ETV Bharat / sitara

ಹುಟ್ಟುಹಬ್ಬಕ್ಕಾಗಿ ಲ್ಯಾಂಬೋರ್ಗಿನಿ ಖರೀದಿಸಿದ ಅಪ್ಪು, ಕೊರೊನಾ ಹಿನ್ನೆಲೆ ಮಂತ್ರಾಲಯಕ್ಕೆ ತೆರಳದ ನವರಸ ನಾಯಕ - ಪವರ್ ಸ್ಟಾರ್ ಪುನೀತ್ ರಾಜಕುಮಾರ್

ಮಾರ್ಚ್ 17 ಬಂತು ಅಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಜನುಮ ದಿನ ಆಚರಣೆ ನಡೆಯುತ್ತದೆ. ಪವರ್ ಸ್ಟಾರ್ ತಮ್ಮ ಮನೆಯಲ್ಲಿ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಆದರೆ ಈ ವರ್ಷ ಕೊರೊನಾ ವೈರಸ್​ನಿಂದಾಗಿ ಅಭಿಮಾನಿಗಳಿಗೆ ಕರೆ ನೀಡಿದ್ದು, ಜನುಮ ದಿನ ಆಚರಣೆ ಬೇಡ ಅಂದಿದ್ದಾರೆ.

Acters Puneet Rajkumar and Jaggesh Birthday tomorrow
ನಾಳೆ ಪುನೀತ್ ರಾಜಕುಮಾರ್ ಜೊತೆ ಜಗ್ಗೇಶ್ ಜನುಮದಿನ
author img

By

Published : Mar 16, 2020, 1:07 PM IST

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ವರ್ಷಕ್ಕೆ ಜನುಮ ದಿನ ಸಮಯಕ್ಕೆ ಲ್ಯಾಂಬೋರ್ಗಿನಿ ಕಾರು ಕೊಂಡಿದ್ದಾರೆ. ಕಾರಿನಲ್ಲಿ ಅಣ್ಣ ಶಿವರಾಜಕುಮಾರ್ ಸಹ ಒಂದು ರೌಂಡ್ ಹೋಗುವುದರ ಮುಖಾಂತರ ಚಾಲನೆ ಮಾಡಿದ್ದಾರೆ.

ಪ್ರತಿ ವರ್ಷ ಜಗ್ಗೇಶ್ ಅವರ ಜನುಮ ದಿನಕ್ಕೆ ಸರಿಯಾಗಿ ರಾಯರ ಸೇವೆಗೆ ಮಂತ್ರಾಲಯಕ್ಕೆ ಹೋಗಿ ಬರುತ್ತಾರೆ. ಆದರೆ ಈ ವರ್ಷ ಅವರು ಹಾಗೆ ಮಾಡುತ್ತಾ ಇಲ್ಲ. ಆದರೆ ನವರಸ ನಾಯಕ ಜಗ್ಗೇಶ್ ಕೆಲವು ಅಂಧರಿಗೆ ಮನೆ ಕಟ್ಟಿಸಿಕೊಟ್ಟು ಮಾರ್ಚ್ 12 ರಂದು ಅದರ ಗೃಹಪ್ರವೇಶ ಸಹ ಮಾಡಿ ಆನಂದದಲ್ಲಿ ಇದ್ದಾರೆ.

ಕೊರಟಗೆರೆ ಫ್ರೆಂಡ್ಸ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗ ಅಂಧ ಹಾಡುಗಾರ್ತಿಯರಿಗೆ ಮಧುಗಿರಿ ತಾಲೂಕಿನ ಡಿ ವಿ ಹಳ್ಳಿ ಅಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಆಗಿದೆ. ಅದಕ್ಕೆ ‘ಜಗ್ಗೇಶ್ ಪರಿಮಳ’ ನಿವಾಸ ಅಂತ ಹೆಸರಿಡಲಾಗಿದೆ. 9 ಅಡಿ ಚದರದ ಮನೆ ಜಗ್ಗೇಶ್ ಮುಂದಾಳತ್ವದಲ್ಲಿ ಕಟ್ಟಿಸಲಾಗಿದೆ. ಜೀ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಾಡುವ ಅಂಧ ಸೋದರಿಯರಾದ ಗೌರಮ್ಮ, ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ಜಗ್ಗೇಶ್ ನೀಡಿದ ಭರವಸೆಯನ್ನು ಪೂರ್ತಿಗೊಳಿಸಿದ್ದಾರೆ. ಸಿದ್ದರ ಬೆಟ್ಟದ ಶಿವಾಚಾರ್ಯ ಸ್ವಾಮಿಗಳು ಅಂಧ ಸೋದರಿಯರಿಗೆ ಮನೆಯ ಬೀಗವನ್ನು ಹಸ್ತಾಂತರ ಮಾಡಿದ್ದಾರೆ.

