ETV Bharat / sitara

ಸೃಜನ್ ಲೋಕೇಶ್​​​​​​ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ನಿರ್ಮಾಣದ ಹಿಂದಿರುವ ರಹಸ್ಯ ಏನು...? - ಸೃಜನ್​​ಗೆ ಸುಬ್ಬಯ್ಯ ನಾಯ್ಡು ಪ್ರಶಸ್ತಿ ಪಡೆಯವ ಆಸೆ

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್​ ತಮ್ಮದೇ ನಿರ್ಮಾಣ ಸಂಸ್ಥೆ ‘ಲೋಕೇಶ್ ಪ್ರೊಡಕ್ಷನ್’ ಬ್ಯಾನರ್ ಅಡಿ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾವನ್ನು ನಿರ್ಮಿಸಿದ್ದಾರೆ. ತಮ್ಮ ತಾತ ಸುಬ್ಬಯ್ಯ ನಾಯ್ಡು ಹೆಸರಿನಲ್ಲಿರುವ ರಾಜ್ಯ ಪ್ರಶಸ್ತಿಯನ್ನು ಪಡೆಯಬೇಕು ಎಂಬುದು ಸೃಜನ್ ಅವರ ಆಸೆಯಂತೆ.

ಎಲ್ಲಿದ್ದೆ ಇಲ್ಲಿ ತನಕ
author img

By

Published : Oct 8, 2019, 12:27 PM IST

Updated : Oct 8, 2019, 1:05 PM IST

ಸೃಜನ್ ಲೋಕೇಶ್ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಸಿನಿಮಾ ನಿರ್ಮಾಣದ ಹಿಂದೆ ಅವರಿಗೆ ಒಂದು ಆಸೆ ಇದೆಯಂತೆ. ತಾತನ ಹೆಸರಿನ ರಾಜ್ಯ ಪ್ರಶಸ್ತಿ ಪಡೆಯಬೇಕು ಎಂಬುದು ಸೃಜನ್​ ಕೋರಿಕೆ ಎನ್ನಲಾಗಿದೆ.

srujan lokesh
ಸುಬ್ಬಯ್ಯ ನಾಯ್ಡು

ಸುಬ್ಬಯ್ಯ ನಾಯ್ಡು ಕನ್ನಡ ಚಿತ್ರರಂಗದ ಮೊದಲ ನಾಯಕ. 1934 ಮಾರ್ಚ್ 3 ರಂದು ಬಿಡುಗಡೆಯಾದ ಸತಿ ಸುಲೋಚನ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಪ್ರಶಸ್ತಿ ಆರಂಭವಾದಾಗ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುಬ್ಬಯ್ಯ ನಾಯ್ಡು ಹೆಸರಿನಲ್ಲಿ ಕೊಡಬೇಕು ಎಂದು ತೀರ್ಮಾನ ಆಗಿದೆ. ಸುಬ್ಬಯ್ಯ ನಾಯ್ಡು ಪುತ್ರ ಲೋಕೇಶ್ ಆ ಪ್ರಶಸ್ತಿಯನ್ನು 40 ವರ್ಷಗಳ ವೃತ್ತಿ ಜೀವನದಲ್ಲಿ ಪಡೆದುಕೊಂಡರು. ಇದೀಗ ಮೊಮ್ಮಗ ಸೃಜನ್ ಲೋಕೇಶ್ ಕೂಡಾ ಈ ಪ್ರಶಸ್ತಿ ಪಡೆಯಬೇಕೆಂಬ ಆಸೆಯಿಂದ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ‘ಟಾಕಿಂಗ್ ಸ್ಟಾರ್‘ ಎಂದೇ ಹೆಸರಾದ ಸೃಜನ್ ಲೋಕೇಶ್​​​​ ‘ಮಜಾ ಟಾಕೀಸ್’ ನಿಂದ ಫೇಮಸ್. ಸುಮಾರು 500 ಕಂತುಗಳ ಕಾರ್ಯಕ್ರಮ ನಡೆಸಿಕೊಟ್ಟಿರುವ ಸೃಜನ್ ತಮ್ಮದೇ ನಿರ್ಮಾಣ ಸಂಸ್ಥೆ ‘ಲೋಕೇಶ್ ಪ್ರೊಡಕ್ಷನ್’ ಬ್ಯಾನರ್ ಅಡಿ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದೂ ಕೂಡಾ ಲೋಕೇಶ್ ಅವರ ಸಿನಿಮಾದ ಸಾಲುಗಳು.

