ETV Bharat / sports

ಎಫ್​ಐಆರ್​ ದಾಖಲಿಸಿದವರ ಮೇಲೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ: ಅಜರುದ್ದೀನ್​ ವಾರ್ನಿಂಗ್​

author img

By

Published : Jan 23, 2020, 4:22 PM IST

ಮುಂಬೈನ ಟ್ರಾವೆಲ್ಸ್ ಏಜೆನ್ಸಿಗೆ 20 ಲಕ್ಷ ಹಣ ವಂಚನೆ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಮೂವರ ವಿರುದ್ಧ ವಿರುದ್ಧ ಔರಂಗಬಾದ್​ನಲ್ಲಿ ಬುಧವಾರ ಎಫ್​ಐಆರ್​ ದಾಖಲಾಗಿತ್ತು. ಅಲ್ಲಿನ ಪೋಲೀಸರು ಸಹ, ವಂಚನೆ ಮಾಡಿದ ಹಣವನ್ನು ಹಿಂತಿರುಗಿಸಿದರೆ ಆರೋಪಿಗಳಿಗೆ ರಿಲೀಫ್​ ಸಿಗಲಿದೆ. ಇಲ್ಲವಾದಲ್ಲಿ ಮೂವರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದರು.

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್

ಮುಂಬೈ: ತಮ್ಮ ಮೇಲೆ ದಾಖಲಾಗಿರುವ ವಂಚನೆ ಪ್ರಕರಣವನ್ನು ಅಲ್ಲಗೆಳೆದಿರುವ ​ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್ ಸುಳ್ಳು ಆರೋಪ ಮಾಡಿ ಎಫ್​ಐಆರ್​ ದಾಖಲಿಸುವವರ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನ ಟ್ರಾವೆಲ್ಸ್ ಏಜೆನ್ಸಿಗೆ 20 ಲಕ್ಷ ಹಣ ವಂಚನೆ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಮೂವರ ವಿರುದ್ಧ ವಿರುದ್ಧ ಔರಂಗಬಾದ್​ನಲ್ಲಿ ಬುಧವಾರ ಎಫ್​ಐಆರ್​ ದಾಖಲಾಗಿತ್ತು. ಅಲ್ಲದೇ ವಂಚನೆ ಮಾಡಿದ ಹಣವನ್ನ ಹಿಂತಿರುಗಿಸುವಂತೆ ಆರೋಪಿಗಳಿಗೆ ಹೇಳಿದ್ದರು. ಒಂದು ವೇಳೆ ಹಣ ಹಿಂದಿರುಗಿಸದಿದ್ದಲ್ಲಿ ಮೂವರನ್ನು ಬಂಧಿಸಲಾಗುವುದು ಎಂದು ವಾರ್ನಿಂಗ್​ ಕೊಟ್ಟಿದ್ದರು.

  • I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T

    — Mohammed Azharuddin (@azharflicks) January 22, 2020 " class="align-text-top noRightClick twitterSection" data="

I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T

— Mohammed Azharuddin (@azharflicks) January 22, 2020 ">
ಆದರೆ ಅಜರುದ್ದೀನ್ ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವನ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ಈಗಾಗಲೆ ನನ್ನ ಲೀಗಲ್​ ಟೀಮ್​ ಜೊತೆ ಈ ಕುರಿತು ಚರ್ಚಿಸಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ: ಮಹಾರಾಷ್ಟ್ರದ ಔರಂಗಬಾದ್​ನಲ್ಲಿರುವ ದಾನೀಶ್ ಟೂರ್ಸ್​ ಅಂಡ್ ಟ್ರಾವಲ್ಸ್ ಏಜೆನ್ಸಿಯಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ಅಜರುದ್ದೀನ್ ಅವರ ಆಪ್ತ ಸಹಾಯಕ ಮುಜೀಬ್ ಖಾನ್ 20 .96 ಲಕ್ಷ ರೂಗಳ ಹಲವು ಅಂತಾರಾಷ್ಟ್ರೀಯ ವಿಮಾನ ಟಿಕೆಟ್​ಗಳನ್ನು ಬುಕ್ ಮಾಡಿದ್ದರು. ಹಣ ಆನ್ ಲೈನ್​ನ ಮೂಲಕ ನೀಡುತ್ತೇನೆ ಎಂದಿದ್ದರು. ಆದರೆ ಹಣ ನೀಡಿಲ್ಲ. ಮುಜೀಬ್​ 10.6 ಲಕ್ಷ ಹಣವನ್ನು ವರ್ಗಾಯಿಸಿದ್ದೇನೆ ಎಂದು ಇಮೇಲ್ ಕಳುಹಿಸಿದ್ದಾರೆ. ಆದರೆ ಆ ಹಣವೂ ತಮಗೆ ಸಿಕ್ಕಿಲ್ಲ ಎಂದು ಏಜೆನ್ಸಿಯ ಮಾಲೀಕ ​ ಮೊಹಮ್ಮದ್ ಶಹಾಬ್ ದೂರಿನಲ್ಲಿ ತಿಳಿಸಿದ್ದರು.

