ETV Bharat / sitara

ಕಲಾವಿದರ ಸಂಘದ ಅಧ್ಯಕ್ಷೆ ಆಗಲಿದ್ದಾರಾ ಸುಮಲತಾ ಅಂಬರೀಶ್...?

author img

By

Published : Jul 22, 2019, 5:04 PM IST

ರೆಬಲ್​​ಸ್ಟಾರ್​​ ಅಂಬರೀಶ್ ಇದ್ದಾಗ ಸ್ಥಾಪನೆಯಾದ ಕಲಾವಿದರ ಸಂಘದ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಜೊತೆಗೆ 4 ಅಂತಸ್ತಿನ ಈ ಕಟ್ಟಡ ವ್ಯರ್ಥವಾಗುತ್ತಿರುವ ಬಗ್ಗೆ ಸ್ಯಾಂಡಲ್​​​ವುಡ್​​​ನಲ್ಲಿ ಚರ್ಚೆ ನಡೆಯುತ್ತಿದ್ದು, ಸುಮಲತಾ ಅಂಬರೀಶ್ ಸಂಘಕ್ಕೆ ಅಧ್ಯಕ್ಷರಾಗಬೇಕು ಎಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿದೆ.

ಸುಮಲತಾ ಅಂಬರೀಶ್

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇದ್ದರೂ ಕಲಾವಿದರ ಪ್ರಮುಖ ಸಂಘದ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ ಎಂಬ ಕಾರಣಕ್ಕೆ ಬೇರೆ ಪೋಷಕರ ಸಂಘಗಳು ಡಾ. ಅಂಬರೀಶ್ ಇರುವಾಗಲೇ ಸ್ಥಾಪನೆಯಾಯಿತು. ಅಂಬಿ ನಿಧನದ ಬಳಿಕ ಕಲಾವಿದರ ಸಂಘವನ್ನು ಮುನ್ನಡೆಸುವುದು ಯಾರು ಎಂಬ ಚರ್ಚೆಯಾಗುತ್ತಿದೆ.

ನಾಲ್ಕು ಅಂತಸ್ತಿನ ಕಲಾವಿದರ ಭವನದಲ್ಲಿ ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದನ್ನು ಬಿಟ್ಟರೆ ಬೇರಾವ ಗಮನಾರ್ಹ ಚಟುವಟಿಕೆ ನಡೆಯುತ್ತಿಲ್ಲ. ಅಂಬರೀಶ್ ನಿಧನರಾದ ಬಳಿಕ ಕಲಾವಿದರ ಉಸ್ತುವಾರಿ ಯಾರು ಎಂಬ ಚರ್ಚೆ ನಡೆಯುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್​ ಅಥವಾ ಡಾ. ಶಿವರಾಜ್​ಕುಮಾರ್ ಇಬ್ಬರಲ್ಲಿ ಒಬ್ಬರು ಅದರ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಕಲಾವಿದರ ಸಂಘದ ಚುನಾವಣೆ ಆಗುವವರೆಗೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ ಎನ್ನುತ್ತಿದೆ ಒಂದು ವರ್ಗ.

ಸಂಸದೆ ಸುಮಲತಾ ಅಂಬರೀಶ್ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಹಲವರು ಒತ್ತಾಯ ಮಾಡುತ್ತಿದ್ದಾರೆ. ಸುಮಲತಾ ಅವರು ಸಂಸದರಾಗಿದ್ದು ಚಿತ್ರರಂಗದ ಸಮಸ್ಯೆಗಳನ್ನು ಸುಲಭವಾಗಿ ಅವರು ಪರಿಹರಿಸಬಹುದು ಹಾಗೂ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಂಘದಕ್ಕೆ ಆಗಬೇಕಾಗಿರುವ ಕೆಲಸವನ್ನು ಅವರು ಸುಲಭವಾಗಿ ಮಾಡಬಲ್ಲರು ಎಂಬುದೇ ಇದಕ್ಕೆ ಕಾರಣ.

