ETV Bharat / sports

ಗೇಮ್​ ಚೇಂಜರ್​ ನಾನಲ್ಲ, ಪಂದ್ಯ ಶ್ರೇಷ್ಠ ಪ್ರಶಸ್ತಿ ತೆವಾಟಿಯಾಗೆ ಸಲ್ಲಬೇಕು: ಸಂಜು ಸ್ಯಾಮ್ಸನ್​

author img

By

Published : Sep 23, 2020, 4:54 PM IST

ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್​ 74, ಸ್ಟಿವ್ ಸ್ಮಿತ್​ 69 ಹಾಗೂ ಜೋಫ್ರಾ ಆರ್ಚರ್ 27 ರನ್​ಗಳ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ 216 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 6 ವಿಕೆಟ್​ ನಷ್ಟಕ್ಕೆ 200 ರನ್​ಗಳಿಸಲಷ್ಟೇ ಶಕ್ತವಾಗಿ 16 ರನ್​ಗಳ ಸೋಲು ಕಂಡಿತು. ತೆವಾಟಿಯಾ ಮೂರು ವಿಕೆಟ್​ ಪಡೆದು ಮಿಂಚಿದರು.

ಸಿಎಸ್​ಕೆ ವಿರುದ್ಧ ಗೇಮ್​ ಚೇಂಜರ್
ಸಂಜು ಸಾಮ್ಸನ್​

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಕೇವಲ 32 ಎಸೆತಗಳಲ್ಲಿ 74 ರನ್​ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಸಂಜು ಸ್ಯಾಮ್ಸನ್​, ಆ ಪಂದ್ಯದಲ್ಲಿ ಈ ಪ್ರಶಸ್ತಿಗೆ ರಾಹುಲ್ ತೆವಾಟಿಯಾ ಅರ್ಹರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾರ್ಜಾ ಕ್ರಿಕೆಟ್​ ಮೈದಾನದಲ್ಲಿ 16 ರನ್​ಗಳ ವಿಜಯ ಸಾಧಿಸಿದ ನಂತರ ಪ್ರಶಸ್ತಿ ಸ್ವೀಕರಿಸುವ ವೇಳೆ ಸ್ಯಾಮ್ಸನ್​ ಈ ಮಾತನ್ನು ಈ ಹೇಳಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್​ 74, ಸ್ಟಿವ್ ಸ್ಮಿತ್​ 69 ಹಾಗೂ ಜೋಫ್ರಾ ಆರ್ಚರ್ 27 ರನ್​ಗಳ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ 216 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 6 ವಿಕೆಟ್​ ನಷ್ಟಕ್ಕೆ 200 ರನ್​ಗಳಿಸಲಷ್ಟೆ ಶಕ್ತವಾಗಿ 16 ರನ್​ಗಳ ಸೋಲು ಕಂಡಿತು. ತೆವಾಟಿಯಾ ಮೂರು ವಿಕೆಟ್​ ಪಡೆದು ಮಿಂಚಿದ್ದರು.

ಸಂಜು ಸಾಮ್ಸನ್​
ಸಂಜು ಸ್ಯಾಮ್ಸನ್​

"ನನ್ನ ಪ್ರಕಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ರಾಹುಲ್​ ತೆವಾಟಿಯಾಗೆ ಸಲ್ಲಬೇಕು. ಅವರು ಎದುರಾಳಿ ತಂಡದ ಪ್ರಮುಖ ಮೂರು ವಿಕೆಟ್​ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು. ನಿಜಕ್ಕೂ ಅವರೇ ಗೇಮ್​ ಚೇಂಜರ್, ಅದರಲ್ಲೂ ತೇವಾಂಶ ಹೆಚ್ಚಿರುವ ಸಂದರ್ಭದಲ್ಲಿ ಬೌಲರ್​ಗಳಿಗೆ ತುಂಬಾ ಕಷ್ಟ" ಎಂದು ತೆವಾಟಿಯಾ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ.

For me, you are the Man of the Match: Super Samson tells
Tewatia.

One was splendid with the bat and the other with the ball. In conversation with @IamSanjuSamson & @rahultewatia02

📽️📽️https://t.co/774UBxWPUm #Dream11IPL #RRvCSK pic.twitter.com/607p8Gi5tb

— IndianPremierLeague (@IPL) September 23, 2020 " class="align-text-top noRightClick twitterSection" data=" ">

