ETV Bharat / sitara

Bigg Boss: ನಿಧಿ-ಅರವಿಂದ್ ಮಧ್ಯೆ ಮಾತಿನ ಸಂಘರ್ಷ

author img

By

Published : Jun 30, 2021, 7:39 AM IST

Updated : Jun 30, 2021, 8:06 AM IST

ಟಾಸ್ಕ್​ ಮಧ್ಯೆ ಮಂಜು ಪರವಹಿಸಿ ಮಾತನಾಡಲು ಬಂದ ನಿಧಿಗೆ ಅರವಿಂದ್ ಹೇಳಿದ ಒಂದು ಮಾತು ದೊಡ್ಡ ಮನೆಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಅರವಿಂದ್ ಕ್ಷಮೆ ಕೇಳಿದ್ರೂ, ನಿಧಿ ಕೋಪ ತಣ್ಣಗಾಗಿಲ್ಲ.

Bigg Boss Kannada
ಕೆರಳಿದ ನಿಧಿ

ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ದಿನೇ ದಿನೇ ಮಾತಿನ‌ ಚಕಮಕಿಗೆ ಕಾರಣವಾಗುತ್ತಿದೆ. ಇದೀಗ ನಿಧಿ ಹಾಗೂ ಅರವಿಂದ್ ನಡುವೆ ಮಾತಿನ ಸಂಘರ್ಷ ತಾರಕಕ್ಕೇರಿದೆ.

Bigg Boss Kannada season -8 Update
ಬಿಗ್ ಬಾಸ್ ಸ್ಪರ್ಧಿ ಅರವಿಂದ್

ಟಾಸ್ಕ್‌ಗಾಗಿ ದೊಡ್ಡ ಮನೆಯ ಸದಸ್ಯರು 'ಸೂರ್ಯ ಸೇನಾ' ಮತ್ತು 'ಕ್ವಾಟ್ಲೆ ಕಿಲಾಡಿಗಳು' ಎಂಬೆರಡು ತಂಡಗಳನ್ನು ಮಾಡಿಕೊಂಡಿದ್ದಾರೆ. ಸೂರ್ಯ ಸೇನಾ ತಂಡದ ಕ್ಯಾಪ್ಟನ್ ಆಗಿ ಅರವಿಂದ್ ಇದ್ದರೆ, ಕ್ವಾಟ್ಲೆ ಕಿಲಾಡಿಗಳು ತಂಡದ ಕ್ಯಾಪ್ಟನ್ ಆಗಿ ಮಂಜು ಇದ್ದಾರೆ.

Bigg Boss Kannada season -8 Update
ಟಿಶ್ಯೂ ರೋಲ್‌ ಜೋಡಿಸುವ ಟಾಸ್ಕ್

ಬಿಗ್‌ಬಾಸ್ ಈ ತಂಡಗಳಿಗೆ ಟಿಶ್ಯೂ ರೋಲ್‌ಗಳನ್ನು ಜೋಡಿಸುವ ಟಾಸ್ಕ್‌ ನೀಡಿದ್ದರು. ಆದರೆ, ಆಟದ ಮಧ್ಯೆ ಮಂಜು ಮತ್ತು ಅರವಿಂದ್ ನಡುವೆ ಮಾತಿಗೆ ಮಾತು ಬೆಳೆಯಿತು. ಆಗ ಮಂಜು ಟೀಮ್‌ನಲ್ಲಿದ್ದ ನಿಧಿ ಮಧ್ಯೆ ಮಾತನಾಡಲು ಬಂದರು. ಅದಕ್ಕೆ ಅರವಿಂದ್ (ಮುಚ್ಚಿ ಸ್ವಲ್ಪ) ನೋವಾಗುವಂತಹ ಪದ ಬಳಸಿದ್ದು ನಿಧಿಯನ್ನು ಕೆರಳಿಸಿತು.

Bigg Boss Kannada season -8 Update
ಕ್ವಾಟ್ಲೆ ಕಿಲಾಡಿಗಳು ತಂಡದ ಕ್ಯಾಪ್ಟನ್ ಮಂಜು

'ಅರವಿಂದ್‌ ಸೋಲನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುವುದಿಲ್ಲ. ಸ್ಪೋರ್ಟ್ಸ್ ಹಿನ್ನೆಲೆ‌ಯಿಂದ ಬಂದಿದ್ದರೂ ಸೋಲು ಒಪ್ಪಿಕೊಳ್ಳುವ ಮನೋಭಾವ ಇಲ್ಲ ಎಂದು ನಿಧಿ ಅರವಿಂದ್ ಅವರನ್ನು ಟೀಕಿಸಿದರು.