ಸದ್ಯಕ್ಕೆ ರಾಕ್​​​​​ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಮುಂದೆ ನಿಂತು ಕಲಾವಿದರ ಸಂಘದ ಕೆಲವೊಂದು ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ 4 ಅಂತಸ್ತಿನ ಕಟ್ಟಡ ಸರಿಯಾಗಿ ಸದ್ಭಳಕೆ ಆಗುತ್ತಿಲ್ಲ ಎಂಬುದು ಹಲವರ ಬೇಸರಕ್ಕೆ ಕಾರಣವಾಗಿದೆ. ಅಂಬರೀಶ್ ಇದ್ದಾಗ 3 ಹಾಗೂ 4ನೇ ಅಂತಸ್ತನ್ನು ಕಲಾವಿದರ ಸಂಘದ ಕೆಲಸಗಳಿಗೆ ಬಳಸಿಕೊಂಡು 1 ಹಾಗೂ 2ನೇ ಅಂತಸ್ತಿನ ಕಟ್ಟಡವನ್ನು ಬಾಡಿಗೆ ನೀಡುವುದು ಎಂದು ತೀರ್ಮಾನಿಸಲಾಗಿತ್ತು. ಬಾಡಿಗೆ ರೂಪದಲ್ಲಿ 8 ಲಕ್ಷ ರೂಪಾಯಿ ಕೂಡಾ ಬರಬಹುದು ಎಂಬ ಮಾತು ಕೂಡಾ ಕೇಳಿಬಂದಿತ್ತು. ಈ ಹಣದಿಂದ ಕಲಾವಿದರ ಸಂಘದ ಸಾಮಾನ್ಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕಲಾವಿದರ ಸಂಘದ ಚುನಾವಣೆ ನಡೆಯದೇ ಇದನ್ನೆಲ್ಲಾ ತೀರ್ಮಾನಿಸುವಂತಿಲ್ಲ.

ಒಟ್ಟಿನಲ್ಲಿ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಭಾಷೆಯ ಚಿತ್ರರಂಗ ಮಾಡಿಕೊಳ್ಳದ ಕಲಾವಿದರ ಭವನವನ್ನು ಕನ್ನಡ ಚಿತ್ರರಂಗ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ ಎನ್ನಬಹುದು.

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇದ್ದರೂ ಕಲಾವಿದರ ಪ್ರಮುಖ ಸಂಘದ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ ಎಂಬ ಕಾರಣಕ್ಕೆ ಬೇರೆ ಪೋಷಕರ ಸಂಘಗಳು ಡಾ. ಅಂಬರೀಶ್ ಇರುವಾಗಲೇ ಸ್ಥಾಪನೆಯಾಯಿತು. ಅಂಬಿ ನಿಧನದ ಬಳಿಕ ಕಲಾವಿದರ ಸಂಘವನ್ನು ಮುನ್ನಡೆಸುವುದು ಯಾರು ಎಂಬ ಚರ್ಚೆಯಾಗುತ್ತಿದೆ.

ನಾಲ್ಕು ಅಂತಸ್ತಿನ ಕಲಾವಿದರ ಭವನದಲ್ಲಿ ಕನ್ನಡ ಸಿನಿಮಾಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುವುದನ್ನು ಬಿಟ್ಟರೆ ಬೇರಾವ ಗಮನಾರ್ಹ ಚಟುವಟಿಕೆ ನಡೆಯುತ್ತಿಲ್ಲ. ಅಂಬರೀಶ್ ನಿಧನರಾದ ಬಳಿಕ ಕಲಾವಿದರ ಉಸ್ತುವಾರಿ ಯಾರು ಎಂಬ ಚರ್ಚೆ ನಡೆಯುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್​ ಅಥವಾ ಡಾ. ಶಿವರಾಜ್​ಕುಮಾರ್ ಇಬ್ಬರಲ್ಲಿ ಒಬ್ಬರು ಅದರ ಉಸ್ತುವಾರಿ ವಹಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಕಲಾವಿದರ ಸಂಘದ ಚುನಾವಣೆ ಆಗುವವರೆಗೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ ಎನ್ನುತ್ತಿದೆ ಒಂದು ವರ್ಗ.

ಸಂಸದೆ ಸುಮಲತಾ ಅಂಬರೀಶ್ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ನೀಡಬೇಕು ಎಂಬುದು ಹಲವರು ಒತ್ತಾಯ ಮಾಡುತ್ತಿದ್ದಾರೆ. ಸುಮಲತಾ ಅವರು ಸಂಸದರಾಗಿದ್ದು ಚಿತ್ರರಂಗದ ಸಮಸ್ಯೆಗಳನ್ನು ಸುಲಭವಾಗಿ ಅವರು ಪರಿಹರಿಸಬಹುದು ಹಾಗೂ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಂಘದಕ್ಕೆ ಆಗಬೇಕಾಗಿರುವ ಕೆಲಸವನ್ನು ಅವರು ಸುಲಭವಾಗಿ ಮಾಡಬಲ್ಲರು ಎಂಬುದೇ ಇದಕ್ಕೆ ಕಾರಣ.

