ETV Bharat / sports

Asia Cup 2023: ಭಾರತದ ಸಾಂಘಿಕ ದಾಳಿಗೆ ಮಣಿದ ಲಂಕಾ.. ಫೈನಲ್​ಗೆ ಟೀಂ​ ಇಂಡಿಯಾ ಎಂಟ್ರಿ

author img

By ETV Bharat Karnataka Team

Published : Sep 12, 2023, 11:07 PM IST

Updated : Sep 12, 2023, 11:52 PM IST

ಏಷ್ಯಾಕಪ್​ ಸೂಪರ್​ಫೋರ್​ ಪಂದ್ಯದಲ್ಲಿ ಭಾರತದ ಎದುರು ಶ್ರೀಲಂಕಾ 41 ರನ್​ಗಳಿಂದ ಸೋಲು ಕಂಡಿತು.

Etv Bharat
Etv Bharat

ಕೊಲಂಬೊ (ಶ್ರೀಲಂಕಾ): ಸ್ಪಿನ್​ ಮೂಲಕ ಬಲಿಷ್ಠ ಭಾರತವನ್ನು ಕಟ್ಟಿ ಹಾಕಿದ್ದ ಶ್ರೀಲಂಕಾ ಟೀಂ​ ಇಂಡಿಯಾದ ಸಾಂಘಿಕ ದಾಳಿಗೆ ಸಿಲುಕಿ ಸೂಪರ್​ಫೋರ್​ ಪಂದ್ಯದಲ್ಲಿ 41 ರನ್​ಗಳ ಅಂತರದಿಂದ ಸೋಲು ಕಂಡಿತು. ಪಾಕಿಸ್ತಾನದ ವಿರುದ್ಧ 5 ವಿಕೆಟ್​ ಪಡೆದು ಮಿಂಚಿದ್ದ ಕುಲದೀಪ್ ಯಾದವ್ ಇಂದು ನಾಲ್ಕು ವಿಕೆಟ್ ಕಬಳಿಸಿ ತಂಡವನ್ನು ಫೈನಲ್​ಗೆ ಏರಿಸಿದರು.

ಮೊದಲು ಬ್ಯಾಟ್​ ಮಾಡಿ ಭಾರತ ನೀಡಿದ್ದ 214 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಲ್ಲೇ ಬ್ಯಾಟಿಂಗ್​ ವೈಫಲ್ಯ ಎದುರಿಸಿತು. ಮೊದಲ 10 ಓವರ್​ ಬೌಲ್​ ಮಾಡಿದ ಭಾರತದ ಸ್ಟಾರ್​ ವೇಗಿಗಳಾದ ಜಸ್ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್ ರನ್​ ಮೇಲೆ ಸಂಪೂರ್ಣ ಕಡಿವಾಣ ಹಾಕಿದರು. ಮೊದಲ ಪವರ್​ ಪ್ಲೇಯಲ್ಲಿ ಭಾರತೀಯ ಬೌಲರ್​ಗಳು ಲಂಕಾದ ಮೂವರು ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಕಳಿಸಿದರು. ಅಲ್ಲದೇ, ಮೂರು ಮೇಡಿನ್ ಓವರ್​ ಮಾಡಿದರು. ಇದರಿಂದ 10 ಓವರ್​ ಆಗುವಷ್ಟರಲ್ಲಿ ಲಂಕಾ 3 ವಿಕೆಟ್​ ನಷ್ಟಕ್ಕೆ 39 ರನ್​ ಗಳಿಸಿತು. ಪಾತುಮ್​ ನಿಸ್ಸಾಂಕ 6 ಮತ್ತು ಕುಸಾಲ್​ ಮೆಂಡಿಸ್​ 15 ರನ್​ಗೆ ಬುಮ್ರಾಗೆ ವಿಕೆಟ್​ ಕೊಟ್ಟರೆ, 2 ರನ್​ ಗಳಿಸಿದ್ದ ದಿಮುಕ ಕರುಣಾರತ್ನೆ ಅವರನ್ನು ಸಿರಾಜ್​ ಔಟಾದರು​.

