ETV Bharat / sitara

ವೀಕೆಂಡ್ ವಿಥ್ ರಮೇಶ್ ಸೀಸನ್​ 4 ಗೆ ಮುಹೂರ್ತ ಫಿಕ್ಸ್​... ಮೊದಲ ಸಾಧಕರು ವೀರೇಂದ್ರ ಹೆಗ್ಗಡೆ - undefined

ವೀಕೆಂಡ್ ವಿಥ್ ರಮೇಶ್ ಸೀಸನ್​ 4 ಇದೇ 20 ರಂದು ಪ್ರಾರಂಭವಾಗುತ್ತಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಆಗಮಿಸಲಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
author img

By

Published : Apr 15, 2019, 11:34 PM IST

ವೀಕೆಂಡ್ ವಿಥ್ ರಮೇಶ್ ಸೀಸನ್​ 4ರ ಮೊದಲ ಅತಿಥಿಯಾಗಿ ವೀರೇಂದ್ರ ಹೆಗ್ಗಡೆಯವರು ಬರುತ್ತಿದ್ದಾರೆ. ಇದೇ ಶನಿವಾರ ಪ್ರಸಾರವಾಗಲಿರುವ ಮೊದಲ ಎಫಿಸೋಡಿನ ಸಾಧಕರ ಸೀಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಾಣಿಸಿಕೊಳ್ಳಲಿದ್ದಾರೆ.

ಝೀ ವಾಹಿನಿ ತಮ್ಮ ಫೇಸ್​ಬುಕ್​​ನಲ್ಲಿ ಮೊದಲ ಅತಿಥಿಯ ಪ್ರೋಮೋ ಬಿಡುಗಡೆ ಮಾಡಿದೆ. ವಿರೇಂದ್ರ ಹೆಗ್ಗಡೆಯವರ ಕುಟುಂಬ, ಅವರ ಮೊದಲ ಕಾರು, ಮಕ್ಕಳು, ಗೆಳೆಯರು, ಹಿತೈಷಿಗಳು ಹಾಗೂ ಅವರ ಶಾಲಾ ದಿನಗಳಲ್ಲಿ ದಾಖಲಾಗಿದ್ದ ಅಂಕಪಟ್ಟಿ, ರೆಕಾರ್ಡ್ಸ್, ಹೀಗೆ ಹಲವು ಸನ್ನಿವೇಶಗಳು ಪ್ರೋಮೋದಲ್ಲಿ ರಿವೀಲ್ ಆಗಿವೆ. ಶೋನಲ್ಲಿ ಅವರ ತಂದೆಯವರ ಮಾತುಗಳನ್ನು ನೆನೆದು ಹೆಗ್ಗಡೆಯವರು ಕಣ್ಣೀರು ಹಾಕುವಂತಹ ಭಾವುಕ ಕ್ಷಣ ಕೂಡ ಇದರಲ್ಲಿದೆ. ಇದೇ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

  • " class="align-text-top noRightClick twitterSection" data="">

ವೀಕೆಂಡ್ ವಿಥ್ ರಮೇಶ್ ಸೀಸನ್​ 4ರ ಮೊದಲ ಅತಿಥಿಯಾಗಿ ವೀರೇಂದ್ರ ಹೆಗ್ಗಡೆಯವರು ಬರುತ್ತಿದ್ದಾರೆ. ಇದೇ ಶನಿವಾರ ಪ್ರಸಾರವಾಗಲಿರುವ ಮೊದಲ ಎಫಿಸೋಡಿನ ಸಾಧಕರ ಸೀಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಾಣಿಸಿಕೊಳ್ಳಲಿದ್ದಾರೆ.

ಝೀ ವಾಹಿನಿ ತಮ್ಮ ಫೇಸ್​ಬುಕ್​​ನಲ್ಲಿ ಮೊದಲ ಅತಿಥಿಯ ಪ್ರೋಮೋ ಬಿಡುಗಡೆ ಮಾಡಿದೆ. ವಿರೇಂದ್ರ ಹೆಗ್ಗಡೆಯವರ ಕುಟುಂಬ, ಅವರ ಮೊದಲ ಕಾರು, ಮಕ್ಕಳು, ಗೆಳೆಯರು, ಹಿತೈಷಿಗಳು ಹಾಗೂ ಅವರ ಶಾಲಾ ದಿನಗಳಲ್ಲಿ ದಾಖಲಾಗಿದ್ದ ಅಂಕಪಟ್ಟಿ, ರೆಕಾರ್ಡ್ಸ್, ಹೀಗೆ ಹಲವು ಸನ್ನಿವೇಶಗಳು ಪ್ರೋಮೋದಲ್ಲಿ ರಿವೀಲ್ ಆಗಿವೆ. ಶೋನಲ್ಲಿ ಅವರ ತಂದೆಯವರ ಮಾತುಗಳನ್ನು ನೆನೆದು ಹೆಗ್ಗಡೆಯವರು ಕಣ್ಣೀರು ಹಾಕುವಂತಹ ಭಾವುಕ ಕ್ಷಣ ಕೂಡ ಇದರಲ್ಲಿದೆ. ಇದೇ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

