ETV Bharat / sitara

ಅಭಿಮಾನಿಗಳ ಪ್ರೀತಿಗೆ ಮನಸೋತು ಧನ್ಯವಾದ ಅರ್ಪಿಸಿದ ಮಾಣಿಕ್ಯ

ಸೆಪ್ಟೆಂಬರ್ 2 ರಂದು ಸುದೀಪ್​ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರೂ ಆಭಿಮಾನಿಗಳು ಮಾತ್ರ ಸಮಾಜ ಸೇವೆ ಮಾಡುವ ಮೂಲಕ ಕಿಚ್ಚನ ಹುಟ್ಟುಹಬ್ಬ ಆಚರಿಸಿದ್ದರು. ಅಭಿಮಾನಿಗಳ ಈ ಪ್ರೀತಿಗೆ ಸುದೀಪ್ ಧನ್ಯವಾದ ಅರ್ಪಿಸಿದ್ದಾರೆ.

author img

By

Published : Sep 9, 2020, 12:45 PM IST

Sudeep thanked his fans
ಮಾಣಿಕ್ಯ

ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್, ಈ ಬಾರಿ ಕೊರೊನಾ ಕಾರಣದಿಂದ ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹೈದರಾಬಾದ್​​ನಲ್ಲಿ 'ಫ್ಯಾಂಟಮ್'​ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಸುದೀಪ್​​ 3 ದಿನಗಳ ಕಾಲ ಬೆಂಗಳೂರಿಗೆ ಬಂದು ತೆರಳಿದ್ದರು.

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

ಆದರೆ ಅಭಿಮಾನಿಗಳು ಮಾತ್ರ ಸುದೀಪ್ ಹುಟ್ಟುಹಬ್ಬವನ್ನು ಸೆಪ್ಟೆಂಬರ್​​ 2 ರಂದು ಅರ್ಥಪೂರ್ಣವಾಗಿ ಆಚರಿಸಿದ್ದರು. ತಾವು ಇರುವಲ್ಲಿಯೇ ಸುದೀಪ್ ಕಟೌಟ್ ಮಾಡಿಸಿ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ ಅನಾಥ ಮಕ್ಕಳಿಗೆ ಸಿಹಿ, ಬಟ್ಟೆ, ಪುಸ್ತಕ ಹಂಚಿದ್ದರು. ಅಭಿಮಾನಿಗಳ ಈ ಪ್ರೀತಿಗೆ ಸುದೀಪ್ ಸೋತು ಹೋಗಿದ್ದಾರೆ. ಅಷ್ಟೇ ಅಲ್ಲ, ವಿಡಿಯೊ ಮೂಲಕ ಧನ್ಯವಾದ ಹೇಳಿದ್ದಾರೆ. 'ಬಹಳ ತಡವಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಿರಿ. ನಿಮ್ಮ ಪ್ರೀತಿಗೆ ನಾನು ಅರ್ಹನೋ ಇಲ್ಲವೋ ತಿಳಿದಿಲ್ಲ, ಆದರೆ ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದು ಸುದೀಪ್ ವಿಡಿಯೋದಲ್ಲಿ ಹೇಳಿದ್ಧಾರೆ.

Sudeep thanked his fans
'ಫ್ಯಾಂಟಮ್'​ ಸಿನಿಮಾದ ವಿಕ್ರಮ್ ರೋಣ

ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಸುದೀಪ್ ತಮ್ಮ ಟ್ರಸ್ಟ್ ಮೂಲಕ 'ಶಾಂತಿ ನಿವಾಸ' ಎಂಬ ಅನಾಥಾಶ್ರಮ ಕಟ್ಟಿಸುತ್ತಿದ್ದಾರೆ. ಕಿಚ್ಚನ ಹುಟ್ಟುಹಬ್ಬದಂದು ಪತ್ನಿ ಪ್ರಿಯಾ, ಶಾಂತಿ ನಿವಾಸಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್, ಈ ಬಾರಿ ಕೊರೊನಾ ಕಾರಣದಿಂದ ಬಹಳ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹೈದರಾಬಾದ್​​ನಲ್ಲಿ 'ಫ್ಯಾಂಟಮ್'​ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಸುದೀಪ್​​ 3 ದಿನಗಳ ಕಾಲ ಬೆಂಗಳೂರಿಗೆ ಬಂದು ತೆರಳಿದ್ದರು.

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

ಆದರೆ ಅಭಿಮಾನಿಗಳು ಮಾತ್ರ ಸುದೀಪ್ ಹುಟ್ಟುಹಬ್ಬವನ್ನು ಸೆಪ್ಟೆಂಬರ್​​ 2 ರಂದು ಅರ್ಥಪೂರ್ಣವಾಗಿ ಆಚರಿಸಿದ್ದರು. ತಾವು ಇರುವಲ್ಲಿಯೇ ಸುದೀಪ್ ಕಟೌಟ್ ಮಾಡಿಸಿ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ ಅನಾಥ ಮಕ್ಕಳಿಗೆ ಸಿಹಿ, ಬಟ್ಟೆ, ಪುಸ್ತಕ ಹಂಚಿದ್ದರು. ಅಭಿಮಾನಿಗಳ ಈ ಪ್ರೀತಿಗೆ ಸುದೀಪ್ ಸೋತು ಹೋಗಿದ್ದಾರೆ. ಅಷ್ಟೇ ಅಲ್ಲ, ವಿಡಿಯೊ ಮೂಲಕ ಧನ್ಯವಾದ ಹೇಳಿದ್ದಾರೆ. 'ಬಹಳ ತಡವಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಿರಿ. ನಿಮ್ಮ ಪ್ರೀತಿಗೆ ನಾನು ಅರ್ಹನೋ ಇಲ್ಲವೋ ತಿಳಿದಿಲ್ಲ, ಆದರೆ ನಿಮ್ಮೆಲ್ಲರಿಗೂ ಧನ್ಯವಾದಗಳು' ಎಂದು ಸುದೀಪ್ ವಿಡಿಯೋದಲ್ಲಿ ಹೇಳಿದ್ಧಾರೆ.

Sudeep thanked his fans
'ಫ್ಯಾಂಟಮ್'​ ಸಿನಿಮಾದ ವಿಕ್ರಮ್ ರೋಣ

ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಸುದೀಪ್ ತಮ್ಮ ಟ್ರಸ್ಟ್ ಮೂಲಕ 'ಶಾಂತಿ ನಿವಾಸ' ಎಂಬ ಅನಾಥಾಶ್ರಮ ಕಟ್ಟಿಸುತ್ತಿದ್ದಾರೆ. ಕಿಚ್ಚನ ಹುಟ್ಟುಹಬ್ಬದಂದು ಪತ್ನಿ ಪ್ರಿಯಾ, ಶಾಂತಿ ನಿವಾಸಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.