ETV Bharat / sports

ತಮ್ಮನ ಅಗಲಿಕೆಯ ನೋವಿನಿಂದ ಹೊರಬರುವ ಮೊದಲೇ ತಂದೆಯನ್ನೂ ಕಳೆದುಕೊಂಡ ಸಕಾರಿಯಾ

author img

By

Published : May 9, 2021, 3:02 PM IST

Updated : May 9, 2021, 4:27 PM IST

ತಮ್ಮನ ಅಗಲಿಕೆಯ ನೋವಲ್ಲಿರುವ ಕ್ರಿಕೆಟಿಗ ಸಕಾರಿಯಾಗೆ ಮತ್ತೊಂದು ಆಘಾತವಾಗಿದೆ. ಅವರೀಗ ತಂದೆಯನ್ನೂ ಕಳೆದುಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ದುಃಖದ ವಿಚಾರವನ್ನು ದೃಢಪಡಿಸಿದೆ. " ಇದು ದುರದೃಷ್ಟಕರವಾಗಿದೆ, ಈ ಸಂದರ್ಭದಲ್ಲಿ ಸಕಾರಿಯಾ ಕುಟುಂಬದ ಜೊತೆ ನಮ್ಮ ಪ್ರಾರ್ಥನೆ ಇರಲಿದೆ" ಎಂದು ರಾಯಲ್ಸ್ ಮೂಲ ತಿಳಿಸಿದೆ.

ಚೇತನ್ ಸಕಾರಿಯಾ
ಚೇತನ್ ಸಕಾರಿಯಾ

ನವದೆಹಲಿ: ತಮ್ಮನ ಅಗಲಿಕೆಯ ನೋವಿನಿಂದ ಈಗಷ್ಟೇ ಹೊರಬರುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಚೇತನ್ ಸಕಾರಿಯಾ ಇದೀಗ ಅವರ ತಂದೆಯನ್ನು ಕಳೆದುಕೊಂಡಿದ್ದಾರೆ. ಭಾನುವಾರ ಕೋವಿಡ್ 19 ಸೋಂಕಿಗೆ ಸಕಾರಿಯಾ ಅವರ ತಂದೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ದುಃಖದ ವಿಚಾರವನ್ನು ದೃಢಪಡಿಸಿದೆ. " ಇದು ದುರದೃಷ್ಟಕರವಾಗಿದೆ, ಈ ಸಂದರ್ಭದಲ್ಲಿ ಸಕಾರಿಯಾ ಕುಟುಂಬದ ಜೊತೆ ನಮ್ಮ ಪ್ರಾರ್ಥನೆ ಇರಲಿದೆ" ಎಂದು ರಾಯಲ್ಸ್ ಮೂಲ ತಿಳಿಸಿದೆ.

ಐಪಿಎಲ್ ಕೋವಿಡ್​ 19 ಕಾರಣ ರದ್ದಾದ ಬಳಿಕ ಮನೆಗೆ ತೆರಳಿದ ಚೇತನ್ ಸಕಾರಿಯಾ ಅವರು ಕೊರೊನಾ ವೈರಸ್ ತಗುಲಿದ ತಂದೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ನಡೆಸಿದರು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ಚೇತನ್ ಸಕಾರಿಯಾ ಅವರಿಗೆ ಸಂಭಾವನೆಯ ಒಂದು ಭಾಗವನ್ನು ಸಹ ನೀಡಿತ್ತು. ಆದರೆ ವಿಧಿಯಾಟ ಸಕಾರಿಯಾ ತಂದೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಈ ವರ್ಷ ಮೊಟಕುಗೊಂಡ ಐಪಿಎಲ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದ ಸಕಾರಿಯಾ ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ವೇಳೆ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು.

ದೇಶವನ್ನೇ ತಲ್ಲಣಗೊಳಿಸುತ್ತಿರುವ ಈ ಸಾಂಕ್ರಾಮಿಕ ರೋಗ ಇತ್ತೀಚೆಗೆ ಭಾರತ ತಂಡದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ತಾಯಿ ಮತ್ತು ಅಕ್ಕ ವತ್ಸಲ ಅವರನ್ನು ಬಲಿ ತೆಗೆದುಕೊಂಡಿತ್ತು.

ನವದೆಹಲಿ: ತಮ್ಮನ ಅಗಲಿಕೆಯ ನೋವಿನಿಂದ ಈಗಷ್ಟೇ ಹೊರಬರುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಚೇತನ್ ಸಕಾರಿಯಾ ಇದೀಗ ಅವರ ತಂದೆಯನ್ನು ಕಳೆದುಕೊಂಡಿದ್ದಾರೆ. ಭಾನುವಾರ ಕೋವಿಡ್ 19 ಸೋಂಕಿಗೆ ಸಕಾರಿಯಾ ಅವರ ತಂದೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ದುಃಖದ ವಿಚಾರವನ್ನು ದೃಢಪಡಿಸಿದೆ. " ಇದು ದುರದೃಷ್ಟಕರವಾಗಿದೆ, ಈ ಸಂದರ್ಭದಲ್ಲಿ ಸಕಾರಿಯಾ ಕುಟುಂಬದ ಜೊತೆ ನಮ್ಮ ಪ್ರಾರ್ಥನೆ ಇರಲಿದೆ" ಎಂದು ರಾಯಲ್ಸ್ ಮೂಲ ತಿಳಿಸಿದೆ.

ಐಪಿಎಲ್ ಕೋವಿಡ್​ 19 ಕಾರಣ ರದ್ದಾದ ಬಳಿಕ ಮನೆಗೆ ತೆರಳಿದ ಚೇತನ್ ಸಕಾರಿಯಾ ಅವರು ಕೊರೊನಾ ವೈರಸ್ ತಗುಲಿದ ತಂದೆಯನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟವನ್ನು ನಡೆಸಿದರು. ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಕೂಡ ಚೇತನ್ ಸಕಾರಿಯಾ ಅವರಿಗೆ ಸಂಭಾವನೆಯ ಒಂದು ಭಾಗವನ್ನು ಸಹ ನೀಡಿತ್ತು. ಆದರೆ ವಿಧಿಯಾಟ ಸಕಾರಿಯಾ ತಂದೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಈ ವರ್ಷ ಮೊಟಕುಗೊಂಡ ಐಪಿಎಲ್​ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದ ಸಕಾರಿಯಾ ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ವೇಳೆ ತಮ್ಮ ಸಹೋದರನನ್ನು ಕಳೆದುಕೊಂಡಿದ್ದರು.

ದೇಶವನ್ನೇ ತಲ್ಲಣಗೊಳಿಸುತ್ತಿರುವ ಈ ಸಾಂಕ್ರಾಮಿಕ ರೋಗ ಇತ್ತೀಚೆಗೆ ಭಾರತ ತಂಡದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ತಾಯಿ ಮತ್ತು ಅಕ್ಕ ವತ್ಸಲ ಅವರನ್ನು ಬಲಿ ತೆಗೆದುಕೊಂಡಿತ್ತು.

Last Updated : May 9, 2021, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.