ETV Bharat / sitara

ಅಂಬಿ ನೆರಳಲ್ಲಿ ಅಭಿಷೇಕ್​ ಅದ್ಭುತ... ತಕರಾರಿಲ್ಲದ 'ಅಮರ್'​ ಸೂಪರ್ - undefined

ಅಮರ್
author img

By

Published : May 31, 2019, 7:50 PM IST

70ರ ದಶಕದ ನಾಯಕ ನಟರುಗಳ ಮಕ್ಕಳ ಪೈಕಿ ಅಂಬರೀಶ್ ಅವರ ಪುತ್ರ ಮಾತ್ರ ರಜತ ಪರದೆ ಮೇಲೆ ವಿಜೃಂಭಿಸಲು ಬಾಕಿ ಇದ್ದದ್ದು. ಇದೀಗ ಅದು ಕೂಡ ಸಾಕಾರಗೊಂಡಿದೆ. ಅಮರ್ ಚಿತ್ರದಿಂದ ಅಭಿಷೇಕ್ ಅಂಬರೀಶ್ ಆಗಮನ ಆಗಿದೆ. ಇದು ಒಂದು ಪಕ್ಕ ಮನರಂಜನಾ ಚಿತ್ರವಾಗಿ, ಕುಟುಂಬ ಸಮೇತ ನೋಡುವಂತಾಗಿದೆ. ಅಭಿಷೇಕ್​ ಅಂಬರೀಶ್ ಲೀಲಾ ಜಾಲವಾಗಿ ನಟಿಸಿದ್ದಾರೆ.

ಅಭಿ ಎತ್ತರದಲ್ಲಿ ದರ್ಶನ್, ಸುದೀಪ್, ಯಶ್​ ಹಾಗೂ ರಕ್ಷಿತ್ ಶೆಟ್ಟಿ ಅವರನ್ನು ಮೀರಿಸುತ್ತಾರೆ. ಇವರದು 6 ಅಡಿ 4 ಇಂಚು ಹೈಟ್​​. ಅಭಿ ಅವರನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯೋದು, ಅದನ್ನು ದೊಡ್ಡ ಪರದೆಯ ಮೇಲೆ ತೋರಿಸೋದು ಸಹ ಒಂದು ಚಾಲೆಂಜ್ ಆಗಿತ್ತಂತೆ ನಿರ್ದೇಶಕ ನಾಗಶೇಖರ್ ಅವರಿಗೆ.

ಅಭಿಷೇಕ್​ ಅವರಲ್ಲಿ ಅಭಿನಯದ ತಾಕತ್ತು ಸಹ ಇದೆ. ಸಾಹಸದ ಸನ್ನಿವೇಶಗಳಲ್ಲಿ ಬಲಭೀಮ. ಯಾಕೋ ರೊಮಾನ್ಸ್ ಅಂದರೆ ಸ್ವಲ್ಪ ಹಿಂಜರಿಕೆ ಇದೆ ಅನ್ನಿಸುತ್ತೆ. ಸಂಭಾಷಣೆಯಲ್ಲಿ ಮೊದಲ ಸಿನಿಮಾ ಆದ್ದರಿಂದ ಅಪ್ಪನ ಸಂಭಾಷಣೆ ಶೈಲಿ ಬೆರೆಸಿದ್ದಾರೆ. ಅದೇ ಈ ಚಿತ್ರದ ಜೀವಾಳ ಸಹ ಆಗಿದೆ.

ನಿರ್ದೇಶಕ ನಾಗಶೇಖರ್ ಕೂಡ ಒಳ್ಳೆಯ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ಅವರು ಪೈಸಾ ವಸೂಲಿಗೆ ಸಹಕರಿಸಿದ್ದಾರೆ. ದ್ವಿತೀಯಾರ್ಧದಲ್ಲಿ ನಾಯಕ ಸ್ಟೈಲ್ ಬದಲಾಗಿ ಅವನಲ್ಲಿರುವ ಭಾವುಕತೆ ಸಹ ಎದ್ದು ನಿಲ್ಲುವಂತೆ ಮಾಡಿದ್ದಾರೆ. ನಾಗಶೇಖರ್ ಅವರಿಗೆ ಕಮರ್ಷಿಯಲ್ ಸಿನಿಮಾದ ಆಳ, ಉದ್ದ, ಅಗಲ ಚೆನ್ನಾಗಿ ಗೊತ್ತಿದೆ. ಇವರು ಮಿಕ್ಸ್ ಮಾಡಿರುವ ನವರಸ ಪಾಕ ಎಲ್ಲೂ ಕೊರತೆ ಅನ್ನಿಸುವುದಿಲ್ಲ.

ಯಾರಿದು ಅಮರ್?

