ETV Bharat / sports

ಧೋನಿ ಟೀಕಿಸುವವರ ಬಗ್ಗೆ ನನಗೆ ಕರುಣೆಯಿದೆ: ಸಯ್ಯದ್​ ಕಿರ್ಮಾನಿ - ಐಪಿಎಲ್​ನಲ್ಲಿ ಧೋನಿ ವಿಫಲ

2020ರ ಐಪಿಎಲ್​ನಲ್ಲಿ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಈಗಾಗಲೇ ಅವರ ನೇತೃತ್ವದ ತಂಡ 7 ಪಂದ್ಯಗಳಲ್ಲಿ 5 ಸೋಲು ಕಂಡಿದೆ. ಕೇವಲ 2 ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ. ಆದರೆ, ಸಯ್ಯದ್​ ಕಿರ್ಮಾನಿ 39 ವರ್ಷದ ಆಟಗಾರನನ್ನು ಟೀಕಿಸುವವರಿಗೆ ಚಾಟಿ ಬೀಸಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ
author img

By

Published : Oct 12, 2020, 9:19 PM IST

Updated : Oct 12, 2020, 10:06 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರ ಪ್ರದರ್ಶನದ ಮೇಲೆ ಟೀಕಿಸುತ್ತಿರುವವರನ್ನು ನೋಡಿದರೆ ನನಗೆ ಕರುಣೆ ಉಂಟಾಗುತ್ತಿದೆ ಎಂದು 1983ರ ವಿಶ್ವಕಪ್​ ವಿಜೇತ ತಂಡದ ವಿಕೆಟ್​ ಕೀಪರ್​ ಸಯ್ಯದ್​ ಕಿರ್ಮಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2020ರ ಐಪಿಎಲ್​ನಲ್ಲಿ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಈಗಾಗಲೇ ಅವರ ನೇತೃತ್ವದ ತಂಡ 7 ಪಂದ್ಯಗಳಲ್ಲಿ 5 ಸೋಲು ಕಂಡಿದೆ. ಕೇವಲ 2 ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ. ಆದರೆ, ಸಯ್ಯದ್​ ಕಿರ್ಮಾನಿ 39 ವರ್ಷದ ಆಟಗಾರನನ್ನು ಟೀಕಿಸುವವರಿಗೆ ಚಾಟಿ ಬೀಸಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗರ ಜೀವನದಲ್ಲಿ ಯಶಸ್ಸಿನ ಶಿಖರ ಏರುವ ಸಮಯ ಹೇಗಿರುತ್ತದೋ ಹಾಗೇ ಕೆಟ್ಟ ಸಮಯ ಎಂಬುದು ಇರುತ್ತದೆ. ಅದೇ ರೀತಿ ಎಂ.ಎಸ್​.ಧೋನಿ ವಿಚಾರದಲ್ಲೂ ನಡೆಯುತ್ತಿದೆ. ಧೋನಿ ಪ್ರದರ್ಶನದ ಬಗ್ಗೆ ಟೀಕಿಸುತ್ತಿರುವವರ ಬಗ್ಗೆ ನಿಜವಾಗಿಯೂ ನಾನು ಕರುಣೆ ತೋರಿಸುತ್ತೇನೆ ಎಂದು ಕಿರ್ಮಾನಿ ತಿಳಿಸಿದ್ದಾರೆ

" ಧೋನಿ ಒಂದು ಕಾಲದಲ್ಲಿ ಅತ್ಯುತ್ತಮ ಫಿನಿಶರ್​ ಎನಿಸಿಕೊಂಡಿದ್ದರು. ಅವರ ಸಾಧನೆಯನ್ನು ಯಾವತ್ತಿಗೂ ನಾವು ಮರೆಯಬಾರದು. ಯಾವುದೇ ಸಮಯದಲ್ಲೂ ಧೋನಿ ತಂಡಕ್ಕೆ ಗೆಲುವು ತಂದುಕೊಡಬಲ್ಲಂತಹ ಬ್ಯಾಟ್ಸ್​ಮನ್​ ಧೋನಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಸುದೀರ್ಘ ಸಮಯದ ನಂತರ ಧೋನಿ ಕ್ರಿಕೆಟ್​ಗೆ ಮರಳಿದ್ದಾರೆ. ಆದ್ದರಿಂದ ಧೋನಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ" ಎಂದು ಹೇಳಿದ್ದಾರೆ.

ಕ್ರಿಕೆಟಿಗರಿಗೆ ನಿರ್ದಿಷ್ಟ ವಯಸ್ಸಿನ ನಂತರ ಹೆಚ್ಚು ಚುರುಕುತನ ಇರುವುದಿಲ್ಲ ಎಂಬುದನ್ನು 70 ವರ್ಷ ವಯಸ್ಸಿನ ಮಾಜಿ ಆಟಗಾರ ಒಪ್ಪಿಕೊಂಡಿದ್ದಾರೆ. ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

" ಯುವಕರಿಗೆ ಹೋಲಿಸಿದರೆ ಇಂತಹ ವಯಸ್ಸಿನ ಜನರಿಗೆ ಹೆಚ್ಚು ಚುರುಕುತನವಿರಲಿಲ್ಲ. ಇದಲ್ಲದೇ ಆ ಆಟಗಾರ ತನ್ನ ಭವಿಷ್ಯದ ವಿಚಾರಗಳ ಬಗ್ಗೆ ಸಾಕಷ್ಟು ಉದ್ವೇಗವನ್ನು ಹೊಂದಿರುತ್ತಾನೆ. ಇದು ನೈಸರ್ಗಿಕ ಮತ್ತು ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು " ಎಂದು ಅವರು ಹೇಳಿದ್ದಾರೆ.

ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರ ಪ್ರದರ್ಶನದ ಮೇಲೆ ಟೀಕಿಸುತ್ತಿರುವವರನ್ನು ನೋಡಿದರೆ ನನಗೆ ಕರುಣೆ ಉಂಟಾಗುತ್ತಿದೆ ಎಂದು 1983ರ ವಿಶ್ವಕಪ್​ ವಿಜೇತ ತಂಡದ ವಿಕೆಟ್​ ಕೀಪರ್​ ಸಯ್ಯದ್​ ಕಿರ್ಮಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2020ರ ಐಪಿಎಲ್​ನಲ್ಲಿ ಧೋನಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುತ್ತಿಲ್ಲ. ಈಗಾಗಲೇ ಅವರ ನೇತೃತ್ವದ ತಂಡ 7 ಪಂದ್ಯಗಳಲ್ಲಿ 5 ಸೋಲು ಕಂಡಿದೆ. ಕೇವಲ 2 ಗೆಲುವು ಸಾಧಿಸಿ 7ನೇ ಸ್ಥಾನದಲ್ಲಿದೆ. ಆದರೆ, ಸಯ್ಯದ್​ ಕಿರ್ಮಾನಿ 39 ವರ್ಷದ ಆಟಗಾರನನ್ನು ಟೀಕಿಸುವವರಿಗೆ ಚಾಟಿ ಬೀಸಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗರ ಜೀವನದಲ್ಲಿ ಯಶಸ್ಸಿನ ಶಿಖರ ಏರುವ ಸಮಯ ಹೇಗಿರುತ್ತದೋ ಹಾಗೇ ಕೆಟ್ಟ ಸಮಯ ಎಂಬುದು ಇರುತ್ತದೆ. ಅದೇ ರೀತಿ ಎಂ.ಎಸ್​.ಧೋನಿ ವಿಚಾರದಲ್ಲೂ ನಡೆಯುತ್ತಿದೆ. ಧೋನಿ ಪ್ರದರ್ಶನದ ಬಗ್ಗೆ ಟೀಕಿಸುತ್ತಿರುವವರ ಬಗ್ಗೆ ನಿಜವಾಗಿಯೂ ನಾನು ಕರುಣೆ ತೋರಿಸುತ್ತೇನೆ ಎಂದು ಕಿರ್ಮಾನಿ ತಿಳಿಸಿದ್ದಾರೆ

" ಧೋನಿ ಒಂದು ಕಾಲದಲ್ಲಿ ಅತ್ಯುತ್ತಮ ಫಿನಿಶರ್​ ಎನಿಸಿಕೊಂಡಿದ್ದರು. ಅವರ ಸಾಧನೆಯನ್ನು ಯಾವತ್ತಿಗೂ ನಾವು ಮರೆಯಬಾರದು. ಯಾವುದೇ ಸಮಯದಲ್ಲೂ ಧೋನಿ ತಂಡಕ್ಕೆ ಗೆಲುವು ತಂದುಕೊಡಬಲ್ಲಂತಹ ಬ್ಯಾಟ್ಸ್​ಮನ್​ ಧೋನಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಸುದೀರ್ಘ ಸಮಯದ ನಂತರ ಧೋನಿ ಕ್ರಿಕೆಟ್​ಗೆ ಮರಳಿದ್ದಾರೆ. ಆದ್ದರಿಂದ ಧೋನಿಯ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ" ಎಂದು ಹೇಳಿದ್ದಾರೆ.

ಕ್ರಿಕೆಟಿಗರಿಗೆ ನಿರ್ದಿಷ್ಟ ವಯಸ್ಸಿನ ನಂತರ ಹೆಚ್ಚು ಚುರುಕುತನ ಇರುವುದಿಲ್ಲ ಎಂಬುದನ್ನು 70 ವರ್ಷ ವಯಸ್ಸಿನ ಮಾಜಿ ಆಟಗಾರ ಒಪ್ಪಿಕೊಂಡಿದ್ದಾರೆ. ಎಲ್ಲರೂ ಅದನ್ನು ಒಪ್ಪಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

" ಯುವಕರಿಗೆ ಹೋಲಿಸಿದರೆ ಇಂತಹ ವಯಸ್ಸಿನ ಜನರಿಗೆ ಹೆಚ್ಚು ಚುರುಕುತನವಿರಲಿಲ್ಲ. ಇದಲ್ಲದೇ ಆ ಆಟಗಾರ ತನ್ನ ಭವಿಷ್ಯದ ವಿಚಾರಗಳ ಬಗ್ಗೆ ಸಾಕಷ್ಟು ಉದ್ವೇಗವನ್ನು ಹೊಂದಿರುತ್ತಾನೆ. ಇದು ನೈಸರ್ಗಿಕ ಮತ್ತು ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು " ಎಂದು ಅವರು ಹೇಳಿದ್ದಾರೆ.

Last Updated : Oct 12, 2020, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.