ETV Bharat / sitara

ಕನ್ನಡ ಕಲಿತು ಕನ್ನಡಿಗರ ಮನ ಗೆದ್ದ ಸ್ವೀಟ್ ಗೋಸ್ಟ್ ಶಾನ್ವಿ ಶ್ರೀವಾತ್ಸವ್​​​...!

ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ಶಾನ್ವಿ ಶ್ರೀವಾತ್ಸವ್ ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿಗೆ ಪಾತ್ರವಾಗಿದ್ದಾರೆ. 'ಚಂದ್ರಲೇಖ' ಸಿನಿಮಾದಲ್ಲಿ ಶಾನ್ವಿ ದೆವ್ವದ ಪಾತ್ರ ಮಾಡಿದ್ದರಿಂದ ಅವರಿಗೆ ಅಭಿಮಾನಿಗಳು ಸ್ವೀಟ್ ಗೋಸ್ಟ್​ ಎಂದೇ ಕರೆಯುತ್ತಾರಂತೆ.

author img

By

Published : Nov 4, 2019, 11:01 PM IST

ಶಾನ್ವಿ ಶ್ರೀವಾತ್ಸವ್​​​

ಶಾನ್ವಿ ಶ್ರೀವಾತ್ಸವ್, ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಸುಂದರಿ. ಶಾನ್ವಿ ಮೂಲತಃ ವಾರಣಾಸಿಯವರು. ಆಕೆ ಕನ್ನಡ ಚಿತ್ರರಂಗಕ್ಕೆ ಬಂದಾಗ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ ಇದೀಗ ಕನ್ನಡ ಕಲಿಯುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

  • " class="align-text-top noRightClick twitterSection" data="">

ಹೌದು, ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಶಾನ್ವಿ ಕನ್ನಡದಲ್ಲಿ ತಮ್ಮ ಕರಿಯರ್ ಆರಂಭಿಸಿದ್ದು 'ಚಂದ್ರಲೇಖ' ಚಿತ್ರದ ಮೂಲಕ. ಆ ವೇಳೆ ಅವರಿಗೆ ಶೂಟಿಂಗ್​​ ಸೆಟ್​​​​ನಲ್ಲಿ ಕನ್ನಡ ಅರ್ಥ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದಿದ್ದಾರೆ. ಮೊದ ಮೊದಲು ಶಾನ್ವಿಗೆ ಭಾಷೆ ತಿಳಿಯದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿ ತುಂಬಾ ಭಯ ಆಗುತ್ತಿತ್ತಂತೆ. 'ಚಂದ್ರಲೇಖ' ಸಿನಿಮಾದಲ್ಲಿ ಶಾನ್ವಿ ದೆವ್ವದ ಪಾತ್ರ ಮಾಡಿದ್ದರಿಂದ ಮುಂದೆ ಶಾನ್ವಿ ಶ್ರೀವಾತ್ಸವ್​ ಅವರಿಗೆ ಸ್ವೀಟ್ ಗೋಸ್ಟ್ ಹೀರೋಯಿನ್ ಎಂಬ ಹೆಸರಿಂದಲೇ ಜನರು ಕರೆಯಲಾರಂಭಿಸಿದರು.

Shanvi Srivastava learned kannada, ಕನ್ನಡ ಕಲಿತ ಶಾನ್ವಿ ಶ್ರೀವಾತ್ಸವ್
ಶಾನ್ವಿ ಶ್ರೀವಾತ್ಸವ್

'ಮಾಸ್ಟರ್ ಪೀಸ್‌' ಸಿನಿಮಾದ ನಂತರ ಶಾನ್ವಿಯನ್ನು ಎಲ್ಲರೂ ನಾಗವಲ್ಲಿ ಎಂದು ಕರೆಯುತ್ತಿದ್ದರಂತೆ. ಈ 'ಮಾಸ್ಟರ್​​​ ಪೀಸ್' ಚಿತ್ರದ ನಂತರ ಶಾನ್ವಿ ಅದೃಷ್ಟ ಖುಲಾಯಿಸಿತು. 'ತಾರಕ್' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದರು. 'ಮಫ್ತಿ', 'ಸಾಹೇಬ', ಗಣೇಶ್ ಜೊತೆಗೆ 'ಸುಂದರಾಂಗ ಜಾಣ' ಹಾಗೂ 'ಗೀತಾ' ಸಿನಿಮಾದಲ್ಲಿ ಎರಡು ಶೇಡ್​​​ನಲ್ಲಿ ಶಾನ್ವಿ ಮಿಂಚಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ 55 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, 15 ದಿನಗಳ ಕಾಲ ಡಬ್ಬಿಂಗ್ ಮಾಡಿದ್ದಾರೆ. 'ಈ ಬಾರಿ ಲಕ್ಷ್ಮಿ ಪಾತ್ರದಲ್ಲಿ ಜನರ ಮುಂದೆ ಬರುತ್ತಿದ್ದು, ಕನ್ನಡಿಗರ ಪ್ರೀತಿಯ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಶಾನ್ವಿ ಶ್ರೀವಾತ್ಸವ್ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಹೇಳುವ ಮೂಲಕ ಕನ್ನಡಿಗರ ಹೃದಯ ಕದ್ದಿದ್ದಾರೆ.

