ETV Bharat / sports

ಅಂದು ಪಾಕ್‌ ವಿರುದ್ಧವೇ ಗಾಯಗೊಂಡು ಸ್ಟ್ರೆಚರ್‌ನಲ್ಲಿ ಹೊರಬಿದ್ದ ಪಾಂಡ್ಯ ನಿನ್ನೆ ಬಿದ್ದಲ್ಲೇ ಬೆಳೆದು ನಿಂತರು!

ಯಾವುದೇ ಹಿನ್ನಡೆಗಿಂತಲೂ ಪುನರಾಗಮನ ಬಹಳ ದೊಡ್ಡದು ಎಂದು ಹೇಳಿರುವ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ, ಪಾಕ್​​ ವಿರುದ್ಧ ಅಬ್ಬರಿಸಿದ ಬಳಿಕ ಈ ಫೋಟೋ ಹಂಚಿಕೊಂಡರು.

author img

By

Published : Aug 29, 2022, 8:14 PM IST

Hardik pandya tweet
Hardik pandya tweet

ದುಬೈ(ಯುಎಇ): ಏಷ್ಯಾ ಕಪ್​​​ನ ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿರುವ ಹಾರ್ದಿಕ್ ಪಾಂಡ್ಯ ಇದೀಗ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಪಾಲಿನ ಹೀರೋ. ಬೌಲಿಂಗ್​​​ ಹಾಗೂ ಬ್ಯಾಟಿಂಗ್​​​ ಎರಡರಲ್ಲೂ ಜವಾಬ್ದಾರಿಯತ ಆಟವಾಡಿರುವ ಈ ಪ್ಲೇಯರ್​ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿ ಅದರಲ್ಲಿ ಯಶಸ್ಸು ಕಂಡರು. ಇದರ ಬೆನ್ನಲ್ಲೇ ಮಹತ್ವದ ಟ್ವೀಟ್​ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಟ್ವೀಟ್ ಏನು?​: ಪಾಕಿಸ್ತಾನ​​ ವಿರುದ್ಧದ ಏಷ್ಯಾ ಕಪ್​​​​ ಪಂದ್ಯದಲ್ಲೇ ಗಾಯಗೊಂಡು ಕ್ರಿಕೆಟ್​​ನಿಂದ ಹೊರಬಿದ್ದಿದ್ದ ಪಾಂಡ್ಯ, ಇದೀಗ ಅದೇ ತಂಡದ ವಿರುದ್ಧ ಅಬ್ಬರಿಸಿ ಗೆಲುವಿನ ಸಂಭ್ರಮ ಮಾಡ್ತಿರುವ ಚಿತ್ರ ಟ್ವೀಟ್ ಇದಾಗಿದೆ. ಈ ಫೋಟೋಗೆ ಯಾವುದೇ 'ಹಿನ್ನಡೆಗಿಂತ ಪುನರಾಗಮನ ದೊಡ್ಡದು' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಬಿದ್ದಲ್ಲೇ ಬೆಳೆದು ನಿಲ್ಲಬೇಕು ಎಂಬ ಸಂದೇಶ ರವಾನಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಕ್ರಿಕೆಟ್​ ಜೀವನ ಹೂವಿನ ಹಾಸಿಗೆ ಆಗಿಲ್ಲ. ಅನೇಕ ಏಳು-ಬೀಳು ಕಂಡಿರುವ ಅವರು, ಕಳೆದ ಕೆಲ ವರ್ಷಗಳ ಹಿಂದೆ ತಂಡದಿಂದ ಸಂಪೂರ್ಣವಾಗಿ ಸೈಡ್​ಲೈನ್​ ಆಗಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದಿನ ಕಥೆಯಿದು. ಏಷ್ಯಾಕಪ್​​​​ನಲ್ಲಿ ಬೆನ್ನುನೋವಿನ ಸಮಸ್ಯೆಗೊಳಗಾಗಿದ್ದ ಪಾಂಡ್ಯ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ನಡೆಯಲೂ ಸಾಧ್ಯವಾಗದ ಅವರನ್ನು ಸ್ಟ್ರೆಚರ್​​​​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಸ್ಟ್ರೇಚರ್​​ ಮೇಲೆ ಹೊರಹೋಗಿದ್ದ ಪಾಂಡ್ಯ: ನಾಲ್ಕು ವರ್ಷಗಳ ಹಿಂದೆ ಪಾಕ್​ ವಿರುದ್ಧ ನಡೆದ ಏಷ್ಯಾಕಪ್​​ನಲ್ಲಿ ನಡೆದ ಘಟನೆ ಇದಾಗಿದೆ. 18ನೇ ಓವರ್​ ಎಸೆಯಲು ಬಂದಿದ್ದ ಪಾಂಡ್ಯ, ಬೆನ್ನು ನೋವಿನ ಕಾರಣ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಸ್ಟ್ರೇಚರ್​ ಮೇಲೆ ಮಲಗಿಸಿ ಹೊರಗಡೆ ತೆಗೆದುಕೊಂಡು ಹೋಗಲಾಗಿತ್ತು. ಇದಾದ ಬಳಿಕ ಇಂಗ್ಲೆಂಡ್​​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ, ಕೆಲ ತಿಂಗಳ ಕಾಲ ಕ್ರಿಕೆಟ್​​ನಿಂದ ದೂರ ಉಳಿಯುತ್ತಾರೆ. 2019ರ ಏಕದಿನ ಕ್ರಿಕೆಟ್​​ಗೆ ಪಾಂಡ್ಯ ಕಮ್​​​ಬ್ಯಾಕ್​ ಮಾಡಿದ್ರೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಅವರಿಂದ ಮೂಡಿ ಬರುವುದಿಲ್ಲ. ಇದಾದ ಬಳಿಕ ಅವರು ಅನೇಕ ನೋವು ಅನುಭವಿಸಿದ್ದು, ಟೀಕಾಕಾರರಿಂದಲೂ ಆಕ್ರೋಶಕ್ಕೊಳಗಾಗಿದ್ದರು.

