ETV Bharat / sports

ಕೊಹ್ಲಿ ಹೇಳಿಕೆ ಪರ ನಿಂತು ಗವಾಸ್ಕರ್​ ಟೀಕೆಗೆ ಟಕ್ಕರ್​ ನೀಡಿದ ಗಂಭೀರ್!

ಭಾರತ ತಂಡ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದಿದ್ದು ಗಂಗೂಲಿ ನಾಯಕನಾದ ಮೇಲೆ ಎಂದು ಹೇಳಿಕೆ ನೀಡಿ ಗವಾಸ್ಕರ್​ ಟೀಕೆಯನ್ನು ಗಂಭೀರ್​ ಅಲ್ಲಗಳೆದಿದ್ದಾರೆ.

author img

By

Published : Nov 27, 2019, 5:17 PM IST

Gautam Gambhir kohli
Gautam Gambhir kohli

ಮುಂಬೈ: ದಾದಾ ನಾಯಕತ್ವದ ನಂತರ ಭಾರತ ತಂಡ ಬಲಿಷ್ಠವಾಯಿತು, ವಿದೇಶಗಳಲ್ಲಿ ಟೆಸ್ಟ್​ ಪಂದ್ಯಗಳನ್ನು ಗೆಲ್ಲುವಂತಾಯಿತು. ನಾವು ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಬಾಂಗ್ಲಾ ದೇಶದ ಪರ ಹಗಲು ರಾತ್ರಿ ಟೆಸ್ಟ್​ ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದರು.

ಕ್ಯಾಪ್ಟನ್‌ ಕೊಹ್ಲಿ ನೀಡಿದ್ದ ಈ ಹೇಳಿಕೆಯಿಂದ ಸಿಟ್ಟಿಗೆದ್ದ ಗವಾಸ್ಕರ್​ ಭಾರತ ತಂಡ 70-80ರಲ್ಲಿ ವಿದೇಶಗಳಲ್ಲಿ ಟೆಸ್ಟ್​ ಪಂದ್ಯಗಳನ್ನು ಗೆದ್ದಿತ್ತು. ಆಗ ಕೊಹ್ಲಿ ಇನ್ನೂ ಹುಟ್ಟಿರಲಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಅವರನ್ನು ಮೆಚ್ಚಿಸಲು ಕೊಹ್ಲಿ ಆ ರೀತಿ ಹೇಳಿದ್ದಾರೋ, ಏನೋ? ಎಂದು ಕಿಡಿಕಾಡಿದ್ದರು.

ಆದರೆ, ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಗಂಭೀರ್​, ದಾದಾ ಕುರಿತು ಕೊಹ್ಲಿ ಹೇಳಿಕೆ ಆತನ ವೈಯಕ್ತಿಕ ಆಲೋಚನೆ. ಆದರೆ, ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಭಾರತ ತಂಡ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದಿರೋದು ಗಂಗೂಲಿ ನಾಯಕನಾದ ಮೇಲೆ ಎಂದಿದ್ದಾರೆ.

ಗವಾಸ್ಕರ್​ ಮತ್ತು ಕಪಿಲ್​ದೇವ್​ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ ಎಲ್ಲಾ ತಂಡಗಳ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಆದರೆ, ಗಂಗೂಲಿ ನೇತೃತ್ವದಲ್ಲಿ ಭಾರತದಿಂದಾಚೆಗೆ ಟೆಸ್ಟ್​ ಪಂದ್ಯಗಳನ್ನು ಗೆಲ್ಲಲು ಶುರು ಮಾಡಿದೆವು. ನಾನು ಕೊಹ್ಲಿ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿ ಕೊಹ್ಲಿಯನ್ನು ಬೆಂಬಲಿಸಿ ಗವಾಸ್ಕರ್​ ಟೀಕೆಗೆ ಸಡ್ಡು ಹೊಡೆದಿದ್ದಾರೆ ಗೌತಮ್‌ ಗಂಭೀರ.

ಮುಂಬೈ: ದಾದಾ ನಾಯಕತ್ವದ ನಂತರ ಭಾರತ ತಂಡ ಬಲಿಷ್ಠವಾಯಿತು, ವಿದೇಶಗಳಲ್ಲಿ ಟೆಸ್ಟ್​ ಪಂದ್ಯಗಳನ್ನು ಗೆಲ್ಲುವಂತಾಯಿತು. ನಾವು ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಬಾಂಗ್ಲಾ ದೇಶದ ಪರ ಹಗಲು ರಾತ್ರಿ ಟೆಸ್ಟ್​ ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದರು.

ಕ್ಯಾಪ್ಟನ್‌ ಕೊಹ್ಲಿ ನೀಡಿದ್ದ ಈ ಹೇಳಿಕೆಯಿಂದ ಸಿಟ್ಟಿಗೆದ್ದ ಗವಾಸ್ಕರ್​ ಭಾರತ ತಂಡ 70-80ರಲ್ಲಿ ವಿದೇಶಗಳಲ್ಲಿ ಟೆಸ್ಟ್​ ಪಂದ್ಯಗಳನ್ನು ಗೆದ್ದಿತ್ತು. ಆಗ ಕೊಹ್ಲಿ ಇನ್ನೂ ಹುಟ್ಟಿರಲಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಅವರನ್ನು ಮೆಚ್ಚಿಸಲು ಕೊಹ್ಲಿ ಆ ರೀತಿ ಹೇಳಿದ್ದಾರೋ, ಏನೋ? ಎಂದು ಕಿಡಿಕಾಡಿದ್ದರು.

ಆದರೆ, ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಗಂಭೀರ್​, ದಾದಾ ಕುರಿತು ಕೊಹ್ಲಿ ಹೇಳಿಕೆ ಆತನ ವೈಯಕ್ತಿಕ ಆಲೋಚನೆ. ಆದರೆ, ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಭಾರತ ತಂಡ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದಿರೋದು ಗಂಗೂಲಿ ನಾಯಕನಾದ ಮೇಲೆ ಎಂದಿದ್ದಾರೆ.

ಗವಾಸ್ಕರ್​ ಮತ್ತು ಕಪಿಲ್​ದೇವ್​ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ ಎಲ್ಲಾ ತಂಡಗಳ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಆದರೆ, ಗಂಗೂಲಿ ನೇತೃತ್ವದಲ್ಲಿ ಭಾರತದಿಂದಾಚೆಗೆ ಟೆಸ್ಟ್​ ಪಂದ್ಯಗಳನ್ನು ಗೆಲ್ಲಲು ಶುರು ಮಾಡಿದೆವು. ನಾನು ಕೊಹ್ಲಿ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿ ಕೊಹ್ಲಿಯನ್ನು ಬೆಂಬಲಿಸಿ ಗವಾಸ್ಕರ್​ ಟೀಕೆಗೆ ಸಡ್ಡು ಹೊಡೆದಿದ್ದಾರೆ ಗೌತಮ್‌ ಗಂಭೀರ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.