ETV Bharat / sports

ಧವನ್ ನೇತೃತ್ವದ ಭಾರತ ತಂಡವನ್ನು ದ್ವಿತೀಯ ದರ್ಜೆ ಎಂದ ರಣತುಂಗಾಗೆ ಆಕಾಶ್ ಚೋಪ್ರಾ ತಿರುಗೇಟು

author img

By

Published : Jul 4, 2021, 7:45 PM IST

ಪ್ರಸ್ತುತ ಶ್ರೀಲಂಕಾ ಇಂಗ್ಲೆಂಡ್​ ಪ್ರವಾಸದಲ್ಲಿ 3 ಟಿ20 ಪಂದ್ಯಗಳಲ್ಲಿ ಯಾವುದೇ ಪೈಪೋಟಿಯಿಲ್ಲದೆ ಕಳೆದುಕೊಂಡಿದೆ. ಇನ್ನು, ಏಕದಿನ ಸರಣಿಯನ್ನು ಕೂಡ ಕಳೆದುಕೊಂಡಿದ್ದು, ವೈಟ್​ ವಾಶ್​ ಮುಖಭಂಗಕ್ಕೀಡಾಗುವ ದಾರಿಯಲ್ಲಿದೆ. ಶ್ರೇಯಾಂಕ ಪಟ್ಟಿಯಲ್ಲಿ ನೋಡುವುದಾದರೆ, ಟೆಸ್ಟ್​ನಲ್ಲಿ 8, ಏಕದಿನ ಮತ್ತು ಟಿ20ಯಲ್ಲಿ 9ನೇ ಶ್ರೇಯಾಂಕದಲ್ಲಿದೆ..

ಶ್ರೀಲಂಕಾ vs ಭಾರತ ಏಕದಿನ ಸರಣಿ
ಶ್ರೀಲಂಕಾ vs ಭಾರತ ಏಕದಿನ ಸರಣಿ

ಮುಂಬೈ : ಸ್ಟಾರ್​ ಕ್ರಿಕೆಟಿಗರ ಅನುಪಸ್ಥಿತಿಯಲ್ಲು ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವ ಶಿಖರ್ ಧವನ್​ ನೇತೃತ್ವದ ಭಾರತ ತಂಡವನ್ನು ದ್ವಿತೀಯ ದರ್ಜೆ ತಂಡ ಎಂದು ಕರೆದಿದ್ದ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​ ಆಕಾಶ್ ಚೋಪ್ರಾ ತಿರಗೇಟು ನೀಡಿದ್ದಾರೆ.

ಭಾರತ ತಂಡದ ತನ್ನ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿ ಶ್ರೀಲಂಕಾ ಕ್ರಿಕೆಟ್​ಅನ್ನು ಅವಮಾನಕ್ಕೀಡು ಮಾಡುತ್ತಿದೆ. ಇದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಬಾರದಿತ್ತು ಎಂದು ಎರಡು ದಿನಗಳ ಹಿಂದೆ ರಣತುಂಗಾ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದರು ಆಕಾಶ್ ಚೋಪ್ರಾ, ಹೌದು, ಭಾರತ ತಂಡದ ತನ್ನ ಪ್ರಮುಖ ಆಟಗಾರರಿಲ್ಲದೆ ಈ ಪ್ರವಾಸ ಕೈಗೊಳ್ಳುತ್ತಿದೆ. ಆದರೆ, ಇಲ್ಲಿ ದ್ವಿತೀಯ ದರ್ಜೆ ಎಂದು ಕರೆದಿರುವುದನ್ನು ಪ್ರಶ್ನಿಸಿದ್ದಾರೆ. ಏಕೆಂದರೆ, ಶಿಖರ್ ಧವನ್​, ಭುವನೇಶ್ವರ್ ಕುಮಾರ್​, ಹಾರ್ದಿಕ್ ಪಾಂಡ್ಯ, ಚಹಾಲ್, ಕುಲ್ದೀಪ್ ಯಾದವ್​ ಇರುವ ತಂಡಕ್ಕೂ, ಪ್ರಸ್ತುತ ಶ್ರೀಲಂಕಾ ತಂಡಕ್ಕೂ ಹೋಲಿಕೆ ಮಾಡಿದರೆ ಯಾವ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

"ಹೌದು, ಖಂಡಿತ ಇದು ಪ್ರಮುಖ ತಂಡವಲ್ಲ, ಬುಮ್ರಾ, ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಲ್ಲಿಲ್ಲ. ಆದರೆ, ಈ ತಂಡ ಬಿ ಗ್ರೇಡ್​ ತಂಡದಂತಿದೆಯೇ? ಭಾರತಲ್ಲಿ ಸಂಭಾವ್ಯ ಏಕದಿನ ತಂಡ 471 ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದೆ"