ಇದನ್ನೂ ಓದಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಸ್ಪರ್ಧಿ ನಯನಾ‌ ಪುಟ್ಟಸ್ವಾಮಿ

ಇದಾದ ನಂತರ ನಿಧಿ ಬಳಿ ಬಂದು ಅರವಿಂದ್ ಕ್ಷಮೆಯಾಚಿಸಿದರು. ಆದರೆ, ಬಾಯಿಗೆ ಬಂದಂತೆ ಮಾತನಾಡಿದ ನಂತರ ಸ್ವಾರಿ ಕೇಳೋದು ಸರಿಯಲ್ಲ ಎಂದು ನಿಧಿ ಹೇಳಿದರು. ಇದು ಇಬ್ಬರ ನಡುವೆ ಕೆಸರೆರಚಾಟಕ್ಕೆ ಕಾರಣವಾಯಿತು.

Bigg Boss Kannada season -8 Update
ದೊಡ್ಡ ಮನೆಯ ಸದಸ್ಯರು

ಬಳಿಕ ಅರವಿಂದ್, ಇಲ್ಲಿಗೆ ಬರುವ ತನಕ ನಿಧಿ ಯಾರೆಂದು ಗೊತ್ತಿರಲಿಲ್ಲ.‌ ನಾನೇನು ಕೆಟ್ಟ ಮಾತನ್ನು ಬಳಸಿಲ್ಲ, ಹಿಂದೆ ಮುಂದೆ ಮಾತನಾಡಲ್ಲ. ನೇರವಾಗಿ ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ನಂತರ ಅರವಿಂದ್ ಬಳಿ ಬಂದ ಶುಭ ಪೂಂಜಾ ಎಲ್ಲರೂ ಮುಂದೆ ಆ ರೀತಿ ಮಾತನಾಡಿದ್ದು ತಪ್ಪು, ನಿಧಿಗೆ ನೋವಾಗಿದೆ ಎಂದು ಎಂದರು. ಆದರೆ, ನಿಧಿ ಸುಬ್ಬಯ್ಯ, ಶುಭಾ ಅವರನ್ನು ಕರೆದು, ನಾವಿಬ್ಬರೂ ಸ್ನೇಹಿತರಾಗಿರೋಣ. ನನ್ನ ಬಗ್ಗೆ ಅವರೊಂದಿಗೆ ಮಾತನಾಡಬೇಡ ಎಂದು ಶುಭಾಗೆ ತಾಕೀತು ಮಾಡಿದರು.

ಬಿಗ್‌ಬಾಸ್ ಸೆಕೆಂಡ್ ಇನ್ನಿಂಗ್ಸ್ ದಿನೇ ದಿನೇ ಮಾತಿನ‌ ಚಕಮಕಿಗೆ ಕಾರಣವಾಗುತ್ತಿದೆ. ಇದೀಗ ನಿಧಿ ಹಾಗೂ ಅರವಿಂದ್ ನಡುವೆ ಮಾತಿನ ಸಂಘರ್ಷ ತಾರಕಕ್ಕೇರಿದೆ.

Bigg Boss Kannada season -8 Update
ಬಿಗ್ ಬಾಸ್ ಸ್ಪರ್ಧಿ ಅರವಿಂದ್

ಟಾಸ್ಕ್‌ಗಾಗಿ ದೊಡ್ಡ ಮನೆಯ ಸದಸ್ಯರು 'ಸೂರ್ಯ ಸೇನಾ' ಮತ್ತು 'ಕ್ವಾಟ್ಲೆ ಕಿಲಾಡಿಗಳು' ಎಂಬೆರಡು ತಂಡಗಳನ್ನು ಮಾಡಿಕೊಂಡಿದ್ದಾರೆ. ಸೂರ್ಯ ಸೇನಾ ತಂಡದ ಕ್ಯಾಪ್ಟನ್ ಆಗಿ ಅರವಿಂದ್ ಇದ್ದರೆ, ಕ್ವಾಟ್ಲೆ ಕಿಲಾಡಿಗಳು ತಂಡದ ಕ್ಯಾಪ್ಟನ್ ಆಗಿ ಮಂಜು ಇದ್ದಾರೆ.

