ETV Bharat / sports

ಫೀಲ್ಡಿಂಗ್​ ವೇಳೆ ಧವನ್​ಗೆ​ ಗಾಯ, ಬ್ಯಾಟಿಂಗ್​ಗೆ​ ಬರುವುದೇ ಡೌಟ್​... ಆತಂಕದಲ್ಲಿ ಟೀಮ್​ ಇಂಡಿಯಾ

author img

By

Published : Jan 19, 2020, 7:01 PM IST

ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು  ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್​ ಗಾಯಗೊಂಡಿದ್ದಾರೆ. ತಕ್ಷಣ ಅವರು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್​ ಬದಲಿ ಆಟಗಾರನಾಗಿ ಫೀಲ್ಡಿಂಗ್​ ನಡೆಸಿದರು.

Ind vs Aus: Dhawan injury
Ind vs Aus: Dhawan injury

ಬೆಂಗಳೂರು: ಸರಣಿ ಗೆಲುವಿಗೆ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್​ ಫೀಲ್ಡಿಂಗ್​ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದು ಕೊಹ್ಲಿ ಪಡೆಗೆ ಆಘಾತ ನೀಡಿದೆ.

ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್​ ಗಾಯಗೊಂಡಿದ್ದಾರೆ. ತಕ್ಷಣ ಅವರು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್​ ಬದಲಿ ಆಟಗಾರನಾಗಿ ಫೀಲ್ಡಿಂಗ್​ ನಡೆಸಿದರು.

Update: Shikhar Dhawan has gone for an X-Ray. A call on him being available for the game will be taken once he is back & assessed #TeamIndia #INDvAUS pic.twitter.com/94I4tlyxzc

— BCCI (@BCCI) January 19, 2020 ">
ಇನ್ನು ಈ ಕುರಿತು ಬಿಸಿಸಿಐ ತನ್ನ ಟ್ವೀಟರ್ ಖಾತೆಯಲ್ಲಿ "ಎಕ್ಸ್‌ ರೇ ಪರೀಕ್ಷೆಗಾಗಿ ಶಿಖರ್ ಧವನ್ ತೆರಳಿದ್ದಾರೆ. ಎಕ್ಸರೇ ಮಾಹಿತಿ ದೊರೆತ ಬಳಿಕ ಅವರು ಪಂದ್ಯಕ್ಕೆ ಲಭ್ಯರಾಗುವರೆ ಎಂಬುದರ ಬಗ್ಗೆ ಸ್ಪಷ್ಟಪಡಿಸಲಾಗುತ್ತದೆ" ಎಂದು ಮಾಹಿತಿ ನೀಡಿದೆ. ಈಗಾಗಲೆ ಭಾರತ 287ರನ್​ಗಳ ಟಾರ್ಗೆಟ್​ ಬೆನ್ನತ್ತಿದೆ. ಧವನ್​ ಸ್ಥಾನದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಕೆಎಲ್​ ರಾಹುಲ್​ ಕೇವಲ 19 ರನ್​ಗಳಿಸಿ ಆಸ್ಟನ್​ ಅಗರ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದಿದ್ದಾರೆ. ಸದ್ಯ ಧವನ್​ ಕೈಗೆ ಬೆಲ್ಟ್​ ಕಟ್ಟುಕೊಂಡಿದ್ದು, ಅವರ ಎಕ್ಸ್​ ರೇ ವರದಿಗಾಗಿ ಕಾಯುತ್ತಿದ್ದಾರೆ.

ಎರಡನೇ ಪಂದ್ಯದ ಸಂದರ್ಭದಲ್ಲೂ ಶಿಖರ್ ಧವನ್ ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಪಕ್ಕೆಲುಬಿಗೆ ಬಿದ್ದು ಗಾಯಗೊಂಡಿದ್ದರು. ಇಂದು ಬೆಳಿಗ್ಗೆಯಷ್ಟೇ ಶಿಖರ್ ಧವನ್ ಆಡುವ ಬಳಗದಲ್ಲಿ ಇರಲಿದ್ದಾರೆ ಎಂಬುದು ಖಚಿತವಾಗಿತ್ತು. ಇದೀಗ ಮತ್ತೆ ಧವನ್ ಭುಜದ ಗಾಯಕ್ಕೊಳಗಾಗಿರುವುದು ಕೊಹ್ಲಿ ಬಳಗದ ಚಿಂತೆಗೆ ಕಾರಣವಾಗಿದೆ.