ಸದ್ಯಕ್ಕೆ ರಾಕ್​​​​​ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಮುಂದೆ ನಿಂತು ಕಲಾವಿದರ ಸಂಘದ ಕೆಲವೊಂದು ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ 4 ಅಂತಸ್ತಿನ ಕಟ್ಟಡ ಸರಿಯಾಗಿ ಸದ್ಭಳಕೆ ಆಗುತ್ತಿಲ್ಲ ಎಂಬುದು ಹಲವರ ಬೇಸರಕ್ಕೆ ಕಾರಣವಾಗಿದೆ. ಅಂಬರೀಶ್ ಇದ್ದಾಗ 3 ಹಾಗೂ 4ನೇ ಅಂತಸ್ತನ್ನು ಕಲಾವಿದರ ಸಂಘದ ಕೆಲಸಗಳಿಗೆ ಬಳಸಿಕೊಂಡು 1 ಹಾಗೂ 2ನೇ ಅಂತಸ್ತಿನ ಕಟ್ಟಡವನ್ನು ಬಾಡಿಗೆ ನೀಡುವುದು ಎಂದು ತೀರ್ಮಾನಿಸಲಾಗಿತ್ತು. ಬಾಡಿಗೆ ರೂಪದಲ್ಲಿ 8 ಲಕ್ಷ ರೂಪಾಯಿ ಕೂಡಾ ಬರಬಹುದು ಎಂಬ ಮಾತು ಕೂಡಾ ಕೇಳಿಬಂದಿತ್ತು. ಈ ಹಣದಿಂದ ಕಲಾವಿದರ ಸಂಘದ ಸಾಮಾನ್ಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕಲಾವಿದರ ಸಂಘದ ಚುನಾವಣೆ ನಡೆಯದೇ ಇದನ್ನೆಲ್ಲಾ ತೀರ್ಮಾನಿಸುವಂತಿಲ್ಲ.

ಒಟ್ಟಿನಲ್ಲಿ ಭಾರತೀಯ ಚಿತ್ರರಂಗದಲ್ಲಿ ಯಾವುದೇ ಭಾಷೆಯ ಚಿತ್ರರಂಗ ಮಾಡಿಕೊಳ್ಳದ ಕಲಾವಿದರ ಭವನವನ್ನು ಕನ್ನಡ ಚಿತ್ರರಂಗ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ ಎನ್ನಬಹುದು.

ಸುಮಲತಾ ಅಂಬರೀಶ್ ಕಲಾವಿದರ ಸಂಘ ಲೀಡರ್ ಆಗುವರೆ?

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಇದ್ದ ಮೇಲೆ ಅದರ ಅಡಿಯಲ್ಲಿ ಇದ್ದವರು ಬೇರೆ ಸಂಘವನ್ನು ಕಟ್ಟಿಕೊಳ್ಳಬಾರದು ಅಂತ ಏನು ಇಲ್ಲ. ಡಾ ಅಂಬರೀಶ್ ಬದುಕಿರುವಾಗಲೇ ಪೋಷಕ ಕಲಾವಿದರುಗಳ ಸಂಘ ಉದಯವಾಯಿತು. ಅದಕ್ಕೆ ಕಾರಣ ಮೂಲ ಕಲಾವಿದರ ಸಂಘದ ಚಟುವಟಿಕೆ ನಿರೀಕ್ಷಿತ ಮಟ್ಟಕ್ಕೆ ಆಗಲಿಲ್ಲ ಎಂದು. ಆಮೇಲೆ ಕಲಾವಿದರ ಭವನ ಮೂಡಿ ಬಂದಿದ್ದು. ಈಗ ಅಂಬರೀಶ್ ಅವರ ಅಗಲಿಕೆ ಇಂದ ಯಾರು ಮುಂದೆ ನಡೆಸೋದು ಎಂಬುದು ಚರ್ಚೆಯಗುತ್ತಿದೆ. ಪ್ರತಿ ವರ್ಷ ನವೆಂಬರ್ 1 ರಂದು ಡಾ ರಾಜಕುಮಾರ್ ಅವರು ಬದುಕಿದ್ದಾಗ ರಾಜ್ಯೋತ್ಸವ ದಿವಸ ಆಚರಿಸಿ ಕಲಾವಿದರುಗಳ ಪೈಕಿ ಕೆಲವರಿಗೆ ಸನ್ಮಾನ ಕಾರ್ಯಕ್ರಮ ಸಹ ಹಿಂದೆ ನಡೆದಿದೆ. ಪೋಷಕ ಕಲಾವಿದರುಗಳು ಒಂದು ಸಂಘ ಪ್ರಾರಂಭ ಮಾಡಿಕೊಂಡಿದ್ದಾರೆ. ಆಗಾಗ್ಗೆ ಸಭೆ ನಡೆಸುವುದು ನಡೆಯುತ್ತಿದೆ.