srujan lokesh
ಲೋಕೇಶ್

ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ನಾಯಕಿ ಆಗಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಸೃಜನ್ ತಾಯಿ ಪಾತ್ರವನ್ನು ತಾರಾ ಅನುರಾಧ ನಿರ್ವಹಿಸಿದ್ದಾರೆ. ಸೃಜನ್ ಪುತ್ರ ಸುಕೃತ್ ಕೂಡಾ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದಾನೆ. ಈ ವಾರ, ಅಂದರೆ ಅಕ್ಟೋಬರ್ 11 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಸೃಜನ್ ಅವರ ಧೀರ್ಘಕಾಲದ ಗೆಳೆಯ ತೇಜಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲ, ತಬಲಾ ನಾಣಿ, ಗಿರಿ, ಸೇರಿದಂತೆ ಇನ್ನಿತರ ಹಾಸ್ಯ ಕಲಾವಿದರು ಸೃಜನ್ ಜೊತೆ ಹಾಸ್ಯದ ಹೊನಲು ಹರಿಸಲಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ, ಹೆಚ್​​​​​.ಸಿ. ವೇಣು ಛಾಯಾಗ್ರಹಣ ಇದೆ.

srujan lokesh
ತಾಯಿ ಗಿರಿಜಾ ಲೋಕೇಶ್​ ಹಾಗೂ ಪುತ್ರನೊಂದಿಗೆ ಸೃಜನ್ ಲೋಕೇಶ್

ಸೃಜನ್ ಲೋಕೇಶ್ ‘ಎಲ್ಲಿದ್ದೆ ಇಲ್ಲಿ ತನಕ’ ಎಂಬ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಸಿನಿಮಾ ನಿರ್ಮಾಣದ ಹಿಂದೆ ಅವರಿಗೆ ಒಂದು ಆಸೆ ಇದೆಯಂತೆ. ತಾತನ ಹೆಸರಿನ ರಾಜ್ಯ ಪ್ರಶಸ್ತಿ ಪಡೆಯಬೇಕು ಎಂಬುದು ಸೃಜನ್​ ಕೋರಿಕೆ ಎನ್ನಲಾಗಿದೆ.

srujan lokesh
ಸುಬ್ಬಯ್ಯ ನಾಯ್ಡು

ಸುಬ್ಬಯ್ಯ ನಾಯ್ಡು ಕನ್ನಡ ಚಿತ್ರರಂಗದ ಮೊದಲ ನಾಯಕ. 1934 ಮಾರ್ಚ್ 3 ರಂದು ಬಿಡುಗಡೆಯಾದ ಸತಿ ಸುಲೋಚನ ಚಿತ್ರದಲ್ಲಿ ಅವರು ನಾಯಕರಾಗಿ ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ ರಾಜ್ಯ ಪ್ರಶಸ್ತಿ ಆರಂಭವಾದಾಗ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುಬ್ಬಯ್ಯ ನಾಯ್ಡು ಹೆಸರಿನಲ್ಲಿ ಕೊಡಬೇಕು ಎಂದು ತೀರ್ಮಾನ ಆಗಿದೆ. ಸುಬ್ಬಯ್ಯ ನಾಯ್ಡು ಪುತ್ರ ಲೋಕೇಶ್ ಆ ಪ್ರಶಸ್ತಿಯನ್ನು 40 ವರ್ಷಗಳ ವೃತ್ತಿ ಜೀವನದಲ್ಲಿ ಪಡೆದುಕೊಂಡರು. ಇದೀಗ ಮೊಮ್ಮಗ ಸೃಜನ್ ಲೋಕೇಶ್ ಕೂಡಾ ಈ ಪ್ರಶಸ್ತಿ ಪಡೆಯಬೇಕೆಂಬ ಆಸೆಯಿಂದ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ‘ಟಾಕಿಂಗ್ ಸ್ಟಾರ್‘ ಎಂದೇ ಹೆಸರಾದ ಸೃಜನ್ ಲೋಕೇಶ್​​​​ ‘ಮಜಾ ಟಾಕೀಸ್’ ನಿಂದ ಫೇಮಸ್. ಸುಮಾರು 500 ಕಂತುಗಳ ಕಾರ್ಯಕ್ರಮ ನಡೆಸಿಕೊಟ್ಟಿರುವ ಸೃಜನ್ ತಮ್ಮದೇ ನಿರ್ಮಾಣ ಸಂಸ್ಥೆ ‘ಲೋಕೇಶ್ ಪ್ರೊಡಕ್ಷನ್’ ಬ್ಯಾನರ್ ಅಡಿ ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದೂ ಕೂಡಾ ಲೋಕೇಶ್ ಅವರ ಸಿನಿಮಾದ ಸಾಲುಗಳು.