ಇನ್ನು ಚಿತ್ರಕಥೆಗೆ ಬರೋದಾದ್ರೆ, ಅಮರ್ ಹೈ ಸ್ಟೈಲ್ ಜೀವನ ನಡೆಸುತ್ತಿರುವ ಯುವಕ. ಪಬ್ಬು, ಕ್ಲಬ್​ನಲ್ಲಿ ಕಾಲ ಕಳೆಯುವ ಹುಡುಗ. ಬೈಕ್ ಸ್ಟಂಟ್ ಅಂದ್ರೆ ಖುಷಿ. ಇವನ ಸ್ನೇಹಿತರ ಜೊತೆ ಸೇರಿ ಸಸ್ಯಗಳನ್ನು ಮಂಗಳೂರು, ಊಟಿ ಹಾಗೂ ಸುತ್ತಮುತ್ತ ನೆಡಬೇಕು ಎಂದಾಗ, ಮಣ್ಣಿನ ಉಂಡೆಯಲ್ಲಿ ಬೀಜ ಹುದುಗಿಸಿ ಅದರಿಂದ ಗಿಡ ನಡೆಯುವ ಯೋಚನೆ ಟೀಮ್ ಲೀಡರ್ ಬಾಬಿ (ತಾನ್ಯ ಹೋಪ್) ಸಹ ಇಷ್ಟ ಪಡುತ್ತಾಳೆ. ಆದರೆ, ಇವರಿಬ್ಬರಲ್ಲಿ ಪ್ರೇಮಾಂಕು ಆಗುವುದು ಅಮರ್ ಒಂದು ಜೀವವನ್ನು ಕಷ್ಟದಿಂದ ಪಾರು ಮಾಡಿದಾಗ. ಇವರ ರಸ್ತೆ ಪ್ರಯಾಣ ಬೈಕ್ ಬಳಸಿ ಅಂತ್ಯ ಆಗುವ ಹೊತ್ತಿಗೆ ಬಾಬಿ ಹಾಗೂ ಅಮರ್ ಪ್ರೀತಿಯಲ್ಲಿ ಧುಮುಕಿರುತ್ತಾರೆ. ಆದರೆ, ಯಾವಾಗ ಅಮರ್ ಹಾಗೂ ಬಾಬಿ ತಂದೆ (ದೇವರಾಜ್) ಭೇಟಿ ಆಗುವುದೊ, ಆಗ ಹಣದ ದರ್ಪ ತೋರುವ ವ್ಯಕ್ತಿಗೆ (ದೇವರಾಜ್​​​​) 50 ಕೋಟಿಗೆ ತನ್ನ ಪ್ರೇಯಸಿಯನ್ನು ಮಾರಿಬಿಡುತ್ತಾನೆ ಅಮರ್​.

'ಮೈ ಲವ್ ಈಸ್ ಸೋಲ್ಡ್ ಫಾರ್ 50 ಕೋಟಿ' ಎನ್ನುವುದು ಬಾಬಿ ಜೀವನದಲ್ಲಿ ದೊಡ್ಡ ಸಂಚಲನ ಮೂಡಿಸುತ್ತದೆ. ನಾಯಕಿ ಬಾಬಿ, ಅಪ್ಪನ ಆಸೆಯಂತೆ ಆಗರ್ಭ ಶ್ರಿಮಂತನ ಸಹೋದರನ ಕೈ ಹಿಡಿದಾಗ ಆಗುವ ಅಪಘಾತ ಬಾಬಿ ಜೀವನದಲ್ಲಿ ಮತ್ತೆ ಕಷ್ಟದ ಕಾರ್ಮೋಡ ಸುತ್ತಿಕೊಳ್ಳುತ್ತದೆ. ಆಗಲೇ ಬಾಬಿ ಚರ್ಚ್ ಒಂದರಲ್ಲಿ ಸನ್ಯಾಸಿ ಆಗುವ ನಿರ್ಧಾರ ಮಾಡುವುದು. ಆ ಘಟನೆ ಏನು ಎಂಬುದನ್ನು ಚಿತ್ರಮಂದಿರದಲ್ಲಿ ಕುಳಿತೇ ನೋಡಬೇಕು.

ತನ್ನ ಪ್ರೇಯಸಿ ಸನ್ಯಾಸಿ ಆಗುವುದು ಅಮರ್ ಮನಸಿಗೆ ಘಾಸಿಯನ್ನುಂಟು ಮಾಡುತ್ತದೆ. ಆ ನೋವಿನಿಂದಲೇ ಸ್ವಿಡ್ಜ್​​ರ್ಗೆ​​ಲೆಂಡ್​ಗೆ ಹೋಗ್ತಾರೆ. ಅಲ್ಲಿಂದ ಅವನ ಜೀವನದಲ್ಲಿ ಬಾಬಿ ಸಿಗುವಳೇ, ಅವಳು ಸಿಗುವುದಕ್ಕೆ ಯಾರು ಕಾರಣಿಕರ್ತರಾಗುತ್ತಾರೆ ಎಂಬುದು ನೀವು ತೆರೆಯ ಮೇಲೆ ನೋಡಬೇಕು.

ಇನ್ನು ಕನ್ನಡದಲ್ಲಿ ಮತ್ತೋರ್ವ 6 ಪ್ಲಸ್ ಎತ್ತರ ಇರುವ ನಾಯಕ ಅಬ್ಬರಿಸಿದ್ದಾನೆ. ಚಿತ್ರದಲ್ಲಿ ಅಂಬಿ ನೆರಳು ಅಗಾಧವಾಗಿ ಕಾಡುತ್ತದೆ. ಇವರ ಸಂಭಾಷಣೆಯಲ್ಲಿ ಅಂಬಿ ಛಾಯೆ ಎದ್ದು ಕಾಣುತ್ತದೆ. ಸಾಹಸ ದೃಶ್ಯಗಳಲ್ಲಿ ಪವರ್​​​ಫುಲ್​. ತಾನ್ಯ ಹೋಪ್ ಮತ್ತೋರ್ವ ಹೋಪ್ ಈ ಸಿನಿಮಾದಲ್ಲಿ. ಅಭಿನಯದ ಅವಕಾಶ ಚೆನ್ನಾಗಿಯೇ ಸಿಕ್ಕಿದೆ ಅದನ್ನು ತಾನ್ಯಾ ಸಖತ್ತಾಗಿ ಒಪ್ಪಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಜೋರು ಪಾಟು' ಹಾಡಿನಲ್ಲಿ ಕಾಣಿಸಿಕೊಂಡು, ಚಿತ್ರದ ಅಂತ್ಯದಲ್ಲಿ 'ಅಮರ್ ಜೀವನದಲ್ಲಿ ರಕ್ಷಾ ಕವಚ ಆಗಿ ನಿಲ್ಲುವುದಾಗಿ' ಹೇಳುವುದು ನಿಜ ಜೀವನಕ್ಕೂ ಹೊಂದಾಣಿಕೆ ಆಗುತ್ತದೆ.

