ETV Bharat / sitara

ಕ್ರೇಜಿಸ್ಟಾರ್ ಚಿತ್ರದ ಹಾಡಿಗೆ ಧ್ವನಿಯಾದ ಹ್ಯಾಟ್ರಿಕ್ ಹೀರೋ!

ಕ್ರೇಜಿಸ್ಟಾರ್ ರವಿಚಂದ್ರನ್ ಅಪ್ಪಟ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸುತ್ತಿರೋ ನಿರೀಕ್ಷೆಯ ಸಿನಿಮಾ 'ಕನ್ನಡಿಗ' ಚಿತ್ರದ ಟೈಟಲ್​ ಸಾಂಗ್​ ಅನ್ನು ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​ ಹಾಡಿದ್ದಾರೆ.

author img

By

Published : Nov 23, 2021, 10:12 PM IST

shiva rajkumar sings song for ravichandran kannadiga movie
ರವಿಚಂದ್ರನ್​ ಸಿನಿಮಾದ ಹಾಡಿಗೆ ದನಿಯಾದ ಶಿವಣ್ಣ

ಕನ್ನಡ ಚಿತ್ರರಂಗದಲ್ಲಿ ಚಿತ್ರದ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಸಿನಿಮಾ 'ಕನ್ನಡಿಗ'. ಕ್ರೇಜಿಸ್ಟಾರ್ ರವಿಚಂದ್ರನ್ ಅಪ್ಪಟ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸುತ್ತಿರೋ ನಿರೀಕ್ಷೆಯ ಸಿನಿಮಾ.ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಬ್ಯುಸಿಯಾಗಿರೋ ಕನ್ನಡಿಗ ಚಿತ್ರದ ಟೈಟಲ್ ಹಾಡನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡುವ ಮೂಲಕ ಕ್ರೇಜಿಸ್ಟಾರ್​​ಗೆ ಸಾಥ್ ನೀಡಿದ್ದಾರೆ.ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಸಾಹಿತ್ಯಕ್ಕೆ, ಶಿವರಾಜ್ ಕುಮಾರ್ ಸಖತ್ ಎನರ್ಜಿಯಿಂದ ಹಾಡಿದ್ದಾರೆ.

ಈ ಹಾಡು ಕನ್ನಡಿಗ ಚಿತ್ರದ ಶೀರ್ಷಿಕೆ ಹಾಡು ಆಗಿದ್ದು, ಸಿರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ, ಕನ್ನಡ ನಮ್ಮ‌ಪಾಲ್ಗೆ ಎಂಬ ಹಾಡು ಕೇಳುಗರನ್ನ ರೋಮಾಂಚನಗೊಳಿಸುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್​ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಜಿಎಫ್​ ನಂತಹ ಹಿಟ್​ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರ್, 'ಕನ್ನಡಿಗ'ದಲ್ಲಿ ತಮ್ಮ ಕೈ ಚಳಕ‌ ತೋರಿಸಿದ್ದಾರೆ.

  • " class="align-text-top noRightClick twitterSection" data="">

ಇನ್ನು ಶಿವರಾಜ್ ಕುಮಾರ್ ಅಭಿನಯದ ಜೊತೆಗೆ ಈಗಾಗಲೇ ಹಲವಾರು ಸಿನಿಮಾಗಳಿಗೆ ಹಾಡುಗಳನ್ನ ಹಾಡಿದ್ದಾರೆ. ಆದರೆ ಈ ಕನ್ನಡಿಗ ಸಿನಿಮಾದಲ್ಲಿ, ಕನ್ನಡ ಭಾಷೆ ಬಗ್ಗೆ ಹಾಡಿರೋ‌‌ ಪರಿ,ಅದ್ಭುತವಾಗಿ ಮೂಡಿ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಬಿ.ಎಂ. ಗಿರಿರಾಜ್​ ಅವರು ಈ ಸಿನಿಮಾದ ಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ.

