ETV Bharat / sitara

ಕುರುಕ್ಷೇತ್ರ ಹಾಡುಗಳ ಬಿಡುಗಡೆಯಿಂದ ದೂರವೇ ಉಳಿದ ಮಾಧ್ಯಮಗಳು..!

author img

By

Published : Jul 6, 2019, 10:57 AM IST

Updated : Jul 6, 2019, 12:08 PM IST

ನಾಳೆ ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್​ ಮುನಿರತ್ನ ಕುರುಕ್ಷೇತ್ರ ಚಿತ್ರದ ಆಡಿಯೋ ರಿಲೀಸ್​​ ಆಗಲಿದೆ. 10 ಪಟ್ಟು ಪಾಸ್​ಗಳ ವಿತರಣೆ ಮಾಡಲಾಗಿದ್ದು ಧ್ವನಿ ಸುರುಳಿಕೆ ಬಿಡುಗಡೆಯಲ್ಲಿ ಅಭಿಮಾನಿಗಳಿಂದ ಕುರುಕ್ಷೇತ್ರ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂಬ ಮಾತುಗಳು ತೂರಿಬರುತ್ತಿವೆ.

ಮುನಿರತ್ನ ಕುರುಕ್ಷೇತ್ರ

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ತಣ್ಣಗಾಗಿದ್ದ ಉತ್ಸಾಹವನ್ನು ಬಡಿದೆಬ್ಬಿಸಿದೆ. ಇನ್ನು ನಾಳೆ (ಜು.7) ಚಿತ್ರದ ಧ್ವನಿ ಸುರುಳಿಕೆ ಅನಾವರಣಗೊಳ್ಳುತ್ತಿದ್ದು ಅಭಿಮಾನಿಗಳಿಂದ ಕುರುಕ್ಷೇತ್ರ ನಡೆದರೂ ಆಶ್ಚರ್ಯ ಪಡಬೇಕಿಲ್ಲ.

Kurukshetra movie audio release on 7th
ನಟ ಅರ್ಜುನ್​ ಸರ್ಜಾ

ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಮಾಡಲಾಗುತ್ತಿದ್ದು 3000 ವ್ಯಕ್ತಿಗಳು ತುಂಬುವ ಸ್ಟೇಡಿಯಂನಲ್ಲಿ ಅದರ 10 ಪಟ್ಟು ಪಾಸ್​ಗಳ ವಿತರಣೆ ಮಾಡಲಾಗಿದೆಯಂತೆ. ಜೊತೆಗೆ ಖಾಸಗಿ ವಾಹಿನಿಯೊಂದು ಇಡೀ ಕಾರ್ಯಕ್ರಮದ ಹಕ್ಕನ್ನು ಪಡೆದುಕೊಂಡಿದ್ದರಿಂದ ಇನ್ನುಳಿದ ಮಾಧ್ಯಮಗಳು ಕಾರ್ಯಕ್ರಮದಿಂದ ದೂರವೇ ಇರಬೇಕಾಗಿದೆ. ಬೇರೆ ವಾಹಿನಿಗಳಿಗೆ ಇಲ್ಲಿ ಪ್ರವೇಶ ಇಲ್ಲದಿರುವುದರಿಂದ ಆ ವಾಹಿನಿಗಳಿಗೆ ಬೇಕಾದ 1 ಅಥವಾ 2 ನಿಮಿಶದ ಕ್ಲಿಪ್​ ಅನ್ನು ಹಕ್ಕು ಪಡೆದ ವಾಹಿನಿಯೇ ಸರಬರಾಜು ಮಾಡಲಿದ್ದಾರಂತೆ. ಇನ್ನು ಯಾರೂ ಸ್ಥಿರ ಚಿತ್ರಗಳನ್ನು ಕ್ಲಿಕ್ಕಿಸಬಾರದು ಎಂಬ ನಿಯಮವಿದ್ದುದರಿಂದ ಯಾವ ಪತ್ರಿಕಾ ಛಾಯಾಗ್ರಾಹಕರು ಇಲ್ಲಿ ಕಾಣಿಸುವುದಿಲ್ಲ.

ಸಂಜೆ 5.30ಕ್ಕೆ ನಡೆಯುವ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲ ಪಾತ್ರವರ್ಗದ ನಟರು ಹಾಜರಿರಲಿದ್ದಾರೆ. ಇನ್ನು ಅಂಬರೀಶ್​ ಚಿತ್ರದಲ್ಲಿ ಭೀಷ್ಮನ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದು ಅವರು ಕಾಲವಾಗಿದ್ದರಿಂದ ಇದು ಎಲ್ಲರನ್ನು ಕಾಡಲಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Kurukshetra movie audio release on 7th
ನಟ ದರ್ಶನ್​

ಇನ್ನು ಸ್ಯಾಂಡಲ್​ವುಡ್​ನ ತಾರಾಬಳಗ ಇಲ್ಲಿ ಸಂಗಮ ಆಗುವುದರಿಂದಲೇ ಖಾಸಗಿ ವಾಹಿನಿ ದೊಡ್ಡ ಮೊತ್ತಕ್ಕೆ ಹಕ್ಕನ್ನು ಖರೀದಿ ಮಾಡಿದೆಯಂತೆ. ಪಾಂಡವರು ಒಂದು ಕಡೆ, ಕೌರವರು ಎದುರಾಗಿ ಮಧ್ಯೆ ಶ್ರೀ ಕೃಷ್ಣ ಪರಮಾತ್ಮ ಕೂರುವಂತ ವೇದಿಕೆ ಸಹ ಸಜ್ಜಾಗುತ್ತಿದೆ. 'ಮುನಿರತ್ನ ಕುರುಕ್ಷೇತ್ರ' ಸಿನಿಮಾದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ವಿ ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ.