ಶಾನ್ವಿ ಶ್ರೀವಾತ್ಸವ್, ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಸುಂದರಿ. ಶಾನ್ವಿ ಮೂಲತಃ ವಾರಣಾಸಿಯವರು. ಆಕೆ ಕನ್ನಡ ಚಿತ್ರರಂಗಕ್ಕೆ ಬಂದಾಗ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ ಇದೀಗ ಕನ್ನಡ ಕಲಿಯುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

  • " class="align-text-top noRightClick twitterSection" data="">

ಹೌದು, ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಶಾನ್ವಿ ಕನ್ನಡದಲ್ಲಿ ತಮ್ಮ ಕರಿಯರ್ ಆರಂಭಿಸಿದ್ದು 'ಚಂದ್ರಲೇಖ' ಚಿತ್ರದ ಮೂಲಕ. ಆ ವೇಳೆ ಅವರಿಗೆ ಶೂಟಿಂಗ್​​ ಸೆಟ್​​​​ನಲ್ಲಿ ಕನ್ನಡ ಅರ್ಥ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದಿದ್ದಾರೆ. ಮೊದ ಮೊದಲು ಶಾನ್ವಿಗೆ ಭಾಷೆ ತಿಳಿಯದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿ ತುಂಬಾ ಭಯ ಆಗುತ್ತಿತ್ತಂತೆ. 'ಚಂದ್ರಲೇಖ' ಸಿನಿಮಾದಲ್ಲಿ ಶಾನ್ವಿ ದೆವ್ವದ ಪಾತ್ರ ಮಾಡಿದ್ದರಿಂದ ಮುಂದೆ ಶಾನ್ವಿ ಶ್ರೀವಾತ್ಸವ್​ ಅವರಿಗೆ ಸ್ವೀಟ್ ಗೋಸ್ಟ್ ಹೀರೋಯಿನ್ ಎಂಬ ಹೆಸರಿಂದಲೇ ಜನರು ಕರೆಯಲಾರಂಭಿಸಿದರು.

Shanvi Srivastava learned kannada, ಕನ್ನಡ ಕಲಿತ ಶಾನ್ವಿ ಶ್ರೀವಾತ್ಸವ್
ಶಾನ್ವಿ ಶ್ರೀವಾತ್ಸವ್

'ಮಾಸ್ಟರ್ ಪೀಸ್‌' ಸಿನಿಮಾದ ನಂತರ ಶಾನ್ವಿಯನ್ನು ಎಲ್ಲರೂ ನಾಗವಲ್ಲಿ ಎಂದು ಕರೆಯುತ್ತಿದ್ದರಂತೆ. ಈ 'ಮಾಸ್ಟರ್​​​ ಪೀಸ್' ಚಿತ್ರದ ನಂತರ ಶಾನ್ವಿ ಅದೃಷ್ಟ ಖುಲಾಯಿಸಿತು. 'ತಾರಕ್' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದರು. 'ಮಫ್ತಿ', 'ಸಾಹೇಬ', ಗಣೇಶ್ ಜೊತೆಗೆ 'ಸುಂದರಾಂಗ ಜಾಣ' ಹಾಗೂ 'ಗೀತಾ' ಸಿನಿಮಾದಲ್ಲಿ ಎರಡು ಶೇಡ್​​​ನಲ್ಲಿ ಶಾನ್ವಿ ಮಿಂಚಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ 55 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, 15 ದಿನಗಳ ಕಾಲ ಡಬ್ಬಿಂಗ್ ಮಾಡಿದ್ದಾರೆ. 'ಈ ಬಾರಿ ಲಕ್ಷ್ಮಿ ಪಾತ್ರದಲ್ಲಿ ಜನರ ಮುಂದೆ ಬರುತ್ತಿದ್ದು, ಕನ್ನಡಿಗರ ಪ್ರೀತಿಯ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಶಾನ್ವಿ ಶ್ರೀವಾತ್ಸವ್ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಹೇಳುವ ಮೂಲಕ ಕನ್ನಡಿಗರ ಹೃದಯ ಕದ್ದಿದ್ದಾರೆ.

Intro:ಕನ್ನಡ ಕಲಿತು ಕನ್ನಡಿಗರ ಮನಗೆದ್ದ ಸ್ವೀಟ್ ಗೋಸ್ಟ್ ಶಾನ್ವಿ!!