ನಂತರ ಮಧ್ಯಮ ಕ್ರಮಾಂಕದ ಸಿಂಹಳೀಯ ಬ್ಯಾಟರ್​ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್​ ಅಸಲಂಕ ತಾಳ್ಮೆಯ ಆಟದ ಮೊರೆ ಹೋಗಿ ವಿಕೆಟ್​ ಕಾಯ್ದುಕೊಂಡರು. ಒಂದೊಂದೆ ರನ್​ ಕಲೆ ಹಾಕಿದರು. ಆದರೆ, ಪಾಕಿಸ್ತಾನದ ವಿರುದ್ಧ ಸ್ಪಿನ್​ ಮೋಡಿ ಮಾಡಿ​ ಐದು ವಿಕೆಟ್​ ಕಿತ್ತಿದ್ದ ಕುಲದೀಪ್​ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 17 ರನ್​ ಗಳಿಸಿ ಆಡುತ್ತಿದ್ದ ಸಮರವಿಕ್ರಮ ವಿಕೆಟ್​ ಪಡೆದರು. ಇದರ ಬೆನ್ನಲ್ಲೇ ​ ಚರಿತ್​ (22) ವಿಕೆಟ್ ಅನ್ನೂ ಕುಲದೀಪ್ ಕಬಳಿಸಿದರು.

ನಾಯಕ ದಸುನ್​ ಶನಕಾ 9 ರನ್​ ಗಳಿಸಿ ಜಡೇಜಾಗೆ ವಿಕೆಟ್​ ಕೊಟ್ಟರು. ಪಂದ್ಯ ಭಾರತಕ್ಕೆ ಸುಲಭ ತುತ್ತಾಗುತ್ತದೆ ಎಂದು ಭಾವಿಸುವಾಗ ದನಂಜಯ್​ ಡಿ ಸಿಲ್ವಾ ಮತ್ತು ಬೌಲಿಂಗ್​ನಲ್ಲಿ ಐದು ವಿಕೆಟ್​ ಪಡೆದು ಕಮಾಲ್​ ಮಾಡಿದ್ದ ದುನಿತ್ ವೆಲ್ಲಲಾಗೆ ಪಿಚ್​ಗೆ ಗಟ್ಟಿಯಾಗಿ ನಿಂತರು. ಇವರಿಬ್ಬರು ಕೆಳ ಕ್ರಮಾಂಕದಲ್ಲಿ ಭಾರತದ ಬೌಲರ್​ಗಳನ್ನು ಕಾಡಿದರು. ಅಲ್ಲದೇ, 7ನೇ ವಿಕೆಟ್​ಗೆ 63 ರನ್​ ಜೊತೆಯಾಟ ನೀಡಿದರು. ಈ ನಡುವೆ 41 ರನ್​ ಗಳಿಸಿ ಆಡುತ್ತಿದ್ದ ಡಿ ಸಿಲ್ವಾ ಅವರನ್ನು ಜಡೇಜಾ ಔಟ್​ ಮಾಡುವ ಮೂಲಕ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಮತ್ತೊಂದೆಡೆ, ಭಾರತದ ಬೌಲರ್​​ಗಳನ್ನು ವೆಲ್ಲಲಾಗೆ ಸಮರ್ಥವಾಗಿ ಎದುರಿಸಿದರು. ಕೊನೆಯ ಬಾಲಂಗೋಚಿಗಳ ಜೊತೆ ಇನ್ನಿಂಗ್ಸ್​ಕಟ್ಟಲು ಯತ್ನಿಸಿದರು. ಆದರೆ, ಹಾರ್ದಿಕ್​ ಪಾಂಡ್ಯ ಮತ್ತು ಕುಲದೀಪ್​ ವಿಕೆಟ್​ ಉರುಳಿಸಿ ಲಂಕಾ ತಂಡದ ಸರ್ವಪತನಕ್ಕೆ ಕಾರಣವಾದರು. ಭಾರತದ ಪರ ಕುಲದೀಪ್​ ಯಾದವ್​ 4, ಬುಮ್ರಾ ಮತ್ತು ಜಡೇಜಾ ತಲಾ ಎರಡು ಮತ್ತು ಸಿರಾಜ್​, ಹಾರ್ದಿಕ್​ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: ವಿಂಡೀಸ್​ ದಿಗ್ಗಜರ ದಾಖಲೆ ಮುರಿದು ವಿಶೇಷ ಗುರುತು ನಿರ್ಮಿಸಿದ ವಿರಾಟ್​ - ರೋಹಿತ್​ ಜೋಡಿ

