ETV Bharat / sitara

'ಕಪಟ ನಾಟಕ ಸೂತ್ರಧಾರಿ' ಚಿತ್ರದಿಂದ ಸ್ಯಾಂಡಲ್​ವುಡ್​​ಗೆ ಮತ್ತೆ ವಾಪಸಾದ್ರು ಸಂಗೀತ ಭಟ್

author img

By

Published : Jul 18, 2019, 10:36 AM IST

ಸ್ಯಾಂಡಲ್​ವುಡ್​​ನಲ್ಲಿ ಮಿ ಟೂ ವಿವಾದ ಆರಂಭವಾದಾಗ ನಟಿ ಸಂಗೀತ ಭಟ್ ಕೂಡಾ ತಮಗಾಗಿದ್ದ ತೊಂದರೆ ವಿರುದ್ಧ ದನಿಯೆತ್ತಿದ್ದರು. ಇನ್ನು ಮುಂದೆ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿ ಸಿನಿಮಾಗಳಿಂದ ದೂರವಿದ್ದರು. ಆದರೆ ಇದೀಗ ಅವರು ಮತ್ತೆ ಸ್ಯಾಂಡಲ್​​​ವುಡ್​​​ಗೆ ವಾಪಸಾಗಿದ್ದಾರೆ.

ಸಂಗೀತ ಭಟ್

'ಮಾಮು ಟೀ ಅಂಗಡಿ' ಸಿನಿಮಾದಿಂದ ವೃತ್ತಿ ಜೀವನ ಆರಂಭಿಸಿ 'ಪ್ರೀತಿ ಗೀತಿ ಇತ್ಯಾದಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ' ಮತ್ತು ಕೆಲವು ಪರಭಾಷೆ ಚಿತ್ರಗಳಲ್ಲಿ ಅಭಿನಯಿಸಿದ್ದ ಸಂಗೀತ ಭಟ್ ‘ಕಪಟ ನಾಟಕ ಸೂತ್ರಧಾರಿ’ ಸಿನಿಮಾ ಮೂಲಕ ವಾಪಸ್​​​​​​ ಬಂದಿದ್ದಾರೆ. ಮಿ ಟೂ ವಿವಾದದ ಬಳಿಕ ಅವರು ಇನ್ನು ಮುಂದೆ ನಟಿಸುವುದಿಲ್ಲ ಎಂದು ಹೇಳಿ ಚಿತ್ರರಂಗದಿಂದ ದೂರವಿದ್ದರು. ಗರುಡ ಕ್ರಿಯೇಷನ್ ಬ್ಯಾನರ್ ಅಡಿ ತಯಾರಾಗುತ್ತಿರುವ ‘ಕಪಟ ನಾಟಕ ಸೂತ್ರಧಾರಿ’ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

kapata nataka sutradhari
'ಕಪಟ ನಾಟಕ ಸೂತ್ರಧಾರಿ'

ಸಂಗೀತ ಭಟ್ ಜೋಡಿಯಾಗಿ 'ಹುಲಿರಾಯ' ಖ್ಯಾತಿಯ ಬಾಲು ನಾಗೇಂದ್ರ ನಟಿಸಿದ್ದಾರೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಅದಿಲ್ ನಾದಾಫ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್​​​​​​​​​​ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ದಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುಧ್​​​​​ ಶಾಸ್ತ್ರಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಿರಣ್ ಚಂದ್ರ ಹಾಗೂ ವೇಣು ಹಸ್ರಾಲಿ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್​​ ತುಮ್ಮೀನಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಇತರರು ನಟಿಸಿದ್ದಾರೆ.

'ಮಾಮು ಟೀ ಅಂಗಡಿ' ಸಿನಿಮಾದಿಂದ ವೃತ್ತಿ ಜೀವನ ಆರಂಭಿಸಿ 'ಪ್ರೀತಿ ಗೀತಿ ಇತ್ಯಾದಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ' ಮತ್ತು ಕೆಲವು ಪರಭಾಷೆ ಚಿತ್ರಗಳಲ್ಲಿ ಅಭಿನಯಿಸಿದ್ದ ಸಂಗೀತ ಭಟ್ ‘ಕಪಟ ನಾಟಕ ಸೂತ್ರಧಾರಿ’ ಸಿನಿಮಾ ಮೂಲಕ ವಾಪಸ್​​​​​​ ಬಂದಿದ್ದಾರೆ. ಮಿ ಟೂ ವಿವಾದದ ಬಳಿಕ ಅವರು ಇನ್ನು ಮುಂದೆ ನಟಿಸುವುದಿಲ್ಲ ಎಂದು ಹೇಳಿ ಚಿತ್ರರಂಗದಿಂದ ದೂರವಿದ್ದರು. ಗರುಡ ಕ್ರಿಯೇಷನ್ ಬ್ಯಾನರ್ ಅಡಿ ತಯಾರಾಗುತ್ತಿರುವ ‘ಕಪಟ ನಾಟಕ ಸೂತ್ರಧಾರಿ’ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.