ನಾಲ್ಕು ಅಂತಸ್ತಿನ ಕಟ್ಟಡ ಮಜೂಬೂತಾಗಿ ಎದ್ದಿದೆ. ಕಲಾವಿದರ ಭವನದಲ್ಲಿ ಕನ್ನಡ ಸಿನಿಮಾಗಳಿಗೆ ಸಂಬಂದ ಪಟ್ಟ ಚಟುವಟಿಕೆಗಳು ನಡೆಯುತ್ತಿದೆ ಬಿಟ್ಟರೆ ಯಾವುದೇ ಗಮನಾರ್ಹ ಚಟುವಟಿಕೆ ಕೈಗೆತ್ತಿಕೊಂಡಿಲ್ಲ.

ಡಾ ಅಂಬರೀಶ್ ಅಗಲಿಕೆ ಇಂದ ಈಗ ಕಲಾವಿದರ ಸಂಘದ ಉಸ್ತುವಾರಿ ಯಾರು ಎಂಬುದು. ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಹಾಗೂ ಡಾ ಶಿವರಾಜಕುಮಾರ್ ಅವರಲ್ಲಿ ಒಬ್ಬರು ಮುಖಂಡರಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಇವರಿಬ್ಬರು ಒಂದು ಮಾಸ್ಟೆರ್ ಪ್ಲಾನ್ ಸಿದ್ದತೆ ಸಹ ಮಾಡಿಕೊಂಡಿದ್ದರು. ಆದರೆ ಕಲಾವಿದರ ಸಂಘದ ಚುನಾವಣೆ ಆಗುವ ವರೆಗೆ ಯಾವುದೇ ಚಟುವಟಿಕೆ ಸಾಧ್ಯವಿಲ್ಲ ಎನ್ನುತ್ತಿದೆ ಒಂದು ವರ್ಗ.

ಆದರೆ ಸಧ್ಯದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನೀಡಬೇಕು ಎಂಬುದು ಹಲವರ ತೀರ್ಮಾನ. ಅದಕ್ಕೆ ಕಾರಣ ಸುಮಲತಾ ಅಂಬರೀಶ್ ಸಂಘಕ್ಕೆ ಬೇಕಾದ ಕೆಲಸವನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪಡೆಯುವ ಸ್ಥಾನ ಅವರಿಗೆ ದಕ್ಕಿರುವುದು ಕಾರಣ ಆಗಿದೆ. ಆದರೆ ಆದನ್ನು ತೀರ್ಮಾನ ಮಾಡಲು ಕಲಾವಿದರ ಸಂಘದ ಚುನಾವಣೆ ಆಗಬೇಕಿದೆ.

ಸಧ್ಯಕ್ಕೆ ಕಲಾವಿದರ ಸಂಘಕ್ಕೆ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಮುಂದೆ ನಿಂತು ಕೆಲವು ಕೆಲಸಗಳಿಗೆ ಚಾಲನೆ ನೀಡುತ್ತಾ ಇದ್ದಾರೆ. ಆದರೆ 4 ಅಂತಸ್ತಿನ ಕಟ್ಟಡ ವೇಸ್ಟ್ ಆಗುತ್ತಿರುವ ಬಗ್ಗೆಯೇ ಹೆಚ್ಚು ಚರ್ಚೆ. ಡಾ ಅಂಬರೀಶ್ ಅವರು ಬದುಕಿದ್ದಾಗ 3-4 ಅಂತಸ್ತನ್ನು ಕಲಾವಿದರ ಸಂಘ ಇಟ್ಟುಕೊಂಡು ಒಂದು ಹಾಗೂ ಎರಡನೇ ಅಂತಸ್ತು ಬಾಡಿಗೆಗೆ ಬಿಡುವುದು ಎಂಬ ತೀರ್ಮಾನ ಸಹ ಆಗಿತ್ತು.

ಆಗ ಎರಡು ಅಂತಸ್ತಿಗೆ ಬಾಡಿಗೆ ರೂಪದಲ್ಲಿ 8 ಲಕ್ಷ ರೂಪಾಯಿಗಳು ಬರುವುದು ಎಂಬ ಮಾತು ಸಹ ಕೇಳಿಬಂದಿತ್ತು. ಈ ಹಣದಿಂದ ಕಲಾವಿದರ ಸಂಘ ಸಾಮಾನ್ಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂದು ಹೇಳಲಾಗಿತ್ತು.

ಒಟ್ಟಿನಲ್ಲಿ ಭಾರತೀಯ ಚಿತ್ರ ರಂಗದಲ್ಲಿ ಯಾವುದೇ ಭಾಷೆಯ ಚಿತ್ರ ರಂಗ ಮಾಡಿಕೊಳ್ಳದ ಕಲಾವಿದರ ಭವನ ಕನ್ನಡ ಚಿತ್ರ ರಂಗ ಮಾಡಿಕೊಂಡಿರುವುದು ಹೆಮ್ಮೆಯ ವಿಚಾರ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.