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಘೋಷಿಸುವ ಮೂಲಕ ಅಭಿಮಾನಿಗಳಲ್ಲಿ ತಣ್ಣಗಾಗಿದ್ದ ಉತ್ಸಾಹವನ್ನು ಬಡಿದೆಬ್ಬಿಸಿದೆ. ಇನ್ನು ನಾಳೆ (ಜು.7) ಚಿತ್ರದ ಧ್ವನಿ ಸುರುಳಿಕೆ ಅನಾವರಣಗೊಳ್ಳುತ್ತಿದ್ದು ಅಭಿಮಾನಿಗಳಿಂದ ಕುರುಕ್ಷೇತ್ರ ನಡೆದರೂ ಆಶ್ಚರ್ಯ ಪಡಬೇಕಿಲ್ಲ.

Kurukshetra movie audio release on 7th
ನಟ ಅರ್ಜುನ್​ ಸರ್ಜಾ

ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಮಾಡಲಾಗುತ್ತಿದ್ದು 3000 ವ್ಯಕ್ತಿಗಳು ತುಂಬುವ ಸ್ಟೇಡಿಯಂನಲ್ಲಿ ಅದರ 10 ಪಟ್ಟು ಪಾಸ್​ಗಳ ವಿತರಣೆ ಮಾಡಲಾಗಿದೆಯಂತೆ. ಜೊತೆಗೆ ಖಾಸಗಿ ವಾಹಿನಿಯೊಂದು ಇಡೀ ಕಾರ್ಯಕ್ರಮದ ಹಕ್ಕನ್ನು ಪಡೆದುಕೊಂಡಿದ್ದರಿಂದ ಇನ್ನುಳಿದ ಮಾಧ್ಯಮಗಳು ಕಾರ್ಯಕ್ರಮದಿಂದ ದೂರವೇ ಇರಬೇಕಾಗಿದೆ. ಬೇರೆ ವಾಹಿನಿಗಳಿಗೆ ಇಲ್ಲಿ ಪ್ರವೇಶ ಇಲ್ಲದಿರುವುದರಿಂದ ಆ ವಾಹಿನಿಗಳಿಗೆ ಬೇಕಾದ 1 ಅಥವಾ 2 ನಿಮಿಶದ ಕ್ಲಿಪ್​ ಅನ್ನು ಹಕ್ಕು ಪಡೆದ ವಾಹಿನಿಯೇ ಸರಬರಾಜು ಮಾಡಲಿದ್ದಾರಂತೆ. ಇನ್ನು ಯಾರೂ ಸ್ಥಿರ ಚಿತ್ರಗಳನ್ನು ಕ್ಲಿಕ್ಕಿಸಬಾರದು ಎಂಬ ನಿಯಮವಿದ್ದುದರಿಂದ ಯಾವ ಪತ್ರಿಕಾ ಛಾಯಾಗ್ರಾಹಕರು ಇಲ್ಲಿ ಕಾಣಿಸುವುದಿಲ್ಲ.

ಸಂಜೆ 5.30ಕ್ಕೆ ನಡೆಯುವ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುತೇಕ ಎಲ್ಲ ಪಾತ್ರವರ್ಗದ ನಟರು ಹಾಜರಿರಲಿದ್ದಾರೆ. ಇನ್ನು ಅಂಬರೀಶ್​ ಚಿತ್ರದಲ್ಲಿ ಭೀಷ್ಮನ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದು ಅವರು ಕಾಲವಾಗಿದ್ದರಿಂದ ಇದು ಎಲ್ಲರನ್ನು ಕಾಡಲಿದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

Kurukshetra movie audio release on 7th
ನಟ ದರ್ಶನ್​

ಇನ್ನು ಸ್ಯಾಂಡಲ್​ವುಡ್​ನ ತಾರಾಬಳಗ ಇಲ್ಲಿ ಸಂಗಮ ಆಗುವುದರಿಂದಲೇ ಖಾಸಗಿ ವಾಹಿನಿ ದೊಡ್ಡ ಮೊತ್ತಕ್ಕೆ ಹಕ್ಕನ್ನು ಖರೀದಿ ಮಾಡಿದೆಯಂತೆ. ಪಾಂಡವರು ಒಂದು ಕಡೆ, ಕೌರವರು ಎದುರಾಗಿ ಮಧ್ಯೆ ಶ್ರೀ ಕೃಷ್ಣ ಪರಮಾತ್ಮ ಕೂರುವಂತ ವೇದಿಕೆ ಸಹ ಸಜ್ಜಾಗುತ್ತಿದೆ. 'ಮುನಿರತ್ನ ಕುರುಕ್ಷೇತ್ರ' ಸಿನಿಮಾದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಪಡೆದುಕೊಂಡಿದೆ. ವಿ ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ.

