ETV Bharat / sports

ಮುಂಬೈ ವಿರುದ್ಧ ಆರ್​ಸಿಬಿ ಸೋಲು... ಸೋಲಿಗೆ ಕ್ಯಾಪ್ಟನ್​ ಕೊಹ್ಲಿ ನೀಡಿದ್ರು ಈ ಕಾರಣ!

author img

By

Published : Oct 29, 2020, 4:24 AM IST

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಸೋಲು ಕಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕೊಹ್ಲಿ ಮಾತನಾಡಿದ್ದಾರೆ.

Virat Kohli
Virat Kohli

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದು, ಫ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಗೊಳಗಾಗಿದೆ.

ಮುಂಬೈ ವಿರುದ್ಧ ಸೋಲು ಕಾಣುತ್ತಿದ್ದಂತೆ ಮಾತನಾಡಿರುವ ವಿರಾಟ್​ ಕೊಹ್ಲಿ, ಮುಂಬೈ ಇಂಡಿಯನ್ಸ್ ಕೊನೆಯ ಐದು ಓವರ್​ಗಳು ಅದ್ಭುತವಾಗಿದ್ದವು, ನಮಗೆ 20ರನ್​ ಕಡಿಮೆಯಾಗಿದ್ದರಿಂದ ಸೋಲು ಕಾಣುವಂತಾಯಿತು ಎಂದು ತಿಳಿಸಿದ್ದಾರೆ.

ಕೊನೆಯ ಐದು ಓವರ್​ಗಳಲ್ಲಿ ನಮ್ಮ ಬ್ಯಾಟ್ಸಮನ್​ಗಳು ರನ್​ಗಳಿಕೆ ಮಾಡಲು ಪರದಾಡಿದ್ದು, ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್​ ಕಳೆದುಕೊಂಡಿದ್ದರಿಂದಲೇ ನಾವು ಸೋಲು ಕಾಣುವಂತಾಯಿತು ಎಂದರು. ಮುಂಬೈ ತಂಡವನ್ನ 17ನೇ ಓವರ್​ವರೆಗೂ ನಾವು ಕಂಟ್ರೋಲ್​ನಲ್ಲಿಟ್ಟಿದ್ದೇವು. ಆದರೆ ನಂತರದ ಓವರ್​ಗಳಲ್ಲಿ ರನ್​ ಬಿಟ್ಟುಕೊಟ್ಟಿದ್ದರಿಂದ ಪಂದ್ಯ ಕೈತಪ್ಪಿ ಹೋಯಿತು ಎಂದು ಕೊಹ್ಲಿ ಮಾಹಿತಿ ನೀಡಿದರು.

ಟಾಪ್​ 2 ತಂಡಗಳು ಮೈದಾನದಲ್ಲಿ ಇಳಿದಾಗ ಖಂಡಿತವಾಗಿ ಹೋರಾಟ ಕಂಡು ಬರುತ್ತದೆ. ಇಂದಿನ ಪಂದ್ಯದಲ್ಲೂ ಅದು ಕಂಡು ಬಂದಿದ್ದು, ಮುಂಬೈ ತಂಡ ಮೆಲುಗೈ ಸಾಧಿಸಿದೆ ಎಂದು ಹೇಳಿದರು.

ಆರ್​ಸಿಬಿ ಇಲ್ಲಿಯವರೆಗೆ 12 ಪಂದ್ಯಗಳಲ್ಲಿ ಆಡಿದ್ದು, ಫ್ಲೇ-ಆಫ್​ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಉಳಿದ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್​ನಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಅಬುಧಾಬಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದು, ಫ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಗೊಳಗಾಗಿದೆ.

ಮುಂಬೈ ವಿರುದ್ಧ ಸೋಲು ಕಾಣುತ್ತಿದ್ದಂತೆ ಮಾತನಾಡಿರುವ ವಿರಾಟ್​ ಕೊಹ್ಲಿ, ಮುಂಬೈ ಇಂಡಿಯನ್ಸ್ ಕೊನೆಯ ಐದು ಓವರ್​ಗಳು ಅದ್ಭುತವಾಗಿದ್ದವು, ನಮಗೆ 20ರನ್​ ಕಡಿಮೆಯಾಗಿದ್ದರಿಂದ ಸೋಲು ಕಾಣುವಂತಾಯಿತು ಎಂದು ತಿಳಿಸಿದ್ದಾರೆ.

ಕೊನೆಯ ಐದು ಓವರ್​ಗಳಲ್ಲಿ ನಮ್ಮ ಬ್ಯಾಟ್ಸಮನ್​ಗಳು ರನ್​ಗಳಿಕೆ ಮಾಡಲು ಪರದಾಡಿದ್ದು, ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್​ ಕಳೆದುಕೊಂಡಿದ್ದರಿಂದಲೇ ನಾವು ಸೋಲು ಕಾಣುವಂತಾಯಿತು ಎಂದರು. ಮುಂಬೈ ತಂಡವನ್ನ 17ನೇ ಓವರ್​ವರೆಗೂ ನಾವು ಕಂಟ್ರೋಲ್​ನಲ್ಲಿಟ್ಟಿದ್ದೇವು. ಆದರೆ ನಂತರದ ಓವರ್​ಗಳಲ್ಲಿ ರನ್​ ಬಿಟ್ಟುಕೊಟ್ಟಿದ್ದರಿಂದ ಪಂದ್ಯ ಕೈತಪ್ಪಿ ಹೋಯಿತು ಎಂದು ಕೊಹ್ಲಿ ಮಾಹಿತಿ ನೀಡಿದರು.

ಟಾಪ್​ 2 ತಂಡಗಳು ಮೈದಾನದಲ್ಲಿ ಇಳಿದಾಗ ಖಂಡಿತವಾಗಿ ಹೋರಾಟ ಕಂಡು ಬರುತ್ತದೆ. ಇಂದಿನ ಪಂದ್ಯದಲ್ಲೂ ಅದು ಕಂಡು ಬಂದಿದ್ದು, ಮುಂಬೈ ತಂಡ ಮೆಲುಗೈ ಸಾಧಿಸಿದೆ ಎಂದು ಹೇಳಿದರು.

ಆರ್​ಸಿಬಿ ಇಲ್ಲಿಯವರೆಗೆ 12 ಪಂದ್ಯಗಳಲ್ಲಿ ಆಡಿದ್ದು, ಫ್ಲೇ-ಆಫ್​ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಉಳಿದ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್​ನಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.