"ಖಂಡಿತ ಇದು ಭಾರತದ ಮೊದಲ ತಂಡವಲ್ಲ. ಆದರೆ, ಶ್ರೀಲಂಕಾ ಈ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗ ಅವರ ತಂಡದಲ್ಲಿ ಎಲ್ಲಾ ಆಟಗಾರರಿಂದ ಎಷ್ಟು ಪಂದ್ಯಗಳನ್ನು ಆಡಿದ ಅನುಭವವಿದೆ ಎಂಬುವುದನ್ನು ನೋಡಲು ಕುತೂಹಲಕಾರಿಯಾಗಿದೆ. ಅದೊಂದು ಬಹಳ ರೋಮಾಂಚಕಾರಿಯಾಗಲಿದೆ" ಎಂದು ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಟಿ20 ವಿಶ್ವಕಪ್ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ನೇರ ಅರ್ಹತೆ ಪಡೆಯುವಲ್ಲಿ ಅರ್ಹತೆ ಕಳೆದುಕೊಂಡಿರುವುದನ್ನು ನೆನಪಿಸಿರುವ ಚೋಪ್ರಾ, ಶ್ರೀಲಂಕಾ ಮೊದಲು ತಮ್ಮ ಒಳಮುಖವನ್ನು ನೋಡಿಕೊಳ್ಳಬೇಕಿದೆ. ಹೊಸ ತಂಡವಾದ ಆಪ್ಘಾನಿಸ್ತಾನ ತಂಡ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆದಿದ್ದರೆ, ಶ್ರೀಲಂಕಾ ಕ್ವಾಲಿಫೈಯರ್​ ಸುತ್ತಿನಲ್ಲಿ ಆಡಬೇಕಿದೆ ಎಂದು ಹೇಳಿ ರಣತುಂಗಾರ ಕಾಲೆಳೆದಿದ್ದಾರೆ.

ಪ್ರಸ್ತುತ ಶ್ರೀಲಂಕಾ ಇಂಗ್ಲೆಂಡ್​ ಪ್ರವಾಸದಲ್ಲಿ 3 ಟಿ20 ಪಂದ್ಯಗಳಲ್ಲಿ ಯಾವುದೇ ಪೈಪೋಟಿಯಿಲ್ಲದೆ ಕಳೆದುಕೊಂಡಿದೆ. ಇನ್ನು, ಏಕದಿನ ಸರಣಿಯನ್ನು ಕೂಡ ಕಳೆದುಕೊಂಡಿದ್ದು, ವೈಟ್​ ವಾಶ್​ ಮುಖಭಂಗಕ್ಕೀಡಾಗುವ ದಾರಿಯಲ್ಲಿದೆ. ಶ್ರೇಯಾಂಕ ಪಟ್ಟಿಯಲ್ಲಿ ನೋಡುವುದಾದರೆ, ಟೆಸ್ಟ್​ನಲ್ಲಿ 8, ಏಕದಿನ ಮತ್ತು ಟಿ20ಯಲ್ಲಿ 9ನೇ ಶ್ರೇಯಾಂಕದಲ್ಲಿದೆ.

ಇದನ್ನು ಓದಿ: ಮಿಥಾಲಿ ರಾಜ್​ ಮಹಿಳಾ ಕ್ರಿಕೆಟ್​ನ 'ಸಚಿನ್​ ತೆಂಡೂಲ್ಕರ್​': ಶಾಂತಾ ರಂಗಸ್ವಾಮಿ

ಮುಂಬೈ : ಸ್ಟಾರ್​ ಕ್ರಿಕೆಟಿಗರ ಅನುಪಸ್ಥಿತಿಯಲ್ಲು ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವ ಶಿಖರ್ ಧವನ್​ ನೇತೃತ್ವದ ಭಾರತ ತಂಡವನ್ನು ದ್ವಿತೀಯ ದರ್ಜೆ ತಂಡ ಎಂದು ಕರೆದಿದ್ದ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​ ಆಕಾಶ್ ಚೋಪ್ರಾ ತಿರಗೇಟು ನೀಡಿದ್ದಾರೆ.

ಭಾರತ ತಂಡದ ತನ್ನ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿ ಶ್ರೀಲಂಕಾ ಕ್ರಿಕೆಟ್​ಅನ್ನು ಅವಮಾನಕ್ಕೀಡು ಮಾಡುತ್ತಿದೆ. ಇದಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಬಾರದಿತ್ತು ಎಂದು ಎರಡು ದಿನಗಳ ಹಿಂದೆ ರಣತುಂಗಾ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದರು ಆಕಾಶ್ ಚೋಪ್ರಾ, ಹೌದು, ಭಾರತ ತಂಡದ ತನ್ನ ಪ್ರಮುಖ ಆಟಗಾರರಿಲ್ಲದೆ ಈ ಪ್ರವಾಸ ಕೈಗೊಳ್ಳುತ್ತಿದೆ. ಆದರೆ, ಇಲ್ಲಿ ದ್ವಿತೀಯ ದರ್ಜೆ ಎಂದು ಕರೆದಿರುವುದನ್ನು ಪ್ರಶ್ನಿಸಿದ್ದಾರೆ. ಏಕೆಂದರೆ, ಶಿಖರ್ ಧವನ್​, ಭುವನೇಶ್ವರ್ ಕುಮಾರ್​, ಹಾರ್ದಿಕ್ ಪಾಂಡ್ಯ, ಚಹಾಲ್, ಕುಲ್ದೀಪ್ ಯಾದವ್​ ಇರುವ ತಂಡಕ್ಕೂ, ಪ್ರಸ್ತುತ ಶ್ರೀಲಂಕಾ ತಂಡಕ್ಕೂ ಹೋಲಿಕೆ ಮಾಡಿದರೆ ಯಾವ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

