ETV Bharat / sports

BNG vs IND 3rd ODI: ಟಾಸ್​ ಗೆದ್ದ ಬಾಂಗ್ಲಾ ಬೌಲಿಂಗ್​ ಆಯ್ಕೆ.. ಕೊನೆಯ ಪಂದ್ಯದಲ್ಲಿ ಗೆಲ್ಲುತ್ತಾ ಭಾರತ?

author img

By

Published : Dec 10, 2022, 11:27 AM IST

ಚಿತ್ತಗಾಂಗ್​ನಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಕುಲದೀಪ್​ ಯಾದವ್​, ಇಶಾನ್​ ಕಿಶನ್​ ಅವಕಾಶ ಪಡೆದಿದ್ದಾರೆ.

bangladesh-vs-india-3rd-odi
ಟಾಸ್​ ಗೆದ್ದ ಬಾಂಗ್ಲಾ ಬೌಲಿಂಗ್​ ಆಯ್ಕೆ

ಚಿತ್ತಗಾಂಗ್: ಭಾರತದ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಈ ಪಂದ್ಯವನ್ನೂ ವಶಪಡಿಸಿಕೊಂಡು ಸರಣಿ ಕ್ಲೀನ್​ಸ್ವೀಪ್​ ಮಾಡಲು ಬಾಂಗ್ಲಾ ತಂತ್ರ ಹೆಣೆದಿದ್ದರೆ, ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಭಾರತ ಹೋರಾಡಲಿದೆ.

ಚಿತ್ತಗಾಂಗ್​ನ ಮೈದಾನದಲ್ಲಿ ನಡೆಯಲಿರುವ ಪಂದ್ಯ ಬಾಂಗ್ಲಾಗೆ ಔಪಚಾರಿಕವಾಗಿದೆ. ಸರಣಿ ಸೋಲು ಅನುಭವಿಸಿರುವ ಭಾರತದ ಆಟಗಾರರು ಕೊನೆಯ ಪಂದ್ಯದಲ್ಲಾದರೂ ಸಿಡಿದು ಸಾಮರ್ಥ್ಯ ಸಾಬೀತು ಮಾಡಿಕೊಳ್ಳಬೇಕಿದೆ.

ಕೆಎಲ್​ ರಾಹುಲ್​ಗೆ ನಾಯಕತ್ವ: ಎರಡನೇ ಪಂದ್ಯದಲ್ಲಿ ಕ್ಯಾಚ್​ ಹಿಡಿಯುವ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿರುವ ರೋಹಿತ್​ ಶರ್ಮಾ ಬದಲಾಗಿ ಕೆಎಲ್​ ರಾಹುಲ್​ಗೆ ನಾಯಕತ್ವ ಹೊಣೆ ನೀಡಲಾಗಿದೆ. ಬ್ಯಾಟಿಂಗ್​ನಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾದ ಒತ್ತಡದಲ್ಲಿರುವ ರಾಹುಲ್​ ನಾಯಕತ್ವದ ಜವಾಬ್ದಾರಿಯೂ ನಿಭಾಯಿಸಬೇಕಾಗಿದೆ.

ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಉತ್ತಮ ಲಯದಲ್ಲಿರುವ ಆಟಗಾರರ ಅನುಪಸ್ಥಿತಿಯಿಂದಾಗಿ ತಂಡ ಖದರ್​ ಕಳೆದುಕೊಂಡಿದೆ. ಹಿರಿಯ ಆಟಗಾರರಾದ ಶಿಖರ್​ ಧವನ್​, ವಿರಾಟ್​ ಕೊಹ್ಲಿ, ರಾಹುಲ್​, ರೋಹಿತ್​ ಬ್ಯಾಟಿಂಗ್​ನಲ್ಲಿ ಮಿಂಚುತ್ತಿಲ್ಲ. ಅದರಲ್ಲೂ ವಿರಾಟ್​ ಕೊಹ್ಲಿ 2 ಪಂದ್ಯಗಳಿಂದ 18 ರನ್​ ಮಾತ್ರ ಮಾಡಿದ್ದಾರೆ. ಬ್ಯಾಟಿಂಗ್​ ವೈಫಲ್ಯದ ಜೊತೆಗೆ ಬೌಲಿಂಗ್​ ಮತ್ತು ಫೀಲ್ಡಿಂಗ್​ ಕಳೆಗುಂದಿದ್ದು ಚಿಂತೆಗೀಡು ಮಾಡಿದೆ.

