ETV Bharat / sports

ರಣಜಿ ಕ್ರಿಕೆಟ್​: 41 ಬಾರಿಯ ಚಾಂಪಿಯನ್​ ಮುಂಬೈಗೆ ಶಾಕ್​ ಕೊಟ್ಟ ಕರ್ನಾಟಕ - 41 ಬಾರಿಯ ಚಾಂಪಿಯನ್​ ಮುಂಬೈ

ಸ್ಟಾರ್​ ಬ್ಯಾಟ್ಸ್​ಮನ್​ಗಳ ಅನುಪಸ್ಥಿತಿಯ ನಡುವೆಯೂ ಮುಂಬೈ ವಿರುದ್ಧ ಕರ್ನಾಟಕ ತಂಡ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Karnataka Ranji
Karnataka Ranji
author img

By

Published : Jan 5, 2020, 1:58 PM IST

ಮುಂಬೈ: ರಣಜಿ ಟ್ರೋಫಿಯ ತನ್ನ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ 41 ಬಾರಿ ರಣಜಿ ಚಾಂಪಿಯನ್​ ಮುಂಬೈ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನಿನ್ನೆ 109 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಇಂದು ಬ್ಯಾಟಿಂಗ್​ ಮುಂದುವರಿಸಿದ ಮುಂಬೈ ನಿನ್ನೆಯ ಮೊತ್ತಕ್ಕೆ 40 ರನ್​ ಸೇರಿಸಿ ಆಲೌಟ್​ ಆಗುವ ಮೂಲಕ ಕೇವಲ 126 ರನ್​ಗಳ ಟಾರ್ಗೆಟ್​ ನೀಡಿತು. 53 ರನ್​ ಗಳಿಸಿ ಕ್ರೀಸ್‌ನಲ್ಲಿದ್ದ ಸರ್ಫರಾಜ್ ಖಾನ್​ 71 ರನ್​ ಗಳಿಸಿ ನಾಟೌಟ್​ ಆದರು.

ಕರ್ನಾಟಕ ಪರ ಪ್ರತೀಕ್​ ಜೈನ್(4)​ ಇಂದು ಬ್ಯಾಟಿಂಗ್​ ಆಗಮಿಸಿದ ಮುಂಬೈನ ಎಲ್ಲಾ ಬ್ಯಾಟ್ಸ್​ಮನ್​ಗಳ ವಿಕೆಟ್​ ಕಬಳಿಸಿ ಮಿಂಚಿದರು. ಪಂದ್ಯದಲ್ಲಿ ಮಿಥುನ್​ 3 ಹಾಗೂ ಕೌಶಿಕ್​ 2 ವಿಕೆಟ್​ ಪಡೆದರು.

  • Here's the winning moments of Karnataka.

    "Powerful people come from powerful places" can be overheard. 🙂

    (via @subjudiced) pic.twitter.com/qslAsxvzPK

    — Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 5, 2020 " class="align-text-top noRightClick twitterSection" data=" ">

126 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಕರ್ನಾಟಕ ತಂಡ ದೇವದತ್​ ಪಡಿಕ್ಕಲ್​ ಅವರ ಅಬ್ಬರದ ಅರ್ಧಶತಕ ನೆರವಿನಿಂದ 5 ವಿಕೆಟ್​ಗಳ ಗೆಲುವು ಸಾಧಿಸಿತು. 46 ಎಸೆತಗಳನ್ನೆದುರಿಸಿದ ಪಡಿಕ್ಕಲ್​ 2 ಸಿಕ್ಸರ್​ ಹಾಗೂ 5 ಬೌಂಡರಿ ನೆರವಿನಿಂದ 50 ರನ್​ಗಳಿಸಿದರು. ಸಮರ್ಥ್​ 34, ರೋಹನ್​ ಕದಮ್​ 21, ಕರುಣ್​ ನಾಯರ್​ 10 ರನ್ ​ಗಳಿಸಿ ಔಟಾದರೆ, ಗೋಪಾಲ್(5), ಶರತ್​(4) ಗೆಲುವಿನ ಗಡಿ ದಾಟಿಸಿದರು.

