ETV Bharat / sitara

ವೀಕೆಂಡ್​ ಟೆಂಟ್​ ಹಾಟ್​ ಸೀಟ್​ ಮೇಲೆ ಇನ್ಫಿ ನಾರಾಯಣಮೂರ್ತಿ - undefined

ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊದಲ ಸೀಸನ್​​ನಿಂದಲೂ ಇವರನ್ನು ಸಾಧಕರ ಸೀಟಿನ ಮೇಲೆ ನೋಡುವ ಬಯಕೆ ವೀಕ್ಷಕರದಾಗಿತ್ತು. ಆದರೆ, ಈ ಕನ್ನಡಿಗರ ಕನಸು ಈಡೇರಲು ನಾಲ್ಕು ಸೀಸನ್ ಕಾಯಬೇಕಾಯಿತು.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 24, 2019, 5:20 PM IST

Updated : May 24, 2019, 7:39 PM IST

ಬೆಂಗಳೂರು: ಅಭಿಮಾನಿಗಳ ಅಪೇಕ್ಷೆಯಂತೆ ಈ ಬಾರಿ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಆಗಮಿಸುತ್ತಿದ್ದಾರೆ.

ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊದಲ ಸೀಸನ್​​ನಿಂದಲೂ ಇವರನ್ನು ಸಾಧಕರ ಸೀಟಿನ ಮೇಲೆ ನೋಡುವ ಬಯಕೆ ವೀಕ್ಷಕರದಾಗಿತ್ತು. ಆದರೆ, ಕನ್ನಡಿಗರ ಈ ಕನಸು ಈಡೇರಲು ನಾಲ್ಕು ಸೀಸನ್ ಕಾಯಬೇಕಾಯಿತು. ಈ ಬಾರಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ವೀಕೆಂಡ್ ಟೆಂಟ್​ನಲ್ಲಿ ಕಾಣಿಸಿಕೊಳ್ಳುವ ಅಮೃತ ಘಳಿಗೆ ಕೊನೆಗೂ ಬಂದಿದೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಜನಿಸಿದ ನಾಗವಾರ ರಾಮರಾವ್ ನಾರಾಯಣಮೂರ್ತಿ, ಮೈಸೂರಿನ ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜನಿಯರಿಂಗ್​ ಪದವಿ ಪಡೆದು, ಕಾನ್ಪುರ ಐಐಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು 1981ರಲ್ಲಿ ಐವರೊಂದಿಗೆ ಸೇರಿ ಕೇವಲ 10 ಸಾವಿರ ರೂಪಾಯಿ ಬಂಡವಾಳ ಹೂಡಿ ಬೆಂಗಳೂರಿನಲ್ಲಿ ಇನ್ಫೋಸಿಸ್ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿದರು. ಇವರು 20 ವರ್ಷ ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದೀಗ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹಾಗೂ ಹಿತಚಿಂತಕರಾಗಿದ್ದಾರೆ.

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ನಾರಾಯಣ ಮೂರ್ತಿ ಅವರು, ತಮ್ಮ ಯಶಸ್ಸಿನ ಪಯಣವನ್ನು ಎಳೆ ಎಳೆಯಾಗಿ ರಮೇಶ್ ಅರವಿಂದ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಹಾಗೂ ಸಂಸಾರಿಕ ಜೀವನದಲ್ಲಿ ಅವರ ಹೆಜ್ಜೆಗೆ ಹೆಜ್ಜೆಯಾದ ಪತ್ನಿ ಸುಧಾಮೂರ್ತಿ, ಮಕ್ಕಳು, ಸಹ ಸಂಸ್ಥಾಪಕರು, ಕಾಲೇಜಿನ ಗೆಳೆಯರು, ಕುಟುಂಬ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಅವರೊಂದಿಗಿನ ಒಡನಾಟ ಹಾಗೂ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಅವರ ಸಂಚಿಕೆಯ ಒಂದು ಸಣ್ಣ ಪ್ರೋಮೋ ಜೀ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಜೂನ್ 1ರಂದು ಕಾರ್ಯಕ್ರಮ ಪ್ರಸಾರವಾಗಲಿದೆ. ಮರುದಿನ (ಜೂನ್ 2) ರಂದು ಸುಧಾ ಮೂರ್ತಿ ಅವರ ಜೀವನಗಾಥೆ ವಿಕೇಂಡ್ ಟೆಂಟ್​ನಲ್ಲಿ ಅನಾವರಣಗೊಳ್ಳಲಿದೆ.

ಬೆಂಗಳೂರು: ಅಭಿಮಾನಿಗಳ ಅಪೇಕ್ಷೆಯಂತೆ ಈ ಬಾರಿ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಆಗಮಿಸುತ್ತಿದ್ದಾರೆ.

ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊದಲ ಸೀಸನ್​​ನಿಂದಲೂ ಇವರನ್ನು ಸಾಧಕರ ಸೀಟಿನ ಮೇಲೆ ನೋಡುವ ಬಯಕೆ ವೀಕ್ಷಕರದಾಗಿತ್ತು. ಆದರೆ, ಕನ್ನಡಿಗರ ಈ ಕನಸು ಈಡೇರಲು ನಾಲ್ಕು ಸೀಸನ್ ಕಾಯಬೇಕಾಯಿತು. ಈ ಬಾರಿ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ವೀಕೆಂಡ್ ಟೆಂಟ್​ನಲ್ಲಿ ಕಾಣಿಸಿಕೊಳ್ಳುವ ಅಮೃತ ಘಳಿಗೆ ಕೊನೆಗೂ ಬಂದಿದೆ.

ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಜನಿಸಿದ ನಾಗವಾರ ರಾಮರಾವ್ ನಾರಾಯಣಮೂರ್ತಿ, ಮೈಸೂರಿನ ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜನಿಯರಿಂಗ್​ ಪದವಿ ಪಡೆದು, ಕಾನ್ಪುರ ಐಐಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು 1981ರಲ್ಲಿ ಐವರೊಂದಿಗೆ ಸೇರಿ ಕೇವಲ 10 ಸಾವಿರ ರೂಪಾಯಿ ಬಂಡವಾಳ ಹೂಡಿ ಬೆಂಗಳೂರಿನಲ್ಲಿ ಇನ್ಫೋಸಿಸ್ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿದರು. ಇವರು 20 ವರ್ಷ ಈ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದೀಗ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಹಾಗೂ ಹಿತಚಿಂತಕರಾಗಿದ್ದಾರೆ.

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ನಾರಾಯಣ ಮೂರ್ತಿ ಅವರು, ತಮ್ಮ ಯಶಸ್ಸಿನ ಪಯಣವನ್ನು ಎಳೆ ಎಳೆಯಾಗಿ ರಮೇಶ್ ಅರವಿಂದ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಹಾಗೂ ಸಂಸಾರಿಕ ಜೀವನದಲ್ಲಿ ಅವರ ಹೆಜ್ಜೆಗೆ ಹೆಜ್ಜೆಯಾದ ಪತ್ನಿ ಸುಧಾಮೂರ್ತಿ, ಮಕ್ಕಳು, ಸಹ ಸಂಸ್ಥಾಪಕರು, ಕಾಲೇಜಿನ ಗೆಳೆಯರು, ಕುಟುಂಬ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಅವರೊಂದಿಗಿನ ಒಡನಾಟ ಹಾಗೂ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಅವರ ಸಂಚಿಕೆಯ ಒಂದು ಸಣ್ಣ ಪ್ರೋಮೋ ಜೀ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಜೂನ್ 1ರಂದು ಕಾರ್ಯಕ್ರಮ ಪ್ರಸಾರವಾಗಲಿದೆ. ಮರುದಿನ (ಜೂನ್ 2) ರಂದು ಸುಧಾ ಮೂರ್ತಿ ಅವರ ಜೀವನಗಾಥೆ ವಿಕೇಂಡ್ ಟೆಂಟ್​ನಲ್ಲಿ ಅನಾವರಣಗೊಳ್ಳಲಿದೆ.

