ETV Bharat / sports

ಒತ್ತಡಕ್ಕೆ ಮಣಿದು ತೀರ್ಪು ಬದಲಾಯಿಸಿಕೊಂಡ ಅಂಪೈರ್​ ವಿರುದ್ಧ ಕೊಹ್ಲಿ ಗರಂ - ರವೀಂದ್ರ ಜಡೇಜಾ ರನ್​ಔಟ್​ ವಿವಾದ

ಭಾರತದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ರನ್​ಗಾಗಿ ಓಡುವಾಗ ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರಾಸ್ಟನ್‌ ಚೇಸ್‌ ಡೈರೆಕ್ಟ್‌ ಹಿಟ್‌ ಮಾಡಿದ್ದರು. ಈ ವೇಳೆ ಅಂಪೈರ್​ ಬಳಿ ರನ್​ಔಟ್​ಗೆ ವಿಂಡೀಸ್​ ಆಟಗಾರರು ಮನವಿ ಮಾಡಿದರು. ಆದರೆ ಅಂಪೈರ್​ ಶಾನ್‌ ಜಾರ್ಜ್‌ ನಾಟೌಟ್​ ಎಂದು ತೀರ್ಪು ನೀಡಿದರು.

Jadeja's controversial run out
Kohli angry
author img

By

Published : Dec 16, 2019, 1:37 PM IST

ಚೆನ್ನೈ: ವಿಂಡೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ರನ್​ಔಟ್​ ವಿಚಾರದಲ್ಲಿ ಅಂಪೈರ್​ ತಗೆದುಕೊಂಡ ನಿರ್ಧಾರ ಭಾರತ ತಂಡದ ನಾಯಕ ಕೊಹ್ಲಿಯನ್ನು ಕೆರಳಿಸಿದೆ.

ಭಾರತದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ರನ್​ಗಾಗಿ ಓಡುವಾಗ ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರಾಸ್ಟನ್‌ ಚೇಸ್‌ ಡೈರೆಕ್ಟ್‌ ಹಿಟ್‌ ಮಾಡಿದ್ದರು. ಈ ವೇಳೆ ಅಂಪೈರ್​ ಬಳಿ ರನ್​ಔಟ್​ಗೆ ವಿಂಡೀಸ್​ ಆಟಗಾರರು ಮನವಿ ಮಾಡಿದರು. ಆದರೆ ಅಂಪೈರ್​ ಶಾನ್‌ ಜಾರ್ಜ್‌ ನಾಟೌಟ್​ ಎಂದು ತೀರ್ಪು ನೀಡಿದರು.

ಆದರೆ ಅಂಪೈರ್​ ಮೂರನೇ ಅಂಪೈರ್​ಗೆ ನೀಡದೇ ನೇರವಾಗಿ ನಾಟೌಟ್​​ ಎಂದು ತೀರ್ಪು ನೀಡಿದ್ದಕ್ಕೆ ವಿಂಡೀಸ್ ಆಟಗಾರರ​ ಅಸಮಧಾನ ವ್ಯಕ್ತಪಡಿಸಿದರು. ನಂತರ ಟಿವಿ ರಿಪ್ಲೇ ನೋಡಿದ ಜಾರ್ಜ್​ ತೀರ್ಪಿಗಾಗಿ ಕೊನೆಗೂ ಮೂರನೇ ಅಂಪೈರ್‌ ಮೊರೆ ಹೋದರು. ಮೊದಲು ನಾಟೌಟ್​ ನೀಡಿ ಮತ್ತೆ ಮೂರನೇ ಅಂಪೈರ್​ಗೆ ಮನವಿ ಮಾಡಿದ್ದರಿಂದ ಮೈದಾನದ ಅಂಪೈರ್ ಶಾನ್​ ಜಾರ್ಜ್​​ ವಿರುದ್ಧ ವಿರಾಟ್ ಕೊಹ್ಲಿ ಅಸಮಧಾನ ವ್ಯಕ್ತಪಡಿಸಿ ಕೋಪದಿಂದ ಡ್ರೆಸ್ಸಿಂಗ್​ ರೂಮ್​ನತ್ತ ತೆರಳಿದರು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಮೈದಾನದಲ್ಲಿರುವ ಫೀಲ್ಡರ್​ಗಳಿಗೆ ಹೊರಗೆ ಕುಳಿತಿರುವ ವ್ಯಕ್ತಿಗಳು ಅಂಪೈರ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೇಳುವುದು, ಆಟಗಾರರ ಒತ್ತಡಕ್ಕೆ ಮಣಿದು ಅಂಪೈರ್​ ತಮ್ಮ ತೀರ್ಪನ್ನು ಹಿಂತೆಗೆದುಕೊಂಡು ಥರ್ಡ್​ ಅಂಫೈರ್​ಗೆ ಮನವಿ ಮಾಡುವುದನ್ನು ಇದುವರೆಗೆ ಕ್ರಿಕೆಟ್​ನಲ್ಲಿ ನಾನು ಕಂಡಿರಲಿಲ್ಲ. ನಿಯಗಳೆಲ್ಲಾ ಎಲ್ಲಿ ಹೋದವು ಎಂಬುದು ನನಗೆ ಗೊತ್ತಾಗುತ್ತಿಲ್ಲ, ಅಂಪೈರ್ ಹಾಗೂ ರೆಫ್ರಿ ಇದರ ಕಡೆ ಗಮನ ನೀಡಬೇಕು ಎಂದು ಅವರು ಅಸಮಧಾನ ಹೊರ ಹಾಕಿದರು.

