ETV Bharat / sports

ಕ್ವಾಲಿಫೈಯರ್​ ಸೋಲಿಗೆ ಪ್ರಮುಖ ಕಾರಣ ಬಿಚ್ಚಿಟ್ಟ ಡೇವಿಡ್ ವಾರ್ನರ್​

author img

By

Published : Nov 9, 2020, 4:21 PM IST

ಭಾನುವಾರ ನಡೆದ ಪಂದ್ಯದಲ್ಲಿ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೆವು. ಆದರೆ ಫೀಲ್ಡಿಂಗ್​ ತುಂಬಾ ಕಳಪೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಡೇವಿಡ್ ವಾರ್ನರ್​
ಡೇವಿಡ್ ವಾರ್ನರ್​

ಅಬುಧಾಬಿ: ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋತು ಫೈನಲ್​ ತಲುಪುವುದಕ್ಕೆ ವಿಫಲವಾಗಲು ಫೀಲ್ಡಿಂಗ್​ನಲ್ಲಿ ಆಟಗಾರರು ತೋರಿದ ಕೆಟ್ಟ ಪ್ರದರ್ಶನವೇ ಕಾರಣ ಎಂದು ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್​ ಹೇಳಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೆವು. ಆದರೆ ಫೀಲ್ಡಿಂಗ್​ ತುಂಬಾ ಕಳಪೆಯಾಗಿತ್ತು ಎಂದು ಅವರು ಹೇಳಿದ್ದಾರೆ.

" ಟೂರ್ನಿ ಆರಂಭದಲ್ಲಿ ನಮಗೆ ಯಾರೂ ಅವಕಾಶ ನೀಡಲಿಲ್ಲ. ಎಲ್ಲರೂ ಬಿಗ್​ 3 ಗಳಾದ ಮುಂಬೈ ಆರ್​ಸಿಬಿ ಹಾಗೂ ಡೆಲ್ಲಿ ಬಗ್ಗೆ ಮಾತನಾಡುತ್ತಿದ್ದರು. ಆದರೆ ಟೂರ್ನಿಯಲ್ಲಿ ಕಮ್​ಬ್ಯಾಕ್​ ಮಾಡಿದ ರೀತಿ ನನಗೆ ಹೆಮ್ಮೆಯಿದೆ. ನಟರಾಜನ್, ರಶೀದ್​, ಮನೀಶ್ ​ಪಾಂಡೆ ಟೂರ್ನಿಯಲ್ಲಿ ಸಾಕಷ್ಟು ಸಕಾರಾತ್ಮಕವಾಗಿ ಆಡಿದ್ದಾರೆ".

ಡೇವಿಡ್ ವಾರ್ನರ್​
ಡೇವಿಡ್ ವಾರ್ನರ್​

ಟೂರ್ನಮೆಂಟ್​ನ ಅರ್ಧದಷ್ಟು ಭಾಗ ನಾವು ಆಟವನ್ನು ಹೇಗೆ ಇಷ್ಟುಪಡುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ. ನೀವು ಕ್ಯಾಚ್​ಗಳನ್ನು ಕೈಚೆಲ್ಲುವುದರಿಂದ ಟೂರ್ನಮೆಂಟ್​ ಗೆಲ್ಲಲು ಸಾಧ್ಯವಾಗುವುದಿಲ್ಲ. ನನ್ನ ಪ್ರಕಾರ ಬ್ಯಾಟ್​ ಮತ್ತು ಬೌಲಿಂಗ್​ನಲ್ಲಿ​ ಕೆಟ್ಟ ಆರಂಭದ ಹೊರತಾಗಿಯೂ ಸುಧಾರಣೆ ಕಂಡು ಬಂದಿತು. ಆದರೆ, ಫೀಲ್ಡಿಂಗ್​ನಲ್ಲಿನ ನಮ್ಮ ವರ್ತನೆಯೇ ನಮ್ಮನ್ನು ಮಂಡಿಯೂರುವಂತೆ ಮಾಡಿತು ಎಂದು ವಾರ್ನರ್​ ಬೇಸರ ವ್ಯಕ್ತಪಡಿಸಿದರು.