Bigg Boss Kannada season -8 Update
ಟಿಶ್ಯೂ ರೋಲ್‌ ಜೋಡಿಸುವ ಟಾಸ್ಕ್

ಬಿಗ್‌ಬಾಸ್ ಈ ತಂಡಗಳಿಗೆ ಟಿಶ್ಯೂ ರೋಲ್‌ಗಳನ್ನು ಜೋಡಿಸುವ ಟಾಸ್ಕ್‌ ನೀಡಿದ್ದರು. ಆದರೆ, ಆಟದ ಮಧ್ಯೆ ಮಂಜು ಮತ್ತು ಅರವಿಂದ್ ನಡುವೆ ಮಾತಿಗೆ ಮಾತು ಬೆಳೆಯಿತು. ಆಗ ಮಂಜು ಟೀಮ್‌ನಲ್ಲಿದ್ದ ನಿಧಿ ಮಧ್ಯೆ ಮಾತನಾಡಲು ಬಂದರು. ಅದಕ್ಕೆ ಅರವಿಂದ್ (ಮುಚ್ಚಿ ಸ್ವಲ್ಪ) ನೋವಾಗುವಂತಹ ಪದ ಬಳಸಿದ್ದು ನಿಧಿಯನ್ನು ಕೆರಳಿಸಿತು.

Bigg Boss Kannada season -8 Update
ಕ್ವಾಟ್ಲೆ ಕಿಲಾಡಿಗಳು ತಂಡದ ಕ್ಯಾಪ್ಟನ್ ಮಂಜು

'ಅರವಿಂದ್‌ ಸೋಲನ್ನು ಸ್ಪೋರ್ಟಿವ್ ಆಗಿ ತೆಗೆದುಕೊಳ್ಳುವುದಿಲ್ಲ. ಸ್ಪೋರ್ಟ್ಸ್ ಹಿನ್ನೆಲೆ‌ಯಿಂದ ಬಂದಿದ್ದರೂ ಸೋಲು ಒಪ್ಪಿಕೊಳ್ಳುವ ಮನೋಭಾವ ಇಲ್ಲ ಎಂದು ನಿಧಿ ಅರವಿಂದ್ ಅವರನ್ನು ಟೀಕಿಸಿದರು.

ಇದನ್ನೂ ಓದಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಸ್ಪರ್ಧಿ ನಯನಾ‌ ಪುಟ್ಟಸ್ವಾಮಿ

ಇದಾದ ನಂತರ ನಿಧಿ ಬಳಿ ಬಂದು ಅರವಿಂದ್ ಕ್ಷಮೆಯಾಚಿಸಿದರು. ಆದರೆ, ಬಾಯಿಗೆ ಬಂದಂತೆ ಮಾತನಾಡಿದ ನಂತರ ಸ್ವಾರಿ ಕೇಳೋದು ಸರಿಯಲ್ಲ ಎಂದು ನಿಧಿ ಹೇಳಿದರು. ಇದು ಇಬ್ಬರ ನಡುವೆ ಕೆಸರೆರಚಾಟಕ್ಕೆ ಕಾರಣವಾಯಿತು.

Bigg Boss Kannada season -8 Update
ದೊಡ್ಡ ಮನೆಯ ಸದಸ್ಯರು

ಬಳಿಕ ಅರವಿಂದ್, ಇಲ್ಲಿಗೆ ಬರುವ ತನಕ ನಿಧಿ ಯಾರೆಂದು ಗೊತ್ತಿರಲಿಲ್ಲ.‌ ನಾನೇನು ಕೆಟ್ಟ ಮಾತನ್ನು ಬಳಸಿಲ್ಲ, ಹಿಂದೆ ಮುಂದೆ ಮಾತನಾಡಲ್ಲ. ನೇರವಾಗಿ ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ನಂತರ ಅರವಿಂದ್ ಬಳಿ ಬಂದ ಶುಭ ಪೂಂಜಾ ಎಲ್ಲರೂ ಮುಂದೆ ಆ ರೀತಿ ಮಾತನಾಡಿದ್ದು ತಪ್ಪು, ನಿಧಿಗೆ ನೋವಾಗಿದೆ ಎಂದು ಎಂದರು. ಆದರೆ, ನಿಧಿ ಸುಬ್ಬಯ್ಯ, ಶುಭಾ ಅವರನ್ನು ಕರೆದು, ನಾವಿಬ್ಬರೂ ಸ್ನೇಹಿತರಾಗಿರೋಣ. ನನ್ನ ಬಗ್ಗೆ ಅವರೊಂದಿಗೆ ಮಾತನಾಡಬೇಡ ಎಂದು ಶುಭಾಗೆ ತಾಕೀತು ಮಾಡಿದರು.

Last Updated : Jun 30, 2021, 8:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.