ETV Bharat / sports

ಬೋರ್ಡ್​ ನೀಡಿದ್ದ 48 ಗಂಟೆ ಸಮಯದಲ್ಲಿ ನಾಯಕತ್ವ ತ್ಯಜಿಸದ ಕೊಹ್ಲಿ, ಬಲವಂತದಿಂದ ಕೆಳಗಿಳಿಸಿದ ಬಿಸಿಸಿಐ

author img

By

Published : Dec 9, 2021, 5:08 PM IST

ವಿರಾಟ್​ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯುವ ಮನಸ್ಸಿರಲಿಲ್ಲ ಎಂದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿಸಿಐ ಕೊಹ್ಲಿಗೆ 48 ಗಂಟೆಗಳಲ್ಲಿ ನಾಯಕತ್ವದಿಂದ ಸ್ವತಃ ಕೆಳಗಿಳಿಯಲು ಸೂಚಿಸಿದೆ. ಈ ಸಮಯದಲ್ಲಿ ಕೊಹ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. 49ನೇ ಗಂಟೆಯಲ್ಲಿ ಕೊಹ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಮುಂದಿನ ಸೀಮಿತ ಓವರ್​ಗಳ ನಾಯಕ ಎಂದು ಘೋಷಣೆ ಮಾಡಿದೆ.

Kohli refuses to step down as ODI captain
ವಿರಾಟ್​ ಕೊಹ್ಲಿ ನಾಯಕತ್ವ

ನವದೆಹಲಿ: ಟಿ-20 ವಿಶ್ವಕಪ್​ ಮುಗಿಯುತ್ತಿದ್ದಂತೆ ಟಿ-20 ನಾಯಕತ್ವ ತ್ಯಜಿಸಿದ್ದ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಸ್ವತಃ ಬಿಸಿಸಿಐ ಕೊಹ್ಲಿ ಅವರನ್ನು ಏಕದಿನ ತಂಡದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಬುಧವಾರ ನೇಮಕ ಮಾಡಿದೆ.

ಆದರೆ, ವಿರಾಟ್​ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯುವ ಮನಸ್ಸಿರಲಿಲ್ಲ ಎಂದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿಸಿಐ ಕೊಹ್ಲಿಗೆ 48 ಗಂಟೆಗಳಲ್ಲಿ ನಾಯಕತ್ವದಿಂದ ಸ್ವತಃ ಕೆಳಗಿಳಿಯಲು ಸೂಚಿಸಿದೆ. ಈ ಸಮಯದಲ್ಲಿ ಕೊಹ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. 49ನೇ ಗಂಟೆಯಲ್ಲಿ ಕೊಹ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡಿದೆ. ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಮುಂದಿನ ಸೀಮಿತ ಓವರ್​ಗಳ ನಾಯಕ ಎಂದು ಘೋಷಣೆ ಮಾಡಿದೆ.

ಕುತೂಹಲಕಾರಿ ಅಂಶ ಎಂದರೆ ಬಿಸಿಸಿಐ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದ ವಿಚಾರವನ್ನು ಬುಧವಾರ ಹೊಸ ನಾಯಕನನ್ನು ಘೋಷಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿಲ್ಲ. ಕೇವಲ ಆಯ್ಕೆ ಸಮಿತಿ ಟಿ-20 ಮತ್ತು ಏಕದಿನ ತಂಡಗಳಿಗೆ ರೋಹಿತ್ ನಾಯಕರಾಗಿ ನೇಮಕ ಮಾಡಿದೆ ಎಂದು ಮಾತ್ರ ಉಲ್ಲೇಖಿಸಿದೆ.

