ETV Bharat / sitara

ಮೋಸದ ಗರ : ನಾನಾ ತಿರುವುಗಳ ಭರ್ಜರಿ ಪ್ರಹಾರ

author img

By

Published : May 3, 2019, 12:59 PM IST

ಗರ

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಸಿನಿಮಾ ‘ಗರ‘ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ದೊಡ್ಡ ಕನಸನ್ನು ಕಟ್ಟಿಕೊಂಡು ನಿರ್ದೇಶಕ ಮುರಳಿಕೃಷ್ಣ ಸಿನಿಮಾವನ್ನು ಪ್ರೇಕ್ಷಕನ ಮುಂದೆ ಇಟ್ಟಿದ್ದಾರೆ. ಅಂದಿನ ಸುನಿಲ್ ಕುಮಾರ್ ದೇಸಾಯಿ ಅವರ ನೆರಳು ಮುರಳಿಕೃಷ್ಣ ಅವರಲ್ಲೂ ಕಾಣಸಿಗುತ್ತದೆ.

‘ಗರ’ ಚಿತ್ರದ ಕಥೆಯನ್ನು ನಿರೂಪಣೆ ಮಾಡುತ್ತಾ ಹೋದರೆ ಕೆಲವೊಮ್ಮೆ ಗೊಂದಲಮಯ ಸ್ಥಿತಿ ಉಂಟಾಗುತ್ತದೆ. ಚಿತ್ರಕಥೆ, ಅಭಿನಯ, ಉತ್ತಮ ಸಂಗೀತ ಮತ್ತು ಛಾಯಾಗ್ರಹಣ ಮೇಲುಗೈ ಸಾಧಿಸಿದೆ. ನಿಮಗೆಲ್ಲಾ ಮಹಾಭಾರತದ ಪ್ರಸಂಗ ಗೊತ್ತೇ ಇದೆ. ಜೂಜಿನಲ್ಲಿ ‘ಗರ‘ (ಕವಡೆ) ಹಾಕಲಾಗುತ್ತದೆ. ಈ ಸಿನಿಮಾದಲ್ಲಿ ನಾಯಕ ನಿಶಾಂತ್ ಅಲಿಯಾಸ್ ಗಂಗಸ್ವಾಮಿ (ರೆಹಮಾನ್ ಹಾಸನ್) ಮೋಸದ ‘ಗರ‘ ಹಾಕುವ ಮಾಯಾವಿ. ರೆಹಮಾನ್ ಈ ಸಿನಿಮಾದಲ್ಲಿ ಮೂರು ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೋತಿಷಿ, ಲವರ್ ಬಾಯ್ ಹಾಗೂ ಗ್ಯಾಂಗ್​​ಸ್ಟರ್​​​​ ಮೂರೂ ಶೇಡ್​​​ಗಳಲ್ಲಿ ನಟಿಸಿರುವ ಆತ ಎಲ್ಲದಕ್ಕೂ ‘ಗರ‘ ಹಾಕುವ ವ್ಯಕ್ತಿ. ಇವನು ಡಿಜಿಟಲ್ ಗೌಡ (ಆದಿತ್ಯ ಆರ್ಯನ್) ಕೋಟೆಯಲ್ಲಿ ಬಂಧಿಯಾಗಿರುವವನು. ನಿಶಾಂತ್​​​​ ಪ್ರೇಯಸಿ ಆಕಸ್ಮಿಕಗೆ (ಆವಂತಿಕ ಮೋಹನ್) ಮೋಸದ ‘ಗರ‘ ಇಷ್ಟವಿರುವುದಿಲ್ಲ. ಅಪ್ರತಿಮ ಮೋಸಗಾರ ನಿಶಾಂತ್ ಹಾಕುವ ಗರದಲ್ಲಿ ಇವಳು ಕೂಡಾ ಬಂಧಿಯೇ.