srujan lokesh
ಲೋಕೇಶ್

ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ನಾಯಕಿ ಆಗಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಸೃಜನ್ ತಾಯಿ ಪಾತ್ರವನ್ನು ತಾರಾ ಅನುರಾಧ ನಿರ್ವಹಿಸಿದ್ದಾರೆ. ಸೃಜನ್ ಪುತ್ರ ಸುಕೃತ್ ಕೂಡಾ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದಾನೆ. ಈ ವಾರ, ಅಂದರೆ ಅಕ್ಟೋಬರ್ 11 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಸೃಜನ್ ಅವರ ಧೀರ್ಘಕಾಲದ ಗೆಳೆಯ ತೇಜಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಾಧು ಕೋಕಿಲ, ತಬಲಾ ನಾಣಿ, ಗಿರಿ, ಸೇರಿದಂತೆ ಇನ್ನಿತರ ಹಾಸ್ಯ ಕಲಾವಿದರು ಸೃಜನ್ ಜೊತೆ ಹಾಸ್ಯದ ಹೊನಲು ಹರಿಸಲಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ, ಹೆಚ್​​​​​.ಸಿ. ವೇಣು ಛಾಯಾಗ್ರಹಣ ಇದೆ.

srujan lokesh
ತಾಯಿ ಗಿರಿಜಾ ಲೋಕೇಶ್​ ಹಾಗೂ ಪುತ್ರನೊಂದಿಗೆ ಸೃಜನ್ ಲೋಕೇಶ್

ತಾತನ ಹೆಸರಿನ ಪ್ರಶಸ್ತಿ ಬೇಕು – ಸೃಜನ್ ಲೋಕೇಶ್

ಮೊಮ್ಮಗ ತಾತನ ಹೆಸರಿನಲ್ಲಿ ಇರುವ ರಾಜ್ಯ ಪ್ರಶಸ್ತಿ ಪಡೆಯಬೇಕು ಅಂತಲೇ ಎಲ್ಲಿದ್ದೆ ಇಲ್ಲಿ ತನಕ ಕನ್ನಡ ಸಿನಿಮಾ ತಯಾರಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಹೌದು ಸುಬ್ಬಯ್ಯ ನಾಯ್ಡು ಕನ್ನಡ ಚಿತ್ರ ರಂಗದ ಮೊದಲ ನಾಯಕ (ಸತಿ ಸುಲೋಚನ ಬಿಡುಗಡೆ 1934, ಮಾರ್ಚ್ 3). ಕರ್ನಾಟಕದಲ್ಲಿ ರಾಜ್ಯ ಪ್ರಶಸ್ತಿ ಶುರು ಆದಾಗ ಅತ್ಯುತ್ತಮ ನಟ ಪ್ರಶಸ್ತಿ ಸುಬ್ಬಯ್ಯ ನಾಯ್ಡು ಅವರ ಹೆಸರಿನಲ್ಲಿ ಕೊಡಬೇಕು ಎಂದು ತೀರ್ಮಾನ ಆಯಿತು. ಸುಬ್ಬಯ್ಯ ನಾಯ್ಡು ಅವರ ಮಗ ಲೋಕೇಶ್ ಆ ಪ್ರಶಸ್ತಿಯನ್ನು 40 ವರ್ಷಗಳ ವೃತ್ತಿ ಜೀವನದಲ್ಲಿ ಪಡೆದುಕೊಂಡರು ಆದರೆ ಮೊಮ್ಮಗ ಸೃಜನ್ ಲೋಕೇಶ್ ಚಿತ್ರ ರಂಗಕ್ಕೆ ಬಂದು 19 ವರ್ಷವಾದರೂ ಸುಬ್ಬಯ್ಯ ನಾಯ್ಡು ಪ್ರಶಸ್ತಿ ಪಡೆಯಲು ಸಾಧ್ಯವಾಗಿಲ್ಲ.

