ETV Bharat / sports

ಎಂ ಎಸ್​ ಧೋನಿ ಹೆಸರಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಪರ್ಮನೆಂಟ್​ ಸೀಟ್.. ಯಾಕಾಗಿ ಅದೇ ಕುರ್ಚಿ ಆಯ್ಕೆ?

2011 ರಲ್ಲಿ ಶ್ರೀಲಂಕಾ ವಿರುದ್ಧ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಎಂಎಸ್​ ಧೋನಿ​ ಭವ್ಯವಾದ ಸಿಕ್ಸರ್​ ಮೂಲಕ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್​ ತಂದುಕೊಟ್ಟಿದ್ದರು. ಈ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ಮಹೇಂದ್ರ ಸಿಂಗ್​ ಧೋನಿ ನನಸಾಗಿಸಿದ್ದರು.

author img

By

Published : Aug 19, 2020, 7:22 PM IST

ಎಂ ಎಸ್​ ಧೋನಿ
ಎಂ ಎಸ್​ ಧೋನಿ

ಮುಂಬೈ: ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಒಂದು ಕೇಂದ್ರಬಿಂದುವಾಗಿರುವ 2011ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಧೋನಿ ಸಿಡಿಸಿದ ಕೊನೆಯ ಸಿಕ್ಸರ್​ ಬಿದ್ದ ಸ್ಥಳದಲ್ಲಿದ್ದ ಕುರ್ಚಿಯನ್ನು ಧೋನಿಗೆ ಸಮರ್ಪಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್​ ನಿರ್ಧರಿಸಿದೆ.

2011 ರಲ್ಲಿ ಶ್ರೀಲಂಕಾ ವಿರುದ್ಧ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಎಂಎಸ್​ ಧೋನಿ​ ಭವ್ಯವಾದ ಸಿಕ್ಸರ್​ ಮೂಲಕ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್​ ತಂದುಕೊಟ್ಟಿದ್ದರು. ಈ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ಮಹೇಂದ್ರ ಸಿಂಗ್​ ಧೋನಿ ನನಸಾಗಿಸಿದ್ದರು.

ಆದರೆ ಆಗಸ್ಟ್​ 15ರಂದು ಧೋನಿ ತಮ್ಮ 16 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಇದರ ಬೆನ್ನಲ್ಲೇ ದೇಶದ ಕ್ರೀಡೆಗೆ ಅಪಾರ ಸೇವೆ ನೀಡಿದರುವ ಧೋನಿಗೆ ಫೈನಲ್​ ಪಂದ್ಯದಲ್ಲಿ ಚೆಂಡು ಬಿದ್ದ ಸೀಟ್​ ಅನ್ನು ಶಾಶ್ವತವಾಗಿ ಸಮರ್ಪಿಸಬೇಕೆಂದು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ಅಪೆಕ್ಸ್​ ಕೌನ್ಸಿಲ್ ಎಂಸಿಎಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

ಭಾರತೀಯ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ನೀಡಿದ ಅಪಾರ ಕೊಡುಗೆಗೆ ಕೃತಜ್ಞತೆ ಮತ್ತು ಗೌರವ ಸಲ್ಲಿಸುವ ಸಲುವಾಗಿ, ಎಂಸಿಎ ಪ್ರಸಿದ್ಧ ವಿಶ್ವಕಪ್ ವಿಜೇತ ಸಿಕ್ಸ್​ನಲ್ಲಿ ಚೆಂಡು ಬಿದ್ದ ಸ್ಟ್ಯಾಂಡ್‌ನಲ್ಲಿ ಅವರ ಹೆಸರಿನಲ್ಲಿ ಶಾಶ್ವತ ಒಂದು ಸೀಟನ್ನು ಮೀಸಲಿಡಬೇಕು" ಎಂದು ಪತ್ರದಲ್ಲಿ ಬರೆಯಲಾಗಿದೆ.

ಧೋನಿ ಬಾರಿಸಿದ ಸಿಕ್ಸರ್​ ಬಿದ್ದ ಚೇರನ್ನು ಹುಡುಕಿ ಅದಕ್ಕೆ ಬಣ್ಣ ಹೊಡೆದು ಅದನ್ನು ಅವರ ಹೆಸರಿಗೆ ಶಾಶ್ವತವಾಗಿ ಅರ್ಪಿಸಲಾಗುವುದು ಎನ್ನಲಾಗಿದೆ. 2015ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕಿವೀಸ್​ನ ಗ್ರ್ಯಾಂಟ್ ಎಲಿಯಟ್​ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್​ಗೆ ಬಾರಿಸಿದ ಸಿಕ್ಸರ್​ನಲ್ಲಿ ಚೆಂಡು ಬಿದ್ದ ಸ್ಥಳದಲ್ಲಿನ ಚೇರನ್ನು ಅವರ ಹೆಸರಿಗೆ ಈಗಾಗಲೇ ಮೀಸಲಿಡಲಾಗಿದೆ.

