ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನಾಗಿ ಮಾತ್ರವಲ್ಲ, ಗಾಯಕರಾಗಿ, ನಿರೂಪಕರಾಗಿ, ನಿರ್ಮಾಪಕರಾಗಿ ಕೂಡಾ ಹೆಸರು ಮಾಡಿದ್ದಾರೆ. ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಿಸಿರುವ ಪುನೀತ್ ಈಗ ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್ ವತಿಯಿಂದ ಕಿರುತೆರೆಯಲ್ಲಿ ಹೊಸ ಪ್ರಾಜೆಕ್ಟ್ ಆರಂಭಿಸುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ನಿರ್ಮಿಸುತ್ತಿರುವ ಧಾರಾವಾಹಿಗೆ 'ನೇತ್ರಾವತಿ' ಎಂದು ಶೀರ್ಷಿಕೆ ಇಡಲಾಗಿದೆ. ಇದರ ಪ್ರೋಮೋವನ್ನು ಉದಯ ಟಿವಿ ಬಿಡುಗಡೆಮಾಡಿದೆ. ಇದೊಂದು ಭಕ್ತಿ ಪ್ರಧಾನ ಧಾರಾವಾಹಿಯಾಗಿದ್ದು, ಧಾರಾವಾಹಿ ಕಲಾವಿದರ ಬಗ್ಗೆ ಯಾವುದೇ ವಿಚಾರವನ್ನು ಬಹಿರಂಗಗೊಳಿಸಿಲ್ಲ. "ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್ ವತಿಯಿಂದ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಪ್ರಾರಂಭವಾಗುತ್ತಿದ್ದು ಇದೊಂದು ಭಕ್ತಿ ಪ್ರಧಾನ ಕಥೆಯಾಗಿದೆ ಎಂದು ಪುನೀತ್ ರಾಜಕುಮಾರ್ ತಿಳಿಸಿದ್ದಾರೆ. ಶೀಘ್ರವೇ ಈ ಧಾರಾವಾಹಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. 'ನೇತ್ರಾವತಿ' ಧಾರಾವಾಹಿಯನ್ನು ಸಂತೋಷ್ ಗೌಡ ನಿರ್ದೇಶಿಸುತ್ತಿದ್ದಾರೆ. ಪೂರ್ಣಿಮಾ ಪ್ರೊಡಕ್ಷನ್ಸ್ ಬ್ಯಾನರ್ನಿಂದ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೊದಲ ಧಾರಾವಾಹಿ ಇದಾಗಿದೆ.

ಇದನ್ನೂ ಓದಿ: ಕಿರುತೆರೆಯಿಂದ ಕರಿಯರ್ ಆರಂಭಿಸಿ ಲವ್ಲಿ ಸ್ಟಾರ್ ಪ್ರೇಮ್ಗೆ ನಾಯಕಿಯಾದ ಚೆಲುವೆ
ಕಿರುತೆರೆ ಪ್ರೇಕ್ಷಕರು ಹೊಸ ಸೀರಿಯಲ್ ನೋಡಲು ಕಾಯುತ್ತಿದ್ದಾರೆ. 'ನೇತ್ರಾವತಿ' ಎಂಬ ಹೆಸರೇ ಸೂಚಿಸುವಂತೆ ಇದೊಂದು ಮಹಿಳಾ ಪ್ರಧಾನ ಧಾರಾವಾಹಿಯಾಗಿದೆ. ಉದಯ ಟಿವಿಯಲ್ಲಿ ಶೀಘ್ರದಲ್ಲೇ ಈ ಧಾರಾವಾಹಿ ಪ್ರಸಾರ ವಾಗಲಿದೆ. ನೇತ್ರಾವತಿ ಎಂದರೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ನೆನಪಾಗಲೇಬೇಕು. ಮಂಜುನಾಥನ ಅಪ್ಪಟ ಭಕ್ತೆಯ ಕಥೆ ಈ ಧಾರಾವಾಹಿಯಲ್ಲಿ ಇರಲಿದೆಯಂತೆ. ಜೀವನದಲ್ಲಿ ಏನೇ ಕಷ್ಟ ಎದುರಾದರೂ ಮಂಜುನಾಥನ ಮೇಲೆ ನಂಬಿಕೆ ಇಟ್ಟಿರುವ ನೇತ್ರಾವತಿಯ ಬಗ್ಗೆ ತಿಳಿದುಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವವರು ಯಾರು? ಯಾವ ಸಮಯಕ್ಕೆ “ನೇತ್ರಾವತಿ” ಪ್ರಸಾರ ಆಗಲಿದೆ ಎಂಬ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.