ನಿರೂಪ್ ಭಂಡಾರಿ ಅವರದು ಒಂದು ಸಣ್ಣ ಪಾತ್ರ. ದೇವರಾಜ್ ಅವರಿಗೆ ಸಂಯಮದ ಪಾತ್ರ. ಸಾಧು ಕೋಕಿಲಾ ಹಾಗೂ ಚಿಕ್ಕಣ್ಣ ಅಭಿನಯ ಹೆಚ್ಚು ನಗೆ ಉಕ್ಕಿಸುತ್ತದೆ.

ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಸುಮಧುರ. ಅವುಗಳನ್ನು ಹಾಡಿರುವ ಸಂಜೀತ್ ಹೆಗ್ಡೆ, ಸೋನು ನಿಗಂ ಸಹ ಕೇಳುಗರಿಗೆ ಖುಷಿ ಕೊಡುತ್ತಾರೆ. ಅಂಬರೀಶ್ ಅವರ ಒಲವಿನ ಉಡುಗೊರೆ ಸಿನಿಮಾ ಶೀರ್ಷಿಕೆ ಗೀತೆಯ ತುಣುಕು ಇಲ್ಲಿ ಬಳಕೆ ಆಗಿದ್ದು, ಚಿತ್ರದ ಅಂತ್ಯದಲ್ಲಿ ಅಂಬರೀಶ್ ಅವರೇ ಪಿಯಾನೊ ಮುಂದೆ ಕುಳಿತು ಹೇಳುವುದು ಸಹ ಮನಸಿಗೆ ಟಚ್ ಆಗುತ್ತದೆ.

ಈ ಚಿತ್ರಕ್ಕೆ ಮತ್ತೊಂದು ಜೀವಾಳ ಅಂದ್ರೆ ಛಾಯಾಗ್ರಾಹಕ ಸತ್ಯ ಹೆಗ್ಡೆ. ಅಷ್ಟೊಂದು ರಮಣೀಯ ದೃಶ್ಯಗಳು ಕರ್ನಾಟಕದ ಭಾಗದಲ್ಲಿ ಸಿಕ್ಕರೆ, ಮತ್ತಷ್ಟು ಭಾಗದಲ್ಲಿ ಸ್ವಿಡ್ಜ್​ರ್​ಲ್ಯಾಂಡ್​​ ಹೊರಾಂಗಣ ದೃಶ್ಯಗಳು ಮನಸಿಗೆ, ಕಣ್ಣಿಗೆ ಆನಂದ ಉಂಟು ಮಾಡುತ್ತದೆ. ಚಿತ್ರದ ಆವಧಿಯಲ್ಲಿ ತಕರಾರು ಇಲ್ಲ. ಸಂಕಲನ ಓಕೆ, ವಸ್ತ್ರ ವಿನ್ಯಾಸ ಆಯ್ಕೆ ಸಹ ಮೆಚ್ಚುಗೆಗೆ ಅರ್ಹ. ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಅಮರ್ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

70ರ ದಶಕದ ನಾಯಕ ನಟರುಗಳ ಮಕ್ಕಳ ಪೈಕಿ ಅಂಬರೀಶ್ ಅವರ ಪುತ್ರ ಮಾತ್ರ ರಜತ ಪರದೆ ಮೇಲೆ ವಿಜೃಂಭಿಸಲು ಬಾಕಿ ಇದ್ದದ್ದು. ಇದೀಗ ಅದು ಕೂಡ ಸಾಕಾರಗೊಂಡಿದೆ. ಅಮರ್ ಚಿತ್ರದಿಂದ ಅಭಿಷೇಕ್ ಅಂಬರೀಶ್ ಆಗಮನ ಆಗಿದೆ. ಇದು ಒಂದು ಪಕ್ಕ ಮನರಂಜನಾ ಚಿತ್ರವಾಗಿ, ಕುಟುಂಬ ಸಮೇತ ನೋಡುವಂತಾಗಿದೆ. ಅಭಿಷೇಕ್​ ಅಂಬರೀಶ್ ಲೀಲಾ ಜಾಲವಾಗಿ ನಟಿಸಿದ್ದಾರೆ.

ಅಭಿ ಎತ್ತರದಲ್ಲಿ ದರ್ಶನ್, ಸುದೀಪ್, ಯಶ್​ ಹಾಗೂ ರಕ್ಷಿತ್ ಶೆಟ್ಟಿ ಅವರನ್ನು ಮೀರಿಸುತ್ತಾರೆ. ಇವರದು 6 ಅಡಿ 4 ಇಂಚು ಹೈಟ್​​. ಅಭಿ ಅವರನ್ನು ಕ್ಯಾಮಾರದಲ್ಲಿ ಸೆರೆ ಹಿಡಿಯೋದು, ಅದನ್ನು ದೊಡ್ಡ ಪರದೆಯ ಮೇಲೆ ತೋರಿಸೋದು ಸಹ ಒಂದು ಚಾಲೆಂಜ್ ಆಗಿತ್ತಂತೆ ನಿರ್ದೇಶಕ ನಾಗಶೇಖರ್ ಅವರಿಗೆ.

