ETV Bharat / sports

ಗಾಯಾಳು ಭುವನೇಶ್ವರ್​ ಜಾಗಕ್ಕೆ ಯುವ ಬೌಲರ್​ ಆಯ್ಕೆ ಮಾಡಿದ ಸನ್​ರೈಸರ್ಸ್​ - ಸನ್​ರೈಸರ್ಸ್​ ಹೈದರಾಬಾದ್​

ಅಕ್ಟೋಬರ್ 2 ರಂದು ದುಬೈನಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 19ನೇ ಓವರ್​ನಲ್ಲಿ ಬೌಲಿಂಗ್ ಮಾಡುವಾಗ ಭುವನೇಶ್ವರ್ ಸೊಂಟದ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಂತರ ಆ ಓವರ್​ನಲ್ಲಿ ಒಂದು ಎಸೆತವನ್ನೂ ಎಸೆಯಲಾಗದೆ ಮೈದಾನದಿಂದ ಹೊರ ಬಂದಿದ್ದರು.

ಭುವನೇಶ್ವರ್​ ಜಾಗಕ್ಕೆಪೃಥ್ವಿರಾಜ್ ಯರ್ರಾ
ಭುವನೇಶ್ವರ್​ ಜಾಗಕ್ಕೆಪೃಥ್ವಿರಾಜ್ ಯರ್ರಾ
author img

By

Published : Oct 6, 2020, 4:37 PM IST

ದುಬೈ: ಸ್ನಾಯು ಸೆಳೆತಕ್ಕೊಳಗಾಗಿ 13ನೇ ಆವೃತ್ತಿಯಿಂದ ಹೊರಬಿದ್ದಿರುವ ವೇಗಿ ಭುವನೇಶ್ವರ್​ ಕುಮಾರ್​ ಬದಲಿಗೆ ಯುವ ಎಡಗೈ ವೇಗಿ ಪೃಥ್ವಿರಾಜ್ ಯರ್ರಾ ಅವರನ್ನು ಆಯ್ಕೆ ಮಾಡಿರುವುದಾಗಿ ಸನ್‌ರೈಸರ್ಸ್ ಹೈದರಾಬಾದ್ ತಿಳಿಸಿದೆ.

ಅಕ್ಟೋಬರ್ 2 ರಂದು ದುಬೈನಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 19 ನೇ ಓವರ್​ನಲ್ಲಿ ಬೌಲಿಂಗ್ ಮಾಡುವಾಗ ಭುವಿ ಸೊಂಟದ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಂತರ ಆ ಓವರ್​ನಲ್ಲಿ ಒಂದು ಎಸೆತವನ್ನೂ ಎಸೆಯಲಾಗದೆ ಮೈದಾನದಿಂದ ಹೊರ ಬಂದಿದ್ದರು. ಸೋಮವಾರ ಅವರು ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆಂದು ಹೈದರಾಬಾದ್​ ಫ್ರಾಂಚೈಸಿ ಪ್ರಕಟಣೆ ಹೊರಡಿಸಿತ್ತು.

ಭುವನೇಶ್ವರ್​ ಜಾಗಕ್ಕೆಪೃಥ್ವಿರಾಜ್ ಯರ್ರಾ
ಎಂಎಸ್ ಧೋನಿ ಜೊತೆ ಯುವ ವೇಗಿ ಪೃಥ್ವಿರಾಜ್ ಯರ್ರಾ

ಭಾರತ ತಂಡದ ವೇಗಿ ಐಪಿಎಲ್​ನ ಮುಂದಿನ ಪಂದ್ಯಗಳಲ್ಲಿ ಭಾಗಿಯಾಗುವುದಿಲ್ಲ. ಅವರ ಸ್ಥಾನದಲ್ಲಿ 22 ವರ್ಷದ ಪೃಥ್ವಿರಾಜ್ ಆಡಲಿದ್ದಾರೆ ಎಂದು ಸನ್‌ರೈಸರ್ಸ್ ತಂಡ ಮಂಗಳವಾರ ಖಚಿತಪಡಿಸಿದೆ.

"ಭುವನೇಶ್ವರ್ ಕುಮಾರ್ ಗಾಯದಿಂದಾಗಿ 2020ರ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಅವರ ಬದಲಿ ಆಟಗಾರನಾಗಿ ಪೃಥ್ವಿರಾಜ್ ಯರ್ರಾ ತಂಡ ಸೇರಿಕೊಳ್ಳಲಿದ್ದಾರೆ" ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದೆ.

11 ಪ್ರಥಮ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಆಂಧ್ರಪ್ರದೇಶದ ಬೌಲರ್ ಪೃಥ್ವಿರಾಜ್​ ಶೀಘ್ರದಲ್ಲೇ ಯುಎಇಯಲ್ಲಿರುವ ಸನ್‌ರೈಸರ್ಸ್ ತಂಡ ಸೇರುವ ನಿರೀಕ್ಷೆಯಿದೆ. ಪೃಥ್ವಿರಾಜ್ ಕಳೆದ ವರ್ಷ ಕೋಲ್ಕತ್ತಾ ನೈಟ್‌ರೈಡರ್ಸ್ ಪರ ಆಡಿದ್ದರು.

