ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೂ ಧೋನಿ ಅಲಭ್ಯ?

author img

By

Published : Aug 29, 2019, 1:05 PM IST

ವಿಂಡೀಸ್​ ಸರಣಿಯಿಂದ ಹೊರಗುಳಿದಿದ್ದ ಧೋನಿ ದಕ್ಷಿಣ ಆಫ್ರಿಕಾ ಸರಣಿಗೆ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆಂದು ಭಾವಿಸಲಾಗಿತ್ತು. ಆದರೆ, ಮೂಲಗಳ ಪ್ರಕಾರ ಧೋನಿ ಮುಂದಿನ ಸರಣಿಗೂ ಸ್ವತಃ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

MS Dhoni

ಮುಂಬೈ: ವಿಶ್ವಕಪ್​ ನಂತರ ನಡೆದ ವಿಂಡೀಸ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಯಿಂದ ಸ್ವತಃ ಅಲಭ್ಯರಾಗಿದ್ದ ಮಾಜಿ ನಾಯಕ ಎಂ ಎಸ್​ ಧೋನಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಿಂದಲೂ ದೂರ ಉಳಿಯುವ ಸಾಧ್ಯತೆ ಇದೆ.

ವಿಂಡೀಸ್​ ಸರಣಿಯಿಂದ ಹೊರಗುಳಿದಿದ್ದ ಧೋನಿ ದಕ್ಷಿಣ ಆಫ್ರಿಕಾ ಸರಣಿಗೆ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆಂದು ಭಾವಿಸಲಾಗಿತ್ತು. ಆದರೆ, ಮೂಲಗಳ ಪ್ರಕಾರ ಧೋನಿ ಮುಂದಿನ ಸರಣಿಗೂ ಸ್ವತಃ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ವಿಶ್ವಕಪ್​ ನಂತರ ಧೋನಿ ನಿವೃತ್ತಿ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ, ಧೋನಿ ಈ ಕುರಿತು ಇದುವರೆಗೂ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಇದೀಗ ಹರಿಣಗಳ ವಿರುದ್ಧವೂ ಕಣಕ್ಕಿಳಿಯದಿರುವುದರಿಂದ ಅವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.

ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯಂತೆ ವಿಶ್ವಕಪ್​ ಹತ್ತಿರ ಬರುತ್ತಿದ್ದು, ಇನ್ನು ಕೇವಲ 22 ಪಂದ್ಯಗಳು ಮಾತ್ರ ಭಾರತ ತಂಡ ಆಡಲಿದೆ. ಅಷ್ಟರಲ್ಲಿ ಉತ್ತಮ ವಿಕೆಟ್​ ಕೀಪರ್​ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಮುಂದಾಗಿದೆ. ರಿಷಭ್​ ಪಂತ್​ಗೆ ಎಲ್ಲ ವಿಭಾಗದ ಕ್ರಿಕೆಟ್​​​​ಗೂ ಮೊದಲ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.

ಇನ್ನು ಧೋನಿ ಆಯ್ಕೆಯ ಬಗ್ಗೆ ಅವರು ಸಮರ್ಪಕ ಹೇಳಿಕೆ ನೀಡಿಲ್ಲ. ಧೋನಿ ನಿವೃತ್ತಿ ಅವರಿಗೆ ಬಿಟ್ಟ ವಿಚಾರ. ಅವರ ಆಯ್ಕೆ ಬಗ್ಗೆ ಆಯ್ಕೆ ಸಮಿತಿ, ಧೋನಿ ನಿವೃತ್ತಿ ಬಗ್ಗೆ ಕಾಮೆಂಟ್​ ಮಾಡುವುದಿಲ್ಲ ಎಂದಿತ್ತು.

ಮುಂಬೈ: ವಿಶ್ವಕಪ್​ ನಂತರ ನಡೆದ ವಿಂಡೀಸ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಯಿಂದ ಸ್ವತಃ ಅಲಭ್ಯರಾಗಿದ್ದ ಮಾಜಿ ನಾಯಕ ಎಂ ಎಸ್​ ಧೋನಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಿಂದಲೂ ದೂರ ಉಳಿಯುವ ಸಾಧ್ಯತೆ ಇದೆ.

ವಿಂಡೀಸ್​ ಸರಣಿಯಿಂದ ಹೊರಗುಳಿದಿದ್ದ ಧೋನಿ ದಕ್ಷಿಣ ಆಫ್ರಿಕಾ ಸರಣಿಗೆ ತಂಡಕ್ಕೆ ಸೇರ್ಪಡೆಗೊಳ್ಳುತ್ತಾರೆಂದು ಭಾವಿಸಲಾಗಿತ್ತು. ಆದರೆ, ಮೂಲಗಳ ಪ್ರಕಾರ ಧೋನಿ ಮುಂದಿನ ಸರಣಿಗೂ ಸ್ವತಃ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ವಿಶ್ವಕಪ್​ ನಂತರ ಧೋನಿ ನಿವೃತ್ತಿ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ, ಧೋನಿ ಈ ಕುರಿತು ಇದುವರೆಗೂ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಇದೀಗ ಹರಿಣಗಳ ವಿರುದ್ಧವೂ ಕಣಕ್ಕಿಳಿಯದಿರುವುದರಿಂದ ಅವರ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.

ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯಂತೆ ವಿಶ್ವಕಪ್​ ಹತ್ತಿರ ಬರುತ್ತಿದ್ದು, ಇನ್ನು ಕೇವಲ 22 ಪಂದ್ಯಗಳು ಮಾತ್ರ ಭಾರತ ತಂಡ ಆಡಲಿದೆ. ಅಷ್ಟರಲ್ಲಿ ಉತ್ತಮ ವಿಕೆಟ್​ ಕೀಪರ್​ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಮುಂದಾಗಿದೆ. ರಿಷಭ್​ ಪಂತ್​ಗೆ ಎಲ್ಲ ವಿಭಾಗದ ಕ್ರಿಕೆಟ್​​​​ಗೂ ಮೊದಲ ಆದ್ಯತೆ ನೀಡಲಾಗಿದೆ ಎಂದಿದ್ದಾರೆ.

ಇನ್ನು ಧೋನಿ ಆಯ್ಕೆಯ ಬಗ್ಗೆ ಅವರು ಸಮರ್ಪಕ ಹೇಳಿಕೆ ನೀಡಿಲ್ಲ. ಧೋನಿ ನಿವೃತ್ತಿ ಅವರಿಗೆ ಬಿಟ್ಟ ವಿಚಾರ. ಅವರ ಆಯ್ಕೆ ಬಗ್ಗೆ ಆಯ್ಕೆ ಸಮಿತಿ, ಧೋನಿ ನಿವೃತ್ತಿ ಬಗ್ಗೆ ಕಾಮೆಂಟ್​ ಮಾಡುವುದಿಲ್ಲ ಎಂದಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.