ಮುಂಬೈ: ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಒಂದು ಕೇಂದ್ರಬಿಂದುವಾಗಿರುವ 2011ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಧೋನಿ ಸಿಡಿಸಿದ ಕೊನೆಯ ಸಿಕ್ಸರ್​ ಬಿದ್ದ ಸ್ಥಳದಲ್ಲಿದ್ದ ಕುರ್ಚಿಯನ್ನು ಧೋನಿಗೆ ಸಮರ್ಪಿಸಲು ಮುಂಬೈ ಕ್ರಿಕೆಟ್ ಅಸೋಸಿಯೇಷನ್​ ನಿರ್ಧರಿಸಿದೆ.

2011 ರಲ್ಲಿ ಶ್ರೀಲಂಕಾ ವಿರುದ್ಧ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಎಂಎಸ್​ ಧೋನಿ​ ಭವ್ಯವಾದ ಸಿಕ್ಸರ್​ ಮೂಲಕ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್​ ತಂದುಕೊಟ್ಟಿದ್ದರು. ಈ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ಮಹೇಂದ್ರ ಸಿಂಗ್​ ಧೋನಿ ನನಸಾಗಿಸಿದ್ದರು.

ಆದರೆ ಆಗಸ್ಟ್​ 15ರಂದು ಧೋನಿ ತಮ್ಮ 16 ವರ್ಷಗಳ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಇದರ ಬೆನ್ನಲ್ಲೇ ದೇಶದ ಕ್ರೀಡೆಗೆ ಅಪಾರ ಸೇವೆ ನೀಡಿದರುವ ಧೋನಿಗೆ ಫೈನಲ್​ ಪಂದ್ಯದಲ್ಲಿ ಚೆಂಡು ಬಿದ್ದ ಸೀಟ್​ ಅನ್ನು ಶಾಶ್ವತವಾಗಿ ಸಮರ್ಪಿಸಬೇಕೆಂದು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ ಅಪೆಕ್ಸ್​ ಕೌನ್ಸಿಲ್ ಎಂಸಿಎಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.

ಭಾರತೀಯ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ನೀಡಿದ ಅಪಾರ ಕೊಡುಗೆಗೆ ಕೃತಜ್ಞತೆ ಮತ್ತು ಗೌರವ ಸಲ್ಲಿಸುವ ಸಲುವಾಗಿ, ಎಂಸಿಎ ಪ್ರಸಿದ್ಧ ವಿಶ್ವಕಪ್ ವಿಜೇತ ಸಿಕ್ಸ್​ನಲ್ಲಿ ಚೆಂಡು ಬಿದ್ದ ಸ್ಟ್ಯಾಂಡ್‌ನಲ್ಲಿ ಅವರ ಹೆಸರಿನಲ್ಲಿ ಶಾಶ್ವತ ಒಂದು ಸೀಟನ್ನು ಮೀಸಲಿಡಬೇಕು" ಎಂದು ಪತ್ರದಲ್ಲಿ ಬರೆಯಲಾಗಿದೆ.

ಧೋನಿ ಬಾರಿಸಿದ ಸಿಕ್ಸರ್​ ಬಿದ್ದ ಚೇರನ್ನು ಹುಡುಕಿ ಅದಕ್ಕೆ ಬಣ್ಣ ಹೊಡೆದು ಅದನ್ನು ಅವರ ಹೆಸರಿಗೆ ಶಾಶ್ವತವಾಗಿ ಅರ್ಪಿಸಲಾಗುವುದು ಎನ್ನಲಾಗಿದೆ. 2015ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕಿವೀಸ್​ನ ಗ್ರ್ಯಾಂಟ್ ಎಲಿಯಟ್​ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್​ಗೆ ಬಾರಿಸಿದ ಸಿಕ್ಸರ್​ನಲ್ಲಿ ಚೆಂಡು ಬಿದ್ದ ಸ್ಥಳದಲ್ಲಿನ ಚೇರನ್ನು ಅವರ ಹೆಸರಿಗೆ ಈಗಾಗಲೇ ಮೀಸಲಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.