ETV Bharat / sitara

ಡಾ. ವಿಷ್ಣುವರ್ಧನ್​ ಹುಟ್ಟುಹಬ್ಬಕ್ಕಿವೆ ಎರಡು ವಿಶೇಷತೆಗಳು! ಅವುಗಳೆಂದರೆ..

ಸೆ.18 ರಂದು ದಿವಂಗತ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ. ಈ ಬಾರಿ ಅವರ ಜನುಮದಿನ ವಿಶೇಷವಾಗಿರಲಿದ್ದು, ಅಭಿಮಾನಿಗಳು ನೀಡುವ 'ಡಾ. ವಿಷ್ಣುವರ್ಧನ ರಾಷ್ಟ್ರ ಪ್ರಶಸ್ತಿ'ಗೆ ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ. ಅಲ್ಲದೇ ವಿಷ್ಣು ಪುತ್ಥಳಿಯನ್ನು ಗಡಿಜಿಲ್ಲೆ ಕೋಲಾರದಲ್ಲಿ ಸ್ಥಾಪಿಸಲಾಗುತ್ತಿದೆ.

author img

By

Published : Sep 7, 2019, 12:11 PM IST

Dr. Vishnuvardhan

ಸೆಪ್ಟೆಂಬರ್​ ತಿಂಗಳು ಕನ್ನಡ ಚಿತ್ರರಂಗಕ್ಕೆ ವಿಶೇಷ. ಯಾಕಂದ್ರೆ ಇದೇ ತಿಂಗಳಲ್ಲಿ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್​ ಸೇರಿದಂತೆ ಸಾಲು ಸಾಲು ನಟ, ನಟಿಯರ ಹುಟ್ಟುಹಬ್ಬವಿದೆ.

ಸೆ.18 ರಂದು ವಿಷ್ಣುವರ್ಧನ್ ಅವರ ಹುಟ್ದಬ್ಬ. ಈ ಬಾರಿ ಅವರ ಜನುಮದಿನ ವಿಶೇಷವಾಗಿರಲಿದ್ದು, ಅವರ ಅಭಿಮಾನಿಗಳು ನೀಡುವ 'ಡಾ. ವಿಷ್ಣುವರ್ಧನ ರಾಷ್ಟ್ರ ಪ್ರಶಸ್ತಿ'ಗೆ ರಮೇಶ್ ಅರವಿಂದ್ ಅವರನ್ನು ಸೆಲೆಕ್ಟ್‌ ಮಾಡಲಾಗಿದೆ. ಅಲ್ಲದೇ ವಿಷ್ಣು ಅವರ ಪುತ್ಥಳಿಯನ್ನು ಕೋಲಾರದಲ್ಲಿ ಸ್ಥಾಪಿಸಲಾಗುತ್ತಿದೆ.

ramesh aravinda
ರಮೇಶ್ ಅರವಿಂದ್​

ಕಳೆದ ಶುಕ್ರವಾರ ವಿಷ್ಣು ಅಭಿಮಾನಿ ಆರ್ ಬಿ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ವಿಷ್ಣು ಸರ್ಕಲ್’ ಸಿನಿಮಾ ಬಿಡುಗಡೆ ಆಗಿದೆ. ನಿರ್ಮಾಪಕ, ನಟ, ನಿರ್ದೇಶಕ, ಶಾಸಕರಾದ ಬಿ. ಸಿ. ಪಾಟೀಲ್ ಅಭಿನಯದಲ್ಲಿ 26 ವರ್ಷಗಳ ಹಿಂದೆ ಬಿಡುಗಡೆಯಾಗಿ ಖ್ಯಾತಿ ಪಡೆದಿದ್ದ 'ನಿಷ್ಕರ್ಷ' ಸಿನಿಮಾವನ್ನು ಆಧುನಿಕ ತಂತ್ರಜ್ಞಾನ ಬಳಸಿ ಮತ್ತೆ ತಯಾರಿಸಿದ್ದು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮರು ಬಿಡುಗಡೆ ಮಾಡಲಿದ್ದಾರೆ.

