ETV Bharat / sports

ಭಾರತದ ವಿರುದ್ಧ ಸತತ 2 ಏಕದಿನ ಸರಣಿ ಗೆದ್ದ ಬಾಂಗ್ಲಾ; ಫಲ ನೀಡದ ರೋಹಿತ್‌ ವೀರಾವೇಶ

author img

By

Published : Dec 7, 2022, 8:12 PM IST

Updated : Dec 7, 2022, 9:04 PM IST

ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾ ತಂಡ 5 ರನ್​ಗಳಿಂದ ಗೆಲುವು ಸಾಧಿಸಿ, ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿದೆ.

bangladesh-vs-india-2nd-odi-bangladesh-won-by-5-runs
ಮಾಡು ಇಲ್ಲವೇ ಮಡಿ ಪಂದ್ಯದಲ್ಲೂ ಮುಗ್ಗರಿಸಿದ ಟೀಂ ಇಂಡಿಯಾ: ಸರಣಿ ಗೆದ್ದ ಬಾಂಗ್ಲಾ

ಢಾಕಾ (ಬಾಂಗ್ಲಾದೇಶ): ಭಾರತದ ವಿರುದ್ಧದ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-0 ಅಂತರದಿಂದ ಗೆದ್ದುಕೊಂಡಿದೆ. ಇಂದು ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಸರಣಿ ಸೋಲಿನ ಮುಖಭಂಗ ಅನುಭವಿಸಿತು.

ಢಾಕಾದ ಶೇರ್​ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ, 7 ವಿಕೆಟ್​ ನಷ್ಟಕ್ಕೆ 271 ರನ್​ಗಳನ್ನು ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ್ದ ರೋಹಿತ್​ ಟೀಂ 9 ವಿಕೆಟ್‌ಗಳನ್ನು ಕಳೆದುಕೊಂಡು 266 ರನ್​ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಸರಣಿ ಗೆಲುವಿನ ಕೇಕೆ ಹಾಕಿತು. ಗಾಯಗೊಂಡು 9ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ರೋಹಿತ್‌ ವೀರಾವೇಶದ ಹೋರಾಟ ಫಲ ನೀಡಲಿಲ್ಲ.

ಭಾರತಕ್ಕೆ ಆರಂಭಿಕ ಆಘಾತ: ಫೀಲ್ಡಿಂಗ್ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಯಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಕಣಕ್ಕಿಳಿದರು. ಇಬ್ಬರೂ ಕೂಡ ತಂಡಕ್ಕೆ ನಿರೀಕ್ಷಿತ ಆರಂಭ ನೀಡಲು ವಿಫಲರಾದರು.

ಕೇವಲ 5 ರನ್​ಗಳ ವಿರಾಟ್ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ 8 ರನ್​ ಗಳಿಸಿದ್ದ ಧವನ್​ ಕೂಡ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದರು. ಶ್ರೇಯಸ್​ಗೆ ಸರಿಯಾದ ಸಾಥ್​ ಸಿಗಲಿಲ್ಲ. ವಾಷಿಂಗ್ಟನ್​ ಸುಂದರ್​ (11) ಹಾಗೂ ಮೊದಲ ಪಂದ್ಯ ಪಂದ್ಯದಲ್ಲಿ ವಿರೋಚಿತ ಆಟ ಪ್ರದರ್ಶಿಸಿದ್ದ ಕೆಎಲ್​ ರಾಹುಲ್​ (14) ಕೂಡ ಬೇಗ ಔಟಾದರು.

