ETV Bharat / sports

ನೋವು, ನಿಂದನೆ, ಅವಮಾನ ಮೆಟ್ಟಿ ನಿಂತ ಸಿರಾಜ್: ಪ್ರಸಕ್ತ ಸರಣಿಯಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ

author img

By

Published : Jan 18, 2021, 1:03 PM IST

Updated : Jan 18, 2021, 1:12 PM IST

ತಂದೆ ಯನ್ನು ಕಳೆದುಕೊಂಡ ನೋವು, ಆಸೀಸ್ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ, ಅವಮಾನಗಳನ್ನು ಮೆಟ್ಟಿ ನಿಂತ 26 ವರ್ಷದ ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನದ ಮೂಲಕ ನೂತನ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Mohammed Siraj completes maiden five-wicket haul
ಮೊಹಮ್ಮದ್ ಸಿರಾಜ್

ಬ್ರಿಸ್ಬೇನ್: ಮೆಲ್ಬೋರ್ನ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಅಮೋಘ ಪ್ರದರ್ಶನ ಮೂಲಕ ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಒಂದೇ ಇ್ನನಿಂಗ್ಸ್​ನಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಆಡುವ ಕನಸುಹೊತ್ತು ಆಸ್ಟ್ರೇಲಿಯಾಕ್ಕೆ ಬಂದಿದ್ದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಕಳೆದುಕೊಂಡ ನೋವಿನಲ್ಲೂ ತವರಿಗೆ ತೆರಳದೆ ಅಪ್ಪನ ಆಸೇಯನ್ನು ಪೂರ್ಣಗೊಳಿಸಿಲು ಆಸೀಸ್​ ನೆಲದಲ್ಲೇ ಉಳಿದ್ರು.ಮೆಲ್ಬೋರ್ನ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಹೈದರಾಬಾದ್ ಮೂಲದ ವೇಗಿ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಪಡೆದು ತನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸಿದ್ರು.

ದ್ವಿತೀಯ ಟೆಸ್ಟ್​ಗಾಗಿ ಸಿಡ್ನಿಗೆ ಮೈದಾನಕ್ಕೆ ಬಂದ ಸಿರಾಜ್​ಗೆ ದೊಡ್ಡ ಅಪಮಾನ ಎದುರಾಯಿತು, ಮೊಹಮ್ಮದ್​ ಸಿರಾಜ್ ಮತ್ತು ತಂಡದ ಹಿರಿಯ ಬೌಲರ್​ ಜಸ್ಪ್ರೀತ್​ ಬುಮ್ರಾ ಅವರನ್ನು ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಮ್ಯಾಚ್​ ರೆಫ್ರಿ ಡೇವಿಡ್​ ಬೂನ್​ಗೆ ವರದಿ ಮಾಡಿದ್ದರು. ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು ಬ್ರೌನ್​ ಡಾಗ್​, ಬಿಗ್​ ಮಂಕಿ ಎಂದು ಕರೆದಿದ್ದಾರೆಂದು ಸಿರಾಜ್​ ಆರೋಪಿಸಿದ್ದರು. ಈ ಪಂದ್ಯದಲ್ಲಿ ಸಿರಾಜ್ 2 ವಿಕೆಟ್ ಪಡೆದುಕೊಂಡಿದ್ದರು.

ಆದರೆ ಬ್ರಿಸ್ಬೇನ್ ಪಂದ್ಯದಲ್ಲಿ ಘಾತಕ ದಾಳಿ ನಡೆಸಿದ ಸಿರಾಜ್ ದ್ವಿತೀಯ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದು ಅಮೋಘ ಪ್ರದರ್ಶನ ನೀಡಿದ್ರು. ಸರ್ವಶ್ರೇಷ್ಠ ಆಟಗಾರರಾರ ಸ್ಮಿತ್, ವಾರ್ನರ್ ಮತ್ತು ಲಾಬುಶೇನ್ ವಿಕೆಟ್ ಕಬಳಿಸಿ ಮಿಚಿದ್ರ. ಸಿರಾಜ್ ಆಸೀಸ್ ವಿರುದ್ಧದ ಪ್ರಸಕ್ತ ಸರಣಿಯಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದ ಟೀ ಇಂಡಿಯಾದ ಏಕೈಕ ಬೌಲರ್​ ಆಗಿದ್ದಾರೆ.