ಆದರೆ ಆಕಸ್ಮಿಕ ನೆಮ್ಮದಿಯ ಜೀವನಕ್ಕೆ ಹಾತೊರೆಯುತ್ತಿರುತ್ತಾಳೆ. ಡಿಜಿಟಲ್ ಗೌಡನಿಂದ ತಪ್ಪಿಸಿಕೊಳ್ಳಲು ನಿಶಾಂತ್ ತನಗೆ ತಾನೇ ‘ಗರ‘ ಹಾಕಿಕೊಂಡು ಅದರಲ್ಲಿ ಸೋಲುತ್ತಾನೆ. ಇದರಿಂದ ನಿಶಾಂತ್ ಪ್ರೇಯಸಿಯನ್ನು ಡಿಜಿಟಲ್ ಗೌಡ ತನ್ನ ಬಂಧಿಯಲ್ಲಿರಿಸಿಕೊಳ್ಳುತ್ತಾನೆ. ಆಕೆಯನ್ನು ಬಿಡಿಸಿ ಕರೆತರಲು ನಿಶಾಂತ್​​​ಗೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆಯಿರುತ್ತದೆ. ಇಲ್ಲಿಂದ ಚಿತ್ರ ನಾನಾ ತಿರುವು ಪಡೆದುಕೊಳ್ಳುತ್ತದೆ. ನಿಶಾಂತ್​​​ಗೆ ಹಣ ದೊರೆಯುವುದಾ..? ತನ್ನ ಪ್ರೇಯಸಿಯನ್ನು ಆತ ಬಿಡಿಸಿ ತರುತ್ತಾನಾ..ಇಲ್ಲವಾ ಎಂಬುದು ಸಸ್ಪೆನ್ಸ್.

ರೆಹಮಾನ್ ಹಾಸನ್, ಪ್ರದೀಪ್ ಆರ್ಯನ್, ಆವಂತಿಕ ಕಷ್ಟ ಪಟ್ಟು ಪಾತ್ರ ನಿರ್ವಹಿಸಿದ್ದಾರೆ. ಈ ಮೂರೂ ಪಾತ್ರಗಳ ಮೇಲೆ ಚಿತ್ರ ಕೇಂದ್ರೀಕೃತ ಆಗಿದೆ. ಜಾನಿ ಲಿವರ್ ಹಾಗೂ ಸಾಧು ಕೋಕಿಲ ಪಾತ್ರ ಅಷ್ಟು ಸಮಂಜಸ ಅನ್ನಿಸುವುದಿಲ್ಲ. ಹಿರಿಯರ ಪೈಕಿ ರಮೇಶ್ ಭಟ್, ತಬಲಾ ನಾಣಿ, ಪದ್ಮಜ ರಾವ್, ಮಿಮಿಕ್ರಿ ದಯಾನಂದ, ಶ್ರೀಕಾಂತ್ ಹೆಬ್ಳೀಕರ್, ಪ್ರಶಾಂತ್ ಸಿದ್ದಿ ಪಾತ್ರ ಪೋಷಣೆ ಚೆನ್ನಾಗಿದೆ.

ಹೆಚ್​​​.ಸಿ. ವೇಣು ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಕೂಡಾ ಚಂದವಾಗಿ ಮೂಡಿಬಂದಿದೆ. ಸಂಗೀತ ನಿರ್ದೇಶಕ ಸಾಗರ್ ಗುರುರಾಜ್ ಹಾಡುಗಳು ಚೆನ್ನಾಗಿವೆ. ಮಂಜುಳ ಗುರುರಾಜ್ ಅವರ ಹಾಡು, ಚಿತ್ರದ ಟೈಟಲ್ ಸಾಂಗ್​ ಮತ್ತೊಂದು ಡ್ಯೂಯಟ್ ಹಾಡು ಸೊಗಸಾಗಿದೆ. ಚಿತ್ರದ ಅವಧಿ ಹೆಚ್ಚಾಗಿದ್ದು ನಿರ್ದೇಶಕ ಮುರಳಿಕೃಷ್ಣ ಅವಧಿಯನ್ನು ಕಡಿಮೆ ಮಾಡಿದರೆ ಚಿತ್ರವನ್ನು ನೋಡಲು ಹೆಚ್ಚಿನ ವೀಕ್ಷಕರು ಬರಬಹುದು.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಸಿನಿಮಾ ‘ಗರ‘ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ದೊಡ್ಡ ಕನಸನ್ನು ಕಟ್ಟಿಕೊಂಡು ನಿರ್ದೇಶಕ ಮುರಳಿಕೃಷ್ಣ ಸಿನಿಮಾವನ್ನು ಪ್ರೇಕ್ಷಕನ ಮುಂದೆ ಇಟ್ಟಿದ್ದಾರೆ. ಅಂದಿನ ಸುನಿಲ್ ಕುಮಾರ್ ದೇಸಾಯಿ ಅವರ ನೆರಳು ಮುರಳಿಕೃಷ್ಣ ಅವರಲ್ಲೂ ಕಾಣಸಿಗುತ್ತದೆ.