ಶಾನ್ವಿ ಶ್ರೀವಾತ್ಸವ್...ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಬ್ಯೂಟಿಫುಲ್ ಹೀರೋಯಿನ್.ಶಾನ್ವಿ ಮೂಲತಃ ವಾರಣಾಸಿಯರು..ಶಾನ್ವಿ ಕನ್ನಡ ಚಿತ್ರರಂಗಕ್ಕೆ ಬಂದಾಗ ಕನ್ನಡ ಮಾತನಾಡೋದಿಕ್ಕೆ ಬರ್ತಾ ಇರಲಿಲ್ಲ..ಈಗ ಸ್ವೀಟ್ ಗೋಸ್ಟ್ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಡಬ್ ಮಾಡುವ ಮೂಲಕ ಏಳು ಕೋಟಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ..ಅದಕ್ಕೆ ಸಾಕ್ಷಿ ಶಾನ್ವಿ ಶ್ರೀವಾತ್ಸವ್ ಕನ್ನಡ ಕಲಿತಿರೋದು..ಹೌದು ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ, ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಅವರೇ ಶಾನ್ವಿ ಶ್ರೀವಾತ್ಸವ.ಚಂದ್ರಲೇಖ ಸಿನಿಮಾದಿಂದ ಶ್ವಾನ್ವಿ ಶ್ರೀವತ್ಸಾವ ಕನ್ನಡದಲ್ಲಿ ತಮ್ಮ ಕೆರಿಯರ್ ಶುರು ಮಾಡಿದರು. ಆಗ ಚಿತ್ರೀಕರಣದ ಸೆಟ್ ನಲ್ಲಿ ಅವರಿಗೆ ಕನ್ನಡ ಅರ್ಧ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿ ಪಾತ್ರವಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದಿದ್ದಾರೆ.ಮೊದಲ ಮೊದಲು ಶಾನ್ವಿಗೆ ಭಾಷೆ ತಿಳಿಯದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿ ತುಂಬ ಭಯ ಆಗುತ್ತಿತ್ತಂತೆ. ಚಂದ್ರಲೇ' ಸಿನಿಮಾದಲ್ಲಿ ದೆವ್ವದ ಪಾತ್ರ ಮಾಡಿದ್ದು, ಮುಂದೆ ಶಾನ್ವಿ ಶ್ರೀವತ್ಸವನ್ನ ಸ್ವೀಟ್ ಗೋಸ್ಟ್ ಹೀರೋಯಿನ್ ಅಂತಾ ಕರೆಯುತ್ತಿದ್ರಂತೆ.‌ಇದಾದ ನಂತ್ರ ಮಾಸ್ಟರ್ ಪೀಸ್‌ಸಿನಿಮಾದ ನಂತರ ಶಾನ್ವಿಯನ್ನ ನಾಗವಲ್ಲಿ ಅಂತಾ ಕರೆಯುತ್ತಿದ್ರಂತೆ..ಈ ಚಿತ್ರದ ನಂತ್ರ ಶಾನ್ವಿ ಅದೃಷ್ಟ ಖುಲಾಯಿಸಿತ್ತು..ತಾರಕ್ ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದರು. ಮಫ್ತಿಹಾಗೂ ಸಾಹೇಬಸಿನಿಮಾದಲ್ಲಿ ನಟಿಸಿದರು. ಗಣೇಶ್ ಜೊತೆಗೆ ಸುಂದರಾಂಗ ಜಾಣ ಹಾಗೂ ಗೀತಾಗೆ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ಮಿಂಚಿದ್ದಾರೆ. ಕನ್ನಡದ ನಟಿಯ ರೀತಿ ಪ್ರೇಕ್ಷಕರು ಅವರನ್ನು ಇಷ್ಟಪಟ್ಟರು.Body:ಇದೀಗ ಶಾನ್ವಿ ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ 55 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, 15 ದಿನಗಳ ಕಾಲ ಡಬ್ಬಿಂಗ್ ಮಾಡಿದ್ದಾರೆ. ಈ ಬಾರಿ ಲಕ್ಷ್ಮಿ ಪಾತ್ರದಲ್ಲಿ ಜನರ ಮುಂದು ಬರುತ್ತಿದ್ದು, ಕನ್ನಡಿಗರ ಪ್ರೀತಿಯ ನಿರೀಕ್ಷೆಯಲ್ಲಿ ಇದ್ದೀನಿ ಅಂತಾ ಶಾನ್ವಿ ಶ್ರೀವತ್ಸವ್ , ಕನ್ನಡ ರಾಜ್ಯೋತ್ಸವದ ಶುಭಾಶಯ ವಿಶೇಷವಾಗಿ ಹೇಳುವ ಮೂಲಕ ಕನ್ನಡಿಗರ ಹೃದಯ ಕದಿದ್ದಾರೆ..


Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.