kapata nataka sutradhari
'ಕಪಟ ನಾಟಕ ಸೂತ್ರಧಾರಿ'

ಸಂಗೀತ ಭಟ್ ಜೋಡಿಯಾಗಿ 'ಹುಲಿರಾಯ' ಖ್ಯಾತಿಯ ಬಾಲು ನಾಗೇಂದ್ರ ನಟಿಸಿದ್ದಾರೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಅದಿಲ್ ನಾದಾಫ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್​​​​​​​​​​ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ದಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುಧ್​​​​​ ಶಾಸ್ತ್ರಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಿರಣ್ ಚಂದ್ರ ಹಾಗೂ ವೇಣು ಹಸ್ರಾಲಿ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್​​ ತುಮ್ಮೀನಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಇತರರು ನಟಿಸಿದ್ದಾರೆ.

ಸಂಗೀತ ಭಟ್ ವಾಪಸ್ ಬಂದರು

ಮೀ ಟೂ ವಿವಾದ ಮತ್ತು ನಿರ್ದೇಶಕ ಗುರುಪ್ರಸಾದ್ ಮೇಲೆ ಹೇಳಿಕೆ ನೀಡಿದ್ದ ಹಾಗೂ ಚಿತ್ರ ರಂಗದಿಂದ ನೊಂದುಕೊಂಡಿದ್ದ ಸಂಗೀತ ಭಟ್ ಸಿನಿಮಾದಲ್ಲಿ ಅಭಿನಯೋಸಿದಿಲ್ಲ ಎಂದು ಹೇಳಿಕೆ ನೀಡಿದ್ದರು. ಸಂಗೀತ ಭಟ್ ಹೇಳಿಕೆ ಕೆಲವು ಕಾಲ ಸದ್ದು ಮಾಡಿದ್ದು ನಿಜ. ಆದರೆ ಅವರ ಹೇಳಿಕೆಯನ್ನು ಪರಾಮರ್ಶಿಸಿ ಅಭಿನಯಕ್ಕೆ ವಾಪಸ್ಸಾಗಿದ್ದಾರೆ. ಇವರು ಈಗ ಶ್ರೀಮತಿ ಸಂಗೀತ ಭಟ್. ಇವರ ಪತಿ ಸುದರ್ಶನ್.

ಕನ್ನಡದಲ್ಲಿ ಮಾಮು ಟಿ ಅಂಗಡಿ ಇಂದ ವೃತ್ತಿ ಆರಂಭಿಸಿ ಪ್ರೀತಿ ಗೀತಿ ಇತ್ಯಾದಿ, ಎರಡನೇ ಸಲಾ, ದಯವಿಟ್ಟು ಗಮನಿಸಿ ಮತ್ತು ಕೆಲವು ಪರಭಾಷೆ ಚಿತ್ರಗಳಲ್ಲಿ ಅಭಿನಯಿಸಿದ ಸಂಗೀತ ಭಟ್ ಕಪಟ ನಾಟಕ ಸೂತ್ರದಾರಿ ಸಿನಿಮಾ ಮೂಲಕ ವಾಪಸ್ಸು ಬಂದಿರುವುದು ಅವರ ಹೇಳಿಕೆಗಳು ಕಪಟವೆ ಎಂದು ಪ್ರಶ್ನಿಸುವಂತೆ ಆಗಿದೆ.

ಗರುಡ ಕ್ರಿಯೇಷನ್ ಕಪಟ ನಾಟಕ ಸೂತ್ರದಾರಿ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಿ ಸಧ್ಯದಲ್ಲೇ ಧ್ವನಿ ಸಾಂದ್ರಿಕೆಯೌ ಬಿಡುಗಡೆ ಮಾಡಿಕೊಳ್ಳಲಿದೆ.

ಸಂಗೀತ ಭಟ್ ಅವರಿಗೆ ಜೋಡಿಯಾಗಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕ. ಕ್ರಿಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಸಹ ಮಾಡುತ್ತಿದ್ದಾರೆ. ಅದಿಲ್ ನಾದಾಫ್ ಸಂಗೀತ, ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುದ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ದರ್ತ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುದ್ ಶಾಸ್ತ್ರೀ ಹಾಡುಗಳನ್ನು ಹೇಳಿದ್ದಾರೆ.  ಕಿರಣ್ ಚಂದ್ರ ಹಾಗೂ ವೇಣು ಹಸ್ರಾಲಿ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಛಾಯಾಗ್ರಹಣ ಪರಮೇಶ್ ಹಾಗೂ ಶ್ರೀಕಾಂತ್ ಸಂಕಲ ಮಾಡಿದ್ದಾರೆ.

ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಷ್ ತುಮ್ಮೀನಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಇತರರು ತಾರಗಣದಲ್ಲಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.