ಈ ನಿರ್ಧಾರ ಏಕೆ:

ವಿರಾಟ್​ ಕೊಹ್ಲಿ ಮುಂಬರುವ 2023 ತವರಿನ ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದರು. ಆದರೆ, ಬಿಸಿಸಿಐ ಮತ್ತು ಆಯ್ಕೆ ಸಮಿತಿ ಮುಂಬರುವ ವಿಶ್ವಕಪ್​​ನಲ್ಲಿ ಹೊಸ ನಾಯಕನನ್ನು ನೇಮಿಸಲು ಬಯಸುದ ಕಾರಣ ಕೊಹ್ಲಿಯನ್ನು ನಾಯಕತ್ವದಿಂದ ವಜಾಮಾಡಿದೆ.

ಇತ್ತೀಚೆಗೆ ಮುಗಿದ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ಏಕದಿನ ತಂಡದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲು ನಿರ್ಧರಿಸಿತ್ತು. ಆದರೆ ಕೊಹ್ಲಿಯನ್ನು ಗೌರವಯುತವಾಗಿ ನಾಯಕತ್ವವನ್ನು ತ್ಯಜಿಸುವುದನ್ನು ಬಿಸಿಸಿಐ ನೋಡಬಯಸಿತ್ತು. ಆದರೆ, ವಿರಾಟ್​ ನಿಗದಿತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳದ್ದರಿಂದ ವಜಾ ಗೊಳಿಸಿದೆ.

ಕೊಹ್ಲಿಯ ನಾಯಕತ್ವದ ಆಕರ್ಷಕ ಪಯಣ:

ವಿರಾಟ್​ ಕೊಹ್ಲಿ ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದ ಮಹೇಂದ್ರ ಸಿಂಗ್ ಧೋನಿ ನೆರಳಿನಲ್ಲಿ ಅದ್ಭುತ ನಾಯಕನಾಗಿ ಬೆಳೆದಿದ್ದರು. 2014ರಲ್ಲಿ ಟೆಸ್ಟ್​ ತಂಡಕ್ಕೆ ನಾಯಕನಾಗಿದ್ದ ಕೊಹ್ಲಿ ನಂತರದ ಒಂದೆರಡು ವರ್ಷಗಳ ಕಾಲ ಧೋನಿಗೆ ಉಪನಾಯಕನಾಗಿದ್ದರು. 2017ರಲ್ಲಿ ಬಿಳಿ ಚೆಂಡಿನ ಜವಾಬ್ದಾರಿ ನೀಡಲಾಯಿತು. ಮುಂದಿನ 2 ವರ್ಷಗಳಲ್ಲಿ, ಕೊಹ್ಲಿ ತಮ್ಮದೇ ಆದ ಆಕ್ರಮಣಕಾರಿ ತಂತ್ರಗಳನ್ನು ರೂಪಿಸುವ ಮೂಲಕ, ತಂಡದ ಪ್ರಬಲ ನಾಯಕರಾಗಿ ಹೊರಹೊಮ್ಮಿದರು.

ಕೊಹ್ಲಿ ಟಿ20 ತಂಡದ ಜವಾಬ್ದಾರಿ ತ್ಯಜಿಸಿದರೂ ಕ್ರಿಕೆಟ್​ನಲ್ಲಿ ಸ್ವತಃ ನಾಯಕರಾಗಿ ಅನುಭವವುಳ್ಳ ಹಾಗೂ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಜಯ್​ ಶಾ ಸೀಮಿತ ಓವರ್​ಗಳ ತಂಡಕ್ಕೆ ಇಬ್ಬರ ನಾಯಕತ್ವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ರೋಹಿತ್ ಶರ್ಮಾರನ್ನು ಮುಂದಿನ ನಾಯಕ ಎಂದು ಘೋಷಿಸಿದರು.

ಈ ಹಿಂದೆ 2014ರಲ್ಲಿ ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವ ವಹಿಸಿಕೊಂಡಾಗಲೂ ಮಹೇಂದ್ರ ಸಿಂಗ್ ಧೋನಿ ಟಿ-20 ಮತ್ತು ಏಕದಿನ ತಂಡಕ್ಕೆ ನಾಯಕನಾಗಿದ್ದರು. ಪ್ರಸ್ತುತ ಇಂಗ್ಲೆಂಡ್​ , ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ದೀರ್ಘ ಮಾದರಿ ಮತ್ತು ಸೀಮಿತ ಓವರ್​ಗಳ ತಂಡಕ್ಕೆ ವಿಭಿನ್ನ ನಾಯಕರನ್ನು ನೇಮಿಸಿದೆ.