ಅಭಿಷೇಕ್​ ಅವರಲ್ಲಿ ಅಭಿನಯದ ತಾಕತ್ತು ಸಹ ಇದೆ. ಸಾಹಸದ ಸನ್ನಿವೇಶಗಳಲ್ಲಿ ಬಲಭೀಮ. ಯಾಕೋ ರೊಮಾನ್ಸ್ ಅಂದರೆ ಸ್ವಲ್ಪ ಹಿಂಜರಿಕೆ ಇದೆ ಅನ್ನಿಸುತ್ತೆ. ಸಂಭಾಷಣೆಯಲ್ಲಿ ಮೊದಲ ಸಿನಿಮಾ ಆದ್ದರಿಂದ ಅಪ್ಪನ ಸಂಭಾಷಣೆ ಶೈಲಿ ಬೆರೆಸಿದ್ದಾರೆ. ಅದೇ ಈ ಚಿತ್ರದ ಜೀವಾಳ ಸಹ ಆಗಿದೆ.

ನಿರ್ದೇಶಕ ನಾಗಶೇಖರ್ ಕೂಡ ಒಳ್ಳೆಯ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲಾರ್ಧದಲ್ಲಿ ಅವರು ಪೈಸಾ ವಸೂಲಿಗೆ ಸಹಕರಿಸಿದ್ದಾರೆ. ದ್ವಿತೀಯಾರ್ಧದಲ್ಲಿ ನಾಯಕ ಸ್ಟೈಲ್ ಬದಲಾಗಿ ಅವನಲ್ಲಿರುವ ಭಾವುಕತೆ ಸಹ ಎದ್ದು ನಿಲ್ಲುವಂತೆ ಮಾಡಿದ್ದಾರೆ. ನಾಗಶೇಖರ್ ಅವರಿಗೆ ಕಮರ್ಷಿಯಲ್ ಸಿನಿಮಾದ ಆಳ, ಉದ್ದ, ಅಗಲ ಚೆನ್ನಾಗಿ ಗೊತ್ತಿದೆ. ಇವರು ಮಿಕ್ಸ್ ಮಾಡಿರುವ ನವರಸ ಪಾಕ ಎಲ್ಲೂ ಕೊರತೆ ಅನ್ನಿಸುವುದಿಲ್ಲ.

ಯಾರಿದು ಅಮರ್?

ಇನ್ನು ಚಿತ್ರಕಥೆಗೆ ಬರೋದಾದ್ರೆ, ಅಮರ್ ಹೈ ಸ್ಟೈಲ್ ಜೀವನ ನಡೆಸುತ್ತಿರುವ ಯುವಕ. ಪಬ್ಬು, ಕ್ಲಬ್​ನಲ್ಲಿ ಕಾಲ ಕಳೆಯುವ ಹುಡುಗ. ಬೈಕ್ ಸ್ಟಂಟ್ ಅಂದ್ರೆ ಖುಷಿ. ಇವನ ಸ್ನೇಹಿತರ ಜೊತೆ ಸೇರಿ ಸಸ್ಯಗಳನ್ನು ಮಂಗಳೂರು, ಊಟಿ ಹಾಗೂ ಸುತ್ತಮುತ್ತ ನೆಡಬೇಕು ಎಂದಾಗ, ಮಣ್ಣಿನ ಉಂಡೆಯಲ್ಲಿ ಬೀಜ ಹುದುಗಿಸಿ ಅದರಿಂದ ಗಿಡ ನಡೆಯುವ ಯೋಚನೆ ಟೀಮ್ ಲೀಡರ್ ಬಾಬಿ (ತಾನ್ಯ ಹೋಪ್) ಸಹ ಇಷ್ಟ ಪಡುತ್ತಾಳೆ. ಆದರೆ, ಇವರಿಬ್ಬರಲ್ಲಿ ಪ್ರೇಮಾಂಕು ಆಗುವುದು ಅಮರ್ ಒಂದು ಜೀವವನ್ನು ಕಷ್ಟದಿಂದ ಪಾರು ಮಾಡಿದಾಗ. ಇವರ ರಸ್ತೆ ಪ್ರಯಾಣ ಬೈಕ್ ಬಳಸಿ ಅಂತ್ಯ ಆಗುವ ಹೊತ್ತಿಗೆ ಬಾಬಿ ಹಾಗೂ ಅಮರ್ ಪ್ರೀತಿಯಲ್ಲಿ ಧುಮುಕಿರುತ್ತಾರೆ. ಆದರೆ, ಯಾವಾಗ ಅಮರ್ ಹಾಗೂ ಬಾಬಿ ತಂದೆ (ದೇವರಾಜ್) ಭೇಟಿ ಆಗುವುದೊ, ಆಗ ಹಣದ ದರ್ಪ ತೋರುವ ವ್ಯಕ್ತಿಗೆ (ದೇವರಾಜ್​​​​) 50 ಕೋಟಿಗೆ ತನ್ನ ಪ್ರೇಯಸಿಯನ್ನು ಮಾರಿಬಿಡುತ್ತಾನೆ ಅಮರ್​.

'ಮೈ ಲವ್ ಈಸ್ ಸೋಲ್ಡ್ ಫಾರ್ 50 ಕೋಟಿ' ಎನ್ನುವುದು ಬಾಬಿ ಜೀವನದಲ್ಲಿ ದೊಡ್ಡ ಸಂಚಲನ ಮೂಡಿಸುತ್ತದೆ. ನಾಯಕಿ ಬಾಬಿ, ಅಪ್ಪನ ಆಸೆಯಂತೆ ಆಗರ್ಭ ಶ್ರಿಮಂತನ ಸಹೋದರನ ಕೈ ಹಿಡಿದಾಗ ಆಗುವ ಅಪಘಾತ ಬಾಬಿ ಜೀವನದಲ್ಲಿ ಮತ್ತೆ ಕಷ್ಟದ ಕಾರ್ಮೋಡ ಸುತ್ತಿಕೊಳ್ಳುತ್ತದೆ. ಆಗಲೇ ಬಾಬಿ ಚರ್ಚ್ ಒಂದರಲ್ಲಿ ಸನ್ಯಾಸಿ ಆಗುವ ನಿರ್ಧಾರ ಮಾಡುವುದು. ಆ ಘಟನೆ ಏನು ಎಂಬುದನ್ನು ಚಿತ್ರಮಂದಿರದಲ್ಲಿ ಕುಳಿತೇ ನೋಡಬೇಕು.