ತಂಡಕ್ಕೆ ಆಸರೆಯಾದ ಶ್ರೇಯಸ್​-ಅಕ್ಷರ್: ನಂತರ ಶ್ರೇಯಸ್​​ ಜೊತೆಗೂಡಿದ ಅಕ್ಷರ್ ಪಟೇಲ್​ ಕೊಂಚ ಬಿರುಸಿನಿಂದಲೇ ಬ್ಯಾಟ್​ ಬೀಸಿದರು. ಈ ಜೋಡಿ ನೂರು ರನ್​ಗಳ ಜೊತೆಯಾಟ ನೀಡಿ, ತಂಡಕ್ಕೆ ಆಸರೆಯಾದರು. ಅಲ್ಲದೇ, ಭಾರತಕ್ಕೆ ಗೆಲುವಿನ ಆಸೆಯನ್ನೂ ಮೂಡಿಸಿದ್ದರು. ಇದರ ನಡುವೆ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್, ಶಕೀಬ್​ ಅಲ್​ ಹಸನ್ ಬೌಲಿಂಗ್​​ನಲ್ಲಿ​ ಕಾಚಿತ್ತರು. 102 ಎಸೆತಗಳನ್ನು​ ಎದುರಿಸಿದ ಶ್ರೇಯಸ್​ 3 ಸಿಕ್ಸರ್​ ಮತ್ತು 6 ಬೌಂಡರಿಗಳೊಂದಿಗೆ 82 ರನ್​ ಸಿಡಿಸಿದರು.

ಶ್ರೇಯಸ್​ ಬಳಿಕ 100 ರನ್​ ರೇಟ್​ನಲ್ಲಿ 56 ರನ್​ ಸಿಡಿಸಿದ್ದ ಅಕ್ಷರ್​ ಪಟೇಲ್​ ಕೂಡ ಔಟಾಗುವ ಮೂಲಕ ತಂಡಕ್ಕೆ ಆಘಾತ ನೀಡಿದರು. ಶಾರ್ದೂಲ್ ಠಾಕೂರ್ (7) ಮತ್ತು ದೀಪಕ್​ ಚಹಾರ್​ (11) ಕಾಣಿಕೆ ಒಪ್ಪಿಸಿ ಔಟಾದರು. ನಂತರ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ನಾಯಕ ರೋಹಿತ್​ ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿದರು. ಆದರೆ, ನಂತರ ಹೊಡಿಬಡಿ ಆಟಕ್ಕೆ ಮುಂದಾಗಿ ಮತ್ತೆ ಗೆಲುವಿನ ಆಸೆ ಚಿಗುರಿಸಿದರು.

ಪಂದ್ಯದ ಕೊನೆಯ ಓವರ್​ನಲ್ಲಿ ಭಾರತ ಗೆಲುವಿಗೆ 20 ರನ್​ಗಳ ಅಗತ್ಯವಿತ್ತು. ಈ ಓವರ್​ನಲ್ಲಿ ಮೊದಲ ಮೂರು ಎಸತೆಗಳಲ್ಲಿ ರೋಹಿತ್​ ಎರಡು ಬೌಂಡರಿಗಳು ಬಾರಿಸಿದರು. ನಂತರ ಒಂದು ಸಿಕ್ಸರ್​ ಬಾರಿಸಲು ಸಾಧ್ಯವಾಯಿತು. ಅಂತಿಮ ಎಸತೆದಲ್ಲಿ ಸಿಕ್ಸರ್​ ಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಪರಿಣಾಮ ಸೋಲು ಅನುಭವಿಸಬೇಕಾಯಿತು. ರೋಹಿತ್ 28 ಎಸೆತಗಳಲ್ಲಿ 5 ಸಿಕ್ಸರ್​​ ಹಾಗೂ 3 ಬೌಂಡರಿಗಳೊಂದಿಗೆ ಅಮೋಘ 51 ಬಾರಿಸಿದರೂ ಅದು ಪಂದ್ಯ ಗೆಲ್ಲಿಸಲು ಸಾಕಾಗಲಿಲ್ಲ.