Intro:ಹಲವು ವರ್ಷಗಳ ಅಭಿಮಾನಿಗಳ ಅಪೇಕ್ಷೆಯಂತೆ ಈ ಸೀಸನ್ ಅಲ್ಲಿ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮ ದ ಸಾಧಕರ ಸೀಟ್ ನಲ್ಲಿ ಕೂತಿದ್ದಾರೆ ಇನ್ಫೋಸಿಸ್ ದಿಗ್ಗಜರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ.
ವಿಶ್ವ ಮಟ್ಟದಲ್ಲಿ ಬೆಂಗಳೂರನ್ನುತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಎತ್ತರಕ್ಕೆ ಪರಿಚಯಿಸಿದ ಕೀರ್ತಿ ಇವವರಿಗೆ ಸಲ್ಲಲಿದೆ.Body:ಬೆಂಗಳೂರು: ಈ ಬಾರಿಯ ಸೀಸನ್ ಅಲ್ಲಿ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮ ಆರಂಭವಾದಾಗಿನಿಂದಲೂ ಕೇವಲ ಸಿನಿಮಾ ನಟ-ನಟಿಯರೇ ಸಾಧಕರ ಸೀಟ್ ಅಲಂಕರಿಸಿದ್ದು, ಪ್ರೇಕ್ಷಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.
ಆದರೆ, ಇಷ್ಟು ದಿನಗಳ ಕಾಲ ಜನರು ಕಾತುರದಿಂದ ಕಾಯುತ್ತಿದ್ದ ಆ ಅಮೃತ ಘಳಿಗೆ ಕೊನೆಗೂ ಬಂದಿದೆ. ಕಳೆದ ಮೂರು ಸೀಸನ್‌ಗಳಿಂದ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರನ್ನು ಸಾಧಕರ ಸೀಟ್‌ ಮೇಲೆ ನೋಡುವ ಇಚ್ಚೆಯನ್ನು ಜನರು ಜೀ ಕನ್ನಡ ವಾಹಿನಿಯ ಮುಂದಿಟ್ಟಿದ್ದು, ಕೊನೆಗೂ ಅವರ ಆಸೆಯನ್ನು ವಾಹಿನಿ ನೆರವೇರಿಸಿದೆ.
ಎನ್.ಆರ್.ನಾರಾಯಣ ಮೂರ್ತಿ ಅವರ ಪರಿಚಯ ಇಲ್ಲಿದೆ..
ನಾಗವಾರ ರಾಮರಾವ್ ನಾರಾಯಣಮೂರ್ತಿ ಅಂದಿನ ಕೋಲಾರ ಇಂದಿನ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಜನಿಸಿದ ಇವರು, ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರ್ ಪದವಿ ಪಡೆದು, ಕಾನ್ಪುರ ಐ.ಐ.ಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1981 ರಲ್ಲಿ ನಾರಾಯನಮೂರ್ತಿ ಅವರು ತಮ್ಮ ಜೊತೆ ಐವರೊಂದಿಗೆ ಕೇವಲ 10 ಸಾವಿರ ರೂಪಾಯಿ ಬಂಡವಾಳ ದೊಂದಿಗೆ ಬೆಂಗಳೂರಿನ ಆಗಿನ ಹೊರವಲಯದಲ್ಲಿ ಇನ್ಫೋಸಿಸ್ ಎಂಬ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು.
ಇವರ ಪತ್ನಿ ಸುಧಾ ಮೂರ್ತಿ ಸಮಾಜ ಸೇವಕಿ ಹಾಗೂ ಬರಹಗಾರ್ತಿ. ಮಗ ರೋಹನ್ ಮೂರ್ತಿ ಹಾಗೂ ಮಗಳು ಅಕ್ಷತಾ ಮೂರ್ತಿ. ರೋಹನ್ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಸೊಸೈಟಿ ಆಫ್ ಫೆಲೋಸ್', 'ಜೂನಿಯರ್ ಫೆಲೊ' ಆಗಿದ್ದಾರೆ.
ಭಾರತ ಮೂಲದ ವಿಶ್ವದ ಅತಿ ದೊಡ್ಡ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ನ ಸಂಸ್ಥಾಪಕರು.
ಸುಮಾರು ಇಪ್ಪತ್ತು ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಇದೀಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ, ಹಾಗು ಹಿತಚಿಂತಕ ಅಧಿಕಾರಿಯಾಗಿದ್ದಾರೆ. ಅಲ್ಲದೆ, ಉದ್ಯಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳ ನಿರ್ವಾಹಕ ಮಂಡಳಿಗಳ ಸದಸ್ಯರಾಗಿದ್ದಾರೆ.
ನಾರಾಯಣ ಮೂರ್ತಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.
ಇವರ ಜೀವನದ ಯಶಸ್ಸಿನ ಹಾದಿಯನ್ನು ಎಳೆ ಎಳೆಯಾಗಿ ರಮೇಶ್ ಅರವಿಂದ್ ಅವರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನ ಹಾಗೂ ಸಾಂಸಾರಿಕ ಜೀವನದಲ್ಲಿ ಅವರ ಹೆಜ್ಜೆಗೆ ಹೆಜ್ಜೆಯಾದ ಪತ್ನಿ, ಮಕ್ಕಳು, ಸಹ ಸಂಸ್ಥಾಪಕರು, ಕಾಲೇಜಿನ ಗೆಳೆಯರು, ಕುಟುಂಬ ಸದಸ್ಯರು, ಬಂಧುಗಳು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಅವರೊಂದಿಗಿನ ಒಡನಾಟ ಹಾಗೂ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರ ಸಂಚಿಕೆಯ ಒಂದು ಸಣ್ಣ ವೀಡಿಯೋ ತುಣುಕು ಇಲ್ಲಿದೆ ನೋಡಿ.
ಈ ಕಾರ್ಯಕ್ರಮ ಜೂನ್ 1 ರಂದು ಪ್ರಸಾರವಾಗಲಿದೆ. ಮರುದಿನ ಅಂದರೆ ಜೂನ್ 2 ರಂದು ಸುಧಾ ಮೂರ್ತಿ ಅವರ ಜೀವನಗಾಥೆ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ಹಾಟ್ ಸೀಟ್ ನಲ್ಲಿ ಹೊರಹೊಮ್ಮಲಿದೆ.

https://www.facebook.com/zeekannadatv/videos/415831269254361/Conclusion:
Last Updated : May 24, 2019, 7:39 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.