‘ಗರ’ ಚಿತ್ರದ ಕಥೆಯನ್ನು ನಿರೂಪಣೆ ಮಾಡುತ್ತಾ ಹೋದರೆ ಕೆಲವೊಮ್ಮೆ ಗೊಂದಲಮಯ ಸ್ಥಿತಿ ಉಂಟಾಗುತ್ತದೆ. ಚಿತ್ರಕಥೆ, ಅಭಿನಯ, ಉತ್ತಮ ಸಂಗೀತ ಮತ್ತು ಛಾಯಾಗ್ರಹಣ ಮೇಲುಗೈ ಸಾಧಿಸಿದೆ. ನಿಮಗೆಲ್ಲಾ ಮಹಾಭಾರತದ ಪ್ರಸಂಗ ಗೊತ್ತೇ ಇದೆ. ಜೂಜಿನಲ್ಲಿ ‘ಗರ‘ (ಕವಡೆ) ಹಾಕಲಾಗುತ್ತದೆ. ಈ ಸಿನಿಮಾದಲ್ಲಿ ನಾಯಕ ನಿಶಾಂತ್ ಅಲಿಯಾಸ್ ಗಂಗಸ್ವಾಮಿ (ರೆಹಮಾನ್ ಹಾಸನ್) ಮೋಸದ ‘ಗರ‘ ಹಾಕುವ ಮಾಯಾವಿ. ರೆಹಮಾನ್ ಈ ಸಿನಿಮಾದಲ್ಲಿ ಮೂರು ಶೇಡ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಜ್ಯೋತಿಷಿ, ಲವರ್ ಬಾಯ್ ಹಾಗೂ ಗ್ಯಾಂಗ್​​ಸ್ಟರ್​​​​ ಮೂರೂ ಶೇಡ್​​​ಗಳಲ್ಲಿ ನಟಿಸಿರುವ ಆತ ಎಲ್ಲದಕ್ಕೂ ‘ಗರ‘ ಹಾಕುವ ವ್ಯಕ್ತಿ. ಇವನು ಡಿಜಿಟಲ್ ಗೌಡ (ಆದಿತ್ಯ ಆರ್ಯನ್) ಕೋಟೆಯಲ್ಲಿ ಬಂಧಿಯಾಗಿರುವವನು. ನಿಶಾಂತ್​​​​ ಪ್ರೇಯಸಿ ಆಕಸ್ಮಿಕಗೆ (ಆವಂತಿಕ ಮೋಹನ್) ಮೋಸದ ‘ಗರ‘ ಇಷ್ಟವಿರುವುದಿಲ್ಲ. ಅಪ್ರತಿಮ ಮೋಸಗಾರ ನಿಶಾಂತ್ ಹಾಕುವ ಗರದಲ್ಲಿ ಇವಳು ಕೂಡಾ ಬಂಧಿಯೇ.