ಡಿಸೆಂಬರ್​ 10ರಂದು ಅಂತಿಮ ಪಂದ್ಯ: ಬಾಂಗ್ಲಾ ಪರ ಎಬಾಡೋಟ್ ಹೊಸೈನ್ 3 ವಿಕೆಟ್​ ಮತ್ತು ಮೆಹಿದಿ ಹಸನ್ ಮಿರಾಜ್, ಶಕೀಬ್​ ಅಲ್​ ಹಸನ್ ತಲಾ 2 ವಿಕೆಟ್​ ಪಡೆದರೆ, ಮುಸ್ತಫಿಜುರ್ ರೆಹಮಾನ್, ಮಹಮ್ಮದುಲ್ಲಾ ತಲಾ 1 ವಿಕೆಟ್​ ಕಬಳಿಸಿದರು. ಡಿಸೆಂಬರ್​ 10ರಂದು ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಏಕದಿನ ಸರಣಿಯ ಕೊನೆಯ ಹಾಗೂ ಅಂತಿಮ ಪಂದ್ಯ ನಡೆಯಲಿದೆ.

ಬಾಂಗ್ಲಾದಲ್ಲಿ ಭಾರತಕ್ಕೆ 2ನೇ ಸರಣಿ ಸೋಲು: ಬಾಂಗ್ಲಾ ನೆಲದಲ್ಲಿ ಭಾರತಕ್ಕೆ ಇದು ಎರಡನೇ ಸತತ ಏಕದಿನ ಸರಣಿಯ ಸೋಲಾಗಿದೆ. 2015ರಲ್ಲಿ ನಡೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಸಹ 1-2 ರಿಂದ ಅಂತರದಿಂದ ಸೋಲುಂಡಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾ ಗೆದ್ದು ನಿಟ್ಟುಸಿರುಬಿಟ್ಟಿತ್ತು. ಈಗ ಮೊದಲೆರಡು ಪಂದ್ಯಗಳಲ್ಲಿ ಜಯ ದಾಖಲಿಸಿ ಬಾಂಗ್ಲಾ ಮತ್ತೆ ಸರಣಿ ಕೈವಶ ಮಾಡಿಕೊಂಡಿದ್ದು, ಅಂತಿಮ ಪಂದ್ಯದಲ್ಲಿ ಗೆದ್ದು ರೋಹಿತ್​ ಪಡೆ ಮಾನ ಉಳಿಸಿಕೊಳ್ಳಬೇಕಾಗಿದೆ!.

ಢಾಕಾ (ಬಾಂಗ್ಲಾದೇಶ): ಭಾರತದ ವಿರುದ್ಧದ ಏಕದಿನ ಸರಣಿಯನ್ನು ಬಾಂಗ್ಲಾದೇಶ 2-0 ಅಂತರದಿಂದ ಗೆದ್ದುಕೊಂಡಿದೆ. ಇಂದು ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುವ ಮೂಲಕ ಸರಣಿ ಸೋಲಿನ ಮುಖಭಂಗ ಅನುಭವಿಸಿತು.

ಢಾಕಾದ ಶೇರ್​ ಎ ಬಾಂಗ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ, 7 ವಿಕೆಟ್​ ನಷ್ಟಕ್ಕೆ 271 ರನ್​ಗಳನ್ನು ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ್ದ ರೋಹಿತ್​ ಟೀಂ 9 ವಿಕೆಟ್‌ಗಳನ್ನು ಕಳೆದುಕೊಂಡು 266 ರನ್​ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಸರಣಿ ಗೆಲುವಿನ ಕೇಕೆ ಹಾಕಿತು. ಗಾಯಗೊಂಡು 9ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ರೋಹಿತ್‌ ವೀರಾವೇಶದ ಹೋರಾಟ ಫಲ ನೀಡಲಿಲ್ಲ.

ಭಾರತಕ್ಕೆ ಆರಂಭಿಕ ಆಘಾತ: ಫೀಲ್ಡಿಂಗ್ ವೇಳೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಬ್ಯಾಟಿಂಗ್‌ಗೆ ಇಳಿಯಲು ಸಾಧ್ಯವಾಗಲಿಲ್ಲ. ಆದ್ದರಿಂದ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಕಣಕ್ಕಿಳಿದರು. ಇಬ್ಬರೂ ಕೂಡ ತಂಡಕ್ಕೆ ನಿರೀಕ್ಷಿತ ಆರಂಭ ನೀಡಲು ವಿಫಲರಾದರು.