ಕೊಲಂಬೊ (ಶ್ರೀಲಂಕಾ): ಸ್ಪಿನ್​ ಮೂಲಕ ಬಲಿಷ್ಠ ಭಾರತವನ್ನು ಕಟ್ಟಿ ಹಾಕಿದ್ದ ಶ್ರೀಲಂಕಾ ಟೀಂ​ ಇಂಡಿಯಾದ ಸಾಂಘಿಕ ದಾಳಿಗೆ ಸಿಲುಕಿ ಸೂಪರ್​ಫೋರ್​ ಪಂದ್ಯದಲ್ಲಿ 41 ರನ್​ಗಳ ಅಂತರದಿಂದ ಸೋಲು ಕಂಡಿತು. ಪಾಕಿಸ್ತಾನದ ವಿರುದ್ಧ 5 ವಿಕೆಟ್​ ಪಡೆದು ಮಿಂಚಿದ್ದ ಕುಲದೀಪ್ ಯಾದವ್ ಇಂದು ನಾಲ್ಕು ವಿಕೆಟ್ ಕಬಳಿಸಿ ತಂಡವನ್ನು ಫೈನಲ್​ಗೆ ಏರಿಸಿದರು.

ಮೊದಲು ಬ್ಯಾಟ್​ ಮಾಡಿ ಭಾರತ ನೀಡಿದ್ದ 214 ರನ್​ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡ ಆರಂಭದಲ್ಲೇ ಬ್ಯಾಟಿಂಗ್​ ವೈಫಲ್ಯ ಎದುರಿಸಿತು. ಮೊದಲ 10 ಓವರ್​ ಬೌಲ್​ ಮಾಡಿದ ಭಾರತದ ಸ್ಟಾರ್​ ವೇಗಿಗಳಾದ ಜಸ್ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್ ರನ್​ ಮೇಲೆ ಸಂಪೂರ್ಣ ಕಡಿವಾಣ ಹಾಕಿದರು. ಮೊದಲ ಪವರ್​ ಪ್ಲೇಯಲ್ಲಿ ಭಾರತೀಯ ಬೌಲರ್​ಗಳು ಲಂಕಾದ ಮೂವರು ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಕಳಿಸಿದರು. ಅಲ್ಲದೇ, ಮೂರು ಮೇಡಿನ್ ಓವರ್​ ಮಾಡಿದರು. ಇದರಿಂದ 10 ಓವರ್​ ಆಗುವಷ್ಟರಲ್ಲಿ ಲಂಕಾ 3 ವಿಕೆಟ್​ ನಷ್ಟಕ್ಕೆ 39 ರನ್​ ಗಳಿಸಿತು. ಪಾತುಮ್​ ನಿಸ್ಸಾಂಕ 6 ಮತ್ತು ಕುಸಾಲ್​ ಮೆಂಡಿಸ್​ 15 ರನ್​ಗೆ ಬುಮ್ರಾಗೆ ವಿಕೆಟ್​ ಕೊಟ್ಟರೆ, 2 ರನ್​ ಗಳಿಸಿದ್ದ ದಿಮುಕ ಕರುಣಾರತ್ನೆ ಅವರನ್ನು ಸಿರಾಜ್​ ಔಟಾದರು​.