ತನ್ನ ಪ್ರೇಯಸಿ ಸನ್ಯಾಸಿ ಆಗುವುದು ಅಮರ್ ಮನಸಿಗೆ ಘಾಸಿಯನ್ನುಂಟು ಮಾಡುತ್ತದೆ. ಆ ನೋವಿನಿಂದಲೇ ಸ್ವಿಡ್ಜ್​​ರ್ಗೆ​​ಲೆಂಡ್​ಗೆ ಹೋಗ್ತಾರೆ. ಅಲ್ಲಿಂದ ಅವನ ಜೀವನದಲ್ಲಿ ಬಾಬಿ ಸಿಗುವಳೇ, ಅವಳು ಸಿಗುವುದಕ್ಕೆ ಯಾರು ಕಾರಣಿಕರ್ತರಾಗುತ್ತಾರೆ ಎಂಬುದು ನೀವು ತೆರೆಯ ಮೇಲೆ ನೋಡಬೇಕು.

ಇನ್ನು ಕನ್ನಡದಲ್ಲಿ ಮತ್ತೋರ್ವ 6 ಪ್ಲಸ್ ಎತ್ತರ ಇರುವ ನಾಯಕ ಅಬ್ಬರಿಸಿದ್ದಾನೆ. ಚಿತ್ರದಲ್ಲಿ ಅಂಬಿ ನೆರಳು ಅಗಾಧವಾಗಿ ಕಾಡುತ್ತದೆ. ಇವರ ಸಂಭಾಷಣೆಯಲ್ಲಿ ಅಂಬಿ ಛಾಯೆ ಎದ್ದು ಕಾಣುತ್ತದೆ. ಸಾಹಸ ದೃಶ್ಯಗಳಲ್ಲಿ ಪವರ್​​​ಫುಲ್​. ತಾನ್ಯ ಹೋಪ್ ಮತ್ತೋರ್ವ ಹೋಪ್ ಈ ಸಿನಿಮಾದಲ್ಲಿ. ಅಭಿನಯದ ಅವಕಾಶ ಚೆನ್ನಾಗಿಯೇ ಸಿಕ್ಕಿದೆ ಅದನ್ನು ತಾನ್ಯಾ ಸಖತ್ತಾಗಿ ಒಪ್ಪಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಜೋರು ಪಾಟು' ಹಾಡಿನಲ್ಲಿ ಕಾಣಿಸಿಕೊಂಡು, ಚಿತ್ರದ ಅಂತ್ಯದಲ್ಲಿ 'ಅಮರ್ ಜೀವನದಲ್ಲಿ ರಕ್ಷಾ ಕವಚ ಆಗಿ ನಿಲ್ಲುವುದಾಗಿ' ಹೇಳುವುದು ನಿಜ ಜೀವನಕ್ಕೂ ಹೊಂದಾಣಿಕೆ ಆಗುತ್ತದೆ.

ನಿರೂಪ್ ಭಂಡಾರಿ ಅವರದು ಒಂದು ಸಣ್ಣ ಪಾತ್ರ. ದೇವರಾಜ್ ಅವರಿಗೆ ಸಂಯಮದ ಪಾತ್ರ. ಸಾಧು ಕೋಕಿಲಾ ಹಾಗೂ ಚಿಕ್ಕಣ್ಣ ಅಭಿನಯ ಹೆಚ್ಚು ನಗೆ ಉಕ್ಕಿಸುತ್ತದೆ.

ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಸುಮಧುರ. ಅವುಗಳನ್ನು ಹಾಡಿರುವ ಸಂಜೀತ್ ಹೆಗ್ಡೆ, ಸೋನು ನಿಗಂ ಸಹ ಕೇಳುಗರಿಗೆ ಖುಷಿ ಕೊಡುತ್ತಾರೆ. ಅಂಬರೀಶ್ ಅವರ ಒಲವಿನ ಉಡುಗೊರೆ ಸಿನಿಮಾ ಶೀರ್ಷಿಕೆ ಗೀತೆಯ ತುಣುಕು ಇಲ್ಲಿ ಬಳಕೆ ಆಗಿದ್ದು, ಚಿತ್ರದ ಅಂತ್ಯದಲ್ಲಿ ಅಂಬರೀಶ್ ಅವರೇ ಪಿಯಾನೊ ಮುಂದೆ ಕುಳಿತು ಹೇಳುವುದು ಸಹ ಮನಸಿಗೆ ಟಚ್ ಆಗುತ್ತದೆ.