ನಾಳೆ ಕುರುಕ್ಷೇತ್ರ ಹಾಡುಗಳ ಅನಾವರಣ ಎಲ್ಲ ಮಾಧ್ಯಮಕ್ಕೆ ಇಲ್ಲ ಅವಕಾಶ

ನಾಳೆ ನಿಜಕ್ಕೂ ಕಾರ್ಯಕ್ರಮ ವೀಕ್ಷಣೆ ಮಾಡಲು ಅಭಿಮಾನಿಗಳಿಂದ ಕುರುಕ್ಷೇತ್ರವೆ ನಡೆದರೂ ಆಶ್ಚರ್ಯವೇನಿಲ್ಲ. 3000 ವ್ಯಕ್ತಿಗಳು ತುಂಬುವ ಕೋರಮಂಗಲ ಸ್ಟೇಡಿಯಂ ಈಗ ಅದರ 10 ಪಟ್ಟು ಪಾಸ್ಗಳ ವಿತರಣೆ ಮಾಡಲಾಗಿದೆ ಎಂದು ವಿವರಣೆ ಬಂದಿದೆ. ಇದರ ಜೊತೆಗೆ ಖಾಸಗಿ ವಾಹಿನಿ ಇಡೀ ಕಾರ್ಯಕ್ರಮದ ಹಕ್ಕನ್ನು ಪಡೆದುಕೊಂಡು, ಲಹರಿ ಸಂಸ್ಥೆ ಹಾಡುಗಳ ಹಕ್ಕನ್ನು ಪಡೆದು ಈ ಮುನಿರತ್ನ ಕುರುಕ್ಷೇತ್ರ ಕಾರ್ಯಕ್ರಮಕ್ಕೆ ಮಾಧ್ಯಮಗಳನ್ನು ದೂರ ಇಡಲಾಗಿದೆ.

ವಿಷಯ ಏನಪ್ಪಾ ಅಂದರೆ ಯಾವುದೇ ವಾಹಿನಿಗಳು ಅಲ್ಲಿ ಪ್ರವೇಶ ಮಾಡುವಂತಿಲ್ಲ. ಜೀ ಟಿ ವಿ ತಾವು ಪಡೆದ ಹಕ್ಕನ್ನು ಕರಾರುವಾಕ್ಕಾಗಿ ಚಲಾಯಿಸುತ್ತಿದ್ದಾರೆ. ವಾಹಿನಿಗಳಿಗೆ ಬೇಕಾದ 1 ಅಥವಾ 2 ನಿಮಿಶದ ಕ್ಲಿಪ್ ಅನ್ನು ಅವರೇ ಸರಬರಾಜು ಮಾಡುತ್ತಾರೆ. ಇನ್ನೂ ಪತ್ರಿಕಾ ಛಾಯಾಗ್ರಾಹಕರು ಯಾರು ಸ್ಥಿರ ಚಿತ್ರಗಳನ್ನು ಕ್ಲಿಕ್ಕಿಸಬಾರದು.  ಹಾಗಾಗಿ ಯಾವ ಛಾಯಾಗ್ರಾಹಕರು ಬರುವಂತಿಲ್ಲ.

ಸಂಜೆ 5.30 ಕ್ಕೆ ಕುರುಕ್ಷೇತ್ರ ಧ್ವನಿ ಸಾಂದ್ರಿಕೆ ಬಿಡುಗಡೆ, ಮತ್ತೊಂದು ಟ್ರೈಲರ್ ಕಾರ್ಯಕ್ರಮದಲ್ಲೂ ಬಹುತೇಕ ಪಾತ್ರವರ್ಗ ಹಾಜರಿ ರುತ್ತಾರೆ. ಡಾ ಅಂಬರೀಶ್ ಅವರ ಭೀಷ್ಮ ಪಾತ್ರ ದಾರಿ ಕಾಲವಾಗಿದ್ದು ಎಲ್ಲರನ್ನು ಕಾಡುವುದು ಇದೆ. ಕಲಾವಿದರ ಸಂಗಮ ಆಗುವುದರಿಂದಲೇ ಖಾಸಗಿ ವಾಹಿನಿ ದೊಡ್ಡ ಮೊತ್ತಕ್ಕೆ ಹಕ್ಕನ್ನು ಖರೀದಿ ಮಾಡಿದೆ.

ಪಾಂಡವರು ಒಂದು ಕಡೆ, ಕೌರವರು ಎದುರಾಗಿ ಮಧ್ಯೆ ಶ್ರೀ ಕೃಷ್ಣ ಪರಮಾತ್ಮ ಕೂರುವಂತ ವೇದಿಕೆ ಸಹ ಸಜ್ಜಾಗುತ್ತಿದೆ.

Last Updated : Jul 6, 2019, 12:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.