ETV Bharat / sports

ರಣಜಿ ಟ್ರೋಫಿ 2019-20: ಹಿಮಾಚಲ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್​​​ ಹಿನ್ನಡೆ

author img

By

Published : Dec 26, 2019, 6:31 PM IST

ಮೊದಲು ಬ್ಯಾಟಿಂಗ್​ ನಡೆಸಿದ್ದ ಕರ್ನಾಟಕ ತಂಡ ಮೊದಲ ದಿನವೇ ಕನ್ವರ್​ ಅಭಿನಯ್​ ಸಿಂಗ್ ದಾಳಿಗೆ ಸಿಲುಕಿ ಕೇವಲ 166 ರನ್​ಗಳಿಗೆ ಆಲೌಟ್​ ಆಗಿತ್ತು. ನಾಯಕ ಕರುಣ್​ ನಾಯರ್​ ಏಕಾಂಗಿ ಹೋರಾಟ ನಡೆಸಿ 81 ರನ್​ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು.

Himachal Pradesh Karnataka in Ranji Trophy
Himachal Pradesh Karnataka in Ranji Trophy

ಮೈಸೂರು: ಕರ್ನಾಟಕ ತಂಡ ರಣಜಿ ಟ್ರೋಫಿಯ ತನ್ನ 3ನೇ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 69 ರನ್​ಗಳ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ್ದ ಕರ್ನಾಟಕ ತಂಡ ಮೊದಲ ದಿನವೇ ಕನ್ವರ್​ ಅಭಿನಯ್​ ಸಿಂಗ್ ದಾಳಿಗೆ ಸಿಲುಕಿ ಕೇವಲ 166 ರನ್​ಗಳಿಗೆ ಆಲೌಟ್​ ಆಗಿತ್ತು. ನಾಯಕ ಕರುಣ್​ ನಾಯರ್​ ಏಕಾಂಗಿ ಹೋರಾಟ ನಡೆಸಿ 81 ರನ್ ​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಹಿಮಾಚಲ ಪ್ರದೇಶದ ಬೌಲರ್​ಗಳಾದ ಕನ್ವರ್​ ಅಭಿನಯ್​ ಸಿಂಗ್​ 5 ವಿಕೆಟ್, ರಿಷಿ ಧವನ್​ 3 ಹಾಗೂ ವೈಭವ್​ ಅರೋರ 2 ವಿಕೆಟ್​ ಪಡೆದು ಕರ್ನಾಟಕ ಬ್ಯಾಟ್ಸ್​ಮನ್​ಗಳು 200ರ ಗಡಿ ದಾಟದಂತೆ ನೋಡಿಕೊಂಡರು.

ಇನ್ನು ಮೊದಲ ದಿನವೇ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಹಿಮಾಚಲ ಪ್ರದೇಶ 26ಕ್ಕೆ 3 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಪ್ರಿಯಾಂಶು ಖಂಡುರಿ 14 ಹಾಗೂ ಮಯಾಂಕ್​ ಡ್ಯಾಗರ್​ 1 ರನ್​ ಗಳಿಸಿ ಔಟಾಗದೆ ಉಳಿದಿದ್ದರು.

ಎರಡನೇ ದಿನವಾದ ಇಂದು ಆರಂಭದಲ್ಲಿ 4 ರನ್ ​ಗಳಿಸಿದ್ದ ಮಯಾಂಕ್ ಡ್ಯಾಗರ್​ರನ್ನು​ ಮಿಥುನ್​ ಔಟ್​ ಮಾಡುವಲ್ಲಿ ಯಶಸ್ವಿಯಾದರು. ಆದರೆ 6 ವಿಕೆಟ್​ಗೆ ಖಂಡುರಿ(69) ಹಾಗೂ ನಿಖಿಲ್​ ಗಂಗ್ಟ(46) 92 ರನ್​ ಸೇರಿಸಿ ಚೇತರಿಕೆ ನೀಡಿದರು. ಗಂಗ್ಟ ಔಟಾದ ನಂತರ ರಿಷಿಧವನ್ ಜೊತೆ ಸೇರಿದ ಖಂಡುರಿ ಬರೋಬ್ಬರಿ 240 ಎಸೆತಗಳನ್ನೆದುರಿಸಿ 8 ಬೌಂಡರಿ ಸಹಿತ 69 ರನ್ ​ಗಳಿಸಿ ಹಿಮಾಚಲ ಪ್ರದೇಶಕ್ಕೆ ಮುನ್ನಡೆ ಒದಗಿಸಿ ವಿ.ಕೌಶಿಕ್​ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 6 ರನ್ ​ಗಳಿಸಿ ಕೀಪರ್​ ಅಂಕುಶ್​ ಬೈನ್​ ಕೂಡ ಕೌಶಿಕ್​ಗೆ ವಿಕೆಟ್​ ಒಪ್ಪಿಸಿದರು.

ಆದರೆ ಹಿರಿಯ ಆಲ್​ರೌಂಡರ್​ ರಿಷಿ ಧವನ್​ ಔಟಾಗದೆ 72 ರನ್​ ಗಳಿಸಿ ಕರ್ನಾಟಕ ಬೌಲರ್​ಗಳನ್ನು ಕಾಡಿದ್ದಲ್ಲದೆ ಆಕಾಶ್​ ವಸಿಷ್ಠ (18) ಜೊತೆ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶ 7 ವಿಕೆಟ್​ ಕಳೆದುಕೊಂಡು 235 ರನ್ ​ಗಳಿಸಿದ್ದು, 69 ರನ್​ಗಳ ಲೀಡ್​ ಪಡೆದುಕೊಂಡಿದೆ.