ಈ ಚಿತ್ರಕ್ಕೆ ಮತ್ತೊಂದು ಜೀವಾಳ ಅಂದ್ರೆ ಛಾಯಾಗ್ರಾಹಕ ಸತ್ಯ ಹೆಗ್ಡೆ. ಅಷ್ಟೊಂದು ರಮಣೀಯ ದೃಶ್ಯಗಳು ಕರ್ನಾಟಕದ ಭಾಗದಲ್ಲಿ ಸಿಕ್ಕರೆ, ಮತ್ತಷ್ಟು ಭಾಗದಲ್ಲಿ ಸ್ವಿಡ್ಜ್​ರ್​ಲ್ಯಾಂಡ್​​ ಹೊರಾಂಗಣ ದೃಶ್ಯಗಳು ಮನಸಿಗೆ, ಕಣ್ಣಿಗೆ ಆನಂದ ಉಂಟು ಮಾಡುತ್ತದೆ. ಚಿತ್ರದ ಆವಧಿಯಲ್ಲಿ ತಕರಾರು ಇಲ್ಲ. ಸಂಕಲನ ಓಕೆ, ವಸ್ತ್ರ ವಿನ್ಯಾಸ ಆಯ್ಕೆ ಸಹ ಮೆಚ್ಚುಗೆಗೆ ಅರ್ಹ. ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಅಮರ್ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

ಅಮರ್ ಕನ್ನಡ ಚಿತ್ರ ವಿಮರ್ಶೆ

ಅಂಬಿಯ ನೆರಳಲ್ಲಿ ಅಭಿಷೇಖ್ ಅದ್ಬುತ

ರೇಟಿಂಗ್ – 4/5, ಆವದಿ – 132 ನಿಮಿಷ, ಕ್ಯಾಟಗರಿ – ಲವ್ ಸ್ಟೋರಿ

ಚಿತ್ರ – ಅಮರ್, ನಿರ್ಮಾಪಕ – ಸಂದೇಶ್ ಎನ್, ನಿರ್ದೇಶಕ – ನಾಗಶೇಖರ್, ಸಂಗೀತ – ಅರ್ಜುನ್ ಜನ್ಯ, ಛಾಯಾಗ್ರಹಣ – ಸತ್ಯ ಹೆಗ್ಡೆ, ತಾರಾಗಣ – ಅಭಿಷೇಖ್ ಅಂಬರೀಶ್, ತಾನ್ಯ ಹೊಪ್, ದೇವರಾಜ್, ಸಾಧು ಕೋಕಿಲ, ಸುಧರಾಣಿ, ಚಿಕ್ಕಣ್ಣ, ದೀಪಕ್ ಶೆಟ್ಟಿ, ದರ್ಶನ್, ನೀರೂಪ್ ಭಂಡಾರಿ, ರಚಿತಾ ರಾಮ್ ಹಾಗೂ ಇತರರು.

70 ರ ದಶಕದ ನಾಯಕ ನಟರುಗಳ ಪೈಕಿ ಅಂಬರೀಶ್ ಅವರ ಪುತ್ರ ಮಾತ್ರ ರಜತ ಪರದೆ ಮೇಲೆ ವಿಜೃಂಭಿಸಲು ಬಾಕಿ ಇದ್ದದ್ದು. ಅದೇ ಅಭಿಷೇಕ್ ಅಂಬರೀಶ್ ಆಗಮನ ಅಮರ್ ಚಿತ್ರದಿಂದ ಒಂದು ಪಕ್ಕ ಮನರಂಜನಾ ಚಿತ್ರವಾಗಿ, ಕುಟುಂಬ ಸಮೇತ ನೋಡುವಂತೆ ಆಗಿದೆ. ಅಭಿಷೇಖ್ ಅಂಬರೀಶ್ ಲೀಲಾ ಜಾಲ. ಎಷ್ಟೇ ಆಗಲಿ ಜಲೀಲನ ಮಗ ಅಲ್ಲವೇ. ಒಂದು ಮಾತು ಸತ್ಯ ಎಲ್ಲ ನಾಯಕ ಮತ್ತು ಖಳ ನಟರುಗಳ ಮಕ್ಕಳ ಪೈಕಿ ಅತಿ ಎತ್ತರ ಹಾಗೂ ಅತಿ ಸುಂದರ ಅಭಿಷೇಖ್ ಅಂಬರೀಶ್ ಅಂದರೆ ಅತಿಶಯೋಕ್ತಿ ಅಲ್ಲ.

ಎತ್ತರದಲ್ಲಿ ದರ್ಶನ್, ಸುದೀಪ್, ಯಷ್, ರಕ್ಷಿತ್ ಶೆಟ್ಟಿ ಅವರ ಹೈಟ್ ಮೀರಿಸುತ್ತಾನೆ. ಆರು ಅಡಿ 4 ಇಂಚು. ಇವರನ್ನು ಕ್ಯಾಮರದಲ್ಲಿ ಸೆರೆ ಹಿಡಿಯೋದು ಅದನ್ನು ದೊಡ್ಡ ಪರದೆಯ ಮೇಲೆ ತೋರಿಸೋದು ಸಹ ಒಂದು ಛಾಲೆಂಜ್ ಆಗಿದೆ ನಿರ್ದೇಶಕ ನಾಗಶೇಖರ್ ಅವರಿಗೆ.

ಬಾರಿ ಹೈಟ್ ಹಾಗೂ ಸುಂದರ ನೋಟ ಇದ್ದಾರ ಸಾಕ. ಈ ಅಭಿಷೇಖ್ ಅಲ್ಲಿ ಅಭಿನಯದ ತಾಕತ್ತು ಸಹ ಇದೆ. ಸಾಹಸದ ಸನ್ನಿವೇಶಗಳಲ್ಲಿ ಭಲ ಭೀಮ. ಯಾಕೋ ರೊಮಾನ್ಸ್ ಅಂದರೆ ಸ್ವಲ್ಪ ಹಿಂಜರಿಕೆ ಇದೆ. ಸಂಭಾಷಣೆಯಲ್ಲಿ ಮೊದಲ ಸಿನಿಮಾ ಆದದ್ದರಿಂದ ಅಪ್ಪನ ಸಂಭಾಷಣೆ ಶೈಲಿ ಬೆರಸಿದ್ದಾರೆ. ಅದೇ ಈ ಚಿತ್ರದ ಜೀವಾಳ ಸಹ.