ಕೇವಲ 5 ರನ್​ಗಳ ವಿರಾಟ್ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ 8 ರನ್​ ಗಳಿಸಿದ್ದ ಧವನ್​ ಕೂಡ ಪೆವಿಲಿಯನ್ ಸೇರಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸಿಗೆ ಬಂದಿದ್ದ ಶ್ರೇಯಸ್ ಅಯ್ಯರ್ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದರು. ಶ್ರೇಯಸ್​ಗೆ ಸರಿಯಾದ ಸಾಥ್​ ಸಿಗಲಿಲ್ಲ. ವಾಷಿಂಗ್ಟನ್​ ಸುಂದರ್​ (11) ಹಾಗೂ ಮೊದಲ ಪಂದ್ಯ ಪಂದ್ಯದಲ್ಲಿ ವಿರೋಚಿತ ಆಟ ಪ್ರದರ್ಶಿಸಿದ್ದ ಕೆಎಲ್​ ರಾಹುಲ್​ (14) ಕೂಡ ಬೇಗ ಔಟಾದರು.

ತಂಡಕ್ಕೆ ಆಸರೆಯಾದ ಶ್ರೇಯಸ್​-ಅಕ್ಷರ್: ನಂತರ ಶ್ರೇಯಸ್​​ ಜೊತೆಗೂಡಿದ ಅಕ್ಷರ್ ಪಟೇಲ್​ ಕೊಂಚ ಬಿರುಸಿನಿಂದಲೇ ಬ್ಯಾಟ್​ ಬೀಸಿದರು. ಈ ಜೋಡಿ ನೂರು ರನ್​ಗಳ ಜೊತೆಯಾಟ ನೀಡಿ, ತಂಡಕ್ಕೆ ಆಸರೆಯಾದರು. ಅಲ್ಲದೇ, ಭಾರತಕ್ಕೆ ಗೆಲುವಿನ ಆಸೆಯನ್ನೂ ಮೂಡಿಸಿದ್ದರು. ಇದರ ನಡುವೆ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್, ಶಕೀಬ್​ ಅಲ್​ ಹಸನ್ ಬೌಲಿಂಗ್​​ನಲ್ಲಿ​ ಕಾಚಿತ್ತರು. 102 ಎಸೆತಗಳನ್ನು​ ಎದುರಿಸಿದ ಶ್ರೇಯಸ್​ 3 ಸಿಕ್ಸರ್​ ಮತ್ತು 6 ಬೌಂಡರಿಗಳೊಂದಿಗೆ 82 ರನ್​ ಸಿಡಿಸಿದರು.

ಶ್ರೇಯಸ್​ ಬಳಿಕ 100 ರನ್​ ರೇಟ್​ನಲ್ಲಿ 56 ರನ್​ ಸಿಡಿಸಿದ್ದ ಅಕ್ಷರ್​ ಪಟೇಲ್​ ಕೂಡ ಔಟಾಗುವ ಮೂಲಕ ತಂಡಕ್ಕೆ ಆಘಾತ ನೀಡಿದರು. ಶಾರ್ದೂಲ್ ಠಾಕೂರ್ (7) ಮತ್ತು ದೀಪಕ್​ ಚಹಾರ್​ (11) ಕಾಣಿಕೆ ಒಪ್ಪಿಸಿ ಔಟಾದರು. ನಂತರ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ನಾಯಕ ರೋಹಿತ್​ ಆರಂಭದಲ್ಲಿ ಕೊಂಚ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿದರು. ಆದರೆ, ನಂತರ ಹೊಡಿಬಡಿ ಆಟಕ್ಕೆ ಮುಂದಾಗಿ ಮತ್ತೆ ಗೆಲುವಿನ ಆಸೆ ಚಿಗುರಿಸಿದರು.