ಇದನ್ನೂ ಓದಿ:ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್​ ಸಾಧನೆ ಹೀಗಿದೆ

ನವದೆಹಲಿ: ಟಿ-20 ವಿಶ್ವಕಪ್​ ಮುಗಿಯುತ್ತಿದ್ದಂತೆ ಟಿ-20 ನಾಯಕತ್ವ ತ್ಯಜಿಸಿದ್ದ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ಮುಂದುವರಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಸ್ವತಃ ಬಿಸಿಸಿಐ ಕೊಹ್ಲಿ ಅವರನ್ನು ಏಕದಿನ ತಂಡದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಬುಧವಾರ ನೇಮಕ ಮಾಡಿದೆ.

ಆದರೆ, ವಿರಾಟ್​ ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯುವ ಮನಸ್ಸಿರಲಿಲ್ಲ ಎಂದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿಸಿಐ ಕೊಹ್ಲಿಗೆ 48 ಗಂಟೆಗಳಲ್ಲಿ ನಾಯಕತ್ವದಿಂದ ಸ್ವತಃ ಕೆಳಗಿಳಿಯಲು ಸೂಚಿಸಿದೆ. ಈ ಸಮಯದಲ್ಲಿ ಕೊಹ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. 49ನೇ ಗಂಟೆಯಲ್ಲಿ ಕೊಹ್ಲಿ ತಮ್ಮ ಅಧಿಕಾರವನ್ನು ಕಳೆದುಕೊಂಡಿದೆ. ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಮುಂದಿನ ಸೀಮಿತ ಓವರ್​ಗಳ ನಾಯಕ ಎಂದು ಘೋಷಣೆ ಮಾಡಿದೆ.

ಕುತೂಹಲಕಾರಿ ಅಂಶ ಎಂದರೆ ಬಿಸಿಸಿಐ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದ ವಿಚಾರವನ್ನು ಬುಧವಾರ ಹೊಸ ನಾಯಕನನ್ನು ಘೋಷಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿಲ್ಲ. ಕೇವಲ ಆಯ್ಕೆ ಸಮಿತಿ ಟಿ-20 ಮತ್ತು ಏಕದಿನ ತಂಡಗಳಿಗೆ ರೋಹಿತ್ ನಾಯಕರಾಗಿ ನೇಮಕ ಮಾಡಿದೆ ಎಂದು ಮಾತ್ರ ಉಲ್ಲೇಖಿಸಿದೆ.

ಈ ನಿರ್ಧಾರ ಏಕೆ:

ವಿರಾಟ್​ ಕೊಹ್ಲಿ ಮುಂಬರುವ 2023 ತವರಿನ ವಿಶ್ವಕಪ್​​ನಲ್ಲಿ ಭಾರತ ತಂಡವನ್ನು ಮುನ್ನಡೆಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದರು. ಆದರೆ, ಬಿಸಿಸಿಐ ಮತ್ತು ಆಯ್ಕೆ ಸಮಿತಿ ಮುಂಬರುವ ವಿಶ್ವಕಪ್​​ನಲ್ಲಿ ಹೊಸ ನಾಯಕನನ್ನು ನೇಮಿಸಲು ಬಯಸುದ ಕಾರಣ ಕೊಹ್ಲಿಯನ್ನು ನಾಯಕತ್ವದಿಂದ ವಜಾಮಾಡಿದೆ.