ನಾಗಶೇಖರ್ ಅಂತ ಮಾಮೂಲಿ ಕಥೆಯನ್ನೇನೆ ಮಾಡಿಕೊಂಡಿಲ್ಲ. ಮೊದಲ ಅರ್ಧದಲ್ಲಿ ಅವರು ಪೈಸಾ ವಸೂಲಿಗೆ ಸಹಕರಿಸಿದ್ದಾರೆ. ದ್ವಿತೀಯಾರ್ಧದಲ್ಲಿ ನಾಯಕ ಸ್ಟೈಲ್ ಬದಲಾಗಿ ಅವನಲ್ಲಿರುವ ಭಾವುಕ ಜೀವ ಸಹ ಎದ್ದು ನಿಲ್ಲುತ್ತದೆ. ನಾಗಶೇಖರ್ ಅವರಿಗೆ ಕಮರ್ಷಿಯಲ್ ಸಿನಿಮಾದ ಆಳ, ಉದ್ದ, ಅಗಲ ಚನ್ನಾಗಿ ಗೊತ್ತಿದೆ. ಇವರು ಮಿಕ್ಸ್ ಮಾಡಿರುವ ನವರಸ ಪಾಕ ಎಲ್ಲೂ ಕೊರತೆ ಅನ್ನಿಸುವುದಿಲ್ಲ.

ಯಾರಿದು ಅಮರ್? ಹೈ ಸ್ಟೈಲ್ ಜೀವನ ನಡೆಸುತ್ತಿರುವ ಯುವಕ. ಪಬ್ಬು, ಕ್ಲಬ್ಬಿನಲ್ಲಿ ಕಾಲ ಕಳೆಯುವ ಹುಡುಗ, ಬೈಕ್ ಸ್ಟಂಟ್ ಅಂದರೆ ಖುಷಿ. ಇವನ ಸ್ನೇಹಿತರು ಜೊತೆ ಸೇರಿ ಸಸ್ಯಗಳನ್ನು ಮಂಗಳೂರು, ಊಟಿ ಹಾಗೂ ಸುತ್ತ ಮುತ್ತ ನೆಡಬೇಕು ಎಂದಾಗ ಮಣ್ಣಿನ ಉಂಡೆಯಲ್ಲಿ ಬೀಜ ಹುದುಗಿಸಿ ಅದರಿಂದ ಗಿಡ ನಡೆಯುವ ಯೋಚನೆ ಟೀಮ್ ಲೀಡರ್ ಬಾಬಿ (ತಾನ್ಯ ಹೊಪ್) ಸಹ ಇಷ್ಟ ಪಡುತ್ತಾಳೆ. ಆದರೆ ಇವರಿಬ್ಬರಲ್ಲಿ ಪ್ರೇಮಂಕುರ ಆಗುವುದು ಅಮರ್ ಒಂದು ಜೀವವನ್ನು ಕಷ್ಟದಿಂದ ಪಾರು ಮಾಡಿದಾಗ. ಇವರ ರಸ್ತೆ ಪ್ರಯಾಣ ಬೈಕ್ ಬಳಸಿ ಅಂತ್ಯ ಆಗುವ ಹೊತ್ತಿಗೆ ಬಾಬ್ಬಿ ಹಾಗೂ ಅಮರ್ ಪ್ರೀತಿಯಲ್ಲಿ ಡುಮುಕಿರುತ್ತಾರೆ. ಆದರೆ ಯಾವಾಗ ಅಮರ್ ಹಾಗೂ ಬಾಬಿ ತಂದೆ (ದೇವರಾಜ್) ಬೇಟಿ ಆಗುವುದೊ ಆಗ ಹಣದ ದರ್ಪ ತೋರುವ ವ್ಯಕ್ತಿಗೆ 50 ಕೋಟಿಗೆ ತನ್ನ ಪ್ರೇಯಸಿಯನ್ನು ಮಾರಿಬಿಡುತ್ತಾನೆ.

ಮೈ ಲವ್ ಈಸ್ ಸೋಲ್ಡ್ ಫಾರ್ 50 ಕೋಟಿ ಎನ್ನುವುದು ಬಾಬಿ ಜೀವನದಲ್ಲಿ ದೊಡ್ಡ ಸಂಚಲನ ಉಂಟಾಗುತ್ತದೆ. ಬಾಬಿ ಅಪ್ಪನ ಆಸೆಯಂತೆ ಆಗರ್ಭ ಶ್ರಿಮಂತನ ಸಹೋದರನ ಕೈ ಹಿಡಿದಾಗ ಆಗುವ ಅಪಘಾತ ಬಾಬಿ ಜೀವನದಲ್ಲಿ ಮತ್ತೆ ಕಷ್ಟದ ಕಾರ್ಮೋಡ ಸುತ್ತಿ ಕೊಳ್ಳುತ್ತದೆ. ಆಗಲೇ ಬಾಬಿ ಚರ್ಚ್ ಒಂದರಲ್ಲಿ ಸನ್ಯಾಸಿ ಆಗುವ ನಿರ್ಧಾರ ಮಾಡುವುದು. ಇದರಿಂದ ಹೆಚ್ಚು ನೋವು ಆಗುವುದು ಅಮರ್ ಮನಸಿಗೆ.

