ETV Bharat / sports

ಸತತ ಗೋಲ್ಡನ್​ ಡಕ್​ಗೆ SKY ಔಟ್​: ನಾಯಕ ರೋಹಿತ್​ ಶರ್ಮಾ ಹೇಳಿದ್ದೇನು?

author img

By

Published : Mar 20, 2023, 8:00 AM IST

ವಿಶ್ವ ನಂ. 1 T20 ಬ್ಯಾಟರ್‌ ಸೂರ್ಯಕುಮಾರ್​ ಯಾದವ್​ ಅವರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿನ ಕಳಪೆ ಪ್ರದರ್ಶನ ಸಾಕಷ್ಟು ಪ್ರಶ್ನೆ ಮೂಡಿಸಿದೆ. ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದೇನು ನೋಡೋಣ.

Captain Rohit Sharma Statement on batter Suryakumar Yadav
ಸತತ ಗೋಲ್ಡನ್​ ಡಕ್​ಗೆ SKY ಔಟ್​ : ನಾಯಕ ರೋಹಿತ್​ ಶರ್ಮಾ ಹೇಳಿದ್ದೇನು ?

ವಿಶಾಖಪಟ್ಟಣಂ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಅವರ ಸತತ ಎರಡು ಗೋಲ್ಡನ್​ ಡಕ್​ ಭಾರತ ತಂಡಕ್ಕೆ ತಲೆನೋವಾಗಿದೆ ಪರಿಣಮಿಸಿದೆ. ಎರಡೂ ಪಂದ್ಯಗಳಲ್ಲಿ ವೇಗಿ ಮಿಚೆಲ್​ ಸ್ಟಾರ್ಕ್​ ದಾಳಿಗೆ ಸಿಲುಕಿರುವ ಸೂರ್ಯಕುಮಾರ್ ರನ್​ ಖಾತೆ ತೆರೆಯದೆ ಪೆವಿಲಿಯನ್​ ಸೇರಿದ್ದರು. ನೀರಸ ಪ್ರದರ್ಶನದ ಬಳಿಕ ತಂಡದಲ್ಲಿ ಅವರ ಸ್ಥಾನದ ಕುರಿತಂತೆ ಎದ್ದ ಪ್ರಶ್ನೆಗಳಿಗೆ ನಾಯಕ ರೋಹಿತ್ ಶರ್ಮಾ ಉತ್ತರಿಸಿದ್ದು, ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ.

ಎರಡೂ ಪಂದ್ಯಗಳಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಎಲ್​​ಬಿಡಬ್ಲೂ ಬಲೆಗೆ ಬಿದ್ದಿರುವ ಸೂರ್ಯಕುಮಾರ್​ ಯಾದವ್​ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಕ್ರಿಕೆಟ್​ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ಟಿ20 ಕ್ರಿಕೆಟ್​ನಲ್ಲಿ ವಿಶ್ವ ನಂ. 1 ಆಗಿರುವ ಸೂರ್ಯ ದೀರ್ಘ ಮಾದರಿಯ ಆಟದಲ್ಲಿ ವೈಫಲ್ಯ ಕಾಣುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ. ಇದೇ ವಿಚಾರವಾಗಿ ಪಂದ್ಯದ ನಂತರ ಮಾಧ್ಯಮದವರಿಗೆ ಉತ್ತರಿಸಿರುವ ನಾಯಕ ರೋಹಿತ್​, "ಗಾಯಾಳು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳುವ ಬಗ್ಗೆ ನಮಗೆ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಸೂರ್ಯಕುಮಾರ್​​ ಯಾದವ್​​ ಅವರನ್ನು ಆಡಿಸಲಾಗುತ್ತಿದೆ. ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಸೂರ್ಯ ಸಾಕಷ್ಟು ಸಲ ಸಾಮರ್ಥ್ಯ ತೋರಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೇನೆ. ಸಾಮರ್ಥ್ಯ ಹೊಂದಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು" ಎಂದು ಹೇಳಿದರು.

"ಸಹಜವಾಗಿ, ಸೂರ್ಯಕುಮಾರ್​ ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲೂ ಸ್ಥಿರ ಪ್ರದರ್ಶನ ನೀಡಬೇಕಿದೆ. ಈ ವಿಚಾರವು ಸೂರ್ಯಗೂ ಅರಿವಿರುತ್ತದೆ ಎಂದು ನಾನು ಭಾವಿಸುತ್ತೇನೆ. ಸೂರ್ಯ ಎರಡು ಪಂದ್ಯಗಳಲ್ಲಿಯೂ ರನ್​ ಗಳಿಸದೆ ಔಟಾಗಿದ್ದಾರೆ. 7-8 ಅಥವಾ 10 ಪಂದ್ಯಗಳಿಗೆ ಹೋಲಿಸಿದಾಗ ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ. ಸದ್ಯ ಅವರು ಗಾಯಗೊಂಡ ಆಟಗಾರ ಹಾಗೂ ಅಲಭ್ಯತೆ ಹಿನ್ನೆಲೆಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದ್ದಾರೆ. ಈ ಹಿಂದೆ ನನಗೂ ಸಹ ನಿರ್ದಿಷ್ಟ ಕ್ರಮಾಂಕದಲ್ಲಿ ಸಾಕಷ್ಟು ಅವಕಾಶ ಲಭಿಸಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ" ಎಂದು ನಾಯಕ ರೋಹಿತ್​ ಶರ್ಮಾ ತಿಳಿಸಿದರು.

