ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅರಸನಕೋಟೆ ಅಖಿಲಾಂಡೇಶ್ವರಿ ಆಗಿ ನಟಿಸಿ ಕಿರುತೆರೆ ವೀಕ್ಷಕರ ಗಮನ ಸೆಳೆದಿರುವ ವಿನಯ ಪ್ರಸಾದ್, ಸದ್ಯ ಕಿರುತೆರೆಯಲ್ಲಿ ಬ್ಯುಸಿ. ಲಾಕ್ ಡೌನ್ ನಂತರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಆರಂಭವಾಗಿದ್ದು, ವಿನಯ ಪ್ರಸಾದ್ ಕೂಡಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ.
ಇದರ ಜೊತೆಗೆ, ಜನತೆಯ ಜೊತೆಗೆ ಜಾಗರೂಕರಾಗಿರಿ ಎಂದು ಮನವಿ ಮಾಡಿರುವ ಅವರು, ಯಾವೆಲ್ಲಾ ರೀತಿಯಲ್ಲಿ ಜಾಗರೂಕರಾಗಿರಬಹುದು ಎಂದು ಕೂಡಾ ವಿವರಿಸಿದ್ದಾರೆ. ವಿನಯ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಈ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
"ಕೊರೊನಾ ವೈರಸ್ ಹರಡದಂತೆ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಕೆ ಮಾಡುವುದರ ಜೊತೆಗೆ ಆಗಾಗ ಕೈ ತೊಳೆಯಬೇಕು. ಎಲ್ಲಕ್ಕಿಂತ ಮುಖ್ಯವಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅದನ್ನು ತಪ್ಪದೇ ಮಾಡಬೇಕು. ಇದರ ಜೊತೆಗೆ ಜೊತೆಗೆ ಬಿಸಿ ನೀರಿನ ಹಬೆ ತೆಗೆದುಕೊಂಡರೆ ಉತ್ತಮ" ಎಂದಿದ್ದಾರೆ ಅರಸನಕೋಟೆ ಅಖಿಲಾಂಡೇಶ್ವರಿ.
ಇದರ ಜೊತೆಗೆ "ಬಿಸಿ ನೀರಿನ ಹಬೆ ಆಗಾಗ ತೆಗೆದುಕೊಳ್ಳುವ ಮೂಲಕ ಈ ರೋಗವನ್ನು ದೂರ ಮಾಡಬಹುದು. ಮಾತ್ರವಲ್ಲ, ಇದು ತುಂಬಾ ಪರಿಣಾಮಕಾರಿ. ನಾನು ಕೂಡಾ ಇದನ್ನೇ ಮಾಡುತ್ತೇನೆ" ಎನ್ನುತ್ತಾರೆ ವಿನಯ ಪ್ರಸಾದ್.