ಇದನ್ನೂ ಓದಿ: Asia Cup 2022: ಹಾರ್ದಿಕ್​ ಆಟಕ್ಕೆ ತಲೆಬಾಗಿ ಮೆಚ್ಚುಗೆ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್‌.. ವಿಡಿಯೋ ನೋಡಿ

ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್​​​ನಲ್ಲಿ ಅವರು ಬೌಲಿಂಗ್​ ಮಾಡದ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಕ್ರಿಕೆಟ್​​ನಿಂದ ಹೊರಗುಳಿಯುತ್ತಾರೆ. ತದನಂತರ ಐಪಿಎಲ್​​ ಮೂಲಕ ಗುಜರಾತ್​ ತಂಡದ ನಾಯಕತ್ವ ವಹಿಸಿಕೊಂಡು ಕ್ರಿಕೆಟ್​​ಗೆ ರೀ ಎಂಟ್ರಿ ಮಾಡ್ತಾರೆ. ಐಪಿಎಲ್​​ನಲ್ಲಿ ಬೌಲಿಂಗ್​ ಹಾಗೂ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿ ತಂಡವನ್ನು ಚಾಂಪಿಯನ್​​ಗೇರಿಸಿ, ಟೀಕಾಕಾರರ ಬಾಯಿ ಮುಚ್ಚಿಸುತ್ತಾರೆ. ಅಷ್ಟೇ ಅಲ್ಲ, ಐರ್ಲೆಂಡ್​ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇದೀಗ ಪಾಕಿಸ್ತಾನ್ ವಿರುದ್ಧ ಅಬ್ಬರಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.