'ಕನ್ನಡಿಗ' ಚಿತ್ರ ಹೆಸರೇ ಹೇಳುವಂತೆ ಇದೊಂದು ಕನ್ನಡಿಗನ ಕಥೆ ಹೇಳುತ್ತದೆ ಎಂಬುದು ಗೊತ್ತಾಗುತ್ತದೆ.ಇನ್ನು ರವಿಚಂದ್ರನ್, ಜೊತೆ ಪಾವನಾ ಜೋಡಿಯಾಗಿದ್ದಾರೆ. ಇದರ ಜೊತೆಗೆ ಜೀವಿಕಾ ಜಗದೀಶ್​ ಮೈತ್ರಿ, ಬಾಲಾಜಿ ಮನೋಹರ್​, ಅಚ್ಯುತ್​ ಕುಮಾರ್​ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಓಂಕಾರ್​ ಮೂವೀಸ್​ ಬ್ಯಾನರ್​ ಅಡಿಯಲ್ಲಿ, ಜಟ್ಟಾ, ಮೈತ್ರಿ, ಗಿರ್ಮಿಟ್ ಸಿನಿಮಾಗಳನ್ನ ನಿರ್ಮಾಪಕ ಎನ್​ ಎಸ್​ ರಾಜಕುಮಾರ್​ ನಿರ್ಮಾಣ ಮಾಡಿದ್ದರು.ಈಗ ಫಸ್ಟ್ ಟೈಮ್ ರವಿಚಂದ್ರನ್ ಸಿನಿಮಾವನ್ನ‌ ಎನ್ ಎಸ್ ರಾಜಕುಮಾರ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಕನ್ನಡಿಗ ಸಿನಿಮಾದ ಟೈಟಲ್ ಹಾಡು ಕೇಳುಗರನ್ನ ಇಂಪ್ರೆಸ್​​ ಮಾಡುತ್ತಿದ್ದು, ಈ ಸಿನಿಮಾ ಕ್ರೇಜಿಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕನ್ನಡ ಚಿತ್ರರಂಗದಲ್ಲಿ ಚಿತ್ರದ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಸಿನಿಮಾ 'ಕನ್ನಡಿಗ'. ಕ್ರೇಜಿಸ್ಟಾರ್ ರವಿಚಂದ್ರನ್ ಅಪ್ಪಟ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸುತ್ತಿರೋ ನಿರೀಕ್ಷೆಯ ಸಿನಿಮಾ.ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್​​ನಲ್ಲಿ ಬ್ಯುಸಿಯಾಗಿರೋ ಕನ್ನಡಿಗ ಚಿತ್ರದ ಟೈಟಲ್ ಹಾಡನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡುವ ಮೂಲಕ ಕ್ರೇಜಿಸ್ಟಾರ್​​ಗೆ ಸಾಥ್ ನೀಡಿದ್ದಾರೆ.ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಸಾಹಿತ್ಯಕ್ಕೆ, ಶಿವರಾಜ್ ಕುಮಾರ್ ಸಖತ್ ಎನರ್ಜಿಯಿಂದ ಹಾಡಿದ್ದಾರೆ.

ಈ ಹಾಡು ಕನ್ನಡಿಗ ಚಿತ್ರದ ಶೀರ್ಷಿಕೆ ಹಾಡು ಆಗಿದ್ದು, ಸಿರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ, ಕನ್ನಡ ನಮ್ಮ‌ಪಾಲ್ಗೆ ಎಂಬ ಹಾಡು ಕೇಳುಗರನ್ನ ರೋಮಾಂಚನಗೊಳಿಸುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್​ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಜಿಎಫ್​ ನಂತಹ ಹಿಟ್​ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರ್, 'ಕನ್ನಡಿಗ'ದಲ್ಲಿ ತಮ್ಮ ಕೈ ಚಳಕ‌ ತೋರಿಸಿದ್ದಾರೆ.

  • " class="align-text-top noRightClick twitterSection" data="">

ಇನ್ನು ಶಿವರಾಜ್ ಕುಮಾರ್ ಅಭಿನಯದ ಜೊತೆಗೆ ಈಗಾಗಲೇ ಹಲವಾರು ಸಿನಿಮಾಗಳಿಗೆ ಹಾಡುಗಳನ್ನ ಹಾಡಿದ್ದಾರೆ. ಆದರೆ ಈ ಕನ್ನಡಿಗ ಸಿನಿಮಾದಲ್ಲಿ, ಕನ್ನಡ ಭಾಷೆ ಬಗ್ಗೆ ಹಾಡಿರೋ‌‌ ಪರಿ,ಅದ್ಭುತವಾಗಿ ಮೂಡಿ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಬಿ.ಎಂ. ಗಿರಿರಾಜ್​ ಅವರು ಈ ಸಿನಿಮಾದ ಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ.

'ಕನ್ನಡಿಗ' ಚಿತ್ರ ಹೆಸರೇ ಹೇಳುವಂತೆ ಇದೊಂದು ಕನ್ನಡಿಗನ ಕಥೆ ಹೇಳುತ್ತದೆ ಎಂಬುದು ಗೊತ್ತಾಗುತ್ತದೆ.ಇನ್ನು ರವಿಚಂದ್ರನ್, ಜೊತೆ ಪಾವನಾ ಜೋಡಿಯಾಗಿದ್ದಾರೆ. ಇದರ ಜೊತೆಗೆ ಜೀವಿಕಾ ಜಗದೀಶ್​ ಮೈತ್ರಿ, ಬಾಲಾಜಿ ಮನೋಹರ್​, ಅಚ್ಯುತ್​ ಕುಮಾರ್​ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಓಂಕಾರ್​ ಮೂವೀಸ್​ ಬ್ಯಾನರ್​ ಅಡಿಯಲ್ಲಿ, ಜಟ್ಟಾ, ಮೈತ್ರಿ, ಗಿರ್ಮಿಟ್ ಸಿನಿಮಾಗಳನ್ನ ನಿರ್ಮಾಪಕ ಎನ್​ ಎಸ್​ ರಾಜಕುಮಾರ್​ ನಿರ್ಮಾಣ ಮಾಡಿದ್ದರು.ಈಗ ಫಸ್ಟ್ ಟೈಮ್ ರವಿಚಂದ್ರನ್ ಸಿನಿಮಾವನ್ನ‌ ಎನ್ ಎಸ್ ರಾಜಕುಮಾರ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಕನ್ನಡಿಗ ಸಿನಿಮಾದ ಟೈಟಲ್ ಹಾಡು ಕೇಳುಗರನ್ನ ಇಂಪ್ರೆಸ್​​ ಮಾಡುತ್ತಿದ್ದು, ಈ ಸಿನಿಮಾ ಕ್ರೇಜಿಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.