ಪಂದ್ಯದ ಕೊನೆಯ ಓವರ್​ನಲ್ಲಿ ಭಾರತ ಗೆಲುವಿಗೆ 20 ರನ್​ಗಳ ಅಗತ್ಯವಿತ್ತು. ಈ ಓವರ್​ನಲ್ಲಿ ಮೊದಲ ಮೂರು ಎಸತೆಗಳಲ್ಲಿ ರೋಹಿತ್​ ಎರಡು ಬೌಂಡರಿಗಳು ಬಾರಿಸಿದರು. ನಂತರ ಒಂದು ಸಿಕ್ಸರ್​ ಬಾರಿಸಲು ಸಾಧ್ಯವಾಯಿತು. ಅಂತಿಮ ಎಸತೆದಲ್ಲಿ ಸಿಕ್ಸರ್​ ಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಪರಿಣಾಮ ಸೋಲು ಅನುಭವಿಸಬೇಕಾಯಿತು. ರೋಹಿತ್ 28 ಎಸೆತಗಳಲ್ಲಿ 5 ಸಿಕ್ಸರ್​​ ಹಾಗೂ 3 ಬೌಂಡರಿಗಳೊಂದಿಗೆ ಅಮೋಘ 51 ಬಾರಿಸಿದರೂ ಅದು ಪಂದ್ಯ ಗೆಲ್ಲಿಸಲು ಸಾಕಾಗಲಿಲ್ಲ.

ಡಿಸೆಂಬರ್​ 10ರಂದು ಅಂತಿಮ ಪಂದ್ಯ: ಬಾಂಗ್ಲಾ ಪರ ಎಬಾಡೋಟ್ ಹೊಸೈನ್ 3 ವಿಕೆಟ್​ ಮತ್ತು ಮೆಹಿದಿ ಹಸನ್ ಮಿರಾಜ್, ಶಕೀಬ್​ ಅಲ್​ ಹಸನ್ ತಲಾ 2 ವಿಕೆಟ್​ ಪಡೆದರೆ, ಮುಸ್ತಫಿಜುರ್ ರೆಹಮಾನ್, ಮಹಮ್ಮದುಲ್ಲಾ ತಲಾ 1 ವಿಕೆಟ್​ ಕಬಳಿಸಿದರು. ಡಿಸೆಂಬರ್​ 10ರಂದು ಚಿತ್ತಗಾಂಗ್​ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ಏಕದಿನ ಸರಣಿಯ ಕೊನೆಯ ಹಾಗೂ ಅಂತಿಮ ಪಂದ್ಯ ನಡೆಯಲಿದೆ.

ಬಾಂಗ್ಲಾದಲ್ಲಿ ಭಾರತಕ್ಕೆ 2ನೇ ಸರಣಿ ಸೋಲು: ಬಾಂಗ್ಲಾ ನೆಲದಲ್ಲಿ ಭಾರತಕ್ಕೆ ಇದು ಎರಡನೇ ಸತತ ಏಕದಿನ ಸರಣಿಯ ಸೋಲಾಗಿದೆ. 2015ರಲ್ಲಿ ನಡೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಸಹ 1-2 ರಿಂದ ಅಂತರದಿಂದ ಸೋಲುಂಡಿತ್ತು. ಕೊನೆಯ ಪಂದ್ಯದಲ್ಲಿ ಮಾತ್ರ ಟೀಂ ಇಂಡಿಯಾ ಗೆದ್ದು ನಿಟ್ಟುಸಿರುಬಿಟ್ಟಿತ್ತು. ಈಗ ಮೊದಲೆರಡು ಪಂದ್ಯಗಳಲ್ಲಿ ಜಯ ದಾಖಲಿಸಿ ಬಾಂಗ್ಲಾ ಮತ್ತೆ ಸರಣಿ ಕೈವಶ ಮಾಡಿಕೊಂಡಿದ್ದು, ಅಂತಿಮ ಪಂದ್ಯದಲ್ಲಿ ಗೆದ್ದು ರೋಹಿತ್​ ಪಡೆ ಮಾನ ಉಳಿಸಿಕೊಳ್ಳಬೇಕಾಗಿದೆ!.

Last Updated : Dec 7, 2022, 9:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.