ETV Bharat / sitara

ಯುವರತ್ನ ಸಿನಿಮಾ ರಿಲೀಸ್​ಗಿಲ್ಲ ಅಡೆತಡೆ: ನಿಟ್ಟುಸಿರು ಬಿಟ್ಟ ಚಿತ್ರತಂಡ

author img

By

Published : Mar 30, 2021, 10:12 AM IST

ಯುವರತ್ನ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ರಾಜ್ಯಾದ್ಯಂತ ಏಪ್ರಿಲ್ 1ರಂದು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿದೆ.

yuvaratna-cinema
ಯುವರತ್ನ ಸಿನಿಮಾ

ಬಿಗ್​ ಬಜೆಟ್ ಚಿತ್ರಗಳ ಪೈಕಿ ಧ್ರುವ ಸರ್ಜಾ ಅಭಿನಯದ 'ಪೊಗರು' ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅಭಿನಯದ 'ರಾಬರ್ಟ್​' ಸಿನಿಮಾ ಬಿಡುಗಡೆಯಾಗಿದೆ. ಆದರೆ, ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಈ ಎರಡೂ ಚಿತ್ರಗಳಂತೆ ಸುಸೂತ್ರವಾಗಿ ಬಿಡುಗಡೆಯಾಗುತ್ತದೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದ್ದು, ಯುವರತ್ನ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ರಾಜ್ಯಾದ್ಯಂತ ಏಪ್ರಿಲ್ 1ರಂದು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಅದನ್ನು ತಡೆಗಟ್ಟಲು ಸರ್ಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಈ ಪೈಕಿ ಲಾಕ್‍ಡೌನ್ ಅಥವಾ ಶೇ. 50ರಷ್ಟು ಹಾಜರಾತಿ ಘೋಷಿಸಬಹುದು ಎಂಬ ಭಯ ಎಲ್ಲರಲ್ಲೂ ಇತ್ತು. ಸೋಮವಾರ ಸಂಜೆ ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ಸೇರಲಾಗಿದ್ದು, ಈ ಸಭೆಯಲ್ಲಿ ಲಾಕ್‍ಡೌನ್ ಆಗಲಿ, ಶೇ. 50ರಷ್ಟು ಹಾಜರಾತಿಗೆ ಅನುಮತಿ ನೀಡಬೇಕೆಂಬ ಚರ್ಚೆ ಎಲ್ಲೂ ಆಗಿಲ್ಲ. ಅದರ ಬದಲಿಗೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಚಿತ್ರಮಂದಿರಗಳಲ್ಲಿ ಶುಚಿತ್ರ ಕಾಪಾಡಬೇಕು ಎಂಬ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಅಷ್ಟೇ ಅಲ್ಲದೆ, 15 ದಿನಗಳ ಕಾಲ ನೋಡಿ, ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಯುವರತ್ನ ಚಿತ್ರತಂಡ ನಿಟ್ಟುಸಿರುಬಿಟ್ಟಿದೆ. ಈ ಚಿತ್ರದ ಬಿಡುಗಡೆಗಿದ್ದ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದ್ದು, ಚಿತ್ರವನ್ನು ಯಾವುದೇ ಅಡೆತಡೆಗಳಿಲ್ಲದೇ ಬಿಡುಗಡೆ ಮಾಡಬಹುದಾಗಿದೆ.

