಿಸ್ಥಿತಿಯ ವಿಚಾರವಾಗಿ ನಾನು ಹೇಳಿರುವ ವಿಚಾರಗಳು ಯಾರಿಗೂ ಒತ್ತಡದ ವಿಷಯವಾಗಬಾರದು. ನಾವೆಲ್ಲರೂ ಕ್ರಿಕೆಟ್​ ಆಡಲು ಮತ್ತು ಈ ಟೂರ್ನಿ ಯಶಸ್ವಿಗೊಳಿಸಲು ಇಲ್ಲಿದ್ದೇವೆ. ಟೂರ್ನಾಮೆಂಟ್​ಗಾಗಿ ಎಲ್ಲರೂ ಬಯೋ ಸೆಕ್ಯೂರ್​ ನಿಯಮಗಳನ್ನು ಗೌರವಿಸಬೇಕು ಎಂದು ಆರ್​ಸಿಬಿ ಅಧಿಕೃತ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ನಾವಿಲ್ಲಿದ್ದೇವೆ ಅಂದರೆ ಅದು ಕ್ರಿಕೆಟ್​ ಆಡುವ ಅವಕಾಶ ಸಿಕ್ಕಿರುವುದರಿಂದ. ನಾವಿಲ್ಲಿ ಬಂದಿರುವುದು ಮೋಜು-ಮಸ್ತಿ ಮಾಡಿ ದುಬೈ ಸುತ್ತಾಡೋದಕ್ಕಲ್ಲ. ಅದಕ್ಕೆ ಇದು ಸಮಯವೂ ಅಲ್ಲ. ನಾವೆಲ್ಲರೂ ಪ್ರಸ್ತುತ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಬೇಕು. ಮತ್ತು ಪ್ರತಿಯೊಬ್ಬರು ಅದನ್ನು ಒಪ್ಪಿಕೊಳ್ಳಬೇಕು. ಮತ್ತು ಪರಿಸ್ಥಿತಿಗೆ ವಿರುದ್ಧವಾಗಿ ಯಾವುದೇ ಕೆಲಸಗಳನ್ನು, ಆಸೆಗಳನ್ನು ಹೊಂದಿರಬಾರದು"ಎಂದು ಕೊಹ್ಲಿ ಆರ್​ಸಿಬಿ ಆಟಗಾರರಿಗೆ ಎಚ್ಚಿರಿಕೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.