ETV Bharat / sports

ವರುಣನ ಉಪಟಳಕ್ಕೆ ಮೂರನೇ ಸೆಷನ್ ಬಲಿ: ಕುತೂಹಲ ಕೆರಳಿಸಿದ ಅಂತಿಮ ದಿನದ ಹೋರಾಟ

ಅಂತಿಮ ಟೆಸ್ಟ್​ನ ನಾಲ್ಕನೇ ದಿನದ ಕೊನೆಯ ಸೆಷನ್​ ವರುಣನ ಉಪಟಳಕ್ಕೆ ಬಲಿಯಾಗಿದ್ದು, ಸರಣಿ ಗೆಲ್ಲಲು ಭಾರತ 324 ರನ್ ಗಳಿಸಬೇಕಿದೆ.

author img

By

Published : Jan 18, 2021, 1:28 PM IST

India Need 324 More Runs To Win
ವರುನ ಉಪಟಳಕ್ಕೆ ಮೂರನೇ ಸೆಷನ್ ಬಲಿ

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಕೊನೆಯ ಸೆಷನ್​ ವರುಣನ ಉಪಟಳಕ್ಕೆ ಬಲಿಯಾಗಿದೆ.

ಆಸ್ಟ್ರೇಲಿಯಾ ತಂಡ 294 ರನ್​ಗಳಿಗೆ ಆಲೌಟ್ ಆದ ಪರಿಣಾಮ 328 ರನ್​ಗಳ ಗುರಿ ಪಡೆದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ರು.

ಕೇವಲ 1.5 ಓವರ್ ಬೌಲಿಂಗ್​ನ ನಂತರ ಮಳೆ ಸುರಿಯಲು ಪ್ರಾರಂಭವಾದ ಕಾರಣ ನಾಲ್ಕನೇ ದಿನದಾಟ ಮುಕ್ತಾಯವಾಗಿದೆ ಭಾರತ ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಸಿದ್ದು ಸರಣಿ ಗೆಲ್ಲಲು ಇನ್ನೂ 324 ರನ್​ಗಳ ಅವಶ್ಯಕತೆ ಇದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್​ನಲ್ಲಿ 369 ರನ್ ಗಳಿಸಿದ್ರೆ, ಭಾರತ 336 ರನ್​ಗಳಿಗೆ ಆಲೌಟ್ ಆಗಿ 33 ರನ್​ಗಳ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 294 ರನ್ ಗಳಿಸಿದೆ. ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು, ನಾಲ್ಕನೇ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಅಂತಿಮ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲಲು ವಿಫಲವಾದರೆ ಭಾರತವು ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನಲೇ ಉಳಿಸಿಕೊಳ್ಳಲಿದೆ.

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಕೊನೆಯ ಸೆಷನ್​ ವರುಣನ ಉಪಟಳಕ್ಕೆ ಬಲಿಯಾಗಿದೆ.

ಆಸ್ಟ್ರೇಲಿಯಾ ತಂಡ 294 ರನ್​ಗಳಿಗೆ ಆಲೌಟ್ ಆದ ಪರಿಣಾಮ 328 ರನ್​ಗಳ ಗುರಿ ಪಡೆದ ಭಾರತದ ಪರ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ರು.

ಕೇವಲ 1.5 ಓವರ್ ಬೌಲಿಂಗ್​ನ ನಂತರ ಮಳೆ ಸುರಿಯಲು ಪ್ರಾರಂಭವಾದ ಕಾರಣ ನಾಲ್ಕನೇ ದಿನದಾಟ ಮುಕ್ತಾಯವಾಗಿದೆ ಭಾರತ ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಸಿದ್ದು ಸರಣಿ ಗೆಲ್ಲಲು ಇನ್ನೂ 324 ರನ್​ಗಳ ಅವಶ್ಯಕತೆ ಇದೆ.

ಆಸ್ಟ್ರೇಲಿಯಾ ಮೊದಲ ಇನ್ನಿಂಗ್​ನಲ್ಲಿ 369 ರನ್ ಗಳಿಸಿದ್ರೆ, ಭಾರತ 336 ರನ್​ಗಳಿಗೆ ಆಲೌಟ್ ಆಗಿ 33 ರನ್​ಗಳ ಹಿನ್ನಡೆ ಅನುಭವಿಸಿತ್ತು. ದ್ವಿತೀಯ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 294 ರನ್ ಗಳಿಸಿದೆ. ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು, ನಾಲ್ಕನೇ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಅಂತಿಮ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲಲು ವಿಫಲವಾದರೆ ಭಾರತವು ಬಾರ್ಡರ್-ಗವಾಸ್ಕರ್ ಟ್ರೋಫಿ ತನ್ನಲೇ ಉಳಿಸಿಕೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.