ETV Bharat / sitara

ವದಂತಿಗಳಿಗೆ ಕಿವಿ ಕೊಡ್ಬೇಡಿ, ರಾಯರ ಕೃಪೆಯಿಂದ ಚೆನ್ನಾಗಿದ್ದೇನೆ: ದ್ವಾರಕೀಶ್ ಮನವಿ - undefined

ತಮ್ಮ ಬಗ್ಗೆ ಹಬ್ಬಿದ್ದ ಸುಳ್ಳುಸುದ್ದಿ ಬಗ್ಗೆ ಹಿರಿಯ ನಟ ದ್ವಾರಕೀಶ್ ಪ್ರತಿಕ್ರಿಯಿಸಿದ್ದಾರೆ. ನಾನು ಆರೋಗ್ಯವಾಗಿದ್ದೇನೆ, ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ ಎಂದು ದ್ವಾರಕೀಶ್ ಎಲ್ಲರ ಬಳಿ ಮನವಿ ಮಾಡಿದ್ದಾರೆ.

ದ್ವಾರಕೀಶ್
author img

By

Published : Jul 16, 2019, 1:49 PM IST

ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಜನರಿಗೆ ಒಂದು ಕೆಟ್ಟಸುದ್ದಿ ಶಾಕ್ ನೀಡಿತ್ತು. 'ಕರ್ನಾಟಕದ ಕುಳ್ಳ' ಎಂದೇ ಹೆಸರಾದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ ಎಂದು ಕೇಳಿದ ಜನರು ಸ್ವಲ್ಪ ಸಮಯ ಬೇಸರದಲ್ಲಿದ್ದರು. ಆದರೆ ಅದು ಸುಳ್ಳುವದಂತಿ ಎಂದು ತಿಳಿದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.

ವದಂತಿಗಳಿಗೆ ಕಿವಿಕೊಡದಿರುವಂತೆ ಮನವಿ ಮಾಡಿದ ದ್ವಾರಕೀಶ್

ಕಳೆದ ರಾತ್ರಿಯಿಂದ ವಾಟ್ಸ್​ಆ್ಯಪ್​​ನಲ್ಲಿ ಈ ರೀತಿ ಸುಳ್ಳು ಮೆಸೇಜ್​​ಗಳು ಹರಿದಾಡುತ್ತಿದ್ದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್​​​​​​​​ಗಳು ಬಂದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತ: ದ್ವಾರಕೀಶ್ ಅವರೇ ಇತಿಶ್ರೀ ಹಾಡಿದ್ದಾರೆ. ದ್ವಾರಕೀಶ್ ಆರೋಗ್ಯವಾಗಿದ್ದಾರೆ, ಎಂದಿನಂತೆ ಮನೆಯಲ್ಲಿ ಇಂದು ದೇವರ ಪೂಜೆ ಮಾಡಿದ್ದಾರೆ.

ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜಕ್ಕೂ ಸುಳ್ಳು ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ಸ್ವತ: ದ್ವಾರಕೀಶ್ ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. 'ನಾನು ನಿಮ್ಮ ಕರ್ನಾಟಕದ ಕುಳ್ಳ ದ್ವಾರಕೀಶ್, ಹುಷಾರಾಗಿದ್ದೀನಿ. ನಿನ್ನೆಯಿಂದ ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಕಿವಿ ಕೊಡಬೇಡಿ. ನಾನು ಆರೋಗ್ಯವಾಗಿದ್ದೀನಿ, ಆರೋಗ್ಯವಾಗಿರ್ತೀನಿ ನಿಮ್ಮೆಲ್ಲರ ಆಶೀರ್ವಾದ, ರಾಯರ ಕೃಪೆಯಿಂದ ನಾನು ಹುಷಾರಾಗಿದ್ದೀನಿ. ಆ ರೀತಿ ಏನೇ ಆದರೂ ಅದು ನಿಮಗೆ ಗೊತ್ತಾಗುತ್ತೆ. ಸುಳ್ಳು ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಸಂದೇಶ ರವಾನಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಜನರಿಗೆ ಒಂದು ಕೆಟ್ಟಸುದ್ದಿ ಶಾಕ್ ನೀಡಿತ್ತು. 'ಕರ್ನಾಟಕದ ಕುಳ್ಳ' ಎಂದೇ ಹೆಸರಾದ ಹಿರಿಯ ನಟ ದ್ವಾರಕೀಶ್ ಇನ್ನಿಲ್ಲ ಎಂದು ಕೇಳಿದ ಜನರು ಸ್ವಲ್ಪ ಸಮಯ ಬೇಸರದಲ್ಲಿದ್ದರು. ಆದರೆ ಅದು ಸುಳ್ಳುವದಂತಿ ಎಂದು ತಿಳಿದ ಮೇಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.

