ETV Bharat / sitara

ನಿಲ್ಲದ ಮಾನವೀಯತೆ ಕಾರ್ಯ: ಶಸ್ತ್ರ ಚಿಕಿತ್ಸೆಗೋಸ್ಕರ ವ್ಯಕ್ತಿಗೆ 'ಕಲಿಯುಗದ ಕರ್ಣ' ಸಹಾಯ

ಈಗಾಗಲೇ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿ ಕಲಿಯುಗದ ಕರ್ಣ ಎಂಬ ಹೆಸರು ಪಡೆದುಕೊಂಡಿರುವ ನಟ ಸೋನು ಸೂದ್ ತಮ್ಮ ಮಾನವೀಯ ಕಾರ್ಯ ಮುಂದುವರೆಸಿದ್ದಾರೆ.

author img

By

Published : Oct 10, 2020, 8:20 PM IST

Sonu Sood helps man
Sonu Sood helps man

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​​ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಒಳಗಾಗಿರುವ ಕಲಿಯುಗದ ಕರ್ಣ ನಟ ಸೋನು ಸೂದ್​ ತಮ್ಮ ಸಮಾಜಮುಖಿ ಕೆಲಸ ಮುಂದುವರೆಸಿದ್ದಾರೆ.

ಯಾಕೂಬ್​ ಎಂಬ ವ್ಯಕ್ತಿಗೆ ಸೊಂಟದ ಬದಲಾವಣೆ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ದೆಹಲಿಯ ಏಮ್ಸ್​​ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನಡೆದಿದೆ.

Sonu Sood helps man
ಸೊಂಟದ ಶಸ್ತ್ರಚಿಕಿತ್ಸೆಗೊಳಗಾದ ಯಾಕೂಬ್​​

ಕಳೆದ ನಾಲ್ಕು ವರ್ಷಗಳಿಂದ ಯಾಕೂಬ್​​​ ಬೆಡ್​​ ಮೇಲೆ ಆತನ ಜೀವನ ನಡೆದಿತ್ತು. ಏಳುವುದಕ್ಕೆ, ನಡೆಯುವುದಕ್ಕೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ಇದೀಗ ಏಮ್ಸ್​​ನಲ್ಲಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆರ್ಥಿಕ ಸಹಾಯ ಸೋನು ಸೂದ್​ ಮಾಡಿದ್ದಾರೆ.

'ಕಲಿಯುಗದ ಕರ್ಣ'ನಿಂದ ವಿದ್ಯಾರ್ಥಿವೇತನ... ಬಡ ಮಕ್ಕಳಿಗೆ ತಾಯಿ ಹೆಸರಲ್ಲಿ ಸೋನು ಸೂದ್​​ ಸಹಾಯ!

ಇದಕ್ಕೆ ಸಂಬಂಧಿಸಿದಂತೆ ಏಮ್ಸ್​​ ಸಹಾಯಕ ಪ್ರೊಪೆಸರ್​​ ಡಾ. ಅಮರೀಂದರ್​ ಸಿಂಗ್​ ಮಾತನಾಡಿದ್ದು, ಇಡೀ ಪ್ರಕರಣ ಗೌಪ್ಯವಾಗಿದೆ. ಸೋನು ಸೂದ್​​ ಮತ್ತು ಏಮ್ಸ್​​ ಆಸ್ಪತ್ರೆಯ ಪ್ರಯತ್ನದಿಂದ ಯಾಕೂಬ್​ಗೆ ಹೊಸ ಜೀವನ ಸಿಕ್ಕಿದೆ ಎಂದಿದ್ದಾರೆ. ಡಾ. ರಾಜೇಶ್​ ಮಲ್ಹೋತ್ರಾ, ಡಾ, ಚೈತ್ರಾ ಹಾಗೂ ಡಾ. ದೀಪಕ್​ ಗೌತಮ್​ ಜಂಟಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ.

ಸಾವಿರಾರು ಬಡ ಕುಟುಂಬಗಳಿಗೆ ಸಹಾಯ ಮಾಡಿರುವ ನಟ ಸೋನು ಸೂದ್​ ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​ ಹಾಗೂ ಲಾಕ್​ಡೌನ್​​ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಒಳಗಾಗಿರುವ ಕಲಿಯುಗದ ಕರ್ಣ ನಟ ಸೋನು ಸೂದ್​ ತಮ್ಮ ಸಮಾಜಮುಖಿ ಕೆಲಸ ಮುಂದುವರೆಸಿದ್ದಾರೆ.

ಯಾಕೂಬ್​ ಎಂಬ ವ್ಯಕ್ತಿಗೆ ಸೊಂಟದ ಬದಲಾವಣೆ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ದೆಹಲಿಯ ಏಮ್ಸ್​​ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನಡೆದಿದೆ.

Sonu Sood helps man
ಸೊಂಟದ ಶಸ್ತ್ರಚಿಕಿತ್ಸೆಗೊಳಗಾದ ಯಾಕೂಬ್​​

ಕಳೆದ ನಾಲ್ಕು ವರ್ಷಗಳಿಂದ ಯಾಕೂಬ್​​​ ಬೆಡ್​​ ಮೇಲೆ ಆತನ ಜೀವನ ನಡೆದಿತ್ತು. ಏಳುವುದಕ್ಕೆ, ನಡೆಯುವುದಕ್ಕೆ ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗೊಂಡಿತ್ತು. ಆದರೆ ಇದೀಗ ಏಮ್ಸ್​​ನಲ್ಲಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಆರ್ಥಿಕ ಸಹಾಯ ಸೋನು ಸೂದ್​ ಮಾಡಿದ್ದಾರೆ.

'ಕಲಿಯುಗದ ಕರ್ಣ'ನಿಂದ ವಿದ್ಯಾರ್ಥಿವೇತನ... ಬಡ ಮಕ್ಕಳಿಗೆ ತಾಯಿ ಹೆಸರಲ್ಲಿ ಸೋನು ಸೂದ್​​ ಸಹಾಯ!

ಇದಕ್ಕೆ ಸಂಬಂಧಿಸಿದಂತೆ ಏಮ್ಸ್​​ ಸಹಾಯಕ ಪ್ರೊಪೆಸರ್​​ ಡಾ. ಅಮರೀಂದರ್​ ಸಿಂಗ್​ ಮಾತನಾಡಿದ್ದು, ಇಡೀ ಪ್ರಕರಣ ಗೌಪ್ಯವಾಗಿದೆ. ಸೋನು ಸೂದ್​​ ಮತ್ತು ಏಮ್ಸ್​​ ಆಸ್ಪತ್ರೆಯ ಪ್ರಯತ್ನದಿಂದ ಯಾಕೂಬ್​ಗೆ ಹೊಸ ಜೀವನ ಸಿಕ್ಕಿದೆ ಎಂದಿದ್ದಾರೆ. ಡಾ. ರಾಜೇಶ್​ ಮಲ್ಹೋತ್ರಾ, ಡಾ, ಚೈತ್ರಾ ಹಾಗೂ ಡಾ. ದೀಪಕ್​ ಗೌತಮ್​ ಜಂಟಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಯಶಸ್ವಿಯಾಗಿದೆ.

ಸಾವಿರಾರು ಬಡ ಕುಟುಂಬಗಳಿಗೆ ಸಹಾಯ ಮಾಡಿರುವ ನಟ ಸೋನು ಸೂದ್​ ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.