ಆದರೆ ಆಕಸ್ಮಿಕ ನೆಮ್ಮದಿಯ ಜೀವನಕ್ಕೆ ಹಾತೊರೆಯುತ್ತಿರುತ್ತಾಳೆ. ಡಿಜಿಟಲ್ ಗೌಡನಿಂದ ತಪ್ಪಿಸಿಕೊಳ್ಳಲು ನಿಶಾಂತ್ ತನಗೆ ತಾನೇ ‘ಗರ‘ ಹಾಕಿಕೊಂಡು ಅದರಲ್ಲಿ ಸೋಲುತ್ತಾನೆ. ಇದರಿಂದ ನಿಶಾಂತ್ ಪ್ರೇಯಸಿಯನ್ನು ಡಿಜಿಟಲ್ ಗೌಡ ತನ್ನ ಬಂಧಿಯಲ್ಲಿರಿಸಿಕೊಳ್ಳುತ್ತಾನೆ. ಆಕೆಯನ್ನು ಬಿಡಿಸಿ ಕರೆತರಲು ನಿಶಾಂತ್​​​ಗೆ ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆಯಿರುತ್ತದೆ. ಇಲ್ಲಿಂದ ಚಿತ್ರ ನಾನಾ ತಿರುವು ಪಡೆದುಕೊಳ್ಳುತ್ತದೆ. ನಿಶಾಂತ್​​​ಗೆ ಹಣ ದೊರೆಯುವುದಾ..? ತನ್ನ ಪ್ರೇಯಸಿಯನ್ನು ಆತ ಬಿಡಿಸಿ ತರುತ್ತಾನಾ..ಇಲ್ಲವಾ ಎಂಬುದು ಸಸ್ಪೆನ್ಸ್.

ರೆಹಮಾನ್ ಹಾಸನ್, ಪ್ರದೀಪ್ ಆರ್ಯನ್, ಆವಂತಿಕ ಕಷ್ಟ ಪಟ್ಟು ಪಾತ್ರ ನಿರ್ವಹಿಸಿದ್ದಾರೆ. ಈ ಮೂರೂ ಪಾತ್ರಗಳ ಮೇಲೆ ಚಿತ್ರ ಕೇಂದ್ರೀಕೃತ ಆಗಿದೆ. ಜಾನಿ ಲಿವರ್ ಹಾಗೂ ಸಾಧು ಕೋಕಿಲ ಪಾತ್ರ ಅಷ್ಟು ಸಮಂಜಸ ಅನ್ನಿಸುವುದಿಲ್ಲ. ಹಿರಿಯರ ಪೈಕಿ ರಮೇಶ್ ಭಟ್, ತಬಲಾ ನಾಣಿ, ಪದ್ಮಜ ರಾವ್, ಮಿಮಿಕ್ರಿ ದಯಾನಂದ, ಶ್ರೀಕಾಂತ್ ಹೆಬ್ಳೀಕರ್, ಪ್ರಶಾಂತ್ ಸಿದ್ದಿ ಪಾತ್ರ ಪೋಷಣೆ ಚೆನ್ನಾಗಿದೆ.

ಹೆಚ್​​​.ಸಿ. ವೇಣು ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಕೂಡಾ ಚಂದವಾಗಿ ಮೂಡಿಬಂದಿದೆ. ಸಂಗೀತ ನಿರ್ದೇಶಕ ಸಾಗರ್ ಗುರುರಾಜ್ ಹಾಡುಗಳು ಚೆನ್ನಾಗಿವೆ. ಮಂಜುಳ ಗುರುರಾಜ್ ಅವರ ಹಾಡು, ಚಿತ್ರದ ಟೈಟಲ್ ಸಾಂಗ್​ ಮತ್ತೊಂದು ಡ್ಯೂಯಟ್ ಹಾಡು ಸೊಗಸಾಗಿದೆ. ಚಿತ್ರದ ಅವಧಿ ಹೆಚ್ಚಾಗಿದ್ದು ನಿರ್ದೇಶಕ ಮುರಳಿಕೃಷ್ಣ ಅವಧಿಯನ್ನು ಕಡಿಮೆ ಮಾಡಿದರೆ ಚಿತ್ರವನ್ನು ನೋಡಲು ಹೆಚ್ಚಿನ ವೀಕ್ಷಕರು ಬರಬಹುದು.