ಕರ್ನಾಟಕದಲ್ಲಿ ಟಾಕಿಂಗ್ ಸ್ಟಾರ್ ಎಂದೇ ಹೆಸರು ಮಜಾ ಟಾಕೀಸ್ 500 ಕಂತುಗಳಿಂದ ಪಡೆದಿರುವ ಸೃಜನ್ ಲೋಕೇಶ್ ತಮ್ಮದೇ ನಿರ್ಮಾಣ ಸಂಸ್ಥೆ ಲೋಕೇಶ್ ಪ್ರೊಡಕ್ಷನ್ ಅಲ್ಲಿ ದುಡಿದ ಹಣವನ್ನು ಎಲ್ಲಿದ್ದೆ ಇಲ್ಲಿ ತನಕ (ಈ ಸಾಲು ಸಹ ಲೋಕೇಶ್ ಅವರ ಸಿನಿಮಾದ ಗೀತೆಯ ಸಾಲು) ಸಿನಿಮಾಕ್ಕೆ ತೊಡಗಿಸಿ ತಮ್ಮ ಆಸೆ ತಾತನ ಹೆಸರಿನ ಅತ್ಯುತ್ತಮ ನಟ ಪ್ರಶಸ್ತಿ ಪಡೆಯಬೇಕು ಎಂದು ಹೇಳಿಕೊಂಡಿದ್ದಾರೆ. ಸೃಜನ್ ಲೋಕೇಶ್ ಅವರ ಟಾಟಾ ಸುಬ್ಬಯ್ಯ ನಾಯ್ಡು ಕೊನೇ ದಿವಸಗಳಲ್ಲಿ ಹರಿದ ಕೋಟಿಗೆ ತ್ಯಾಪೆ ಹಾಕಿಕೊಂಡು ಓಡಾಡಿದ್ದರು, ಇವರ ತಂದೆ ಲೋಕೇಶ್ ಸಿನಿಮಾ ನಿರ್ಮಾಣ ಮಾಡಿ ಬಿ ಪಿ ತಂದುಕೊಂಡರು ಎಂಬ ವಿಷಯವನ್ನು ಸಹ ಸೃಜನ್ ಹೇಳಿಕೊಂಡಿದ್ದಾರೆ.

ಸೃಜನ್ ಲೋಕೇಶ್ ಜೊತೆ ನಾಯಕಿ ಆಗಿ ಹರಿಪ್ರಿಯಾ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ತಾಯಿ ಗಿರಿಜ ಲೋಕೇಶ್ ನಿಜ ಜೀವನದಲ್ಲಿ ಮಗನನ್ನು ಹೇಗೆ ನೋಡಿಕೊಂಡರೊ ಅದೇ ರೀತಿ ತೆರೆಯ ಮೇಲೆ ಸೃಜನ್ ತಾಯಿ ಪಾತ್ರವನ್ನು ತಾರಾ ಅನುರಾಧ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಲೋಕೇಶ್ ಕುಟುಂಬದ ನಾಲ್ಕನೇ ತಲೆಮಾರು ಅಂದರೆ ಸುಬ್ಬಯ್ಯ ನಾಯ್ಡು ಅವರ ಮರಿ ಮಗ ಸುಕೃತ್ ಸಹ ಪುಟ್ಟ ಪಾತ್ರ ಮಾಡಿದೆ.

ಈಗ 11 ನೇ ಅಕ್ಟೋಬರ್ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಬಿಡುಗಡೆ ಆಗುತ್ತಿದೆ. ನನಗೆ ಹಣದ ಟೆನ್ಷನ್ ಇಲ್ಲ, ಬಿಡುಗಡೆಯ ಟೆನ್ಷನ್ ಎಂದು ಸೃಜನ್ ಲೋಕೇಶ್ ಹೇಳಿಕೊಂಡಿದ್ದಾರೆ. ಈ ಚಿತ್ರದಿಂದ 10 ವರ್ಷದ ಗೆಳೆಯ ತೇಜಸ್ ಅವರನ್ನು ನಿರ್ದೇಶಕ ಪಟ್ಟಕ್ಕೆ ಕೂರಿಸಿದ್ದಾರೆ ಸೃಜನ್ ಲೋಕೇಶ್. ಅವರ ಮಜಾ ಟಾಕೀಸ್ ಮುಗಿಯುತ್ತಿರುವ ಹೊತ್ತಿಗೆ ಸೃಜನ್ ನಿರ್ಮಾಣದ ಸಿನಿಮಾ ಎಲ್ಲಿದ್ದೆ ಇಲ್ಲಿ ತನಕ ಬಿಡುಗಡೆ ಆಗುತ್ತಿದೆ. ಸಾಧು ಕೋಕಿಲ, ತಬಲಾ ನಾಣಿ, ಗಿರಿ ಹಾಸ್ಯ ಕಲಾವಿದರು ಸೃಜನ್ ಜೊತೆ ಹಾಸ್ಯದ ಹೊನಲು ಹಾರಿಸಲಿದ್ದಾರೆ. ಈ ಚಿತ್ರದಲ್ಲಿ ನಾಯಕ ಸೃಜನ್ ಲೋಕೇಶ್ ನಾಯಕಿಯನ್ನು ಕುರಿತು ಹೇಳಿವುದು ಎಲ್ಲಿದ್ದೆ ಇಲ್ಲಿ ತನಕ ಎಂದು.

ಅರ್ಜುನ್ ಜನ್ಯ ಸಂಗೀತ, ಎಚ್ ಸಿ ವೇಣು ಛಾಯಾಗ್ರಹಣ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದ ಹೆಗ್ಗಳಿಕೆ ವಿಚಾರಗಳಲ್ಲಿ ಬೆರತಿದೆ. 

Last Updated : Oct 8, 2019, 1:05 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.