ಕರ್ನಾಟಕ ಪರ ವಿ.ಕೌಶಿಕ್ 3 ವಿಕೆಟ್​, ಪ್ರತೀಕ್​ ಜೈನ್​ 2, ಸುಚಿತ್​ ಹಾಗೂ ಮಿಥನ್​ ತಲಾ ಒಂದು ವಿಕೆಟ್​ ಪಡೆದರು.​

ಮೈಸೂರು: ಕರ್ನಾಟಕ ತಂಡ ರಣಜಿ ಟ್ರೋಫಿಯ ತನ್ನ 3ನೇ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 69 ರನ್​ಗಳ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದೆ.

ಮೊದಲು ಬ್ಯಾಟಿಂಗ್​ ನಡೆಸಿದ್ದ ಕರ್ನಾಟಕ ತಂಡ ಮೊದಲ ದಿನವೇ ಕನ್ವರ್​ ಅಭಿನಯ್​ ಸಿಂಗ್ ದಾಳಿಗೆ ಸಿಲುಕಿ ಕೇವಲ 166 ರನ್​ಗಳಿಗೆ ಆಲೌಟ್​ ಆಗಿತ್ತು. ನಾಯಕ ಕರುಣ್​ ನಾಯರ್​ ಏಕಾಂಗಿ ಹೋರಾಟ ನಡೆಸಿ 81 ರನ್ ​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು.

ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಹಿಮಾಚಲ ಪ್ರದೇಶದ ಬೌಲರ್​ಗಳಾದ ಕನ್ವರ್​ ಅಭಿನಯ್​ ಸಿಂಗ್​ 5 ವಿಕೆಟ್, ರಿಷಿ ಧವನ್​ 3 ಹಾಗೂ ವೈಭವ್​ ಅರೋರ 2 ವಿಕೆಟ್​ ಪಡೆದು ಕರ್ನಾಟಕ ಬ್ಯಾಟ್ಸ್​ಮನ್​ಗಳು 200ರ ಗಡಿ ದಾಟದಂತೆ ನೋಡಿಕೊಂಡರು.

ಇನ್ನು ಮೊದಲ ದಿನವೇ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಹಿಮಾಚಲ ಪ್ರದೇಶ 26ಕ್ಕೆ 3 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಪ್ರಿಯಾಂಶು ಖಂಡುರಿ 14 ಹಾಗೂ ಮಯಾಂಕ್​ ಡ್ಯಾಗರ್​ 1 ರನ್​ ಗಳಿಸಿ ಔಟಾಗದೆ ಉಳಿದಿದ್ದರು.

ಎರಡನೇ ದಿನವಾದ ಇಂದು ಆರಂಭದಲ್ಲಿ 4 ರನ್ ​ಗಳಿಸಿದ್ದ ಮಯಾಂಕ್ ಡ್ಯಾಗರ್​ರನ್ನು​ ಮಿಥುನ್​ ಔಟ್​ ಮಾಡುವಲ್ಲಿ ಯಶಸ್ವಿಯಾದರು. ಆದರೆ 6 ವಿಕೆಟ್​ಗೆ ಖಂಡುರಿ(69) ಹಾಗೂ ನಿಖಿಲ್​ ಗಂಗ್ಟ(46) 92 ರನ್​ ಸೇರಿಸಿ ಚೇತರಿಕೆ ನೀಡಿದರು. ಗಂಗ್ಟ ಔಟಾದ ನಂತರ ರಿಷಿಧವನ್ ಜೊತೆ ಸೇರಿದ ಖಂಡುರಿ ಬರೋಬ್ಬರಿ 240 ಎಸೆತಗಳನ್ನೆದುರಿಸಿ 8 ಬೌಂಡರಿ ಸಹಿತ 69 ರನ್ ​ಗಳಿಸಿ ಹಿಮಾಚಲ ಪ್ರದೇಶಕ್ಕೆ ಮುನ್ನಡೆ ಒದಗಿಸಿ ವಿ.ಕೌಶಿಕ್​ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 6 ರನ್ ​ಗಳಿಸಿ ಕೀಪರ್​ ಅಂಕುಶ್​ ಬೈನ್​ ಕೂಡ ಕೌಶಿಕ್​ಗೆ ವಿಕೆಟ್​ ಒಪ್ಪಿಸಿದರು.

ಆದರೆ ಹಿರಿಯ ಆಲ್​ರೌಂಡರ್​ ರಿಷಿ ಧವನ್​ ಔಟಾಗದೆ 72 ರನ್​ ಗಳಿಸಿ ಕರ್ನಾಟಕ ಬೌಲರ್​ಗಳನ್ನು ಕಾಡಿದ್ದಲ್ಲದೆ ಆಕಾಶ್​ ವಸಿಷ್ಠ (18) ಜೊತೆ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶ 7 ವಿಕೆಟ್​ ಕಳೆದುಕೊಂಡು 235 ರನ್ ​ಗಳಿಸಿದ್ದು, 69 ರನ್​ಗಳ ಲೀಡ್​ ಪಡೆದುಕೊಂಡಿದೆ.

ಕರ್ನಾಟಕ ಪರ ವಿ.ಕೌಶಿಕ್ 3 ವಿಕೆಟ್​, ಪ್ರತೀಕ್​ ಜೈನ್​ 2, ಸುಚಿತ್​ ಹಾಗೂ ಮಿಥನ್​ ತಲಾ ಒಂದು ವಿಕೆಟ್​ ಪಡೆದರು.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.