ದುಬೈ(ಯುಎಇ): ಏಷ್ಯಾ ಕಪ್​​​ನ ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿರುವ ಹಾರ್ದಿಕ್ ಪಾಂಡ್ಯ ಇದೀಗ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಪಾಲಿನ ಹೀರೋ. ಬೌಲಿಂಗ್​​​ ಹಾಗೂ ಬ್ಯಾಟಿಂಗ್​​​ ಎರಡರಲ್ಲೂ ಜವಾಬ್ದಾರಿಯತ ಆಟವಾಡಿರುವ ಈ ಪ್ಲೇಯರ್​ ಹೈವೋಲ್ಟೇಜ್​ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿ ಅದರಲ್ಲಿ ಯಶಸ್ಸು ಕಂಡರು. ಇದರ ಬೆನ್ನಲ್ಲೇ ಮಹತ್ವದ ಟ್ವೀಟ್​ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಟ್ವೀಟ್ ಏನು?​: ಪಾಕಿಸ್ತಾನ​​ ವಿರುದ್ಧದ ಏಷ್ಯಾ ಕಪ್​​​​ ಪಂದ್ಯದಲ್ಲೇ ಗಾಯಗೊಂಡು ಕ್ರಿಕೆಟ್​​ನಿಂದ ಹೊರಬಿದ್ದಿದ್ದ ಪಾಂಡ್ಯ, ಇದೀಗ ಅದೇ ತಂಡದ ವಿರುದ್ಧ ಅಬ್ಬರಿಸಿ ಗೆಲುವಿನ ಸಂಭ್ರಮ ಮಾಡ್ತಿರುವ ಚಿತ್ರ ಟ್ವೀಟ್ ಇದಾಗಿದೆ. ಈ ಫೋಟೋಗೆ ಯಾವುದೇ 'ಹಿನ್ನಡೆಗಿಂತ ಪುನರಾಗಮನ ದೊಡ್ಡದು' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಬಿದ್ದಲ್ಲೇ ಬೆಳೆದು ನಿಲ್ಲಬೇಕು ಎಂಬ ಸಂದೇಶ ರವಾನಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಕ್ರಿಕೆಟ್​ ಜೀವನ ಹೂವಿನ ಹಾಸಿಗೆ ಆಗಿಲ್ಲ. ಅನೇಕ ಏಳು-ಬೀಳು ಕಂಡಿರುವ ಅವರು, ಕಳೆದ ಕೆಲ ವರ್ಷಗಳ ಹಿಂದೆ ತಂಡದಿಂದ ಸಂಪೂರ್ಣವಾಗಿ ಸೈಡ್​ಲೈನ್​ ಆಗಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದಿನ ಕಥೆಯಿದು. ಏಷ್ಯಾಕಪ್​​​​ನಲ್ಲಿ ಬೆನ್ನುನೋವಿನ ಸಮಸ್ಯೆಗೊಳಗಾಗಿದ್ದ ಪಾಂಡ್ಯ ಮೈದಾನದಲ್ಲೇ ಕುಸಿದು ಬಿದ್ದಿದ್ದರು. ನಡೆಯಲೂ ಸಾಧ್ಯವಾಗದ ಅವರನ್ನು ಸ್ಟ್ರೆಚರ್​​​​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಸ್ಟ್ರೇಚರ್​​ ಮೇಲೆ ಹೊರಹೋಗಿದ್ದ ಪಾಂಡ್ಯ: ನಾಲ್ಕು ವರ್ಷಗಳ ಹಿಂದೆ ಪಾಕ್​ ವಿರುದ್ಧ ನಡೆದ ಏಷ್ಯಾಕಪ್​​ನಲ್ಲಿ ನಡೆದ ಘಟನೆ ಇದಾಗಿದೆ. 18ನೇ ಓವರ್​ ಎಸೆಯಲು ಬಂದಿದ್ದ ಪಾಂಡ್ಯ, ಬೆನ್ನು ನೋವಿನ ಕಾರಣ ಮೈದಾನದಲ್ಲಿ ಕುಸಿದು ಬಿದ್ದಿದ್ದರು. ಅವರನ್ನು ಸ್ಟ್ರೇಚರ್​ ಮೇಲೆ ಮಲಗಿಸಿ ಹೊರಗಡೆ ತೆಗೆದುಕೊಂಡು ಹೋಗಲಾಗಿತ್ತು. ಇದಾದ ಬಳಿಕ ಇಂಗ್ಲೆಂಡ್​​ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿ, ಕೆಲ ತಿಂಗಳ ಕಾಲ ಕ್ರಿಕೆಟ್​​ನಿಂದ ದೂರ ಉಳಿಯುತ್ತಾರೆ. 2019ರ ಏಕದಿನ ಕ್ರಿಕೆಟ್​​ಗೆ ಪಾಂಡ್ಯ ಕಮ್​​​ಬ್ಯಾಕ್​ ಮಾಡಿದ್ರೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ಅವರಿಂದ ಮೂಡಿ ಬರುವುದಿಲ್ಲ. ಇದಾದ ಬಳಿಕ ಅವರು ಅನೇಕ ನೋವು ಅನುಭವಿಸಿದ್ದು, ಟೀಕಾಕಾರರಿಂದಲೂ ಆಕ್ರೋಶಕ್ಕೊಳಗಾಗಿದ್ದರು.

ಇದನ್ನೂ ಓದಿ: Asia Cup 2022: ಹಾರ್ದಿಕ್​ ಆಟಕ್ಕೆ ತಲೆಬಾಗಿ ಮೆಚ್ಚುಗೆ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್‌.. ವಿಡಿಯೋ ನೋಡಿ

ಕಳೆದ ವರ್ಷ ದುಬೈನಲ್ಲಿ ನಡೆದ ವಿಶ್ವಕಪ್​​​ನಲ್ಲಿ ಅವರು ಬೌಲಿಂಗ್​ ಮಾಡದ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಕ್ರಿಕೆಟ್​​ನಿಂದ ಹೊರಗುಳಿಯುತ್ತಾರೆ. ತದನಂತರ ಐಪಿಎಲ್​​ ಮೂಲಕ ಗುಜರಾತ್​ ತಂಡದ ನಾಯಕತ್ವ ವಹಿಸಿಕೊಂಡು ಕ್ರಿಕೆಟ್​​ಗೆ ರೀ ಎಂಟ್ರಿ ಮಾಡ್ತಾರೆ. ಐಪಿಎಲ್​​ನಲ್ಲಿ ಬೌಲಿಂಗ್​ ಹಾಗೂ ಬ್ಯಾಟಿಂಗ್​​ನಲ್ಲಿ ಅಬ್ಬರಿಸಿ ತಂಡವನ್ನು ಚಾಂಪಿಯನ್​​ಗೇರಿಸಿ, ಟೀಕಾಕಾರರ ಬಾಯಿ ಮುಚ್ಚಿಸುತ್ತಾರೆ. ಅಷ್ಟೇ ಅಲ್ಲ, ಐರ್ಲೆಂಡ್​ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇದೀಗ ಪಾಕಿಸ್ತಾನ್ ವಿರುದ್ಧ ಅಬ್ಬರಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.