ETV Bharat / sports

ಬಿಸಿಸಿಐ ನನ್ನ ಉದ್ಯೋಗ ಕೊನೆಗಾಣಿಸಲು ನಿರ್ಧರಿಸಿದೆ: ಜಿಎಂ ಕೆವಿಪಿ ರಾವ್​

author img

By

Published : Dec 24, 2020, 5:19 PM IST

ಈ ಉದ್ಯೋಗದಿಂದ ಮುಕ್ತಾಯ ಹೊಂದುತ್ತಿರುವುದರಿಂದ ತಮ್ಮ ವೃತ್ತಿಪರ ಕೌಶಲ್ಯಗಳನ್ನು ಬೇರೆಡೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಿದೆ. ಹಾಗಾಗಿ ಈ ದಿನ ನನ್ನ ಜೀವನದ ಅತ್ಯುತ್ತಮ ದಿನ ವಿವಿಧ ರಾಜ್ಯ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ರಾವ್​​ ತಿಳಿಸಿದ್ದಾರೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ
ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ

ಮುಂಬೈ: ಕಳೆದ 10 ವರ್ಷಗಳಿಂದ ಬಿಸಿಸಿಐನಲ್ಲಿ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದ ಜಿಎಂ ಕೆವಿಪಿ ರಾವ್​ ಅವರನ್ನು ಹುದ್ದೆಯಿಂದ ಹೊರ ಹೋಗುವಂತೆ ಬಿಸಿಸಿಐ ಕೇಳಿಕೊಂಡಿದೆ ಎಂದು ರಾವ್​ ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಂಟಲ್​ ಮ್ಯಾನ್​ ಗೇಮ್​ಗೆ ಕೊಡುಗೆ ನೀಡಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ತಿಳಿಸಿದ್ದಾರೆ.

ಈ ಉದ್ಯೋಗದಿಂದ ಮುಕ್ತಾಯ ಹೊಂದುತ್ತಿರುವುದರಿಂದ ತಮ್ಮ ವೃತ್ತಿಪರ ಕೌಶಲ್ಯಗಳನ್ನು ಬೇರೆಡೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಿದೆ. ಹಾಗಾಗಿ ಈ ದಿನ ನನ್ನ ಜೀವನದ ಅತ್ಯತ್ತಮ ದಿನ ವಿವಿಧ ರಾಜ್ಯ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ರಾವ್​​ ತಿಳಿಸಿದ್ದಾರೆ.

" ಬಿಸಿಸಿಐ ಡಿಸೆಂಬರ್​ 22, 2020ರಂದು ನನ್ನ ಉದ್ಯೋಗವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಈ ಅಂತ್ಯ ನನಗೆ ಬೇರೆಕಡೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶನ್ನು ಮಾಡಿಕೊಡಲಿದೆ ಎಂದು ಭಾವಿಸಿದ್ದೇನೆ. ಇದು ನನ್ನ ಜೀವನದ ಅತ್ಯುತ್ತಮ ದಿನ" ಎಂದು ಅವರು ಬರೆದು ಕೊಂಡಿದ್ದಾರೆ.

ರಾವ್​ ಭಾರತದಲ್ಲಿ 2013ರ ಮಹಿಳಾ ವಿಶ್ವಕಪ್​ ಮತ್ತು 2016ರ ಪುರುಷರ ಟಿ-20 ವಿಶ್ವಕಪ್​ ಆಯೋಜನೆಯಲ್ಲಿ ಬಿಸಿಸಿಐನ ಟೂರ್ನಮೆಂಟ್​ ಆಪರೇಷನ್ ಮ್ಯಾನೇಜರ್​ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಳೆದ 10 ವರ್ಷಗಳಿಂದ ಸುಮಾರು 2000ಕ್ಕೂ ಹೆಚ್ಚು ದೇಶಿ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ತಮ್ಮ ಈ ಕಾರ್ಯ ಯಶಸ್ವಿಯಾಗಲು ನೆರವಾದ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಮುಂಬೈ: ಕಳೆದ 10 ವರ್ಷಗಳಿಂದ ಬಿಸಿಸಿಐನಲ್ಲಿ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದ ಜಿಎಂ ಕೆವಿಪಿ ರಾವ್​ ಅವರನ್ನು ಹುದ್ದೆಯಿಂದ ಹೊರ ಹೋಗುವಂತೆ ಬಿಸಿಸಿಐ ಕೇಳಿಕೊಂಡಿದೆ ಎಂದು ರಾವ್​ ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಂಟಲ್​ ಮ್ಯಾನ್​ ಗೇಮ್​ಗೆ ಕೊಡುಗೆ ನೀಡಲು ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ತಿಳಿಸಿದ್ದಾರೆ.

ಈ ಉದ್ಯೋಗದಿಂದ ಮುಕ್ತಾಯ ಹೊಂದುತ್ತಿರುವುದರಿಂದ ತಮ್ಮ ವೃತ್ತಿಪರ ಕೌಶಲ್ಯಗಳನ್ನು ಬೇರೆಡೆ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಿದೆ. ಹಾಗಾಗಿ ಈ ದಿನ ನನ್ನ ಜೀವನದ ಅತ್ಯತ್ತಮ ದಿನ ವಿವಿಧ ರಾಜ್ಯ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ರಾವ್​​ ತಿಳಿಸಿದ್ದಾರೆ.

" ಬಿಸಿಸಿಐ ಡಿಸೆಂಬರ್​ 22, 2020ರಂದು ನನ್ನ ಉದ್ಯೋಗವನ್ನು ಕೊನೆಗೊಳಿಸಲು ನಿರ್ಧರಿಸಿದೆ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಈ ಅಂತ್ಯ ನನಗೆ ಬೇರೆಕಡೆ ವೃತ್ತಿಪರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಅವಕಾಶನ್ನು ಮಾಡಿಕೊಡಲಿದೆ ಎಂದು ಭಾವಿಸಿದ್ದೇನೆ. ಇದು ನನ್ನ ಜೀವನದ ಅತ್ಯುತ್ತಮ ದಿನ" ಎಂದು ಅವರು ಬರೆದು ಕೊಂಡಿದ್ದಾರೆ.

ರಾವ್​ ಭಾರತದಲ್ಲಿ 2013ರ ಮಹಿಳಾ ವಿಶ್ವಕಪ್​ ಮತ್ತು 2016ರ ಪುರುಷರ ಟಿ-20 ವಿಶ್ವಕಪ್​ ಆಯೋಜನೆಯಲ್ಲಿ ಬಿಸಿಸಿಐನ ಟೂರ್ನಮೆಂಟ್​ ಆಪರೇಷನ್ ಮ್ಯಾನೇಜರ್​ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಳೆದ 10 ವರ್ಷಗಳಿಂದ ಸುಮಾರು 2000ಕ್ಕೂ ಹೆಚ್ಚು ದೇಶಿ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದರು. ತಮ್ಮ ಈ ಕಾರ್ಯ ಯಶಸ್ವಿಯಾಗಲು ನೆರವಾದ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.