ತಂಡದಲ್ಲಿ ಬದಲಾವಣೆ: ಗಾಯಕ್ಕೀಡಾದ ರೋಹಿತ್​, ದೀಪಕ್​ ಚಹರ್​ ಬದಲಾಗಿ ಇಶಾನ್​ ಕಿಶನ್​ ಮತ್ತು ಸ್ಪಿನ್ನರ್​ ಕುಲದೀಪ್​ ಯಾದವ್​ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾಗೆ ಮತ್ತೊಂದು ಸರಣಿ ಕ್ಲೀನ್​ಸ್ವೀಪ್​ ಗುರಿ: 2018 ರಿಂದ ತವರಿನಲ್ಲಿ ಸತತವಾಗಿ ಸರಣಿ ಗೆಲ್ಲುತ್ತಾ ಬಂದಿರುವ ಬಾಂಗ್ಲಾದೇಶ, ಬಲಿಷ್ಠ ಭಾರತದ ವಿರುದ್ಧವೂ ಸರಣಿ ಗೆದ್ದಾಗಿದೆ. ಜೊತೆಗೆ ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್​ಸ್ವೀಪ್​ ಮಾಡಿಕೊಂಡು ಬೀಗುವ ಇರಾದೆಯಲ್ಲಿದೆ. ಇದಕ್ಕೂ ಮೊದಲು ಜಿಂಬಾಬ್ವೆ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಬಾಂಗ್ಲಾ ಪಡೆದ ಸದೆಬಡಿದಿತ್ತು.

ಪಿಚ್​ ರಿಪೋರ್ಟ್​: ಚಿತ್ತಗಾಂಗ್‌ನ ಮೈದಾನ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಇಲ್ಲಿ ಸಮತಟ್ಟಾದ ಪಿಚ್ ಇದೆ. ಇಂದು ಶುಭ್ರ ಹವಾಮಾನ ಇರಲಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬ್ಯಾಟಿಂಗ್​ ಸ್ನೇಹಿ ಪಿಚ್​ನಲ್ಲಿ ರನ್​ ಮಳೆ ಸುರಿಯಬಹುದು.

ತಂಡಗಳು: ಭಾರತ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟ್ಟನ್ ದಾಸ್ (ನಾಯಕ), ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಾಫಿಜರ್ ರೆಹಮಾನ್, ತಸ್ಕಿನ್ ಅಹ್ಮದ್.

ಓದಿ: ಶೂಟೌಟ್​ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್​ಗೆ.. ನೆದರ್​ಲ್ಯಾಂಡ್ಸ್​ ಕನಸು ಭಗ್ನ

ಚಿತ್ತಗಾಂಗ್: ಭಾರತದ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಈ ಪಂದ್ಯವನ್ನೂ ವಶಪಡಿಸಿಕೊಂಡು ಸರಣಿ ಕ್ಲೀನ್​ಸ್ವೀಪ್​ ಮಾಡಲು ಬಾಂಗ್ಲಾ ತಂತ್ರ ಹೆಣೆದಿದ್ದರೆ, ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಭಾರತ ಹೋರಾಡಲಿದೆ.

ಚಿತ್ತಗಾಂಗ್​ನ ಮೈದಾನದಲ್ಲಿ ನಡೆಯಲಿರುವ ಪಂದ್ಯ ಬಾಂಗ್ಲಾಗೆ ಔಪಚಾರಿಕವಾಗಿದೆ. ಸರಣಿ ಸೋಲು ಅನುಭವಿಸಿರುವ ಭಾರತದ ಆಟಗಾರರು ಕೊನೆಯ ಪಂದ್ಯದಲ್ಲಾದರೂ ಸಿಡಿದು ಸಾಮರ್ಥ್ಯ ಸಾಬೀತು ಮಾಡಿಕೊಳ್ಳಬೇಕಿದೆ.

ಕೆಎಲ್​ ರಾಹುಲ್​ಗೆ ನಾಯಕತ್ವ: ಎರಡನೇ ಪಂದ್ಯದಲ್ಲಿ ಕ್ಯಾಚ್​ ಹಿಡಿಯುವ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿರುವ ರೋಹಿತ್​ ಶರ್ಮಾ ಬದಲಾಗಿ ಕೆಎಲ್​ ರಾಹುಲ್​ಗೆ ನಾಯಕತ್ವ ಹೊಣೆ ನೀಡಲಾಗಿದೆ. ಬ್ಯಾಟಿಂಗ್​ನಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾದ ಒತ್ತಡದಲ್ಲಿರುವ ರಾಹುಲ್​ ನಾಯಕತ್ವದ ಜವಾಬ್ದಾರಿಯೂ ನಿಭಾಯಿಸಬೇಕಾಗಿದೆ.

ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಉತ್ತಮ ಲಯದಲ್ಲಿರುವ ಆಟಗಾರರ ಅನುಪಸ್ಥಿತಿಯಿಂದಾಗಿ ತಂಡ ಖದರ್​ ಕಳೆದುಕೊಂಡಿದೆ. ಹಿರಿಯ ಆಟಗಾರರಾದ ಶಿಖರ್​ ಧವನ್​, ವಿರಾಟ್​ ಕೊಹ್ಲಿ, ರಾಹುಲ್​, ರೋಹಿತ್​ ಬ್ಯಾಟಿಂಗ್​ನಲ್ಲಿ ಮಿಂಚುತ್ತಿಲ್ಲ. ಅದರಲ್ಲೂ ವಿರಾಟ್​ ಕೊಹ್ಲಿ 2 ಪಂದ್ಯಗಳಿಂದ 18 ರನ್​ ಮಾತ್ರ ಮಾಡಿದ್ದಾರೆ. ಬ್ಯಾಟಿಂಗ್​ ವೈಫಲ್ಯದ ಜೊತೆಗೆ ಬೌಲಿಂಗ್​ ಮತ್ತು ಫೀಲ್ಡಿಂಗ್​ ಕಳೆಗುಂದಿದ್ದು ಚಿಂತೆಗೀಡು ಮಾಡಿದೆ.

ತಂಡದಲ್ಲಿ ಬದಲಾವಣೆ: ಗಾಯಕ್ಕೀಡಾದ ರೋಹಿತ್​, ದೀಪಕ್​ ಚಹರ್​ ಬದಲಾಗಿ ಇಶಾನ್​ ಕಿಶನ್​ ಮತ್ತು ಸ್ಪಿನ್ನರ್​ ಕುಲದೀಪ್​ ಯಾದವ್​ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾಗೆ ಮತ್ತೊಂದು ಸರಣಿ ಕ್ಲೀನ್​ಸ್ವೀಪ್​ ಗುರಿ: 2018 ರಿಂದ ತವರಿನಲ್ಲಿ ಸತತವಾಗಿ ಸರಣಿ ಗೆಲ್ಲುತ್ತಾ ಬಂದಿರುವ ಬಾಂಗ್ಲಾದೇಶ, ಬಲಿಷ್ಠ ಭಾರತದ ವಿರುದ್ಧವೂ ಸರಣಿ ಗೆದ್ದಾಗಿದೆ. ಜೊತೆಗೆ ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್​ಸ್ವೀಪ್​ ಮಾಡಿಕೊಂಡು ಬೀಗುವ ಇರಾದೆಯಲ್ಲಿದೆ. ಇದಕ್ಕೂ ಮೊದಲು ಜಿಂಬಾಬ್ವೆ, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಬಾಂಗ್ಲಾ ಪಡೆದ ಸದೆಬಡಿದಿತ್ತು.

ಪಿಚ್​ ರಿಪೋರ್ಟ್​: ಚಿತ್ತಗಾಂಗ್‌ನ ಮೈದಾನ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಇಲ್ಲಿ ಸಮತಟ್ಟಾದ ಪಿಚ್ ಇದೆ. ಇಂದು ಶುಭ್ರ ಹವಾಮಾನ ಇರಲಿದ್ದು, ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬ್ಯಾಟಿಂಗ್​ ಸ್ನೇಹಿ ಪಿಚ್​ನಲ್ಲಿ ರನ್​ ಮಳೆ ಸುರಿಯಬಹುದು.

ತಂಡಗಳು: ಭಾರತ: ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ: ಅನಾಮುಲ್ ಹಕ್, ಲಿಟ್ಟನ್ ದಾಸ್ (ನಾಯಕ), ಯಾಸಿರ್ ಅಲಿ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಎಬಾಡೋತ್ ಹೊಸೈನ್, ಮುಸ್ತಾಫಿಜರ್ ರೆಹಮಾನ್, ತಸ್ಕಿನ್ ಅಹ್ಮದ್.

ಓದಿ: ಶೂಟೌಟ್​ನಲ್ಲಿ ಗೆದ್ದ ಅರ್ಜೆಂಟೀನಾ ಸೆಮೀಸ್​ಗೆ.. ನೆದರ್​ಲ್ಯಾಂಡ್ಸ್​ ಕನಸು ಭಗ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.