ಶಾರ್ಜಾ ಮೈದಾನದಲ್ಲಿ ಇಬ್ಬನಿ ಹೆಚ್ಚಾಗುವುದರಿಂದ ನೀವು ಎಷ್ಟೇ ಸ್ಕೋರ್​ ಗಳಿಸಿದರೂ ಚೇಸಿಂಗ್ ಸುಲಭವಾಗಿರುತ್ತದೆ. ಅದಕ್ಕಾಗಿ ನಾನು ಪ್ರತಿ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಮುಂದಾದೆ. ಅದರಲ್ಲೂ ಸ್ಮಿತ್ ಜೊತೆ ಬ್ಯಾಟಿಂಗ್ ಮಾಡುವಾಗ ನನಗೆ ನನ್ನಿಷ್ಟದಂತೆ ಬ್ಯಾಟಿಂಗ್​ ಮಾಡಲೂ ಲೈಸೆನ್ಸ್​ ಇತ್ತು. ನಾವಿಬ್ಬರೂ ನಾಲ್ಕೈದು ವರ್ಷಗಳಿಂದ ಒಟ್ಟಿಗೆ ಬ್ಯಾಟಿಂಗ್​ ಮಾಡುತ್ತಿರುವುದರಿಂದ, ಒಬ್ಬರೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಕೇವಲ 32 ಎಸೆತಗಳಲ್ಲಿ 74 ರನ್​ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಸಂಜು ಸ್ಯಾಮ್ಸನ್​, ಆ ಪಂದ್ಯದಲ್ಲಿ ಈ ಪ್ರಶಸ್ತಿಗೆ ರಾಹುಲ್ ತೆವಾಟಿಯಾ ಅರ್ಹರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾರ್ಜಾ ಕ್ರಿಕೆಟ್​ ಮೈದಾನದಲ್ಲಿ 16 ರನ್​ಗಳ ವಿಜಯ ಸಾಧಿಸಿದ ನಂತರ ಪ್ರಶಸ್ತಿ ಸ್ವೀಕರಿಸುವ ವೇಳೆ ಸ್ಯಾಮ್ಸನ್​ ಈ ಮಾತನ್ನು ಈ ಹೇಳಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್​ 74, ಸ್ಟಿವ್ ಸ್ಮಿತ್​ 69 ಹಾಗೂ ಜೋಫ್ರಾ ಆರ್ಚರ್ 27 ರನ್​ಗಳ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ 216 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 6 ವಿಕೆಟ್​ ನಷ್ಟಕ್ಕೆ 200 ರನ್​ಗಳಿಸಲಷ್ಟೆ ಶಕ್ತವಾಗಿ 16 ರನ್​ಗಳ ಸೋಲು ಕಂಡಿತು. ತೆವಾಟಿಯಾ ಮೂರು ವಿಕೆಟ್​ ಪಡೆದು ಮಿಂಚಿದ್ದರು.

ಸಂಜು ಸಾಮ್ಸನ್​
ಸಂಜು ಸ್ಯಾಮ್ಸನ್​

"ನನ್ನ ಪ್ರಕಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ರಾಹುಲ್​ ತೆವಾಟಿಯಾಗೆ ಸಲ್ಲಬೇಕು. ಅವರು ಎದುರಾಳಿ ತಂಡದ ಪ್ರಮುಖ ಮೂರು ವಿಕೆಟ್​ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದರು. ನಿಜಕ್ಕೂ ಅವರೇ ಗೇಮ್​ ಚೇಂಜರ್, ಅದರಲ್ಲೂ ತೇವಾಂಶ ಹೆಚ್ಚಿರುವ ಸಂದರ್ಭದಲ್ಲಿ ಬೌಲರ್​ಗಳಿಗೆ ತುಂಬಾ ಕಷ್ಟ" ಎಂದು ತೆವಾಟಿಯಾ ಪ್ರದರ್ಶನವನ್ನು ಮೆಚ್ಚಿಕೊಂಡಿದ್ದಾರೆ.

ಶಾರ್ಜಾ ಮೈದಾನದಲ್ಲಿ ಇಬ್ಬನಿ ಹೆಚ್ಚಾಗುವುದರಿಂದ ನೀವು ಎಷ್ಟೇ ಸ್ಕೋರ್​ ಗಳಿಸಿದರೂ ಚೇಸಿಂಗ್ ಸುಲಭವಾಗಿರುತ್ತದೆ. ಅದಕ್ಕಾಗಿ ನಾನು ಪ್ರತಿ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಮುಂದಾದೆ. ಅದರಲ್ಲೂ ಸ್ಮಿತ್ ಜೊತೆ ಬ್ಯಾಟಿಂಗ್ ಮಾಡುವಾಗ ನನಗೆ ನನ್ನಿಷ್ಟದಂತೆ ಬ್ಯಾಟಿಂಗ್​ ಮಾಡಲೂ ಲೈಸೆನ್ಸ್​ ಇತ್ತು. ನಾವಿಬ್ಬರೂ ನಾಲ್ಕೈದು ವರ್ಷಗಳಿಂದ ಒಟ್ಟಿಗೆ ಬ್ಯಾಟಿಂಗ್​ ಮಾಡುತ್ತಿರುವುದರಿಂದ, ಒಬ್ಬರೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.