ತಂದೆಯನ್ನು ಕಳೆದುಕೊಂಡ ನೋವು, ಆಸೀಸ್ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ, ಅವಮಾನಗಳನ್ನು ಮೆಟ್ಟಿ ನಿಂತ 26 ವರ್ಷದ ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನ ತೋರಿದ್ದಾರೆ.

ಬ್ರಿಸ್ಬೇನ್: ಮೆಲ್ಬೋರ್ನ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಅಮೋಘ ಪ್ರದರ್ಶನ ಮೂಲಕ ಪ್ರಸಕ್ತ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಒಂದೇ ಇ್ನನಿಂಗ್ಸ್​ನಲ್ಲಿ 5 ವಿಕೆಟ್ ಪಡೆದ ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಪರ ಆಡುವ ಕನಸುಹೊತ್ತು ಆಸ್ಟ್ರೇಲಿಯಾಕ್ಕೆ ಬಂದಿದ್ದ ವೇಗಿ ಮೊಹಮ್ಮದ್ ಸಿರಾಜ್ ತಂದೆ ಕಳೆದುಕೊಂಡ ನೋವಿನಲ್ಲೂ ತವರಿಗೆ ತೆರಳದೆ ಅಪ್ಪನ ಆಸೇಯನ್ನು ಪೂರ್ಣಗೊಳಿಸಿಲು ಆಸೀಸ್​ ನೆಲದಲ್ಲೇ ಉಳಿದ್ರು.ಮೆಲ್ಬೋರ್ನ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಹೈದರಾಬಾದ್ ಮೂಲದ ವೇಗಿ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಪಡೆದು ತನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸಿದ್ರು.

ದ್ವಿತೀಯ ಟೆಸ್ಟ್​ಗಾಗಿ ಸಿಡ್ನಿಗೆ ಮೈದಾನಕ್ಕೆ ಬಂದ ಸಿರಾಜ್​ಗೆ ದೊಡ್ಡ ಅಪಮಾನ ಎದುರಾಯಿತು, ಮೊಹಮ್ಮದ್​ ಸಿರಾಜ್ ಮತ್ತು ತಂಡದ ಹಿರಿಯ ಬೌಲರ್​ ಜಸ್ಪ್ರೀತ್​ ಬುಮ್ರಾ ಅವರನ್ನು ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕರ ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಮ್ಯಾಚ್​ ರೆಫ್ರಿ ಡೇವಿಡ್​ ಬೂನ್​ಗೆ ವರದಿ ಮಾಡಿದ್ದರು. ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು ಬ್ರೌನ್​ ಡಾಗ್​, ಬಿಗ್​ ಮಂಕಿ ಎಂದು ಕರೆದಿದ್ದಾರೆಂದು ಸಿರಾಜ್​ ಆರೋಪಿಸಿದ್ದರು. ಈ ಪಂದ್ಯದಲ್ಲಿ ಸಿರಾಜ್ 2 ವಿಕೆಟ್ ಪಡೆದುಕೊಂಡಿದ್ದರು.

ಆದರೆ ಬ್ರಿಸ್ಬೇನ್ ಪಂದ್ಯದಲ್ಲಿ ಘಾತಕ ದಾಳಿ ನಡೆಸಿದ ಸಿರಾಜ್ ದ್ವಿತೀಯ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದು ಅಮೋಘ ಪ್ರದರ್ಶನ ನೀಡಿದ್ರು. ಸರ್ವಶ್ರೇಷ್ಠ ಆಟಗಾರರಾರ ಸ್ಮಿತ್, ವಾರ್ನರ್ ಮತ್ತು ಲಾಬುಶೇನ್ ವಿಕೆಟ್ ಕಬಳಿಸಿ ಮಿಚಿದ್ರ. ಸಿರಾಜ್ ಆಸೀಸ್ ವಿರುದ್ಧದ ಪ್ರಸಕ್ತ ಸರಣಿಯಲ್ಲಿ ಒಂದೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆದ ಟೀ ಇಂಡಿಯಾದ ಏಕೈಕ ಬೌಲರ್​ ಆಗಿದ್ದಾರೆ.

ತಂದೆಯನ್ನು ಕಳೆದುಕೊಂಡ ನೋವು, ಆಸೀಸ್ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ, ಅವಮಾನಗಳನ್ನು ಮೆಟ್ಟಿ ನಿಂತ 26 ವರ್ಷದ ಮೊಹಮ್ಮದ್ ಸಿರಾಜ್ ಅಮೋಘ ಪ್ರದರ್ಶನ ತೋರಿದ್ದಾರೆ.

Last Updated : Jan 18, 2021, 1:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.