ಗರ ಚಿತ್ರ ವಿಮರ್ಶೆ

ಗರ – ತಿರುವುಗಳ ಭರ್ಜರಿ ಪ್ರಹಾರ

ಅವದಿ – 2 ಘಂಟೆ 38 ನಿಮಿಷ

ಕಟಗೇರಿ – ಥ್ರಿಲ್ಲರ್

ಚಿತ್ರ – ಗರ, ನಿರ್ಮಾಪಕರು – 25 ಫ್ರೇಮ್, ನಿರ್ದೇಶನ – ಕೆ ಆರ್ ಮುರಳಿಕೃಷ್ಣ, ಛಾಯಾಗ್ರಹಣ – ಎಚ್ ಸಿ ವೇಣು, ಸಂಗೀತ – ಸಾಗರ್ ಗುರುರಾಜ್, ತಾರಾಗಣ – ರೆಹಮಾನ್ ಹಾಸನ್, ಆವಂತಿಕ ಮೋಹನ್, ಆರ್ಯನ್ ಪ್ರದೀಪ್, ಜಾನಿ ಲಿವರ್, ಸಾಧು ಕೋಕಿಲ, ಆದಿತ್ಯ ಆರ್ಯನ್, ಪ್ರಶಾಂತ್ ಸಿದ್ದಿ, ರಮೇಶ್ ಭಟ್, ಪದ್ಮಜ ರಾವ್, ರಾಮಕೃಷ್ಣ, ರೂಪ ದೇವಿ, ಮನದೀಪ್ ರಾಯ್, ತಬಲಾ ನಾಣಿ, ಮಿಮಿಕ್ರಿ ದಯಾನಂದ, ಶ್ರೀಕಾಂತ್ ಹೆಬ್ಳೀಕರ್, ರೋಹಿತ್, ಸುನೇತ್ರ, ಸುಚಿತ್ರಾ ಹಾಗೂ ಇತರರು.

ಪ್ರಥಮ ನಿರ್ದೇಶನದಲ್ಲಿ ಗರ ಚಿತ್ರಕ್ಕಾಗಿ ಬಹು ದೊಡ್ಡ ಕನಸು ಕಟ್ಟಿಕೊಂಡು ಮುರಳಿಕೃಷ್ಣ ಪ್ರೇಕ್ಷಕನ ಮುಂದೆ ಇಟ್ಟಿದ್ದಾರೆ. ಹೇಳಿ ಕೇಳಿ ವಕೀಲಿ ವೃತ್ತಿಯ ಮುರಳಿಕೃಷ್ಣ ಹಲವಾರು ತಿರುವುಗಳ ಭರ್ಜರಿ ಗರ ಹಾಕಿದ್ದಾರೆ. ಇಲ್ಲಿ ಅವರ ಚಿತ್ರಕತೆಯ ಬುದ್ದಿವಂತಿಕೆ ಸ್ವಲ್ಪ ಜಾಸ್ತಿ ಆಯಿತು ಅಂತಲೂ ಹೇಳಬಹುದು. ಒಳ್ಳೆಯ ಚಿತ್ರಗಳಿಗೆ ಬರ ಇರುವ ಸಮಯದಲ್ಲಿ ಈ ಗರ ಪ್ರೇಕ್ಷಕನಿಗೆ ಬುದ್ದಿಶಕ್ತಿಯ ಪರೀಕ್ಷೆ ಸಹ ನಿರ್ದೇಶಕರು ಮಾಡಿದ್ದಾರೆ. ಅಂದಿನ ಸುನಿಲ್ ಕುಮಾರ್ ದೇಸಾಯಿ ಅವರ ನೆರಳು ಈ ನಿರ್ದೇಶಕ ಮುರಳಿಕೃಷ್ಣ ಅವರಲ್ಲಿ ಕಾಣಸಿಗುತ್ತದೆ. ಚಿತ್ರದ ಅವದಿ ಜಾಸ್ತಿ ಆಯಿತು, ತಿರುವುಗಳ ಭರ್ಜರಿ ಓಟ ನಿರ್ದೇಶಕರ ಜಾಣ್ಮೆ ಮತ್ತು ಅವರ ಹಠ ತೋರಿಸುತ್ತದೆ.