ನಂತರ ಮಧ್ಯಮ ಕ್ರಮಾಂಕದ ಸಿಂಹಳೀಯ ಬ್ಯಾಟರ್​ಗಳಾದ ಸದೀರ ಸಮರವಿಕ್ರಮ ಮತ್ತು ಚರಿತ್​ ಅಸಲಂಕ ತಾಳ್ಮೆಯ ಆಟದ ಮೊರೆ ಹೋಗಿ ವಿಕೆಟ್​ ಕಾಯ್ದುಕೊಂಡರು. ಒಂದೊಂದೆ ರನ್​ ಕಲೆ ಹಾಕಿದರು. ಆದರೆ, ಪಾಕಿಸ್ತಾನದ ವಿರುದ್ಧ ಸ್ಪಿನ್​ ಮೋಡಿ ಮಾಡಿ​ ಐದು ವಿಕೆಟ್​ ಕಿತ್ತಿದ್ದ ಕುಲದೀಪ್​ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 17 ರನ್​ ಗಳಿಸಿ ಆಡುತ್ತಿದ್ದ ಸಮರವಿಕ್ರಮ ವಿಕೆಟ್​ ಪಡೆದರು. ಇದರ ಬೆನ್ನಲ್ಲೇ ​ ಚರಿತ್​ (22) ವಿಕೆಟ್ ಅನ್ನೂ ಕುಲದೀಪ್ ಕಬಳಿಸಿದರು.

ನಾಯಕ ದಸುನ್​ ಶನಕಾ 9 ರನ್​ ಗಳಿಸಿ ಜಡೇಜಾಗೆ ವಿಕೆಟ್​ ಕೊಟ್ಟರು. ಪಂದ್ಯ ಭಾರತಕ್ಕೆ ಸುಲಭ ತುತ್ತಾಗುತ್ತದೆ ಎಂದು ಭಾವಿಸುವಾಗ ದನಂಜಯ್​ ಡಿ ಸಿಲ್ವಾ ಮತ್ತು ಬೌಲಿಂಗ್​ನಲ್ಲಿ ಐದು ವಿಕೆಟ್​ ಪಡೆದು ಕಮಾಲ್​ ಮಾಡಿದ್ದ ದುನಿತ್ ವೆಲ್ಲಲಾಗೆ ಪಿಚ್​ಗೆ ಗಟ್ಟಿಯಾಗಿ ನಿಂತರು. ಇವರಿಬ್ಬರು ಕೆಳ ಕ್ರಮಾಂಕದಲ್ಲಿ ಭಾರತದ ಬೌಲರ್​ಗಳನ್ನು ಕಾಡಿದರು. ಅಲ್ಲದೇ, 7ನೇ ವಿಕೆಟ್​ಗೆ 63 ರನ್​ ಜೊತೆಯಾಟ ನೀಡಿದರು. ಈ ನಡುವೆ 41 ರನ್​ ಗಳಿಸಿ ಆಡುತ್ತಿದ್ದ ಡಿ ಸಿಲ್ವಾ ಅವರನ್ನು ಜಡೇಜಾ ಔಟ್​ ಮಾಡುವ ಮೂಲಕ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಮತ್ತೊಂದೆಡೆ, ಭಾರತದ ಬೌಲರ್​​ಗಳನ್ನು ವೆಲ್ಲಲಾಗೆ ಸಮರ್ಥವಾಗಿ ಎದುರಿಸಿದರು. ಕೊನೆಯ ಬಾಲಂಗೋಚಿಗಳ ಜೊತೆ ಇನ್ನಿಂಗ್ಸ್​ಕಟ್ಟಲು ಯತ್ನಿಸಿದರು. ಆದರೆ, ಹಾರ್ದಿಕ್​ ಪಾಂಡ್ಯ ಮತ್ತು ಕುಲದೀಪ್​ ವಿಕೆಟ್​ ಉರುಳಿಸಿ ಲಂಕಾ ತಂಡದ ಸರ್ವಪತನಕ್ಕೆ ಕಾರಣವಾದರು. ಭಾರತದ ಪರ ಕುಲದೀಪ್​ ಯಾದವ್​ 4, ಬುಮ್ರಾ ಮತ್ತು ಜಡೇಜಾ ತಲಾ ಎರಡು ಮತ್ತು ಸಿರಾಜ್​, ಹಾರ್ದಿಕ್​ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: ವಿಂಡೀಸ್​ ದಿಗ್ಗಜರ ದಾಖಲೆ ಮುರಿದು ವಿಶೇಷ ಗುರುತು ನಿರ್ಮಿಸಿದ ವಿರಾಟ್​ - ರೋಹಿತ್​ ಜೋಡಿ

Last Updated : Sep 12, 2023, 11:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.