ETV Bharat / sitara

ಕೊರೊನಾ ಹೆಚ್ಚಾಗುವುದಕ್ಕೆ ಕಾರಣ ನಾವೇ… ನಟ ನೀನಾಸಂ ಸತೀಶ್ ಬೇಸರ!

author img

By

Published : Apr 28, 2021, 7:56 PM IST

Updated : Apr 28, 2021, 8:31 PM IST

ಕೊರೊನಾ ಇಷ್ಟೊಂದು ಹೆಚ್ಚಾಗೋದಿಕ್ಕೆ ಕಾರಣ ನಾವೇ ಅಂತಾ ನಟ ನಿನಾಸಂ ಸತೀಶ್​ ಬೇಸರ ವ್ಯಕ್ತಪಡಿಸಿದ್ದು, ದಯಮಾಡಿ ಎಲ್ಲರೂ ಮನೆಯಲ್ಲಿ ಇದ್ದು, ಸುರಕ್ಷಿತವಾಗಿ ಇರಿ ಅಂತಾ ನೀನಾಸಂ ಸತೀಶ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

sathish
ನಟ ನೀನಾಸಂ ಸತೀಶ್

ದೇಶಾದ್ಯಂತ ಕೊರೊನಾ ಎಂಬ ವೈರಸ್ ಜನರನ್ನ ಬಿಡದೆ ಕಾಡುತ್ತಿದೆ. ಇದೇ ಪರಿಸ್ಥಿತಿಯನ್ನ ಸದ್ಯ ಕರ್ನಾಟಕ ರಾಜ್ಯದಲ್ಲೂ ನಿರ್ಮಾಣ ಆಗಿದೆ.. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಹಾಗೂ ಸಿನಿಮಾ ತಾರೆಯರು ಈ ಮಹಾಮಾರಿಗೆ ಜೀವ ಬಿಡುತ್ತಿದ್ದಾರೆ‌. ಹೀಗಾಗಿ ಸ್ಯಾಂಡಲ್​ವುಡ್ ಕೆಲ ತಾರೆಯರು ಈ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನ ಹಾಡುತ್ತಿದ್ದಾರೆ. ಇದೀಗ ನಟ ನೀನಾಸಂ ಸತೀಶ್ ಕೂಡ ಕೊರೊನಾ ಭಯಾನಕತೆ ಬಗ್ಗೆ ಮಾತನಾಡಿದ್ದಾರೆ.

ನಟ ನೀನಾಸಂ ಸತೀಶ್

ಕೊರೊನಾ ಇಷ್ಟೊಂದು ಹೆಚ್ಚಾಗೋದಿಕ್ಕೆ ಕಾರಣ ನಾವೇ ಅಂತಾ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಜನರು ಮನೆಯಲ್ಲೇ ಇರುವುದರಿಂದ , ಬೇರೆಯವರಿಗೆ ಈ ರೋಗವನ್ನ ಅಂಟಿಸುವುದನ್ನ ಕಡಿಮೆ ಮಾಡಬಹುದು. ಇನ್ನು ಹಾಸನದಲ್ಲಿ ತನ್ನ ತಾಯಿಗೆ ಕೊರೊನಾ ಬಂತು ಅಂತಾ ಯುವಕ ನೇಣಿಗೆ ಶರಣಾಗಿರೋದು ಬಗ್ಗೆ ಸತೀಶ್ ನೋವನ್ನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲಾ ನಮ್ಮ ಚಿಕ್ಕಮ್ಮ ಕೊರೊನಾಗೆ ಬಲಿಯಾದರು. ಆ ಸಮಯದಲ್ಲಿ ನಾನು ಹೋಗೋದಿಕ್ಕೆ ಆಗಲಿಲ್ಲ ಅಂತಾ ನೋವನ್ನ ವ್ಯಕ್ತಪಡಿಸಿದರು. ಹೀಗಾಗಿ ದಯಮಾಡಿ ಎಲ್ರೂ ಮನೆಯಲ್ಲಿ ಇದ್ದು, ಸುರಕ್ಷಿತವಾಗಿ ಇರಿ ಅಂತಾ ನೀನಾಸಂ ಸತೀಶ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದೇಶಾದ್ಯಂತ ಕೊರೊನಾ ಎಂಬ ವೈರಸ್ ಜನರನ್ನ ಬಿಡದೆ ಕಾಡುತ್ತಿದೆ. ಇದೇ ಪರಿಸ್ಥಿತಿಯನ್ನ ಸದ್ಯ ಕರ್ನಾಟಕ ರಾಜ್ಯದಲ್ಲೂ ನಿರ್ಮಾಣ ಆಗಿದೆ.. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಸಾಮಾನ್ಯರು ಹಾಗೂ ಸಿನಿಮಾ ತಾರೆಯರು ಈ ಮಹಾಮಾರಿಗೆ ಜೀವ ಬಿಡುತ್ತಿದ್ದಾರೆ‌. ಹೀಗಾಗಿ ಸ್ಯಾಂಡಲ್​ವುಡ್ ಕೆಲ ತಾರೆಯರು ಈ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮಾತುಗಳನ್ನ ಹಾಡುತ್ತಿದ್ದಾರೆ. ಇದೀಗ ನಟ ನೀನಾಸಂ ಸತೀಶ್ ಕೂಡ ಕೊರೊನಾ ಭಯಾನಕತೆ ಬಗ್ಗೆ ಮಾತನಾಡಿದ್ದಾರೆ.

ನಟ ನೀನಾಸಂ ಸತೀಶ್

ಕೊರೊನಾ ಇಷ್ಟೊಂದು ಹೆಚ್ಚಾಗೋದಿಕ್ಕೆ ಕಾರಣ ನಾವೇ ಅಂತಾ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಜನರು ಮನೆಯಲ್ಲೇ ಇರುವುದರಿಂದ , ಬೇರೆಯವರಿಗೆ ಈ ರೋಗವನ್ನ ಅಂಟಿಸುವುದನ್ನ ಕಡಿಮೆ ಮಾಡಬಹುದು. ಇನ್ನು ಹಾಸನದಲ್ಲಿ ತನ್ನ ತಾಯಿಗೆ ಕೊರೊನಾ ಬಂತು ಅಂತಾ ಯುವಕ ನೇಣಿಗೆ ಶರಣಾಗಿರೋದು ಬಗ್ಗೆ ಸತೀಶ್ ನೋವನ್ನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲಾ ನಮ್ಮ ಚಿಕ್ಕಮ್ಮ ಕೊರೊನಾಗೆ ಬಲಿಯಾದರು. ಆ ಸಮಯದಲ್ಲಿ ನಾನು ಹೋಗೋದಿಕ್ಕೆ ಆಗಲಿಲ್ಲ ಅಂತಾ ನೋವನ್ನ ವ್ಯಕ್ತಪಡಿಸಿದರು. ಹೀಗಾಗಿ ದಯಮಾಡಿ ಎಲ್ರೂ ಮನೆಯಲ್ಲಿ ಇದ್ದು, ಸುರಕ್ಷಿತವಾಗಿ ಇರಿ ಅಂತಾ ನೀನಾಸಂ ಸತೀಶ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Last Updated : Apr 28, 2021, 8:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.