ಎರಡು ಪಂದ್ಯಗಳಲ್ಲಿನ ವಿಫಲತೆಯ ನಂತರ ಅಂತಿಮ ಮ್ಯಾಚ್​ನಲ್ಲೂ ಸೂರ್ಯಕುಮಾರ್​ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಶ್ರೇಯಸ್ ಅಯ್ಯರ್ ಗಾಯದ ಕಾರಣ ಅವರ ಸ್ಥಾನಕ್ಕೆ ಸೂರ್ಯ ಅತ್ಯಗತ್ಯ. ಅಲ್ಲದೆ, ಏಕದಿನ ಕ್ರಿಕೆಟ್​ನಲ್ಲಿ ಕೆಲ ಉತ್ತಮ ಪ್ರದರ್ಶನಗಳ ನಡುವೆಯೂ ವಿಕೆಟ್​ ಕೀಪರ್​ ಬ್ಯಾಟರ್​ ಸಂಜು ಸ್ಯಾಮ್ಸನ್ ಆಯ್ಕೆ ಆಗದಿರುವುದು ಸ್ಕೈಗೆ ಮತ್ತೊಂದು ಅವಕಾಶ ನೀಡಲಿದೆ.

ಇದೇ ವೇಳೆ ತಂಡದ ಅಗ್ರಕ್ರಮಾಂಕದ ನೀರಸ ಪ್ರದರ್ಶನದ ಕುರಿತಂತೆ ಪ್ರತಿಕ್ರಿಯಿಸಿದ ರೋಹಿತ್​, "ಕೇವಲ ಎರಡು ಪಂದ್ಯಗಳಾಗಿವೆ, ಈ ಹಿಂದಿನ 6 ಪಂದ್ಯಗಳಲ್ಲಿ ಅಗ್ರ ಕ್ರಮಾಂಕವು ಭರ್ಜರಿ ಆಟವಾಡಿದೆ" ಎಂದರು. ಬ್ಯಾಟರ್​ಗಳು ಎಡಗೈ ವೇಗದ ಬೌಲರ್​ ಎದುರಿಸಲು ಪರದಾಡುತ್ತಿರುವ ಬಗ್ಗೆ ಉತ್ತರಿಸುತ್ತ, "ಎದುರಾಳಿ ತಂಡದಲ್ಲಿ ಗುಣಮಟ್ಟದ ಬೌಲರ್ ಇದ್ದಾಗ ಅವರು ವಿಕೆಟ್​​ ಪಡೆಯವುದು ಸಹಜ. ತಂಡದಲ್ಲಿ ಅತ್ಯುತ್ತಮ ಬ್ಯಾಟರ್‌ಗಳ ವಿಕೆಟ್​ ಪಡೆಯಲು ಅವರು ತಕ್ಕ ಪ್ರದರ್ಶನ ತೋರುತ್ತಾರೆ. ಇದರಲ್ಲಿ ಎಡಗೈ ಆಟಗಾರ ಅಥವಾ ಬಲಗೈ ಆಟಗಾರ ಎಂಬುದಿಲ್ಲ. ಬಲಗೈ ಬೌಲರ್​ಗಳೂ ಸಹ ನಮಗೆ ಕಾಟ ಕೊಟ್ಟಿದ್ದಾರೆ. ಆದರೆ ಯಾರೂ ಸಹ ಈ ಬಗ್ಗೆ ಮಾತನಾಡುವುದಿಲ್ಲ. ಹೀಗಾಗಿ, ನಾವು ಎಡಗೈ ಅಥವಾ ಬಲಗೈ ಎಂಬುದಕ್ಕೆ ಹೆಚ್ಚು ಗಮನ ಕೊಡುವುದಿಲ್ಲ. ಆರಂಭದಲ್ಲೇ ಹೆಚ್ಚಿನ ವಿಕೆಟ್‌ ಕಳೆದುಕೊಳ್ಳುವುದು ಆತಂಕಕಾರಿ. ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿ, ವೈಫಲ್ಯದಿಂದ ಹೊರಬರಲು ಸಿದ್ಧರಾಗಬೇಕಿದೆ" ಎಂದರು.

ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯವು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಋತುವಿನ ಆರಂಭಕ್ಕೂ ಮುನ್ನ ಭಾರತಕ್ಕೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಏಕದಿನ ಟ್ರೋಫಿ ಪಡೆದುಕೊಳ್ಳಲಿದೆ.

ವಿಶಾಖಪಟ್ಟಣಂ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್ ಯಾದವ್ ಅವರ ಸತತ ಎರಡು ಗೋಲ್ಡನ್​ ಡಕ್​ ಭಾರತ ತಂಡಕ್ಕೆ ತಲೆನೋವಾಗಿದೆ ಪರಿಣಮಿಸಿದೆ. ಎರಡೂ ಪಂದ್ಯಗಳಲ್ಲಿ ವೇಗಿ ಮಿಚೆಲ್​ ಸ್ಟಾರ್ಕ್​ ದಾಳಿಗೆ ಸಿಲುಕಿರುವ ಸೂರ್ಯಕುಮಾರ್ ರನ್​ ಖಾತೆ ತೆರೆಯದೆ ಪೆವಿಲಿಯನ್​ ಸೇರಿದ್ದರು. ನೀರಸ ಪ್ರದರ್ಶನದ ಬಳಿಕ ತಂಡದಲ್ಲಿ ಅವರ ಸ್ಥಾನದ ಕುರಿತಂತೆ ಎದ್ದ ಪ್ರಶ್ನೆಗಳಿಗೆ ನಾಯಕ ರೋಹಿತ್ ಶರ್ಮಾ ಉತ್ತರಿಸಿದ್ದು, ಸೂರ್ಯ ಬೆಂಬಲಕ್ಕೆ ನಿಂತಿದ್ದಾರೆ.

ಎರಡೂ ಪಂದ್ಯಗಳಲ್ಲಿ ತಾವೆದುರಿಸಿದ ಮೊದಲ ಎಸೆತದಲ್ಲೇ ಎಲ್​​ಬಿಡಬ್ಲೂ ಬಲೆಗೆ ಬಿದ್ದಿರುವ ಸೂರ್ಯಕುಮಾರ್​ ಯಾದವ್​ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಕ್ರಿಕೆಟ್​ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸದ್ಯ ಟಿ20 ಕ್ರಿಕೆಟ್​ನಲ್ಲಿ ವಿಶ್ವ ನಂ. 1 ಆಗಿರುವ ಸೂರ್ಯ ದೀರ್ಘ ಮಾದರಿಯ ಆಟದಲ್ಲಿ ವೈಫಲ್ಯ ಕಾಣುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ. ಇದೇ ವಿಚಾರವಾಗಿ ಪಂದ್ಯದ ನಂತರ ಮಾಧ್ಯಮದವರಿಗೆ ಉತ್ತರಿಸಿರುವ ನಾಯಕ ರೋಹಿತ್​, "ಗಾಯಾಳು ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳುವ ಬಗ್ಗೆ ನಮಗೆ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಸೂರ್ಯಕುಮಾರ್​​ ಯಾದವ್​​ ಅವರನ್ನು ಆಡಿಸಲಾಗುತ್ತಿದೆ. ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಸೂರ್ಯ ಸಾಕಷ್ಟು ಸಲ ಸಾಮರ್ಥ್ಯ ತೋರಿದ್ದಾರೆ. ನಾನು ಈ ಹಿಂದೆಯೂ ಹಲವು ಬಾರಿ ಇದನ್ನೇ ಹೇಳಿದ್ದೇನೆ. ಸಾಮರ್ಥ್ಯ ಹೊಂದಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು" ಎಂದು ಹೇಳಿದರು.

"ಸಹಜವಾಗಿ, ಸೂರ್ಯಕುಮಾರ್​ ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲೂ ಸ್ಥಿರ ಪ್ರದರ್ಶನ ನೀಡಬೇಕಿದೆ. ಈ ವಿಚಾರವು ಸೂರ್ಯಗೂ ಅರಿವಿರುತ್ತದೆ ಎಂದು ನಾನು ಭಾವಿಸುತ್ತೇನೆ. ಸೂರ್ಯ ಎರಡು ಪಂದ್ಯಗಳಲ್ಲಿಯೂ ರನ್​ ಗಳಿಸದೆ ಔಟಾಗಿದ್ದಾರೆ. 7-8 ಅಥವಾ 10 ಪಂದ್ಯಗಳಿಗೆ ಹೋಲಿಸಿದಾಗ ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ. ಸದ್ಯ ಅವರು ಗಾಯಗೊಂಡ ಆಟಗಾರ ಹಾಗೂ ಅಲಭ್ಯತೆ ಹಿನ್ನೆಲೆಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡಿದ್ದಾರೆ. ಈ ಹಿಂದೆ ನನಗೂ ಸಹ ನಿರ್ದಿಷ್ಟ ಕ್ರಮಾಂಕದಲ್ಲಿ ಸಾಕಷ್ಟು ಅವಕಾಶ ಲಭಿಸಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ" ಎಂದು ನಾಯಕ ರೋಹಿತ್​ ಶರ್ಮಾ ತಿಳಿಸಿದರು.