ಇತ್ತೀಚೆಗೆ ಮುಗಿದ ಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ಏಕದಿನ ತಂಡದಿಂದಲೂ ಕೊಹ್ಲಿಯನ್ನು ಕೆಳಗಿಳಿಸಲು ನಿರ್ಧರಿಸಿತ್ತು. ಆದರೆ ಕೊಹ್ಲಿಯನ್ನು ಗೌರವಯುತವಾಗಿ ನಾಯಕತ್ವವನ್ನು ತ್ಯಜಿಸುವುದನ್ನು ಬಿಸಿಸಿಐ ನೋಡಬಯಸಿತ್ತು. ಆದರೆ, ವಿರಾಟ್​ ನಿಗದಿತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳದ್ದರಿಂದ ವಜಾ ಗೊಳಿಸಿದೆ.

ಕೊಹ್ಲಿಯ ನಾಯಕತ್ವದ ಆಕರ್ಷಕ ಪಯಣ:

ವಿರಾಟ್​ ಕೊಹ್ಲಿ ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದ ಮಹೇಂದ್ರ ಸಿಂಗ್ ಧೋನಿ ನೆರಳಿನಲ್ಲಿ ಅದ್ಭುತ ನಾಯಕನಾಗಿ ಬೆಳೆದಿದ್ದರು. 2014ರಲ್ಲಿ ಟೆಸ್ಟ್​ ತಂಡಕ್ಕೆ ನಾಯಕನಾಗಿದ್ದ ಕೊಹ್ಲಿ ನಂತರದ ಒಂದೆರಡು ವರ್ಷಗಳ ಕಾಲ ಧೋನಿಗೆ ಉಪನಾಯಕನಾಗಿದ್ದರು. 2017ರಲ್ಲಿ ಬಿಳಿ ಚೆಂಡಿನ ಜವಾಬ್ದಾರಿ ನೀಡಲಾಯಿತು. ಮುಂದಿನ 2 ವರ್ಷಗಳಲ್ಲಿ, ಕೊಹ್ಲಿ ತಮ್ಮದೇ ಆದ ಆಕ್ರಮಣಕಾರಿ ತಂತ್ರಗಳನ್ನು ರೂಪಿಸುವ ಮೂಲಕ, ತಂಡದ ಪ್ರಬಲ ನಾಯಕರಾಗಿ ಹೊರಹೊಮ್ಮಿದರು.

ಕೊಹ್ಲಿ ಟಿ20 ತಂಡದ ಜವಾಬ್ದಾರಿ ತ್ಯಜಿಸಿದರೂ ಕ್ರಿಕೆಟ್​ನಲ್ಲಿ ಸ್ವತಃ ನಾಯಕರಾಗಿ ಅನುಭವವುಳ್ಳ ಹಾಗೂ ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಜಯ್​ ಶಾ ಸೀಮಿತ ಓವರ್​ಗಳ ತಂಡಕ್ಕೆ ಇಬ್ಬರ ನಾಯಕತ್ವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ರೋಹಿತ್ ಶರ್ಮಾರನ್ನು ಮುಂದಿನ ನಾಯಕ ಎಂದು ಘೋಷಿಸಿದರು.

ಈ ಹಿಂದೆ 2014ರಲ್ಲಿ ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವ ವಹಿಸಿಕೊಂಡಾಗಲೂ ಮಹೇಂದ್ರ ಸಿಂಗ್ ಧೋನಿ ಟಿ-20 ಮತ್ತು ಏಕದಿನ ತಂಡಕ್ಕೆ ನಾಯಕನಾಗಿದ್ದರು. ಪ್ರಸ್ತುತ ಇಂಗ್ಲೆಂಡ್​ , ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಕೂಡ ದೀರ್ಘ ಮಾದರಿ ಮತ್ತು ಸೀಮಿತ ಓವರ್​ಗಳ ತಂಡಕ್ಕೆ ವಿಭಿನ್ನ ನಾಯಕರನ್ನು ನೇಮಿಸಿದೆ.

ಇದನ್ನೂ ಓದಿ:ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್​ ಸಾಧನೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.