ಇನ್ನು ಈ ಭಯದಿಂದ ಯುವರತ್ನ ಚಿತ್ರತಂಡದವರು ಬಚಾವ್ ಆದರೂ, ಬೇರೆಯವರಿಗೆ ಇನ್ನೂ ಆ ಬಗ್ಗೆ ಗೊಂದಲ ನಿವಾರಣೆಯಾಗಿಲ್ಲ. ಯುವರತ್ನ ನಂತರ 'ಸಲಗ' ಮತ್ತು 'ಕೋಟಿಗೊಬ್ಬ 3' ಚಿತ್ರಗಳು ಬಿಡುಗಡೆಯಾಗಲಿವೆ. ಆದರೆ, ಕೊರೊನಾ ಎರಡನೆಯ ಅಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಜನ ಬರುತ್ತಾರೋ ಇಲ್ಲವೋ ಎಂಬ ಗೊಂದಲ ಈ ಚಿತ್ರತಂಡದವರಿಗೂ ಇದೆ. ಹಾಗಾಗಿ ಅಂದುಕೊಂಡಂತೆಯೇ ಚಿತ್ರ ಬಿಡುಗಡೆಯಾಗುತ್ತವೋ ಅಥವಾ ಈ ಚಿತ್ರಗಳು ಪೋಸ್ಟ್​ಪೋನ್ ಆಗುತ್ತವೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಬಿಗ್​ ಬಜೆಟ್ ಚಿತ್ರಗಳ ಪೈಕಿ ಧ್ರುವ ಸರ್ಜಾ ಅಭಿನಯದ 'ಪೊಗರು' ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅಭಿನಯದ 'ರಾಬರ್ಟ್​' ಸಿನಿಮಾ ಬಿಡುಗಡೆಯಾಗಿದೆ. ಆದರೆ, ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಈ ಎರಡೂ ಚಿತ್ರಗಳಂತೆ ಸುಸೂತ್ರವಾಗಿ ಬಿಡುಗಡೆಯಾಗುತ್ತದೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದ್ದು, ಯುವರತ್ನ ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ರಾಜ್ಯಾದ್ಯಂತ ಏಪ್ರಿಲ್ 1ರಂದು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಅದನ್ನು ತಡೆಗಟ್ಟಲು ಸರ್ಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಈ ಪೈಕಿ ಲಾಕ್‍ಡೌನ್ ಅಥವಾ ಶೇ. 50ರಷ್ಟು ಹಾಜರಾತಿ ಘೋಷಿಸಬಹುದು ಎಂಬ ಭಯ ಎಲ್ಲರಲ್ಲೂ ಇತ್ತು. ಸೋಮವಾರ ಸಂಜೆ ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ಸೇರಲಾಗಿದ್ದು, ಈ ಸಭೆಯಲ್ಲಿ ಲಾಕ್‍ಡೌನ್ ಆಗಲಿ, ಶೇ. 50ರಷ್ಟು ಹಾಜರಾತಿಗೆ ಅನುಮತಿ ನೀಡಬೇಕೆಂಬ ಚರ್ಚೆ ಎಲ್ಲೂ ಆಗಿಲ್ಲ. ಅದರ ಬದಲಿಗೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಚಿತ್ರಮಂದಿರಗಳಲ್ಲಿ ಶುಚಿತ್ರ ಕಾಪಾಡಬೇಕು ಎಂಬ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಅಷ್ಟೇ ಅಲ್ಲದೆ, 15 ದಿನಗಳ ಕಾಲ ನೋಡಿ, ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಯುವರತ್ನ ಚಿತ್ರತಂಡ ನಿಟ್ಟುಸಿರುಬಿಟ್ಟಿದೆ. ಈ ಚಿತ್ರದ ಬಿಡುಗಡೆಗಿದ್ದ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದ್ದು, ಚಿತ್ರವನ್ನು ಯಾವುದೇ ಅಡೆತಡೆಗಳಿಲ್ಲದೇ ಬಿಡುಗಡೆ ಮಾಡಬಹುದಾಗಿದೆ.

ಇನ್ನು ಈ ಭಯದಿಂದ ಯುವರತ್ನ ಚಿತ್ರತಂಡದವರು ಬಚಾವ್ ಆದರೂ, ಬೇರೆಯವರಿಗೆ ಇನ್ನೂ ಆ ಬಗ್ಗೆ ಗೊಂದಲ ನಿವಾರಣೆಯಾಗಿಲ್ಲ. ಯುವರತ್ನ ನಂತರ 'ಸಲಗ' ಮತ್ತು 'ಕೋಟಿಗೊಬ್ಬ 3' ಚಿತ್ರಗಳು ಬಿಡುಗಡೆಯಾಗಲಿವೆ. ಆದರೆ, ಕೊರೊನಾ ಎರಡನೆಯ ಅಲೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಜನ ಬರುತ್ತಾರೋ ಇಲ್ಲವೋ ಎಂಬ ಗೊಂದಲ ಈ ಚಿತ್ರತಂಡದವರಿಗೂ ಇದೆ. ಹಾಗಾಗಿ ಅಂದುಕೊಂಡಂತೆಯೇ ಚಿತ್ರ ಬಿಡುಗಡೆಯಾಗುತ್ತವೋ ಅಥವಾ ಈ ಚಿತ್ರಗಳು ಪೋಸ್ಟ್​ಪೋನ್ ಆಗುತ್ತವೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.