ಇದೊಂದು ಲೊಡಡ್ ಬಸ್ಸು ಪ್ರಯಾಣ ಇದ್ದ ಹಾಗೆ. ನಿರ್ದೇಶಕರು ಎಲ್ಲರನ್ನು ಬಸ್ಸಿನಲ್ಲಿ ಹತ್ತಿಸಿಕೊಂಡು ಆಯಾ ಸ್ಥಳದಲ್ಲಿ ಇಳಿಸುವುದಕ್ಕೆ ತೊಂದರೆ ತೆಗೆದುಕೊಂಡಿದ್ದಾರೆ.

ಗರ ಚಿತ್ರದ ಕಥೆಯನ್ನು ನಿರೂಪಣೆ ಮಾಡುತ್ತಾ ಹೋದರೆ ಗೊಂದಲಮಯ ಸ್ಥಿತಿ ಆಗುವುದು ಉಂಟು.  ಈ ಗರ ಚಿತ್ರದ ಮುಖ್ಯಾಂಶಗಳಲ್ಲಿ ಚಿತ್ರಕಥೆ, ಅಭಿನಯ, ಉತ್ತಮ ಸಂಗೀತ ಮತ್ತು ಛಾಯಾಗ್ರಹಣ ಮೇಲುಗೈ ಸಾದಿಸಿದೆ.

ಗರ ಹಾಕೋದು ಜೂಜಿನಲ್ಲಿ, ಮಹಾಭಾರತದ ಪ್ರಸಂಗ ಗೊತ್ತೇ ಇದೆ. ಇದರಲ್ಲಿ ನಾಯಕ ನಿಶಾಂತ್ ಅಲಿಯಾಸ್ ಗಂಗಸ್ವಾಮಿ (ರೆಹಮಾನ್ ಹಾಸನ್) ಮೋಸದ ಗರ ಹಾಕುವ ಮಾಯಾವಿ. ಇವನು ಡಿಜಿಟಲ್ ಗೌಡ (ಆದಿತ್ಯ ಆರ್ಯನ್) ಕೋಟೆಯಲ್ಲಿ ಬಂದಿ. ಮೋಸ ಮಾಡಿ ಹಾಕುವ ಗರ ಮಿಕ್ಕವರಿಗೆ ಬರಸಿಡಿಲು. ಇವನಿಗೆ ಒಬ್ಬ ಪ್ರೇಯಸಿ ಇದ್ದಾಳೆ ಆಕಸ್ಮಿಕ (ಆವಂತಿಕ ಮೋಹನ್). ಮೋಸದ ಗರ ಇವಳಿಗೆ ಇಷ್ಟವಿಲ್ಲ. ಅಪ್ರತಿಮ ಮೋಸಗಾರ ನಿಶಾಂತ್ ಹಾಕುವ ಗರದಲ್ಲಿ ಇವಳು ಸಹ ಬಂದಿಯೇ ಅವರ ಮದುವೆ ವಿಚಾರಕ್ಕೆ ಬಂದರೆ. ಆದರೆ ಇವಳಿಗೆ ನಿಶಾಂತ್ ತನ್ನ ಅಟ್ಟಹಾಸವನ್ನು ಡಿಜಿಟಲ್ ಗೌಡನ ಜೊತೆ ನಿಲ್ಲಿಸಿ ನೆಮ್ಮದಿಯ ಜೀವನಕ್ಕೆ ಹಾತೊರೆಯುತ್ತಾಳೆ. ಆದರೆ ಆಗ ಅವುದೇ ಬೇರೆ. ಡಿಜಿಟಲ್ ಗೌಡನಿಂದ ಕಳಚಿ ಕೊಳ್ಳಲು ನಿಶಾಂತ್ ತನಗೆ ತಾನೇ ಗರ ಹಾಕುತ್ತಾನೆ ಹಾಗೂ ಅದರಲ್ಲಿ ಸೋಲುತ್ತಾನೆ. ಈ ಸೋಲಿನಿಂದ ಅವನಿಗೆ ಲಕ್ಷಾಂತರ ರೂಪಾಯಿ ಅವಶ್ಯಕತೆ ಇದೆ. ಕಾರಣ ಡಿಜಿಟಲ್ ಗೌಡ ನಿಶಾಂತ್ ಪ್ರೇಯಸಿಯನ್ನು ತನ್ನಲ್ಲಿ ಇಟ್ಟುಕೊಂಡಿರುತ್ತಾನೆ.

