ETV Bharat / sitara

ಮಾಗಡಿ ರಸ್ತೆ ಮೆಟ್ರೋ ಸ್ಟೇಷನ್​​ಗೆ ಡಾ. ರಾಜ್​​ಕುಮಾರ್​ ಹೆಸರಿಡಲು ಮನವಿ - Bengaluru Magadi road

ಮಾಗಡಿ ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಅಣ್ಣಾವ್ರ ಹೆಸರಿಡಲು ಪಾಲಿಕೆ ಸಭೆಯಲ್ಲಿ ಸರ್ವಾನುಮತದಿಂದ ಎಲ್ಲರೂ ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ನಾನು ಬಿಬಿಎಂಪಿಗೆ ಪತ್ರ ಬರೆದಿದ್ದೇನೆ ಎಂದು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್​​​​.ಆರ್​​​​. ರಮೇಶ್ ಹೇಳಿದ್ದಾರೆ.

Dr Rajkumar name to metro station
ಡಾ. ರಾಜ್​​ಕುಮಾರ್
author img

By

Published : Aug 5, 2020, 4:45 PM IST

ಬೆಂಗಳೂರು ಮಾಗಡಿ ರಸ್ತೆಯ ಮೆಟ್ರೋ ಸ್ಟೇಷನ್​​​​ಗೆ ವರನಟ ಡಾ. ರಾಜ್​ಕುಮಾರ್ ಹೆಸರಿಡುವಂತೆ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್​​​​.ಆರ್​​​​. ರಮೇಶ್ ಬಿಬಿಎಂಪಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್​​​​.ಆರ್​​​​. ರಮೇಶ್

1984 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಕೇಂದ್ರಾಡಳಿತ ಪ್ರದೇಶವಾಗುವುದನ್ನು ಡಾ. ರಾಜ್​​​​​​​​​​​​​​​​​​​ಕುಮಾರ್ ಅವರು ತಡೆದಿದ್ದರು‌. ಅಣ್ಣಾವ್ರ ಒಂದು ಮಾತಿನಿಂದ ಅಂದಿನ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಅಲ್ಲದೆ ಕನ್ನಡ ನಾಡು,ನುಡಿ, ಸಂಸ್ಕೃತಿಗೆ ಅಣ್ಣಾವ್ರ ಕೊಡುಗೆ ಅಪಾರವಾಗಿದೆ. ಇಂದು ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ ಆಗಿದೆ ಎಂದರೆ ಅದಕ್ಕೆ ಅಣ್ಣಾವ್ರ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯೇ ಕಾರಣ. ಯಾವುದೇ ಪ್ರತಿಫಲ ಅಪೇಕ್ಷಿಸದೆ ಅಣ್ಣಾವ್ರು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದ್ದರು.

Dr Rajkumar name to metro station
ಡಾ. ರಾಜ್​​ಕುಮಾರ್​

ಕನ್ನಡ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ನಟಸಾರ್ವಭೌಮ ಡಾ. ರಾಜ್​ಕುಮಾರ್. ಡಾ. ರಾಜ್​​​​ಕುಮಾರ್ ಅಭಿಮಾನಿಗಳ ಸಂಘದ ಮಾಜಿ ಪದಾಧಿಕಾರಿಯಾಗಿ, ಕರ್ನಾಟಕ ಕೇಸರಿ ಡಾ‌. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿ ನಾನು ಬಿಬಿಎಂಪಿಗೆ ಪತ್ರ ಬರೆದು ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್​ಕುಮಾರ್ ಹೆಸರಿಡುವಂತೆ ಮನವಿ ಮಾಡಿದ್ದೇನೆ ಎಂದು ಎನ್​.ಆರ್. ರಮೇಶ್ ಹೇಳಿದ್ದಾರೆ.

Dr Rajkumar name to metro station
ಬಿಬಿಎಂಪಿಗೆ ರಮೇಶ್ ಬರೆದ ಪತ್ರ

ಬೆಂಗಳೂರು ಮಾಗಡಿ ರಸ್ತೆಯ ಮೆಟ್ರೋ ಸ್ಟೇಷನ್​​​​ಗೆ ವರನಟ ಡಾ. ರಾಜ್​ಕುಮಾರ್ ಹೆಸರಿಡುವಂತೆ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್​​​​.ಆರ್​​​​. ರಮೇಶ್ ಬಿಬಿಎಂಪಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್​​​​.ಆರ್​​​​. ರಮೇಶ್

1984 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಕೇಂದ್ರಾಡಳಿತ ಪ್ರದೇಶವಾಗುವುದನ್ನು ಡಾ. ರಾಜ್​​​​​​​​​​​​​​​​​​​ಕುಮಾರ್ ಅವರು ತಡೆದಿದ್ದರು‌. ಅಣ್ಣಾವ್ರ ಒಂದು ಮಾತಿನಿಂದ ಅಂದಿನ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಅಲ್ಲದೆ ಕನ್ನಡ ನಾಡು,ನುಡಿ, ಸಂಸ್ಕೃತಿಗೆ ಅಣ್ಣಾವ್ರ ಕೊಡುಗೆ ಅಪಾರವಾಗಿದೆ. ಇಂದು ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ ಆಗಿದೆ ಎಂದರೆ ಅದಕ್ಕೆ ಅಣ್ಣಾವ್ರ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯೇ ಕಾರಣ. ಯಾವುದೇ ಪ್ರತಿಫಲ ಅಪೇಕ್ಷಿಸದೆ ಅಣ್ಣಾವ್ರು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದ್ದರು.

Dr Rajkumar name to metro station
ಡಾ. ರಾಜ್​​ಕುಮಾರ್​

ಕನ್ನಡ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ನಟಸಾರ್ವಭೌಮ ಡಾ. ರಾಜ್​ಕುಮಾರ್. ಡಾ. ರಾಜ್​​​​ಕುಮಾರ್ ಅಭಿಮಾನಿಗಳ ಸಂಘದ ಮಾಜಿ ಪದಾಧಿಕಾರಿಯಾಗಿ, ಕರ್ನಾಟಕ ಕೇಸರಿ ಡಾ‌. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿ ನಾನು ಬಿಬಿಎಂಪಿಗೆ ಪತ್ರ ಬರೆದು ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್​ಕುಮಾರ್ ಹೆಸರಿಡುವಂತೆ ಮನವಿ ಮಾಡಿದ್ದೇನೆ ಎಂದು ಎನ್​.ಆರ್. ರಮೇಶ್ ಹೇಳಿದ್ದಾರೆ.

Dr Rajkumar name to metro station
ಬಿಬಿಎಂಪಿಗೆ ರಮೇಶ್ ಬರೆದ ಪತ್ರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.