ಆದರೆ, ಟೂರ್ನಿಯಲ್ಲಿ ಗಾಯದ ಕಾರಣ ಪ್ರಮುಖ ಆಟಗಾರರನ್ನು ಕಳೆದುಕೊಂಡರೂ, ನಮಗೆ ಲಭ್ಯವಾದ ಆಟಗಾರರಿಂದಲೇ ಈ ಹಂತಕ್ಕೆ ಬಂದಿದ್ದು ನನಗೆ ಹೆಮ್ಮೆಯನ್ನಿಸುತ್ತಿದೆ ಎಂದು ವಾರ್ನರ್​ ತಿಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 190 ರನ್​ಗಳನ್ನು ಬೆನ್ನಟ್ಟಿ ಮೊದಲ 3 ವಿಕೆಟ್​ಗಳನ್ನು ಬೇಗ ಕಳೆದುಕೊಂಡರೂ ವಿಲಿಯಮ್ಸನ್​ 67 ಹಾಗೂ ಸಮದ್​ 33 ರನ್​ಗಳಿಸಿ ಪಂದ್ಯವನ್ನು ತೀರ ಹತ್ತಿರ ತಂದಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಇಬ್ಬರು ಔಟಾಗಿದ್ದರಿಂದ ಸನ್​ರೈಸರ್ಸ್ ಸೋಲು ಕಾಣಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಅಬುಧಾಬಿ: ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋತು ಫೈನಲ್​ ತಲುಪುವುದಕ್ಕೆ ವಿಫಲವಾಗಲು ಫೀಲ್ಡಿಂಗ್​ನಲ್ಲಿ ಆಟಗಾರರು ತೋರಿದ ಕೆಟ್ಟ ಪ್ರದರ್ಶನವೇ ಕಾರಣ ಎಂದು ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್​ ಹೇಳಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ನಾವು ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೆವು. ಆದರೆ ಫೀಲ್ಡಿಂಗ್​ ತುಂಬಾ ಕಳಪೆಯಾಗಿತ್ತು ಎಂದು ಅವರು ಹೇಳಿದ್ದಾರೆ.

" ಟೂರ್ನಿ ಆರಂಭದಲ್ಲಿ ನಮಗೆ ಯಾರೂ ಅವಕಾಶ ನೀಡಲಿಲ್ಲ. ಎಲ್ಲರೂ ಬಿಗ್​ 3 ಗಳಾದ ಮುಂಬೈ ಆರ್​ಸಿಬಿ ಹಾಗೂ ಡೆಲ್ಲಿ ಬಗ್ಗೆ ಮಾತನಾಡುತ್ತಿದ್ದರು. ಆದರೆ ಟೂರ್ನಿಯಲ್ಲಿ ಕಮ್​ಬ್ಯಾಕ್​ ಮಾಡಿದ ರೀತಿ ನನಗೆ ಹೆಮ್ಮೆಯಿದೆ. ನಟರಾಜನ್, ರಶೀದ್​, ಮನೀಶ್ ​ಪಾಂಡೆ ಟೂರ್ನಿಯಲ್ಲಿ ಸಾಕಷ್ಟು ಸಕಾರಾತ್ಮಕವಾಗಿ ಆಡಿದ್ದಾರೆ".

ಡೇವಿಡ್ ವಾರ್ನರ್​
ಡೇವಿಡ್ ವಾರ್ನರ್​

ಟೂರ್ನಮೆಂಟ್​ನ ಅರ್ಧದಷ್ಟು ಭಾಗ ನಾವು ಆಟವನ್ನು ಹೇಗೆ ಇಷ್ಟುಪಡುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ. ನೀವು ಕ್ಯಾಚ್​ಗಳನ್ನು ಕೈಚೆಲ್ಲುವುದರಿಂದ ಟೂರ್ನಮೆಂಟ್​ ಗೆಲ್ಲಲು ಸಾಧ್ಯವಾಗುವುದಿಲ್ಲ. ನನ್ನ ಪ್ರಕಾರ ಬ್ಯಾಟ್​ ಮತ್ತು ಬೌಲಿಂಗ್​ನಲ್ಲಿ​ ಕೆಟ್ಟ ಆರಂಭದ ಹೊರತಾಗಿಯೂ ಸುಧಾರಣೆ ಕಂಡು ಬಂದಿತು. ಆದರೆ, ಫೀಲ್ಡಿಂಗ್​ನಲ್ಲಿನ ನಮ್ಮ ವರ್ತನೆಯೇ ನಮ್ಮನ್ನು ಮಂಡಿಯೂರುವಂತೆ ಮಾಡಿತು ಎಂದು ವಾರ್ನರ್​ ಬೇಸರ ವ್ಯಕ್ತಪಡಿಸಿದರು.

ಆದರೆ, ಟೂರ್ನಿಯಲ್ಲಿ ಗಾಯದ ಕಾರಣ ಪ್ರಮುಖ ಆಟಗಾರರನ್ನು ಕಳೆದುಕೊಂಡರೂ, ನಮಗೆ ಲಭ್ಯವಾದ ಆಟಗಾರರಿಂದಲೇ ಈ ಹಂತಕ್ಕೆ ಬಂದಿದ್ದು ನನಗೆ ಹೆಮ್ಮೆಯನ್ನಿಸುತ್ತಿದೆ ಎಂದು ವಾರ್ನರ್​ ತಿಳಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ 190 ರನ್​ಗಳನ್ನು ಬೆನ್ನಟ್ಟಿ ಮೊದಲ 3 ವಿಕೆಟ್​ಗಳನ್ನು ಬೇಗ ಕಳೆದುಕೊಂಡರೂ ವಿಲಿಯಮ್ಸನ್​ 67 ಹಾಗೂ ಸಮದ್​ 33 ರನ್​ಗಳಿಸಿ ಪಂದ್ಯವನ್ನು ತೀರ ಹತ್ತಿರ ತಂದಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಇಬ್ಬರು ಔಟಾಗಿದ್ದರಿಂದ ಸನ್​ರೈಸರ್ಸ್ ಸೋಲು ಕಾಣಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.