ಮೂರನೇ ಅಂಪೈರ್​ ರವೀಂದ್ರ ಜಡೇಜಾ ಔಟ್​ ಎಂದು ತೀರ್ಪು ನೀಡಿದ್ದಾರೆ. ಭಾರತ ತಂಡ ಪಂತ್​(71) ಅಯ್ಯರ್​(70) ಅವರ ಅರ್ಧಶತಕದ ನೆರವಿನಿಂದ 287 ರನ್​ಗಳಿಸಿತು. ಈ ಮೊತ್ತವನ್ನು ವಿಂಡೀಸ್​ ತಂಡ 2 ವಿಕೆಟ್​ ಕಳೆದುಕೊಂಡು 47.5 ಓವರ್​ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.

ಚೆನ್ನೈ: ವಿಂಡೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ರನ್​ಔಟ್​ ವಿಚಾರದಲ್ಲಿ ಅಂಪೈರ್​ ತಗೆದುಕೊಂಡ ನಿರ್ಧಾರ ಭಾರತ ತಂಡದ ನಾಯಕ ಕೊಹ್ಲಿಯನ್ನು ಕೆರಳಿಸಿದೆ.

ಭಾರತದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ರನ್​ಗಾಗಿ ಓಡುವಾಗ ವೆಸ್ಟ್‌ ಇಂಡೀಸ್‌ನ ಫೀಲ್ಡರ್‌ ರಾಸ್ಟನ್‌ ಚೇಸ್‌ ಡೈರೆಕ್ಟ್‌ ಹಿಟ್‌ ಮಾಡಿದ್ದರು. ಈ ವೇಳೆ ಅಂಪೈರ್​ ಬಳಿ ರನ್​ಔಟ್​ಗೆ ವಿಂಡೀಸ್​ ಆಟಗಾರರು ಮನವಿ ಮಾಡಿದರು. ಆದರೆ ಅಂಪೈರ್​ ಶಾನ್‌ ಜಾರ್ಜ್‌ ನಾಟೌಟ್​ ಎಂದು ತೀರ್ಪು ನೀಡಿದರು.

ಆದರೆ ಅಂಪೈರ್​ ಮೂರನೇ ಅಂಪೈರ್​ಗೆ ನೀಡದೇ ನೇರವಾಗಿ ನಾಟೌಟ್​​ ಎಂದು ತೀರ್ಪು ನೀಡಿದ್ದಕ್ಕೆ ವಿಂಡೀಸ್ ಆಟಗಾರರ​ ಅಸಮಧಾನ ವ್ಯಕ್ತಪಡಿಸಿದರು. ನಂತರ ಟಿವಿ ರಿಪ್ಲೇ ನೋಡಿದ ಜಾರ್ಜ್​ ತೀರ್ಪಿಗಾಗಿ ಕೊನೆಗೂ ಮೂರನೇ ಅಂಪೈರ್‌ ಮೊರೆ ಹೋದರು. ಮೊದಲು ನಾಟೌಟ್​ ನೀಡಿ ಮತ್ತೆ ಮೂರನೇ ಅಂಪೈರ್​ಗೆ ಮನವಿ ಮಾಡಿದ್ದರಿಂದ ಮೈದಾನದ ಅಂಪೈರ್ ಶಾನ್​ ಜಾರ್ಜ್​​ ವಿರುದ್ಧ ವಿರಾಟ್ ಕೊಹ್ಲಿ ಅಸಮಧಾನ ವ್ಯಕ್ತಪಡಿಸಿ ಕೋಪದಿಂದ ಡ್ರೆಸ್ಸಿಂಗ್​ ರೂಮ್​ನತ್ತ ತೆರಳಿದರು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಮೈದಾನದಲ್ಲಿರುವ ಫೀಲ್ಡರ್​ಗಳಿಗೆ ಹೊರಗೆ ಕುಳಿತಿರುವ ವ್ಯಕ್ತಿಗಳು ಅಂಪೈರ್​ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೇಳುವುದು, ಆಟಗಾರರ ಒತ್ತಡಕ್ಕೆ ಮಣಿದು ಅಂಪೈರ್​ ತಮ್ಮ ತೀರ್ಪನ್ನು ಹಿಂತೆಗೆದುಕೊಂಡು ಥರ್ಡ್​ ಅಂಫೈರ್​ಗೆ ಮನವಿ ಮಾಡುವುದನ್ನು ಇದುವರೆಗೆ ಕ್ರಿಕೆಟ್​ನಲ್ಲಿ ನಾನು ಕಂಡಿರಲಿಲ್ಲ. ನಿಯಗಳೆಲ್ಲಾ ಎಲ್ಲಿ ಹೋದವು ಎಂಬುದು ನನಗೆ ಗೊತ್ತಾಗುತ್ತಿಲ್ಲ, ಅಂಪೈರ್ ಹಾಗೂ ರೆಫ್ರಿ ಇದರ ಕಡೆ ಗಮನ ನೀಡಬೇಕು ಎಂದು ಅವರು ಅಸಮಧಾನ ಹೊರ ಹಾಕಿದರು.

ಮೂರನೇ ಅಂಪೈರ್​ ರವೀಂದ್ರ ಜಡೇಜಾ ಔಟ್​ ಎಂದು ತೀರ್ಪು ನೀಡಿದ್ದಾರೆ. ಭಾರತ ತಂಡ ಪಂತ್​(71) ಅಯ್ಯರ್​(70) ಅವರ ಅರ್ಧಶತಕದ ನೆರವಿನಿಂದ 287 ರನ್​ಗಳಿಸಿತು. ಈ ಮೊತ್ತವನ್ನು ವಿಂಡೀಸ್​ ತಂಡ 2 ವಿಕೆಟ್​ ಕಳೆದುಕೊಂಡು 47.5 ಓವರ್​ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.