ETV Bharat / sports

ಗಾಯದಿಂದ ಚೇತರಿಸಿಕೊಂಡ ಅಕ್ಷರ್, ಒಂದೂ ಪಂದ್ಯವಾಡದೆ ಹೊರಬಿದ್ದ ಕುಲ್ದೀಪ್

author img

By

Published : Mar 7, 2022, 4:34 PM IST

ಅಕ್ಷರ್ ಪಟೇಲ್​ ಕಣಕಾಲಿನ(ಪಾದ) ಗಾಯಕ್ಕೆ ತುತ್ತಾಗಿದ್ದರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ತವರಿನಲ್ಲಿ ನಡೆದ ಟಿ20 ಸರಣಿಗಳಲ್ಲಿ ಆಡುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಅಲ್ಲದೇ ವಿಂಡೀಸ್​ ಸರಣಿಗೂ ಮುನ್ನ ಅವರು ಕೋವಿಡ್ 19 ಸೋಂಕಿಗೂ ತುತ್ತಾಗಿದ್ದರು.

Axar Patel replaces Kuldeep Yadav for India's 2nd Test against SL
ಅಕ್ಷರ್ ಪಟೇಲ್ ಕುಲ್ದೀಪ್ ಯಾದವ್

ಬೆಂಗಳೂರು: ಆಲ್​ರೌಂಡರ್​ ಅಕ್ಷರ್​ ಪಟೇಲ್ ಗಾಯದಿಂದ ಚೇತರಿಸಿಕೊಂಡು ಬಂದಿರುವುದರಿಂದ ರಿಸ್ಟ್​ ಸ್ಪಿನ್ನರ್​ ಕುಲ್ದೀಪ್ ಯಾದವ್​ರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ.

ಅಕ್ಷರ್ ಪಟೇಲ್​ ಕಣಕಾಲಿನ ಗಾಯಕ್ಕೆ ತುತ್ತಾಗದ್ದರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ತವರಿನಲ್ಲಿ ನಡೆದ ಟಿ20 ಸರಣಿಗಳಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು. ಅಲ್ಲದೆ ವಿಂಡೀಸ್​ ಸರಣಿಗೂ ಮುನ್ನ ಅವರು ಕೋವಿಡ್ ಸೋಂಕಿಗೂ ತುತ್ತಾಗಿದ್ದರು.

ಅಕ್ಷರ್​ ನಮ್ಮ ಮೊದಲ ಆಯ್ಕೆಯಾಗಿದ್ದಾರೆ, ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ಕುಲ್ದೀಪ್​ ಅವರನ್ನು ಹೆಚ್ಚುವರಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅಕ್ಷರ್​ ಫಿಟ್​ ಆಗಿ ಮರಳಿದ್ದಾರೆ. ಆದ್ದರಿಂದ ಕುಲ್ದೀಪ್ ಯಾದವ್​ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಗೆ ತಂಡವನ್ನು ಘೋಷಿಸುವ ವೇಳೆ ಅಕ್ಷರ್​ ಪಟೇಲ್ 2ನೇ ಪಂದ್ಯದ ವೇಳೆಗೆ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಕುಲ್ದೀಪ್ 2021ರಲ್ಲಿ ಕೊನೆಯ ಬಾರಿ ಟೆಸ್ಟ್​ ಪಂದ್ಯವನ್ನಾಡಿದ್ದರು.

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆ ಇನ್ನಿಂಗ್ಸ್ ಮತ್ತು 222 ರನ್​ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ಮಾರ್ಚ್ ​12 ರಿಂದ 16ರವರೆಗೆ ನಡೆಲ್ಲಿಯಲಿದೆ, ಈ ಪಂದ್ಯ ಹಗಲು ರಾತ್ರಿ ಪಂದ್ಯವಾಗಿದೆ.

ಇದನ್ನೂ ಓದಿ:2022ರ ಐಪಿಎಲ್​ನ ಸಂಪೂರ್ಣ ಲೀಗ್ ವೇಳಾ ಪಟ್ಟಿ ಪ್ರಕಟಿಸಿದ ಬಿಸಿಸಿಐ

ಬೆಂಗಳೂರು: ಆಲ್​ರೌಂಡರ್​ ಅಕ್ಷರ್​ ಪಟೇಲ್ ಗಾಯದಿಂದ ಚೇತರಿಸಿಕೊಂಡು ಬಂದಿರುವುದರಿಂದ ರಿಸ್ಟ್​ ಸ್ಪಿನ್ನರ್​ ಕುಲ್ದೀಪ್ ಯಾದವ್​ರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ.

ಅಕ್ಷರ್ ಪಟೇಲ್​ ಕಣಕಾಲಿನ ಗಾಯಕ್ಕೆ ತುತ್ತಾಗದ್ದರಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ತವರಿನಲ್ಲಿ ನಡೆದ ಟಿ20 ಸರಣಿಗಳಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು. ಅಲ್ಲದೆ ವಿಂಡೀಸ್​ ಸರಣಿಗೂ ಮುನ್ನ ಅವರು ಕೋವಿಡ್ ಸೋಂಕಿಗೂ ತುತ್ತಾಗಿದ್ದರು.

ಅಕ್ಷರ್​ ನಮ್ಮ ಮೊದಲ ಆಯ್ಕೆಯಾಗಿದ್ದಾರೆ, ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣಕ್ಕಾಗಿ ಕುಲ್ದೀಪ್​ ಅವರನ್ನು ಹೆಚ್ಚುವರಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅಕ್ಷರ್​ ಫಿಟ್​ ಆಗಿ ಮರಳಿದ್ದಾರೆ. ಆದ್ದರಿಂದ ಕುಲ್ದೀಪ್ ಯಾದವ್​ರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.

ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿಗೆ ತಂಡವನ್ನು ಘೋಷಿಸುವ ವೇಳೆ ಅಕ್ಷರ್​ ಪಟೇಲ್ 2ನೇ ಪಂದ್ಯದ ವೇಳೆಗೆ ಆಯ್ಕೆಗೆ ಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಕುಲ್ದೀಪ್ 2021ರಲ್ಲಿ ಕೊನೆಯ ಬಾರಿ ಟೆಸ್ಟ್​ ಪಂದ್ಯವನ್ನಾಡಿದ್ದರು.

ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಪಡೆ ಇನ್ನಿಂಗ್ಸ್ ಮತ್ತು 222 ರನ್​ಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿದೆ. ಬೆಂಗಳೂರಿನಲ್ಲಿ ಮಾರ್ಚ್ ​12 ರಿಂದ 16ರವರೆಗೆ ನಡೆಲ್ಲಿಯಲಿದೆ, ಈ ಪಂದ್ಯ ಹಗಲು ರಾತ್ರಿ ಪಂದ್ಯವಾಗಿದೆ.

ಇದನ್ನೂ ಓದಿ:2022ರ ಐಪಿಎಲ್​ನ ಸಂಪೂರ್ಣ ಲೀಗ್ ವೇಳಾ ಪಟ್ಟಿ ಪ್ರಕಟಿಸಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.