Dr. Vishnuvardhan
ಡಾ. ವಿಷ್ಣುವರ್ಧನ್

ಕೋಲಾರ ಜಿಲ್ಲೆಯ ಅಹನ್ಯ ಗ್ರಾಮದಲ್ಲಿ ವಿಷ್ಣು ಅಭಿಮಾನಿಗಳು ಅವರ ಪುತ್ಥಳಿಯನ್ನು ಸೆ.18 ರಂದು ಅನಾವರಣ ಮಾಡಲಿದ್ದಾರೆ. ಡಾ. ವಿಷ್ಣುವರ್ಧನ ಸೇನಾ ಸಮಿತಿ ಅಭಿಮಾನ್ ಸ್ಟುಡಿಯೋ ಬಳಿ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲ್ಲಿದ್ದು, ರಕ್ತ ದಾನ, ಉಚಿತ ಆರೋಗ್ಯ ಶಿಬಿರ, ಅನ್ನದಾನವನ್ನೂ ನಡೆಸಲಿದ್ದಾರೆ.

ಸೆ.10 ರಮೇಶ್ ಅರವಿಂದ್, ಉಪೇಂದ್ರ, ಶ್ರುತಿ ಜನುಮದಿನವನ್ನು ಆಚರಣೆ ಮಾಡಿಕೊಳ್ಳಲಿದ್ದು, ತಮ್ಮ ನೆಚ್ಚಿನ ನಾಯಕ- ನಾಯಕಿಯರ ಹುಟ್ಟುಹಬ್ಬವನ್ನು ಸಂಭ್ರಮಿಸಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಸೆಪ್ಟೆಂಬರ್​ ತಿಂಗಳು ಕನ್ನಡ ಚಿತ್ರರಂಗಕ್ಕೆ ವಿಶೇಷ. ಯಾಕಂದ್ರೆ ಇದೇ ತಿಂಗಳಲ್ಲಿ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್​ ಸೇರಿದಂತೆ ಸಾಲು ಸಾಲು ನಟ, ನಟಿಯರ ಹುಟ್ಟುಹಬ್ಬವಿದೆ.

ಸೆ.18 ರಂದು ವಿಷ್ಣುವರ್ಧನ್ ಅವರ ಹುಟ್ದಬ್ಬ. ಈ ಬಾರಿ ಅವರ ಜನುಮದಿನ ವಿಶೇಷವಾಗಿರಲಿದ್ದು, ಅವರ ಅಭಿಮಾನಿಗಳು ನೀಡುವ 'ಡಾ. ವಿಷ್ಣುವರ್ಧನ ರಾಷ್ಟ್ರ ಪ್ರಶಸ್ತಿ'ಗೆ ರಮೇಶ್ ಅರವಿಂದ್ ಅವರನ್ನು ಸೆಲೆಕ್ಟ್‌ ಮಾಡಲಾಗಿದೆ. ಅಲ್ಲದೇ ವಿಷ್ಣು ಅವರ ಪುತ್ಥಳಿಯನ್ನು ಕೋಲಾರದಲ್ಲಿ ಸ್ಥಾಪಿಸಲಾಗುತ್ತಿದೆ.

ramesh aravinda
ರಮೇಶ್ ಅರವಿಂದ್​

ಕಳೆದ ಶುಕ್ರವಾರ ವಿಷ್ಣು ಅಭಿಮಾನಿ ಆರ್ ಬಿ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ವಿಷ್ಣು ಸರ್ಕಲ್’ ಸಿನಿಮಾ ಬಿಡುಗಡೆ ಆಗಿದೆ. ನಿರ್ಮಾಪಕ, ನಟ, ನಿರ್ದೇಶಕ, ಶಾಸಕರಾದ ಬಿ. ಸಿ. ಪಾಟೀಲ್ ಅಭಿನಯದಲ್ಲಿ 26 ವರ್ಷಗಳ ಹಿಂದೆ ಬಿಡುಗಡೆಯಾಗಿ ಖ್ಯಾತಿ ಪಡೆದಿದ್ದ 'ನಿಷ್ಕರ್ಷ' ಸಿನಿಮಾವನ್ನು ಆಧುನಿಕ ತಂತ್ರಜ್ಞಾನ ಬಳಸಿ ಮತ್ತೆ ತಯಾರಿಸಿದ್ದು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮರು ಬಿಡುಗಡೆ ಮಾಡಲಿದ್ದಾರೆ.