ಆ ನೋವಿನಿಂದಲೇ ಅಮರ್ ತನ್ನ ಪ್ರಯಾಣವನ್ನು ಸ್ವಿಟ್ಜರ್ಲ್ಯಾಂಡ್ ಕಡೆ ಬೆಳಸುತ್ತಾನೆ. ಅಲ್ಲಿಂದ ಅವನ ಜೀವನದಲ್ಲಿ ಬಾಬಿ ಸಿಗುವಳ, ಬಾಬಿ ಸಿಗುವುದಕ್ಕೆ ಯಾರು ಕಾರಣಕರ್ತ ಆಗುತ್ತಾರೆ ಎಂಬುದು ನೀವು ತೆರೆಯ ಮೇಲೆ ನೋಡಬೇಕು.

ಕನ್ನಡಕ್ಕೆ ಮತ್ತೊಬ್ಬ 6 ಪ್ಲಸ್ ಹೈಟ್ ಇರುವ ನಾಯಕ ಅಬ್ಬರಿಸಿದ್ದಾನೆ. ಒಳ್ಳೆಯ ಪಾತ್ರಗಳಷ್ಟೇ ಸಿಗಬೇಕು ಅಭಿಷೇಖ್ ಮುಂದಿನ ದಿವಸಗಳಲ್ಲಿ. ಅಂಬಿ ನೆರಳು ಅಗಾದವಾಗಿ ಕಾಡುತ್ತದೆ. ಇವರ ಸಂಭಾಷಣೆಯಲ್ಲಿ ಅಂಬಿ ಛಾಯೆ ಎದ್ದು ಕಾಣುತ್ತದೆ. ಸಾಹಸ ದೃಶ್ಯಗಳಲ್ಲಿ ಪವರ್ಫುಲ್. ತಾನ್ಯ ಹೊಪ್ ಮತ್ತೊಬ್ಬ ಹೊಪ್ ಈ ಸಿನಿಮಾದಲ್ಲಿ. ಅಭಿನಯದ ಅವಕಾಶ ಚನ್ನಾಗಿಯೇ ಸಿಕ್ಕಿದೆ ಅದನ್ನು ತಾನ್ಯ ಸಕ್ಕಾತಾಗಿ ಒಪ್ಪಿಸಿದ್ದಾರೆ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಹಾಡು ಜೋರು ಪಾಟು.... ದೃಶ್ಯದಲ್ಲಿ ಕಾಣಿಸಿಕೊಂಡು ಚಿತ್ರದ ಅಂತ್ಯದಲ್ಲಿ ಅಮರ್ ಜೀವನದಲ್ಲಿ ರಕ್ಷ ಕವಚ ಆಗಿ ನಿಲ್ಲುವುದಾಗಿ ಹೇಳುವುದು ನಿಜ ಜೀವನಕ್ಕು ಹೊಂದಾಣಿಕೆ ಆಗುತ್ತದೆ.

ನಿರೂಪ್ ಭಂಡಾರಿ ಒಂದು ಸಣ್ಣ ಪಾತ್ರ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ಅವರಿಗೆ ಸಂಯಮದ ಪಾತ್ರ. ಸಾಧು ಕೋಕಿಲ ಹಾಗೂ ಚಿಕ್ಕಣ್ಣ ಅಭಿನಯ ಹೆಚ್ಚು ನಗೆ ಉಕ್ಕಿಸುತ್ತದೆ.

ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಸುಮಧುರ ಹಾಗೂ ಅದನ್ನು ಹಾಡಿರುವವರು ಸಂಚಿತ್ ಹೆಗ್ಡೆ, ಸೋನು ನಿಗಂ ಸಹ ಕೇಳುಗರಿಗೆ ಖುಷಿ ಕೊಡುತ್ತಾರೆ. ಅಂಬರೀಶ್ ಅವರ ಒಲವಿನ ಉಡುಗೊರೆ ಸಿನಿಮಾ ಶೀರ್ಷಿಕೆ ಗೀತೆಯ ತುಣುಕು ಇಲ್ಲಿ ಬಳಕೆ ಆಗಿದ್ದು, ಚಿತ್ರದ ಅಂತ್ಯದಲ್ಲಿ ಅಂಬರೀಶ್ ಅವರೇ ಪಿಯಾನೊ ಮುಂದೆ ಕುಳಿತು ಹೇಳುವುದು ಸಹ ಮನಸಿಗೆ ಟಚ್ ಆಗುತ್ತದೆ.

ಈ ಚಿತ್ರಕ್ಕೆ ಮತ್ತೊಂದು ಜೀವಾಳ ಅಂದರೆ ಛಾಯಾಗ್ರಾಹಕ ಸತ್ಯ ಹೆಗ್ಡೆ. ಅಷ್ಟೊಂದು ರಮಣೀಯ ದೃಶ್ಯಗಳು ಕರ್ನಾಟಕದ ಭಾಗದಲ್ಲಿ ಸಿಕ್ಕರೆ, ಮತ್ತಷ್ಟು ಭಾಗದಲ್ಲಿ ಸ್ವಿಟ್ಜರ್ಲ್ಯಾಂಡ್ ಹೊರಾಂಗಣ ದೃಷಗಳು ಮನಸಿಗೆ, ಕಣ್ಣಿಗೆ ಆನಂದ ಉಂಟು ಮಾಡುತ್ತದೆ.

ಚಿತ್ರದ ಆವದಿಯಲ್ಲಿ ತಕರಾರು ಇಲ್ಲ. ಸಂಕಲನ ಓಕೆ, ವಸ್ತ್ರ ವಿನ್ಯಾಸ ಆಯ್ಕೆ ಸಹ ಮೆಚ್ಚುಗೆಗೆ ಅರ್ಹ.

ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಅಮರ್ ಬಹಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.