ಅನಿರುಧ್ ಜತ್ಕರ್ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಆದರೆ ಇದೀಗ ಅಭಿಮಾನಿಗಳು ಅನಿರುಧ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸಂದೇಶಗಳಿಗೆ ಅನಿರುಧ್ ರಿಪ್ಲೇ ಮಾಡುತ್ತಿಲ್ಲ ಎಂಬುದೇ ಅವರ ಬೇಸರಕ್ಕೆ ಕಾರಣ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಅನಿರುಧ್ ಅವರಿಗೆ ದಿನಕ್ಕೆ ಎಷ್ಟೋ ಮೆಸೇಜ್ಗಳು ಬರುತ್ತಿವೆ. ಆದರೆ ಶೂಟಿಂಗ್ ಬ್ಯುಸಿ, ವೈಯಕ್ತಿಕ ಕೆಲಸಗಳ ನಡುವೆ ಅಭಿಮಾನಿಗಳ ಸಂದೇಶಗಳಿಗೆ ಪ್ರತಿಕ್ರಿಯಿಸಲು ಅನಿರುಧ್ ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಈ ಕಾರಣಕ್ಕೆ ಅನಿರುಧ್ ಮೇಲೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಅನಿರುಧ್ ಧೀರ್ಘ ಪತ್ರ ಬರೆದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ಅನಿರುಧ್ ಬರೆದಿರುವ ಪತ್ರದ ಸಾರಾಂಶ ಈ ರೀತಿ ಇದೆ.
- " class="align-text-top noRightClick twitterSection" data="">