  • " class="align-text-top noRightClick twitterSection" data="">
Intro:ವೀಕೆಂಡ್ ವಿಥ್ ರಮೇಶ್ 4ರಲ್ಲಿ ಮೊದಲ ಅಥಿತಿ ವೀರೇಂದ್ರ ಹೆಗ್ಗಡೆಯವರ Exclusive Best Moments ರಿವಿಲ್ ಮಾಡಿದ ಖಾಸಗಿ ವಾಹಿನಿ.Body:ಅಂತೂ ಇಂತೂ ವೀಕೆಂಡ್ ವಿಥ್ ರಮೇಶ್ ಸೀಸನ್ 4 ರ ಪ್ರಸಾರದ ದಿನಾಂಕ ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಸಂಚಿಕೆಯ ಮೊದಲ ಅಥಿತಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಎಕ್ಸ್ ಕ್ಲುಸೀವ್ ತುಣುಕುಗಳನ್ನು ವಾಹಿನಿ ಬಿಡುಗಡೆ ಮಾಡಿದೆ.
ವಿರೇಂದ್ರ ಹೆಗ್ಗಡೆಯವರ ಕುಟುಂಬ, ಅವರ ಮೊದಲ ಕಾರ್, ಮಕ್ಕಳು, ಗೆಳೆಯರು, ಹಿತೈಷಿಗಳು ಹಾಗೂ ಅವರ ಶಾಲಾ ದಿನಗಳಲ್ಲಿ ದಾಖಲಾಗಿದ್ದ ಅಂಕಪಟ್ಟಿ, ರೇಕಾರ್ಡ್ಸ್ .. ಹೀಗೆ ಹಲವು ಸನ್ನಿವೇಶಗಳನ್ನು ರಮೇಶ್ ಅರವಿಂದ್ ನೆನಪಿನ ಬುತ್ತಿಯನ್ನು ಬಿಚ್ಚಿಕೊಡಲಿದ್ದಾರೆ. Conclusion:ಒಂದನೇ ತರಗತಿಯಲ್ಲಿ ಫಸ್ಟ್ ರ್ಯಾಂಕ್ ಬಂದಿದ್ದನ್ನು ರಮೇಶ್ ನೆನಪಿಸುತ್ತಾರೆ. ಆದರೆ ನನಗೆ ಮರೆತುಹೋಗಿದೆ ಅಂತಾರೆ ಹೆಗ್ಗಡೆಯವರು. ಇನ್ನೂ ಸಹೋದರ ಹರ್ಷ ಜೊತೆ ಹೆಗ್ಗಡೆಯವರನ್ನು ಜನ ಗೊಂದಲ ಮಾಡಿಕೊಳ್ಳೂತ್ತಾರಂತೆ. ಏಕೆಂದರೆ ಇಬ್ಬರು ಒಂದೇ ರೀತಿಯಲ್ಲಿ ಕಾಣಿಸುತ್ತಾರೆ ಹೀಗಾಗಿ. ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಮಾಜೋಯಿಸ್ ಸರ್ ಪ್ರೈಸ್ ಆಗಿ ಬಂದು ತಮ್ಮಿಬ್ಬರ ಒಡನಾಟವನ್ನು ಹಂಚಿಕೊಳ್ಳುತ್ತಾರೆ.
ಹೆಗ್ಗಡೆಯವರು ತಮ್ಮ ಮೊಮ್ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಾರೆ ಆದರೆ ಬೌಲಿಂಗ್ ಮಾತ್ರವಂತೆ. ಇನ್ನು ಅವರ ನೆಚ್ಚಿನ ಆಟವಾದ ಬ್ಯಾಡ್ಮಿಂಟನ್ ಅನ್ನು ಶೋನಲ್ಲೇ ಆಡುವ ಮೂಲಕ ಗಮನಸೆಳೆಯುತ್ತಾರೆ.
ಹಾಗೆಯೇ, ಅವರ ನೆಚ್ಚಿನ ಫಿಯೆಟ್ ಕಾರಿನಲ್ಲಿ ತಮ್ಮ ತಂದೆಯನ್ನು ಕೂರಿಸಿಕೊಂಡು ಬಂದಿದ್ದನ್ನು ನೆನೆಯುತ್ತಾರೆ. ಹಾಗೆಯೇ, ಅವರ ತಂದೆಯವರ ಮಾತುಗಳನ್ನು ನೆನೆದು ಕಣ್ಣೀರು ಹಾಕುವಂತಹ ಭಾವುಕ ಕ್ಷಣ ಮನಸ್ಸಿನಲ್ಲಿ ಉಳಿಯುತ್ತದೆ.
ಪತ್ನಿಗೆ sorry ಹೇಳ್ತಾರಂತೆ. ಪ್ರತಿ ದಿನ ಜನ ತೋರಿಸುವ
ಪ್ರೀತಿ, ವಿಶ್ವಾಸವನ್ನು ಮಂಜುನಾಥನಿಗೆ ಅರ್ಪಿಸುತ್ತೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡುತ್ತಾರೆ.
ಇನ್ನೂ ಹೆಚ್ಚಿನದನ್ನು ನೋಡಲು ಏಪ್ರಿಲ್ 20ರವರೆಗೆ ಕಾಯಬೇಕು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.