ಎರಡು ಪಂದ್ಯಗಳಲ್ಲಿನ ವಿಫಲತೆಯ ನಂತರ ಅಂತಿಮ ಮ್ಯಾಚ್​ನಲ್ಲೂ ಸೂರ್ಯಕುಮಾರ್​ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಶ್ರೇಯಸ್ ಅಯ್ಯರ್ ಗಾಯದ ಕಾರಣ ಅವರ ಸ್ಥಾನಕ್ಕೆ ಸೂರ್ಯ ಅತ್ಯಗತ್ಯ. ಅಲ್ಲದೆ, ಏಕದಿನ ಕ್ರಿಕೆಟ್​ನಲ್ಲಿ ಕೆಲ ಉತ್ತಮ ಪ್ರದರ್ಶನಗಳ ನಡುವೆಯೂ ವಿಕೆಟ್​ ಕೀಪರ್​ ಬ್ಯಾಟರ್​ ಸಂಜು ಸ್ಯಾಮ್ಸನ್ ಆಯ್ಕೆ ಆಗದಿರುವುದು ಸ್ಕೈಗೆ ಮತ್ತೊಂದು ಅವಕಾಶ ನೀಡಲಿದೆ.

ಇದೇ ವೇಳೆ ತಂಡದ ಅಗ್ರಕ್ರಮಾಂಕದ ನೀರಸ ಪ್ರದರ್ಶನದ ಕುರಿತಂತೆ ಪ್ರತಿಕ್ರಿಯಿಸಿದ ರೋಹಿತ್​, "ಕೇವಲ ಎರಡು ಪಂದ್ಯಗಳಾಗಿವೆ, ಈ ಹಿಂದಿನ 6 ಪಂದ್ಯಗಳಲ್ಲಿ ಅಗ್ರ ಕ್ರಮಾಂಕವು ಭರ್ಜರಿ ಆಟವಾಡಿದೆ" ಎಂದರು. ಬ್ಯಾಟರ್​ಗಳು ಎಡಗೈ ವೇಗದ ಬೌಲರ್​ ಎದುರಿಸಲು ಪರದಾಡುತ್ತಿರುವ ಬಗ್ಗೆ ಉತ್ತರಿಸುತ್ತ, "ಎದುರಾಳಿ ತಂಡದಲ್ಲಿ ಗುಣಮಟ್ಟದ ಬೌಲರ್ ಇದ್ದಾಗ ಅವರು ವಿಕೆಟ್​​ ಪಡೆಯವುದು ಸಹಜ. ತಂಡದಲ್ಲಿ ಅತ್ಯುತ್ತಮ ಬ್ಯಾಟರ್‌ಗಳ ವಿಕೆಟ್​ ಪಡೆಯಲು ಅವರು ತಕ್ಕ ಪ್ರದರ್ಶನ ತೋರುತ್ತಾರೆ. ಇದರಲ್ಲಿ ಎಡಗೈ ಆಟಗಾರ ಅಥವಾ ಬಲಗೈ ಆಟಗಾರ ಎಂಬುದಿಲ್ಲ. ಬಲಗೈ ಬೌಲರ್​ಗಳೂ ಸಹ ನಮಗೆ ಕಾಟ ಕೊಟ್ಟಿದ್ದಾರೆ. ಆದರೆ ಯಾರೂ ಸಹ ಈ ಬಗ್ಗೆ ಮಾತನಾಡುವುದಿಲ್ಲ. ಹೀಗಾಗಿ, ನಾವು ಎಡಗೈ ಅಥವಾ ಬಲಗೈ ಎಂಬುದಕ್ಕೆ ಹೆಚ್ಚು ಗಮನ ಕೊಡುವುದಿಲ್ಲ. ಆರಂಭದಲ್ಲೇ ಹೆಚ್ಚಿನ ವಿಕೆಟ್‌ ಕಳೆದುಕೊಳ್ಳುವುದು ಆತಂಕಕಾರಿ. ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿ, ವೈಫಲ್ಯದಿಂದ ಹೊರಬರಲು ಸಿದ್ಧರಾಗಬೇಕಿದೆ" ಎಂದರು.

ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯವು ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಋತುವಿನ ಆರಂಭಕ್ಕೂ ಮುನ್ನ ಭಾರತಕ್ಕೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಏಕದಿನ ಟ್ರೋಫಿ ಪಡೆದುಕೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.