Dr. Vishnuvardhan
ಡಾ. ವಿಷ್ಣುವರ್ಧನ್

ಕೋಲಾರ ಜಿಲ್ಲೆಯ ಅಹನ್ಯ ಗ್ರಾಮದಲ್ಲಿ ವಿಷ್ಣು ಅಭಿಮಾನಿಗಳು ಅವರ ಪುತ್ಥಳಿಯನ್ನು ಸೆ.18 ರಂದು ಅನಾವರಣ ಮಾಡಲಿದ್ದಾರೆ. ಡಾ. ವಿಷ್ಣುವರ್ಧನ ಸೇನಾ ಸಮಿತಿ ಅಭಿಮಾನ್ ಸ್ಟುಡಿಯೋ ಬಳಿ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲ್ಲಿದ್ದು, ರಕ್ತ ದಾನ, ಉಚಿತ ಆರೋಗ್ಯ ಶಿಬಿರ, ಅನ್ನದಾನವನ್ನೂ ನಡೆಸಲಿದ್ದಾರೆ.

ಸೆ.10 ರಮೇಶ್ ಅರವಿಂದ್, ಉಪೇಂದ್ರ, ಶ್ರುತಿ ಜನುಮದಿನವನ್ನು ಆಚರಣೆ ಮಾಡಿಕೊಳ್ಳಲಿದ್ದು, ತಮ್ಮ ನೆಚ್ಚಿನ ನಾಯಕ- ನಾಯಕಿಯರ ಹುಟ್ಟುಹಬ್ಬವನ್ನು ಸಂಭ್ರಮಿಸಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಕೋಲಾರದಲ್ಲಿ ವಿಷ್ಣುವರ್ಧನ ಪುತ್ಥಳಿ – ರಮೇಶ್ ಅರವಿಂದ್ ವಿಷ್ಣು ರಾಷ್ಟ್ರ ಪ್ರಶಸ್ತಿ

ಸೆಪ್ಟೆಂಬರ್ ತಿಂಗಳು ಬಂತು ಅಂದರೆ ಕಿಚ್ಚ ಸುದೀಪ್ ಜನುಮದಿನ ಇಂದ ಅನೇಕ ನಟರುಗಳ ಜನುಮ ದಿನ ಇದೆ ಮಾಸದಲ್ಲಿ. ಸೆಪ್ಟೆಂಬರ್ 10 ರಮೇಶ್ ಅರವಿಂದ್, ಸೆಪ್ಟೆಂಬರ್ 18 ಬಂತು ಅಂದರೆ ಡಾ ವಿಷ್ಣುವರ್ಧನ, ಉಪೇಂದ್ರ, ಶ್ರುತಿ ಅವರ ಜನುಮ ದಿನ ಆಚರಣೆ ಆಗುತ್ತದೆ.

ಈ ಬಾರಿ ದಿವಂಗತ ಡಾ ವಿಷ್ಣುವರ್ಧನ ಅವರ ಜನುಮ ದಿನ ವಿಶೇಶ ಏನಪ್ಪಾ ಅಂದರ ಅಭಿಮಾನಿಗಳು ನೀಡುವ ಡಾ ವಿಷ್ಣುವರ್ಧನ ರಾಷ್ಟ್ರ ಪ್ರಶಸ್ತಿಗೆ ರಮೇಶ್ ಅರವಿಂದ್ ಅವರು ಆಯ್ಕೆ ಆಗಿರುವುದು ಮತ್ತು ಡಾ ವಿಷ್ಣುವರ್ಧನ ಅವರ ಪುತ್ತಳಿಯನ್ನು ಗಡಿ ಭಾಗದ ಕೋಲಾರ ಜಿಲೆಯಲ್ಲಿ ಸ್ಥಾಪನೆ ಮಾಡುತ್ತಿರುವುದು.