ಬಿಸಿಸಿಐ ಮೂಲವೊಂದರ ಪ್ರಕಾರ, ಗಾಯಾಳು ಭುವನೇಶ್ವರ ಕುಮಾರ್​ಗೆ ಕನಿಷ್ಠ 6 ರಿಂದ 8 ವಾರಗಳವರೆಗೆ ವಿಶ್ರಾಂತಿ ಅಗತ್ಯವಿದೆ. ಹಾಗಾಗಿ ಭುವಿ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್‌ ಸರಣಿಗಳಿಂದರೂ ಹೊರಗುಳಿಯಬೇಕಾಗಿದೆ.

ದುಬೈ: ಸ್ನಾಯು ಸೆಳೆತಕ್ಕೊಳಗಾಗಿ 13ನೇ ಆವೃತ್ತಿಯಿಂದ ಹೊರಬಿದ್ದಿರುವ ವೇಗಿ ಭುವನೇಶ್ವರ್​ ಕುಮಾರ್​ ಬದಲಿಗೆ ಯುವ ಎಡಗೈ ವೇಗಿ ಪೃಥ್ವಿರಾಜ್ ಯರ್ರಾ ಅವರನ್ನು ಆಯ್ಕೆ ಮಾಡಿರುವುದಾಗಿ ಸನ್‌ರೈಸರ್ಸ್ ಹೈದರಾಬಾದ್ ತಿಳಿಸಿದೆ.

ಅಕ್ಟೋಬರ್ 2 ರಂದು ದುಬೈನಲ್ಲಿ ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 19 ನೇ ಓವರ್​ನಲ್ಲಿ ಬೌಲಿಂಗ್ ಮಾಡುವಾಗ ಭುವಿ ಸೊಂಟದ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಂತರ ಆ ಓವರ್​ನಲ್ಲಿ ಒಂದು ಎಸೆತವನ್ನೂ ಎಸೆಯಲಾಗದೆ ಮೈದಾನದಿಂದ ಹೊರ ಬಂದಿದ್ದರು. ಸೋಮವಾರ ಅವರು ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆಂದು ಹೈದರಾಬಾದ್​ ಫ್ರಾಂಚೈಸಿ ಪ್ರಕಟಣೆ ಹೊರಡಿಸಿತ್ತು.

ಭುವನೇಶ್ವರ್​ ಜಾಗಕ್ಕೆಪೃಥ್ವಿರಾಜ್ ಯರ್ರಾ
ಎಂಎಸ್ ಧೋನಿ ಜೊತೆ ಯುವ ವೇಗಿ ಪೃಥ್ವಿರಾಜ್ ಯರ್ರಾ

ಭಾರತ ತಂಡದ ವೇಗಿ ಐಪಿಎಲ್​ನ ಮುಂದಿನ ಪಂದ್ಯಗಳಲ್ಲಿ ಭಾಗಿಯಾಗುವುದಿಲ್ಲ. ಅವರ ಸ್ಥಾನದಲ್ಲಿ 22 ವರ್ಷದ ಪೃಥ್ವಿರಾಜ್ ಆಡಲಿದ್ದಾರೆ ಎಂದು ಸನ್‌ರೈಸರ್ಸ್ ತಂಡ ಮಂಗಳವಾರ ಖಚಿತಪಡಿಸಿದೆ.

"ಭುವನೇಶ್ವರ್ ಕುಮಾರ್ ಗಾಯದಿಂದಾಗಿ 2020ರ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಅವರ ಬದಲಿ ಆಟಗಾರನಾಗಿ ಪೃಥ್ವಿರಾಜ್ ಯರ್ರಾ ತಂಡ ಸೇರಿಕೊಳ್ಳಲಿದ್ದಾರೆ" ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದೆ.

11 ಪ್ರಥಮ ದರ್ಜೆ ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ಆಂಧ್ರಪ್ರದೇಶದ ಬೌಲರ್ ಪೃಥ್ವಿರಾಜ್​ ಶೀಘ್ರದಲ್ಲೇ ಯುಎಇಯಲ್ಲಿರುವ ಸನ್‌ರೈಸರ್ಸ್ ತಂಡ ಸೇರುವ ನಿರೀಕ್ಷೆಯಿದೆ. ಪೃಥ್ವಿರಾಜ್ ಕಳೆದ ವರ್ಷ ಕೋಲ್ಕತ್ತಾ ನೈಟ್‌ರೈಡರ್ಸ್ ಪರ ಆಡಿದ್ದರು.

ಬಿಸಿಸಿಐ ಮೂಲವೊಂದರ ಪ್ರಕಾರ, ಗಾಯಾಳು ಭುವನೇಶ್ವರ ಕುಮಾರ್​ಗೆ ಕನಿಷ್ಠ 6 ರಿಂದ 8 ವಾರಗಳವರೆಗೆ ವಿಶ್ರಾಂತಿ ಅಗತ್ಯವಿದೆ. ಹಾಗಾಗಿ ಭುವಿ ವರ್ಷಾಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್‌ ಸರಣಿಗಳಿಂದರೂ ಹೊರಗುಳಿಯಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.