ವದಂತಿಗಳಿಗೆ ಕಿವಿಕೊಡದಿರುವಂತೆ ಮನವಿ ಮಾಡಿದ ದ್ವಾರಕೀಶ್

ಕಳೆದ ರಾತ್ರಿಯಿಂದ ವಾಟ್ಸ್​ಆ್ಯಪ್​​ನಲ್ಲಿ ಈ ರೀತಿ ಸುಳ್ಳು ಮೆಸೇಜ್​​ಗಳು ಹರಿದಾಡುತ್ತಿದ್ದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್​​​​​​​​ಗಳು ಬಂದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತ: ದ್ವಾರಕೀಶ್ ಅವರೇ ಇತಿಶ್ರೀ ಹಾಡಿದ್ದಾರೆ. ದ್ವಾರಕೀಶ್ ಆರೋಗ್ಯವಾಗಿದ್ದಾರೆ, ಎಂದಿನಂತೆ ಮನೆಯಲ್ಲಿ ಇಂದು ದೇವರ ಪೂಜೆ ಮಾಡಿದ್ದಾರೆ.

ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜಕ್ಕೂ ಸುಳ್ಳು ಎಂಬುದನ್ನು ಅಭಿಮಾನಿಗಳಿಗೆ ತಿಳಿಸಲು ಸ್ವತ: ದ್ವಾರಕೀಶ್ ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. 'ನಾನು ನಿಮ್ಮ ಕರ್ನಾಟಕದ ಕುಳ್ಳ ದ್ವಾರಕೀಶ್, ಹುಷಾರಾಗಿದ್ದೀನಿ. ನಿನ್ನೆಯಿಂದ ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಕಿವಿ ಕೊಡಬೇಡಿ. ನಾನು ಆರೋಗ್ಯವಾಗಿದ್ದೀನಿ, ಆರೋಗ್ಯವಾಗಿರ್ತೀನಿ ನಿಮ್ಮೆಲ್ಲರ ಆಶೀರ್ವಾದ, ರಾಯರ ಕೃಪೆಯಿಂದ ನಾನು ಹುಷಾರಾಗಿದ್ದೀನಿ. ಆ ರೀತಿ ಏನೇ ಆದರೂ ಅದು ನಿಮಗೆ ಗೊತ್ತಾಗುತ್ತೆ. ಸುಳ್ಳು ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಸಂದೇಶ ರವಾನಿಸಿದ್ದಾರೆ.

Intro:ಡೋಂಟ್ ವರಿ ಕರ್ನಾಟಕದ ಪ್ರಚಂಡ ಕುಳ್ಳ ಅರಾಮಾಗಿದ್ದಾರೆ.!!!

ಕರ್ನಾಟಕದ ಪ್ರಚಂಡ ಕುಳ್ಳ ಹಿರಿಯ ನಟ ದ್ವಾರಕೀಶ್ ಅವರು ಸದ್ಯ ಅ ಆರಾಮಾಗಿ ಇದ್ದಾರೆ.ಕಳೆದ ರಾತ್ರಿಯಿಂದ ವಾಟ್ಸ್ ಅಪ್ ನಲ್ಲಿ ದ್ವಾರಕೀಶ್ ಆರೋಗ್ಯದ ಬಗ್ಗೆ ಕೆಲವು ಮೆಸೇಜ್ ಗಳು ಹರಿದಾಡಿದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್ ಗಳು ಬಂದವು.ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಅನಿರೀಕ್ಷಿತ ಅಘಾತವಾದ ಸುದ್ದಿ ಕೇಳಿ ದ್ವಾರಕೀಶ್ ಅವರ ಅಭಿಮಾನಿಗಳು ಸ್ವಲ್ಪ ಗಾಬರಿಯಾಗಿದ್ರು.ಅದ್ರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತ ದ್ವಾರಕೀಶ್ ಅವರೆ
ಇತಿಶ್ರೀ ಹಾಡಿದ್ದಾರೆ.ಎಸ್ ದ್ವಾರಕೀಶ್ ಅವರು ಎಂದಿನಂತೆ ಅವರ ಮನೆಯಲ್ಲಿ ಇಂದು ಬೆಳಗ್ಗೆ ದೇವರ ಪೂಜೆ ಮಾಡಿದ್ದಾರೆ. Body:ಅವರ ಅಭಿಮಾನಿಗಳಿಗೆ ನಮಸ್ಕಾರ ಮಾಡಿ ನಾನು ನಿಮ್ಮ ಕರ್ನಾಟಕದ ಕುಳ್ಳ ದ್ವಾರಕೀಶ್ ನಾನು ಹುಷಾರಾಗಿದ್ದೀನಿ‌‌ ಅಲ್ಲದೆ ನಿನ್ನೆಯಿಂದ ನನ್ನ ಅರೋಗ್ಯದ ಬಗ್ಗೆ ಹರಿದಾಡ್ತಿತಿರುವ ವದಂತಿಗಳಿಗೆ ಕಿವಿಗೊಡಬೇಡಿ.ನಾನು ಅರೋಗ್ಯವಾಗಿದ್ದೀನಿ ಅರೋಗ್ಯವಾಗಿರ್ತೀನಿ ನಿಮ್ಮೇಲ್ಲರ ಅಶಿರ್ವಾದಿಂದ‌ನಾನು ಹುಷಾರಾಗಿದ್ದಿನಿ .ಅತರ ಏನೇ ಅದರು ಅದು ನಿಮ್ಗೆ ಗೋತ್ತಾಗುತ್ತೆ ಸುಳ್ಳು ಸುದ್ದಿಗಳ ಬಗ್ಗೆ ತಲೆಕೆಡಿಸ್ಕೋ ಬೇಡಿ ಎಂದು ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.

ಸತೀಶ್ ಎಂಬಿ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.