ಅದು ಮಧ್ಯ ರಾತ್ರಿ ನಿಶಾಂತ್ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಬಾವಿ ಕಟ್ಟೆಯ ಮೇಲೆ ನಿಂತಾಗ ಆತನನ್ನು ಬಚಾವು ಮಾಡುವುದು ಭಗೀರಥ (ಪ್ರದೀಪ್ ಆರ್ಯನ್). ಈ ಭಗೀರಥ ಈ ಊರಿಗೆ ಯಾಕೆ ಬಂದ? ಅವನು ಆಕಸ್ಮಿಕ ಎಂಬ ಹುಡುಗಿಯ ಜೊತೆ ವಿವಾಹ ಆಗಲು ಆಗಮಿಸಿರುತ್ತಾನೆ. ನಿಶಾಂತ್ ಏನೋ ಭಗೀರಥ ನೀಡಿದ ಹಣದಿಂದ ತನ್ನ ಪ್ರೇಯಸಿ ಆಕಸ್ಮಿಕಳನ್ನು ಬಿಡಿಸಿಕೊಂಡು ಡಿಜಿಟಲ್ ಗೌಡ ಇಂದ ಹೊರ ಬರುತ್ತಾನೆ. ಇತ್ತ ಕಡೆ ಆಕಸ್ಮಿಕ ತನ್ನ ಲೆಕ್ಕಾಚಾರದಂತೆ ಕೈ ತಪ್ಪುವುದು ನಿಶಾಂತ್ ಜೀವನದಲ್ಲಿ ಬೇರೆ ಗರ ಹಾಕುವುದಕ್ಕೆ ಪ್ರೇರೇಪಣೆ ಮಾಡುತ್ತದೆ.

ಆಕಸ್ಮಿಕ ನಿಶಾಂತ್ ಮುಂದೆ ಮದುವೆ ಮಂಟಪದಿಂದ ನಿನ್ನ ಮನೆಗೆ ಬರುವ ತನಕೆ ತಾನು ಕಣ್ಣು ಬಿಟ್ಟು ತನ್ನನ್ನು ನೋಡುವುದಿಲ್ಲ ಎಂದು ಹೇಳಿಕೆ ನೀಡಿರುವುದೇ ಮುಂದಿನ ಚಟುವಟಿಕೆಗಳಲ್ಲಿ ಆಗುವ ಅಪಘಾತ. ಮದುವೆ ಮನೆಯಲ್ಲಿ ಆಕಸ್ಮಿಕ ಹಾಗೂ ಭಗೀರಥ ಜೊತೆ ವಿವಾಹ ಜರುಗುತ್ತದೆ. ಆದರೆ ಆಕಸ್ಮಿಕ ಕಣ್ಣು ಬಿಟ್ಟು ನೋಡಿದಾಗ ಆಶ್ಚರ್ಯ ಹಾಗೂ ಅಸಂತೋಷ. ಮೊದಲ ರಾತ್ರಿಯಿಂದಲೇ ಆಕಸ್ಮಿಕ ಅಪಹರಣ ಆಗುತ್ತದೆ. ಅಲ್ಲಿಂದ ಮತ್ತಷ್ಟು ತಿರುವುಗಳು......

ನಿಶಾಂತ್ ಹಾಗೂ ಭಗೀರಥ ಬೇಟಿ ಮತ್ತಷ್ಟು ಕುತೂಹಲ ಕೆರಳಿಸಿ ಚಿತ್ರದ ಫ್ಲಶ್ ಬ್ಯಾಕ್ ಹೋಗುತ್ತದೆ. ಭಗೀರಥನಿಗೆ ತಾನು ಸಾಹಯ ಮಾಡಿದ ವ್ಯಕ್ತಿ ನಿಶಾಂತ್ ಮುಖ ಪರಿಚಯ ಇರುವುದಿಲ್ಲ. ತಾನು ಬೇಟಿ ಮಾಡಿದಾಗ ನಿಶಾಂತ್ ಗಡ್ಡ ಹಾಗೂ ಉದ್ದುದ್ದ ಕೂದಲು ಬಿಟ್ಟು ಕೊಂಡಿರುತ್ತಾನೆ.