ಬೆಂಗಳೂರು: ಸರಣಿ ಗೆಲುವಿಗೆ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್​ ಫೀಲ್ಡಿಂಗ್​ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದು ಕೊಹ್ಲಿ ಪಡೆಗೆ ಆಘಾತ ನೀಡಿದೆ.

ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ಸಂದರ್ಭದಲ್ಲಿ ಧವನ್​ ಗಾಯಗೊಂಡಿದ್ದಾರೆ. ತಕ್ಷಣ ಅವರು ಮೈದಾನದಿಂದ ಹೊರ ನಡೆದರು. ಇವರ ಬದಲು ಯಜುವೇಂದ್ರ ಚಹಲ್​ ಬದಲಿ ಆಟಗಾರನಾಗಿ ಫೀಲ್ಡಿಂಗ್​ ನಡೆಸಿದರು.

ಇನ್ನು ಈ ಕುರಿತು ಬಿಸಿಸಿಐ ತನ್ನ ಟ್ವೀಟರ್ ಖಾತೆಯಲ್ಲಿ "ಎಕ್ಸ್‌ ರೇ ಪರೀಕ್ಷೆಗಾಗಿ ಶಿಖರ್ ಧವನ್ ತೆರಳಿದ್ದಾರೆ. ಎಕ್ಸರೇ ಮಾಹಿತಿ ದೊರೆತ ಬಳಿಕ ಅವರು ಪಂದ್ಯಕ್ಕೆ ಲಭ್ಯರಾಗುವರೆ ಎಂಬುದರ ಬಗ್ಗೆ ಸ್ಪಷ್ಟಪಡಿಸಲಾಗುತ್ತದೆ" ಎಂದು ಮಾಹಿತಿ ನೀಡಿದೆ. ಈಗಾಗಲೆ ಭಾರತ 287ರನ್​ಗಳ ಟಾರ್ಗೆಟ್​ ಬೆನ್ನತ್ತಿದೆ. ಧವನ್​ ಸ್ಥಾನದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಕನ್ನಡಿಗ ಕೆಎಲ್​ ರಾಹುಲ್​ ಕೇವಲ 19 ರನ್​ಗಳಿಸಿ ಆಸ್ಟನ್​ ಅಗರ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದಿದ್ದಾರೆ. ಸದ್ಯ ಧವನ್​ ಕೈಗೆ ಬೆಲ್ಟ್​ ಕಟ್ಟುಕೊಂಡಿದ್ದು, ಅವರ ಎಕ್ಸ್​ ರೇ ವರದಿಗಾಗಿ ಕಾಯುತ್ತಿದ್ದಾರೆ.

ಎರಡನೇ ಪಂದ್ಯದ ಸಂದರ್ಭದಲ್ಲೂ ಶಿಖರ್ ಧವನ್ ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಪಕ್ಕೆಲುಬಿಗೆ ಬಿದ್ದು ಗಾಯಗೊಂಡಿದ್ದರು. ಇಂದು ಬೆಳಿಗ್ಗೆಯಷ್ಟೇ ಶಿಖರ್ ಧವನ್ ಆಡುವ ಬಳಗದಲ್ಲಿ ಇರಲಿದ್ದಾರೆ ಎಂಬುದು ಖಚಿತವಾಗಿತ್ತು. ಇದೀಗ ಮತ್ತೆ ಧವನ್ ಭುಜದ ಗಾಯಕ್ಕೊಳಗಾಗಿರುವುದು ಕೊಹ್ಲಿ ಬಳಗದ ಚಿಂತೆಗೆ ಕಾರಣವಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.