ಅಲ್ಪಮೊತ್ತದ ಟಾರ್ಗೆಟ್​ ನೀಡಿದರೂ ಮುಂಬೈ ಬೌಲರ್​ಗಳು ಕರ್ನಾಟಕದ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಶಶಾಂಕ್​ 4 ವಿಕೆಟ್​, ಮುಲಾನಿ 1 ವಿಕೆಟ್​ ಪಡೆದರು.

ಮುಂಬೈ: ರಣಜಿ ಟ್ರೋಫಿಯ ತನ್ನ 4ನೇ ಪಂದ್ಯದಲ್ಲಿ ಕರ್ನಾಟಕ ತಂಡ 41 ಬಾರಿ ರಣಜಿ ಚಾಂಪಿಯನ್​ ಮುಂಬೈ ವಿರುದ್ಧ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ನಿನ್ನೆ 109 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಇಂದು ಬ್ಯಾಟಿಂಗ್​ ಮುಂದುವರಿಸಿದ ಮುಂಬೈ ನಿನ್ನೆಯ ಮೊತ್ತಕ್ಕೆ 40 ರನ್​ ಸೇರಿಸಿ ಆಲೌಟ್​ ಆಗುವ ಮೂಲಕ ಕೇವಲ 126 ರನ್​ಗಳ ಟಾರ್ಗೆಟ್​ ನೀಡಿತು. 53 ರನ್​ ಗಳಿಸಿ ಕ್ರೀಸ್‌ನಲ್ಲಿದ್ದ ಸರ್ಫರಾಜ್ ಖಾನ್​ 71 ರನ್​ ಗಳಿಸಿ ನಾಟೌಟ್​ ಆದರು.

ಕರ್ನಾಟಕ ಪರ ಪ್ರತೀಕ್​ ಜೈನ್(4)​ ಇಂದು ಬ್ಯಾಟಿಂಗ್​ ಆಗಮಿಸಿದ ಮುಂಬೈನ ಎಲ್ಲಾ ಬ್ಯಾಟ್ಸ್​ಮನ್​ಗಳ ವಿಕೆಟ್​ ಕಬಳಿಸಿ ಮಿಂಚಿದರು. ಪಂದ್ಯದಲ್ಲಿ ಮಿಥುನ್​ 3 ಹಾಗೂ ಕೌಶಿಕ್​ 2 ವಿಕೆಟ್​ ಪಡೆದರು.

  • Here's the winning moments of Karnataka.

    "Powerful people come from powerful places" can be overheard. 🙂

    (via @subjudiced) pic.twitter.com/qslAsxvzPK

    — Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 5, 2020 " class="align-text-top noRightClick twitterSection" data=" ">

126 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಕರ್ನಾಟಕ ತಂಡ ದೇವದತ್​ ಪಡಿಕ್ಕಲ್​ ಅವರ ಅಬ್ಬರದ ಅರ್ಧಶತಕ ನೆರವಿನಿಂದ 5 ವಿಕೆಟ್​ಗಳ ಗೆಲುವು ಸಾಧಿಸಿತು. 46 ಎಸೆತಗಳನ್ನೆದುರಿಸಿದ ಪಡಿಕ್ಕಲ್​ 2 ಸಿಕ್ಸರ್​ ಹಾಗೂ 5 ಬೌಂಡರಿ ನೆರವಿನಿಂದ 50 ರನ್​ಗಳಿಸಿದರು. ಸಮರ್ಥ್​ 34, ರೋಹನ್​ ಕದಮ್​ 21, ಕರುಣ್​ ನಾಯರ್​ 10 ರನ್ ​ಗಳಿಸಿ ಔಟಾದರೆ, ಗೋಪಾಲ್(5), ಶರತ್​(4) ಗೆಲುವಿನ ಗಡಿ ದಾಟಿಸಿದರು.

ಅಲ್ಪಮೊತ್ತದ ಟಾರ್ಗೆಟ್​ ನೀಡಿದರೂ ಮುಂಬೈ ಬೌಲರ್​ಗಳು ಕರ್ನಾಟಕದ 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಶಶಾಂಕ್​ 4 ವಿಕೆಟ್​, ಮುಲಾನಿ 1 ವಿಕೆಟ್​ ಪಡೆದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.