ಕಳೆದ ಶುಕ್ರವಾರ ವಿಷ್ಣು ಅಭಿಮಾನಿ ಆರ್ ಬಿ ನಿರ್ಮಾಣದ ವಿಷ್ಣು ಸರ್ಕಲ್ ಸಿನಿಮಾ ಬಿಡುಗಡೆ ಆಗಿದೆ. ನಿರ್ಮಾಪಕ,ನಟ, ನಿರ್ದೇಶಕ, ರಾಜಕೀಯ ವ್ಯಕ್ತಿ ಬಿ ಸಿ ಪಾಟೀಲ್ ಡಾ ವಿಷ್ಣುವರ್ಧನ ಅವರ ಜನುಮ ದಿನ ಆದ ಎರಡು ದಿವಸಗಳ ನಂತರ ನಿಷ್ಕರ್ಷ 26 ವರ್ಷಗಳ ಹಳೆಯ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಅದು ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಮರು ಬಿಡುಗಡೆ ಆಧುನಿಕ ತಂತ್ರಜ್ಞಾನದ ಕೌಶಲ್ಯ ಸಹಿತ.

ಕೋಲಾರ ಜಿಲ್ಲೆಯ ಅಹನ್ಯ ಗ್ರಾಮದಲ್ಲಿ ಡಾ ವಿಷ್ಣುವರ್ಧನ ಅಭಿಮಾನಿಗಳು ಪುತ್ತಳಿಯನ್ನು ಸೆಪ್ಟೆಂಬರ್ 18 ರಂದು 8 ಘಂಟೆಗೆ ಅನಾವರಣ ಮಾಡಲಿದ್ದಾರೆ. ಡಾ ವಿಷ್ಣು ಅಭಿಮಾನಿ ಭರತ್ ಈ ಪುತ್ಥಳಿ ನಿರ್ಮಾಣದ ಹಿಂದೆ ಇರುವ ಶಕ್ತಿ.

ಅಂದಹಾಗೆ ಡಾ ವಿಷ್ಣುವರ್ಧನ ಸೇನಾ ಸಮಿತಿ ಅಭಿಮನ್ ಸ್ಟುಡಿಯೋ ಬಳಿ ವಿಷ್ಣುವರ್ಧನ ಅವರ ಅಂತ್ಯಕ್ರಿಯೆ ಆದ ಜಾಗದಲ್ಲಿ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲ್ಲಿದ್ದಾರೆ. ಮೊದಲಿಗೆ ಈ ವರ್ಷ ಅಂತ್ಯಕ್ರಿಯೆ ಆದ ಸ್ಥಳಕ್ಕೆ ಚಾವಣಿಯನ್ನು ಗಟ್ಟಿ ಗೊಳಿಸಲಿದ್ದಾರೆ. ಸಮಾಧಿ ಸುತ್ತ ಮುತ್ತ ಸೆಪ್ಟೆಂಬರ್ 18 ರಂದು ರಕ್ತ ದಾನ, ಉಚಿತ ಆರೋಗ್ಯ ಶಿಬಿರ, ಅನ್ನ ದಾನ ಸಹ ನಡೆಯುತ್ತಿದೆ.

ಡಾ ವಿಷ್ಣುವರ್ಧನ ಕುಟುಂಬ ಮಾತ್ರ ಜಯನಗರದ 4 ನೇ ಬ್ಲಾಕ್ ವಿಷ್ಣುವರ್ಧನ ನಿವಾಸದಲ್ಲಿ ಜನುಮ ದಿನ ಆಚರಿಸಲಿದ್ದಾರೆ.

 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.