ETV Bharat / sports

ಸ್ಟಾರ್​ ಆಲ್​ರೌಂಡರ್​ಗೆ ಗಾಯ... ಸೋಲಿನ ಬೆನ್ನಲ್ಲೇ ಲಂಕಾ ತಂಡಕ್ಕೆ ದೊಡ್ಡ ಆಘಾತ

author img

By

Published : Jan 8, 2020, 3:26 PM IST

ಟಿ20 ಸ್ಪೆಷಲಿಸ್ಟ್​ ಆಗಿರುವ ಉದಾನ ಎರಡನೇ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವುದರಿಂದ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಭಾರತ ಬ್ಯಾಟಿಂಗ್​ ಆಗಮಿಸುವ ವೇಳೆ ಅಭ್ಯಾಸ ಮಾಡುತ್ತಿರುವಾಗ ಉದಾನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

isuru udana injured
ಇಸುರು ಉದಾನ

ಇಂದೋರ್: ಭಾರತದ ವಿರುದ್ಧ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೋಲನುಭವಿಸಿರುವ ಶ್ರೀಲಂಕಾ ತಂಡಕ್ಕೆ ಆಲ್​ರೌಂಡರ್​ ಇಸುರು ಉದಾನ ಗಾಯಕ್ಕೆ ತುತ್ತಾಗಿರುವುದು ಮತ್ತೊಂದು ಆಘಾತತಂದಿದೆ.

ಟಿ20 ಸ್ಪೆಷಲಿಸ್ಟ್​ ಆಗಿರುವ ಉದಾನ ಎರಡನೇ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವುದರಿಂದ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಭಾರತ ಬ್ಯಾಟಿಂಗ್​ ಆಗಮಿಸುವ ವೇಳೆ ಅಭ್ಯಾಸ ಮಾಡುತ್ತಿರುವಾಗ ಉದಾನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೋಚ್​ ಮಿಕಿ ಆರ್ಥರ್​, ಉದಾನ ಅಭ್ಯಾಸ ಮಾಡುತ್ತಿದ್ದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಮುಂದಿನ ವೆಸ್ಟ್​ ಇಂಡೀಸ್ ಸರಣಿಯ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದೇವೆ. ನಾವು ಕೂಡ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.

ಉದಾನ ಕೇವಲ 2 ಎಸೆತಗಳನ್ನೆದುರಿಸಿ ಒಂದು ರನ್​ಗಳಿಸಿದ್ದರು. ಅವರು ಬೌಲಿಂಗ್​ ಬಾರದೇ ಇರುವುದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಶ್ರೀಲಂಕಾ ತಂಡ ಭಾರತದ ಶಿಸ್ತುಬದ್ದ ಬೌಲಿಂಗ್​ ದಾಳಿಗೆ ತತ್ತರಿಸಿ ಕೇವಲ 142 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ತಂಡ 17.3 ಓವರ್​ಗಳಲ್ಲಿ ಗುರಿ ತಲುಪಿ 2020ರ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದೆ.

ಇಂದೋರ್: ಭಾರತದ ವಿರುದ್ಧ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೋಲನುಭವಿಸಿರುವ ಶ್ರೀಲಂಕಾ ತಂಡಕ್ಕೆ ಆಲ್​ರೌಂಡರ್​ ಇಸುರು ಉದಾನ ಗಾಯಕ್ಕೆ ತುತ್ತಾಗಿರುವುದು ಮತ್ತೊಂದು ಆಘಾತತಂದಿದೆ.

ಟಿ20 ಸ್ಪೆಷಲಿಸ್ಟ್​ ಆಗಿರುವ ಉದಾನ ಎರಡನೇ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವುದರಿಂದ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಭಾರತ ಬ್ಯಾಟಿಂಗ್​ ಆಗಮಿಸುವ ವೇಳೆ ಅಭ್ಯಾಸ ಮಾಡುತ್ತಿರುವಾಗ ಉದಾನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೋಚ್​ ಮಿಕಿ ಆರ್ಥರ್​, ಉದಾನ ಅಭ್ಯಾಸ ಮಾಡುತ್ತಿದ್ದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಮುಂದಿನ ವೆಸ್ಟ್​ ಇಂಡೀಸ್ ಸರಣಿಯ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದೇವೆ. ನಾವು ಕೂಡ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.

ಉದಾನ ಕೇವಲ 2 ಎಸೆತಗಳನ್ನೆದುರಿಸಿ ಒಂದು ರನ್​ಗಳಿಸಿದ್ದರು. ಅವರು ಬೌಲಿಂಗ್​ ಬಾರದೇ ಇರುವುದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಶ್ರೀಲಂಕಾ ತಂಡ ಭಾರತದ ಶಿಸ್ತುಬದ್ದ ಬೌಲಿಂಗ್​ ದಾಳಿಗೆ ತತ್ತರಿಸಿ ಕೇವಲ 142 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ತಂಡ 17.3 ಓವರ್​ಗಳಲ್ಲಿ ಗುರಿ ತಲುಪಿ 2020ರ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.