ಮುಂಬೈ: ತಮ್ಮ ಮೇಲೆ ದಾಖಲಾಗಿರುವ ವಂಚನೆ ಪ್ರಕರಣವನ್ನು ಅಲ್ಲಗೆಳೆದಿರುವ ​ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್ ಸುಳ್ಳು ಆರೋಪ ಮಾಡಿ ಎಫ್​ಐಆರ್​ ದಾಖಲಿಸುವವರ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನ ಟ್ರಾವೆಲ್ಸ್ ಏಜೆನ್ಸಿಗೆ 20 ಲಕ್ಷ ಹಣ ವಂಚನೆ ಮಾಡಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಮೂವರ ವಿರುದ್ಧ ವಿರುದ್ಧ ಔರಂಗಬಾದ್​ನಲ್ಲಿ ಬುಧವಾರ ಎಫ್​ಐಆರ್​ ದಾಖಲಾಗಿತ್ತು. ಅಲ್ಲದೇ ವಂಚನೆ ಮಾಡಿದ ಹಣವನ್ನ ಹಿಂತಿರುಗಿಸುವಂತೆ ಆರೋಪಿಗಳಿಗೆ ಹೇಳಿದ್ದರು. ಒಂದು ವೇಳೆ ಹಣ ಹಿಂದಿರುಗಿಸದಿದ್ದಲ್ಲಿ ಮೂವರನ್ನು ಬಂಧಿಸಲಾಗುವುದು ಎಂದು ವಾರ್ನಿಂಗ್​ ಕೊಟ್ಟಿದ್ದರು.

  • I strongly rubbish the false FIR filed against me in Aurangabad. I’m consulting my legal team, and would be taking actions as necessary pic.twitter.com/6XrembCP7T

    — Mohammed Azharuddin (@azharflicks) January 22, 2020 " class="align-text-top noRightClick twitterSection" data=" ">
ಆದರೆ ಅಜರುದ್ದೀನ್ ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವನ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ. ಈಗಾಗಲೆ ನನ್ನ ಲೀಗಲ್​ ಟೀಮ್​ ಜೊತೆ ಈ ಕುರಿತು ಚರ್ಚಿಸಿದ್ದು, ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ: ಮಹಾರಾಷ್ಟ್ರದ ಔರಂಗಬಾದ್​ನಲ್ಲಿರುವ ದಾನೀಶ್ ಟೂರ್ಸ್​ ಅಂಡ್ ಟ್ರಾವಲ್ಸ್ ಏಜೆನ್ಸಿಯಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ಅಜರುದ್ದೀನ್ ಅವರ ಆಪ್ತ ಸಹಾಯಕ ಮುಜೀಬ್ ಖಾನ್ 20 .96 ಲಕ್ಷ ರೂಗಳ ಹಲವು ಅಂತಾರಾಷ್ಟ್ರೀಯ ವಿಮಾನ ಟಿಕೆಟ್​ಗಳನ್ನು ಬುಕ್ ಮಾಡಿದ್ದರು. ಹಣ ಆನ್ ಲೈನ್​ನ ಮೂಲಕ ನೀಡುತ್ತೇನೆ ಎಂದಿದ್ದರು. ಆದರೆ ಹಣ ನೀಡಿಲ್ಲ. ಮುಜೀಬ್​ 10.6 ಲಕ್ಷ ಹಣವನ್ನು ವರ್ಗಾಯಿಸಿದ್ದೇನೆ ಎಂದು ಇಮೇಲ್ ಕಳುಹಿಸಿದ್ದಾರೆ. ಆದರೆ ಆ ಹಣವೂ ತಮಗೆ ಸಿಕ್ಕಿಲ್ಲ ಎಂದು ಏಜೆನ್ಸಿಯ ಮಾಲೀಕ ​ ಮೊಹಮ್ಮದ್ ಶಹಾಬ್ ದೂರಿನಲ್ಲಿ ತಿಳಿಸಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.