ಇಂತಹ ಕೊಡುಗೆ ಜನುಮ ದಿನಕ್ಕು ಐದು ದಿವಸಗಳ ಮುಂಚೆಯೇ ನಡೆದಿರುವುದು ಜಗ್ಗೇಶ್ ಅವರಿಗೆ ಅತ್ಯಂತ ಆನಂದವನ್ನು ಉಂಟುಮಾಡಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ವರ್ಷಕ್ಕೆ ಜನುಮ ದಿನ ಸಮಯಕ್ಕೆ ಲ್ಯಾಂಬೋರ್ಗಿನಿ ಕಾರು ಕೊಂಡಿದ್ದಾರೆ. ಕಾರಿನಲ್ಲಿ ಅಣ್ಣ ಶಿವರಾಜಕುಮಾರ್ ಸಹ ಒಂದು ರೌಂಡ್ ಹೋಗುವುದರ ಮುಖಾಂತರ ಚಾಲನೆ ಮಾಡಿದ್ದಾರೆ.

ಪ್ರತಿ ವರ್ಷ ಜಗ್ಗೇಶ್ ಅವರ ಜನುಮ ದಿನಕ್ಕೆ ಸರಿಯಾಗಿ ರಾಯರ ಸೇವೆಗೆ ಮಂತ್ರಾಲಯಕ್ಕೆ ಹೋಗಿ ಬರುತ್ತಾರೆ. ಆದರೆ ಈ ವರ್ಷ ಅವರು ಹಾಗೆ ಮಾಡುತ್ತಾ ಇಲ್ಲ. ಆದರೆ ನವರಸ ನಾಯಕ ಜಗ್ಗೇಶ್ ಕೆಲವು ಅಂಧರಿಗೆ ಮನೆ ಕಟ್ಟಿಸಿಕೊಟ್ಟು ಮಾರ್ಚ್ 12 ರಂದು ಅದರ ಗೃಹಪ್ರವೇಶ ಸಹ ಮಾಡಿ ಆನಂದದಲ್ಲಿ ಇದ್ದಾರೆ.

ಕೊರಟಗೆರೆ ಫ್ರೆಂಡ್ಸ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗ ಅಂಧ ಹಾಡುಗಾರ್ತಿಯರಿಗೆ ಮಧುಗಿರಿ ತಾಲೂಕಿನ ಡಿ ವಿ ಹಳ್ಳಿ ಅಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಆಗಿದೆ. ಅದಕ್ಕೆ ‘ಜಗ್ಗೇಶ್ ಪರಿಮಳ’ ನಿವಾಸ ಅಂತ ಹೆಸರಿಡಲಾಗಿದೆ. 9 ಅಡಿ ಚದರದ ಮನೆ ಜಗ್ಗೇಶ್ ಮುಂದಾಳತ್ವದಲ್ಲಿ ಕಟ್ಟಿಸಲಾಗಿದೆ. ಜೀ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಹಾಡುವ ಅಂಧ ಸೋದರಿಯರಾದ ಗೌರಮ್ಮ, ರತ್ನಮ್ಮ ಹಾಗೂ ಮಂಜಮ್ಮ ಅವರಿಗೆ ಜಗ್ಗೇಶ್ ನೀಡಿದ ಭರವಸೆಯನ್ನು ಪೂರ್ತಿಗೊಳಿಸಿದ್ದಾರೆ. ಸಿದ್ದರ ಬೆಟ್ಟದ ಶಿವಾಚಾರ್ಯ ಸ್ವಾಮಿಗಳು ಅಂಧ ಸೋದರಿಯರಿಗೆ ಮನೆಯ ಬೀಗವನ್ನು ಹಸ್ತಾಂತರ ಮಾಡಿದ್ದಾರೆ.

ಇಂತಹ ಕೊಡುಗೆ ಜನುಮ ದಿನಕ್ಕು ಐದು ದಿವಸಗಳ ಮುಂಚೆಯೇ ನಡೆದಿರುವುದು ಜಗ್ಗೇಶ್ ಅವರಿಗೆ ಅತ್ಯಂತ ಆನಂದವನ್ನು ಉಂಟುಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.