"ಹೌದು, ಖಂಡಿತ ಇದು ಪ್ರಮುಖ ತಂಡವಲ್ಲ, ಬುಮ್ರಾ, ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಲ್ಲಿಲ್ಲ. ಆದರೆ, ಈ ತಂಡ ಬಿ ಗ್ರೇಡ್​ ತಂಡದಂತಿದೆಯೇ? ಭಾರತಲ್ಲಿ ಸಂಭಾವ್ಯ ಏಕದಿನ ತಂಡ 471 ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದೆ"

"ಖಂಡಿತ ಇದು ಭಾರತದ ಮೊದಲ ತಂಡವಲ್ಲ. ಆದರೆ, ಶ್ರೀಲಂಕಾ ಈ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗ ಅವರ ತಂಡದಲ್ಲಿ ಎಲ್ಲಾ ಆಟಗಾರರಿಂದ ಎಷ್ಟು ಪಂದ್ಯಗಳನ್ನು ಆಡಿದ ಅನುಭವವಿದೆ ಎಂಬುವುದನ್ನು ನೋಡಲು ಕುತೂಹಲಕಾರಿಯಾಗಿದೆ. ಅದೊಂದು ಬಹಳ ರೋಮಾಂಚಕಾರಿಯಾಗಲಿದೆ" ಎಂದು ಆಕಾಶ್ ಚೋಪ್ರ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಟಿ20 ವಿಶ್ವಕಪ್ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಲ್ಲಿ ನೇರ ಅರ್ಹತೆ ಪಡೆಯುವಲ್ಲಿ ಅರ್ಹತೆ ಕಳೆದುಕೊಂಡಿರುವುದನ್ನು ನೆನಪಿಸಿರುವ ಚೋಪ್ರಾ, ಶ್ರೀಲಂಕಾ ಮೊದಲು ತಮ್ಮ ಒಳಮುಖವನ್ನು ನೋಡಿಕೊಳ್ಳಬೇಕಿದೆ. ಹೊಸ ತಂಡವಾದ ಆಪ್ಘಾನಿಸ್ತಾನ ತಂಡ ಟಿ20 ವಿಶ್ವಕಪ್​ಗೆ ನೇರ ಅರ್ಹತೆ ಪಡೆದಿದ್ದರೆ, ಶ್ರೀಲಂಕಾ ಕ್ವಾಲಿಫೈಯರ್​ ಸುತ್ತಿನಲ್ಲಿ ಆಡಬೇಕಿದೆ ಎಂದು ಹೇಳಿ ರಣತುಂಗಾರ ಕಾಲೆಳೆದಿದ್ದಾರೆ.

ಪ್ರಸ್ತುತ ಶ್ರೀಲಂಕಾ ಇಂಗ್ಲೆಂಡ್​ ಪ್ರವಾಸದಲ್ಲಿ 3 ಟಿ20 ಪಂದ್ಯಗಳಲ್ಲಿ ಯಾವುದೇ ಪೈಪೋಟಿಯಿಲ್ಲದೆ ಕಳೆದುಕೊಂಡಿದೆ. ಇನ್ನು, ಏಕದಿನ ಸರಣಿಯನ್ನು ಕೂಡ ಕಳೆದುಕೊಂಡಿದ್ದು, ವೈಟ್​ ವಾಶ್​ ಮುಖಭಂಗಕ್ಕೀಡಾಗುವ ದಾರಿಯಲ್ಲಿದೆ. ಶ್ರೇಯಾಂಕ ಪಟ್ಟಿಯಲ್ಲಿ ನೋಡುವುದಾದರೆ, ಟೆಸ್ಟ್​ನಲ್ಲಿ 8, ಏಕದಿನ ಮತ್ತು ಟಿ20ಯಲ್ಲಿ 9ನೇ ಶ್ರೇಯಾಂಕದಲ್ಲಿದೆ.

ಇದನ್ನು ಓದಿ: ಮಿಥಾಲಿ ರಾಜ್​ ಮಹಿಳಾ ಕ್ರಿಕೆಟ್​ನ 'ಸಚಿನ್​ ತೆಂಡೂಲ್ಕರ್​': ಶಾಂತಾ ರಂಗಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.