ಈಗ ಆ ಊರಿನಲ್ಲಿ ಭಗೀರಥನಿಗೆ ನಂಬುವ ಹಾಗೆ ಒಂದು ಸನ್ನಿವೇಶ ರಚಿಸಿ ಆಮೇಲೆ ನಿಶ್ಚಿಂತ ಆಗುವ ಹಂತಕ್ಕೆ ಸಿನಿಮಾ ಬಂದು ತಲುಪತ್ತದೆ. ಅದಕ್ಕೆ ಮತ್ತೆ ರೂವಾರಿ ನಿಶಾಂತ್ ಹೊರುತ್ತಾನೆ. ಅದು ಹೇಗೆ, ಏನು ಅಂತ ನೀವು ತೆರೆಯಮೇಲೆ ನೋಡಬಹುದು.

ರೆಹಮಾನ್ ಹಾಸನ್, ಪ್ರದೀಪ್ ಆರ್ಯನ್, ಆವಂತಿಕ ಕಷ್ಟ ಪಟ್ಟು ಪಾತ್ರ ನಿರ್ವಹಿಸಿದ್ದಾರೆ. ಈ ಮೂರು ಪಾತ್ರಗಳ ಮೇಲೆ ಚಿತ್ರ ಕೇಂದ್ರೀಕೃತ ಆಗಿರುವುದು. ಡಿಜಿಟಲ್ ಗೌಡ ಪಾತ್ರ ಅಷ್ಟು ಸರಿಯಾಗಿ ಹೊಂದಾಣಿಕೆ ಆಗಿಲ್ಲ, ಜಾನಿ ಲಿವರ್ ಹಾಗೂ ಸಾಧು ಕೋಕಿಲ ಪಾತ್ರ ಅಷ್ಟು ಸಮಂಜಸ ಅನ್ನಿಸುವುದಿಲ್ಲ.

ಹಿರಿಯರ ಪೈಕಿ ರಮೇಶ್ ಭಟ್, ತಬಲಾ ನಾಣಿ, ಪದ್ಮಜ ರಾವ್, ಮಿಮಿಕ್ರಿ ದಯಾನಂದ, ಶ್ರೀಕಾಂತ್ ಹೆಬ್ಳೀಕರ್, ಪ್ರಶಾಂತ್ ಸಿದ್ದಿ ಪಾತ್ರ ಪೋಷಣೆ ಚನ್ನಾಗಿದೆ.

ಎಚ್ ಸಿ ವೇಣು ಚಿತ್ರದ ದ್ವೀತಿಯ ಹೀರೋ. ಅವರ ಛಾಯಾಗ್ರಹಣದಲ್ಲಿ ಪ್ರತಿ ಫ್ರೇಮ್ ಸಹ ಚಂದವಾಗಿ ಮೂಡಿಬಂದಿದೆ. ಸಂಗೀತ ನಿರ್ದೇಶಕ ಸಾಗರ್ ಗುರುರಾಜ್ ಹಾಡುಗಳಲ್ಲಿ ಒಳ್ಳೆಯ ಪ್ರಶಂಸೆ ದೊರಕುತ್ತದೆ. ಮಂಜುಳ ಗುರುರಾಜ್ ಅವರ ಹಾಡು, ಚಿತ್ರದ ಶೀರ್ಷಿಕೆ ಗೀತೆ, ಮತ್ತೊಂದು ಡ್ಯೂಯಟ್ ಹಾಡು ಹೇಳೋ ಯಾರೋ....ಸೊಗಸಾಗಿದೆ.  

ನಿರ್ದೇಶಕ ಮುರಳಿಕೃಷ್ಣ ಚಿತ್ರದ ಆವದಿಯನ್ನು ಕಡಿಮೆ ಮಾಡಿದರೆ ಗರ ಚಿತ್ರಕ್ಕೆ ಹೆಚ್ಚು ಜನ ಸಾಗರ ಕಾಣಬಹುದು. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.