ಕೊರೊನಾದಿಂದಾಗಿ ದೇಶಾದ್ಯಂತ ಕಳೆದ ಏಳು ತಿಂಗಳಿಂದ ಮುಚ್ಚಿರುವ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿರೋದು ಸಿನಿಮಾ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಸತತ ಏಳು ತಿಂಗಳು ಸಿನಿಮಾ ಶೂಟಿಂಗ್ ಹಾಗೂ ಸಿನಿಮಾ ಪ್ರದರ್ಶನ ಇಲ್ಲದೆ ನಟರು, ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು, ಸಿನಿಮಾ ಕಾರ್ಮಿಕರ ಕೆಲಸ ಇಲ್ಲದೆ ಮನೆಯಲ್ಲೇ ಕುಳಿತುಕೊಳ್ಳುವ ಹಾಗೇ ಆಗಿತ್ತು. ಇದೀಗ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳು ಓಪನ್ ಆಗೋದಿಕ್ಕೆ ಸಜ್ಜಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಲೂಸಿಯಾ, ಅಯೋಗ್ಯ ಚಿತ್ರಗಳ ಹೀರೋ ಸತೀಶ್ ನೀನಾಸಂ ಕೂಡ ಚಿತ್ರಮಂದಿರಗಳು ತೆರೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೊರೊನಾ ಸುರಕ್ಷಿತ ಕ್ರಮಗಳನ್ನ ತೆಗೆದುಕೊಳ್ಳುತ್ತಾ ಚಿತ್ರಮಂದಿರಗಳಲ್ಲಿ ಮತ್ತೆ ಸಿನಿಮಾ ನೋಡುವ ಕಾಲ ಬಂದಿದೆ ಅಂತಾ ಸಿನಿಮಾ ಪ್ರಿಯರಿಗೆ ಹುರಿದುಂಬಿಸುವ ಕೆಲಸ ಮಾಡಿದ್ದಾರೆ.
![Satish is happy that the theaters are open](https://etvbharatimages.akamaized.net/etvbharat/prod-images/kn-bng-02-theater-open-aguthide-cinema-nodona-banni-sathish-video-7204735_01102020161005_0110f_1601548805_521.jpg)
ಅಷ್ಟೇ ಅಲ್ಲ ನಾನು ಕೂಡ ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಕಾತುರನಾಗಿದ್ದೇನೆ ಅಂತಾ ಹೇಳಿದ್ದಾರೆ. ಮತ್ತೊಂದು ಕಡೆ ಸತೀಶ್ ನೀನಾಸಂ ಅಭಿನಯಿಸಿರೋ ಗೋದ್ರಾ ಸಿನಿಮಾ ಶೂಟಿಂಗ್ ಮುಗಿಸಿ ರಿಲೀಸ್ಗೆ ರೆಡಿಯಾಗುತ್ತಿದೆ.